Sign In

By signing in or creating an account, you agree with Associated Broadcasting Company's Terms & Conditions and Privacy Policy.

Most Polluted City: ಭಾರತದ ಈ ನಗರ ಏಷ್ಯಾದಲ್ಲೇ ಅತ್ಯಂತ ಕಲುಷಿತ ನಗರವಂತೆ, ಆದರೆ ಅದು ದೆಹಲಿಯಲ್ಲ ಮತ್ಯಾವ್ದು?

ಸದಾ ವಾಯು ಮಾಲಿನ್ಯ, ಕಲುಷಿತ ಗಾಳಿಯಿಂದಲೇ ಜನಪ್ರಿಯವಾಗಿರುವ ದೆಹಲಿ ಈ ಬಾರಿ ಏಷ್ಯಾದ ಟಾಪ್ 10 ಕಲುಷಿತ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ.

Most Polluted City: ಭಾರತದ ಈ ನಗರ ಏಷ್ಯಾದಲ್ಲೇ ಅತ್ಯಂತ ಕಲುಷಿತ ನಗರವಂತೆ, ಆದರೆ ಅದು ದೆಹಲಿಯಲ್ಲ ಮತ್ಯಾವ್ದು?
ವಾಯು ಮಾಲಿನ್ಯ
Follow us
ನಯನಾ ರಾಜೀವ್
|

Updated on:Mar 07, 2023 | 10:24 AM

ಸದಾ ವಾಯು ಮಾಲಿನ್ಯ, ಕಲುಷಿತ ಗಾಳಿಯಿಂದಲೇ ಜನಪ್ರಿಯವಾಗಿರುವ ದೆಹಲಿ ಈ ಬಾರಿ ಏಷ್ಯಾದ ಟಾಪ್ 10 ಕಲುಷಿತ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ವಿಶ್ವ ವಾಯು ಗುಣಮಟ್ಟ ಸೂಚ್ಯಂಕ(AQI)ಆಧರಿಸಿ, ಲಭ್ಯವಾದ ಮಾಹಿತಿಯಲ್ಲಿ, ಚೀನಾದ 5 ನಗರಗಳು, ಮಂಗೋಲಿಯಾದ 1 ನಗರ, ಹಾಗೂ ಭಾರತದ ನಾಲ್ಕು ನಗರಗಳಿವೆ ಎಂದು ಹೇಳಲಾಗಿದೆ. ಈ ನಗರಗಳು ಗಾಂಧಿನಗರ(724) ಗುವಾಹಟಿ (665), ಖಿಂಡಿಪಾಡಾ-ಭಾಂಡೂಪ್ ವೆಸ್ಟ್, ಮುಂಬೈ (471) ಮತ್ತು ಭೋಪಾಲ್ ಚೌರಾಹಾ, ದೇವಾಸ್ (315) ಆಗಿವೆ.

ಗಾಂಧಿನಗರವು ಅತ್ಯಂತ ಕಲುಷಿತನಗರ ಎಂದು ಹೇಳಲಾಗಿದೆ. ಬಹುತೇಕ ಕಲುಷಿತ ನಗರಗಳಲ್ಲಿ ಜನಸಂಖ್ಯೆ 80 ಲಕ್ಷಕ್ಕೂ ಅಧಿಕವಿದೆ ಎಂದು ಸರ್ಕಾರ ಹೇಳಿದೆ. ಮಹಾರಾಷ್ಟ್ರದಲ್ಲಿ ಗರಿಷ್ಠ 19 ಕಲುಷಿತ ನಗರಗಳಿದ್ದರೆ, ಉತ್ತರ ಪ್ರದೇಶದ 17 ನಗರಗಳ ಸ್ಥಿತಿ ಕಳಪೆಯಾಗಿದೆ.

ಆಂಧ್ರಪ್ರದೇಶದ 13 ಮತ್ತು ಪಂಜಾಬ್‌ನ 9 ನಗರಗಳು, ಮಧ್ಯಪ್ರದೇಶ, ಹಿಮಾಚಲ ಪ್ರದೇಶ ಮತ್ತು ಒಡಿಶಾದ ತಲಾ 7-7 ನಗರಗಳು ಹೆಚ್ಚು ಕಲುಷಿತವಾಗಿವೆ. ಈ ಚಳಿಗಾಲದಲ್ಲಿ ದೆಹಲಿ-ಎನ್‌ಸಿಆರ್‌ನಲ್ಲಿ ಗಾಳಿಯು ಮೊದಲಿಗಿಂತ ಉತ್ತಮವಾಗಿದೆ ಮತ್ತು 2018 ರ ನಂತರ ಈ ಬಾರಿ ಶುದ್ಧ ಗಾಳಿ ಕಂಡುಬಂದಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

0 ಮತ್ತು 50 ರ ನಡುವಿನ AQI ಅನ್ನು ಉತ್ತಮ, 51-100 ಮಧ್ಯಮ, 101-150 ಸೂಕ್ಷ್ಮ ಗುಂಪುಗಳಿಗೆ ಅನಾರೋಗ್ಯಕರ , 151-200 ಅನಾರೋಗ್ಯಕರ, 201-300 ಅತ್ಯಂತ ಅನಾರೋಗ್ಯಕರ ಎಂದು ವ್ಯಾಖ್ಯಾನಿಸಲಾಗಿದೆ. ಮಾನದಂಡ ಮತ್ತು 300+ ಅನ್ನು ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ.

ಮತ್ತಷ್ಟು ಓದಿ: Air Pollution: ವಾಯು ಮಾಲಿನ್ಯದಿಂದ 5 ವರ್ಷ ಕಡಿಮೆಯಾಗುತ್ತಿದೆ ಭಾರತೀಯರ ಜೀವಿತಾವಧಿ

2007 ರಲ್ಲಿ ಪ್ರಾರಂಭವಾದ ವಿಶ್ವ ವಾಯು ಗುಣಮಟ್ಟ ಸೂಚ್ಯಂಕ ಯೋಜನೆಯು ನಾಗರಿಕರಿಗೆ ವಾಯು ಮಾಲಿನ್ಯದ ಜಾಗೃತಿಯನ್ನು ಉತ್ತೇಜಿಸಲು ಮತ್ತು ವಿಶ್ವಾದ್ಯಂತ ಗಾಳಿಯ ಗುಣಮಟ್ಟದ ಮಾಹಿತಿಯನ್ನು ಒದಗಿಸುವ ಗುರಿಯನ್ನು ಹೊಂದಿದೆ.

ಅಕ್ಟೋಬರ್-ಜನವರಿ ಅವಧಿಯಲ್ಲಿ ದೆಹಲಿಯಲ್ಲಿ ವಾಯು ಮಾಲಿನ್ಯಕಾರಕಗಳ ಸಾಂದ್ರತೆಯು ಪ್ರತಿ ಘನ ಮೀಟರ್‌ಗೆ 160 ಮೈಕ್ರೋಗ್ರಾಂಗಳಷ್ಟಿದೆ, ಇದು 2018-19 ರಲ್ಲಿ ಮೇಲ್ವಿಚಾರಣೆ ಪ್ರಾರಂಭವಾದ ನಂತರ ದಾಖಲಾದ ಅತ್ಯಂತ ಕಡಿಮೆ ಮಾಲಿನ್ಯ ಮಟ್ಟ ಇದಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:23 am, Tue, 7 March 23

ಶಿಲಾದಿತ್ಯ ಬೋಸ್ ಇಡೀ ಪ್ರಕರಣವನ್ನೇ ತಿರುಚುವ ಯತ್ನ ಮಾಡಿದ್ದಾನೆ: ಪ್ರತಾಪ್
ಶಿಲಾದಿತ್ಯ ಬೋಸ್ ಇಡೀ ಪ್ರಕರಣವನ್ನೇ ತಿರುಚುವ ಯತ್ನ ಮಾಡಿದ್ದಾನೆ: ಪ್ರತಾಪ್
ಸವದತ್ತಿ: ಫುಲ್​ ಟೈಟ್ ಆಗಿ ರೋಗಿಗೆ ಚಿಕಿತ್ಸೆ ನೀಡಿದ ಸರ್ಕಾರಿ ವೈದ್ಯ
ಸವದತ್ತಿ: ಫುಲ್​ ಟೈಟ್ ಆಗಿ ರೋಗಿಗೆ ಚಿಕಿತ್ಸೆ ನೀಡಿದ ಸರ್ಕಾರಿ ವೈದ್ಯ
ಹಿಂದಿ ಹೇರಿಕೆಯನ್ನು ನಮ್ಮ ಸರ್ಕಾರ ವಿರೋಧಿಸುತ್ತದೆ: ಸಿದ್ದರಾಮಯ್ಯ
ಹಿಂದಿ ಹೇರಿಕೆಯನ್ನು ನಮ್ಮ ಸರ್ಕಾರ ವಿರೋಧಿಸುತ್ತದೆ: ಸಿದ್ದರಾಮಯ್ಯ
ಕಾಂಗ್ರೆಸ್ ಗೆದ್ದ ರಾಜ್ಯಗಳ ಬಗ್ಗೆ ಯಾಕೆ ರಾಹುಲ್ ಮಾತಾಡಲ್ಲ? ವಿಜಯೇಂದ್ರ
ಕಾಂಗ್ರೆಸ್ ಗೆದ್ದ ರಾಜ್ಯಗಳ ಬಗ್ಗೆ ಯಾಕೆ ರಾಹುಲ್ ಮಾತಾಡಲ್ಲ? ವಿಜಯೇಂದ್ರ
ವಿಕಾಸ್ ಮೇಲೆ ನಡೆದ ಹಲ್ಲೆ ನೋಡಿದರೆ ರಕ್ತ ಕುದಿಯುತ್ತದೆ: ಅಶ್ವಿನಿ
ವಿಕಾಸ್ ಮೇಲೆ ನಡೆದ ಹಲ್ಲೆ ನೋಡಿದರೆ ರಕ್ತ ಕುದಿಯುತ್ತದೆ: ಅಶ್ವಿನಿ
ಮಜಾ ಟಾಕೀಸ್ ವೇದಿಕೆ ಮೇಲೆ ಚರ್ಚೆ ಆಯ್ತು ಕುರಿ ಪ್ರತಾಪ್ ಅವರ ಆ ಒಂದು ವಿಡಿಯೋ
ಮಜಾ ಟಾಕೀಸ್ ವೇದಿಕೆ ಮೇಲೆ ಚರ್ಚೆ ಆಯ್ತು ಕುರಿ ಪ್ರತಾಪ್ ಅವರ ಆ ಒಂದು ವಿಡಿಯೋ
ಬಿಜೆಪಿ ಸೇರಿದಂತೆ ಯಾರೂ ಜಾತಿ ಗಣತಿ ವರದಿಯನ್ನು ವಿರೋಧಿಸುತ್ತಿಲ್ಲ: ಸುರೇಶ್
ಬಿಜೆಪಿ ಸೇರಿದಂತೆ ಯಾರೂ ಜಾತಿ ಗಣತಿ ವರದಿಯನ್ನು ವಿರೋಧಿಸುತ್ತಿಲ್ಲ: ಸುರೇಶ್
ಭರ್ಜರಿ ಪ್ರದರ್ಶನ... ಶಾಹೀನ್ ಅಫ್ರಿದಿಗೆ ಚಿನ್ನದ ಐಫೋನ್ ಉಡುಗೊರೆ
ಭರ್ಜರಿ ಪ್ರದರ್ಶನ... ಶಾಹೀನ್ ಅಫ್ರಿದಿಗೆ ಚಿನ್ನದ ಐಫೋನ್ ಉಡುಗೊರೆ
ವಿಂಗ್ ಕಮಾಂಡರ್ ವಿರುದ್ಧ ಎಫ್​ಐಅರ್ ದಾಖಲಾಗಿದೆ: ಪರಮೇಶ್ವರ್
ವಿಂಗ್ ಕಮಾಂಡರ್ ವಿರುದ್ಧ ಎಫ್​ಐಅರ್ ದಾಖಲಾಗಿದೆ: ಪರಮೇಶ್ವರ್
ಆರಡಿ ಎತ್ತರದ ದೈತ್ಯನ ಮೇಲೆ ಹುಡುಗ ಹೇಗೆ ಹಲ್ಲೆ ಮಾಡಿಯಾನು? ರಾಜಣ್ಣ
ಆರಡಿ ಎತ್ತರದ ದೈತ್ಯನ ಮೇಲೆ ಹುಡುಗ ಹೇಗೆ ಹಲ್ಲೆ ಮಾಡಿಯಾನು? ರಾಜಣ್ಣ