ಕೊರೊನಾ ಮಾರಿ ಅಟ್ಟಹಾಸ: ಎನ್​ಎಸ್​ಜಿ ಕಮಾಂಡೋ ಕೋವಿಡ್​ಗೆ ಬಲಿ, ಅವರಿಗೂ ಸಿಗಲಿಲ್ಲ ವೆಂಟಿಲೇಟರ್​ ಆಂಬುಲೆನ್ಸ್​

ಕೊನೆಗೆ ಅದುಹೇಗೋ ವೆಂಟಿಲೇರ್​ ಪ್ರಾಪ್ತಿಯಾಗಿತ್ತು. ಆದರೆ ಆ ವೇಳೆಗೆ ಗೋಲ್ಡನ್​ ಅವರ್​​ ಅಂದ್ರೆ ಅಮೂಲ್ಯ ಸಮಯ ಕಳೆದಿತ್ತು. ಹೃದಯ ಸ್ತಂಭನದಿಂದಾಗಿ ಬುಧವಾರ ಬೆಳಗ್ಗೆ ಅವರು ಕೊನೆಯುಸಿರೆಳೆದರು. ಭಯೋತ್ಪಾದಕರನ್ನು ಸದೆಬಡಿಯುವ ಅತ್ಯುನ್ನತ ಸಶಸ್ತ್ರ ಪಡೆಯಾದ National Security Guard (NSG) ಯಲ್ಲಿ ಕೊರೊನಾಗೆ ಇದು ಮೊದಲ ಬಲಿಯಾಗಿದೆ.

ಕೊರೊನಾ ಮಾರಿ ಅಟ್ಟಹಾಸ: ಎನ್​ಎಸ್​ಜಿ ಕಮಾಂಡೋ ಕೋವಿಡ್​ಗೆ ಬಲಿ, ಅವರಿಗೂ ಸಿಗಲಿಲ್ಲ ವೆಂಟಿಲೇಟರ್​ ಆಂಬುಲೆನ್ಸ್​
ಕೊರೊನಾ ಮಾರಿ ಅಟ್ಟಹಾಸ: ಎನ್​ಎಸ್​ಜಿ ಕಮಾಂಡೋ ಕೋವಿಡ್​ಗೆ ಬಲಿ, ಅವರಿಗೂ ಸಿಗಲಿಲ್ಲ ವೆಂಟಿಲೇಟರ್​ ಆಂಬುಲೆನ್ಸ್​
Follow us
|

Updated on:May 06, 2021 | 9:57 AM

ಎನ್​ಎಸ್​ಜಿ ಕಮಾಂಡೋಗಳು ಅಂದ್ರೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಅತ್ಯಂತ ದೃಢವಾಗಿರುವವರು ಎಂದು ಪರಿಗಣಿಸಲ್ಪಟ್ಟಿದೆ. ಆದರೆ ಈ ಕೊರೊನಾ ಮಾರಿ ಅಂತಹವರನ್ನೂ ಬಿಟ್ಟಿಲ್ಲ. ಮೊದಲ ಬಾರಿಗೆ ಎನ್​ಎಸ್​ಜಿ ಕಮಾಂಡೋ ಒಬ್ಬರು ಕೋವಿಡ್​ಗೆ ಬಲಿಯಾಗಿದ್ದಾರೆ. ಅದೇನು ದುರಾದೃಷ್ಟವೋ ಅಥವಾ ದೇಶಕ್ಕೇ ಅಂಥಾ ಗತಿ ಬಂದಿದೆಯೋ.. ಎನ್​ಎಸ್​ಜಿ ಕಮಾಂಡೋಗೂ ಸಕಾಲಕ್ಕೆ ವೆಂಟಿಲೇಟರ್​ ಆಂಬುಲೆನ್ಸ್​ ಸಿಗಲಿಲ್ಲ. ಹಾಗಾಗಿ ಅವರು ಕೊನೆಯುಸಿರೆಳೆದಿದ್ದಾರೆ.

ಗ್ರೂಪ್​ ಕಮಾಂಡರ್​ ಆಗಿದ್ದ ಬಿ ಕೆ ಝಾ (54 ವರ್ಷ) ಅವರಿಗೆ ಏಪ್ರಿಲ್​ 19ರಂದು ಕೊರೊನಾ ಸೋಂಕು ತಗುಲಿತ್ತು. ಗ್ರೇಟರ್​ ನೋಯ್ಡಾದಲ್ಲಿ ಕೇಂದ್ರ ಸಶಸ್ತ್ರ ಪೊಲೀಸ್​ ಪಡೆಗಳ ಆಸ್ಪತ್ರೆಯಲ್ಲಿ (CAPF Hospital) ಚಿಕಿತ್ಸೆಯನ್ನೂ ಪಡೆಯುತ್ತಿದ್ದರು. ಆದರೆ ಅಲ್ಲಿ ಅವರಿಗೆ ಎರಡು ಕಾರ್ಯನಿರ್ವಹಿಸದ ವೆಂಟಿಲೇಟರ್​​ಗಳು ಸ್ವಾಗತ ಕೋರಿದ್ದವು. ಅಲ್ಲಿಂದ ಅವರನ್ನು ಬೇರೆ ಆಸ್ಪತ್ರೆಗೆ ಶಿಫ್ಟ್​ ಮಾಡಲು ಜೀವರಕ್ಷಕ ಆಂಬುಲೆನ್ಸ್​ ಸಹ ಸಿಗಲಿಲ್ಲ.

ಕೊನೆಗೆ ಅದುಹೇಗೋ ವೆಂಟಿಲೇರ್​ ಪ್ರಾಪ್ತಿಯಾಗಿತ್ತು. ಆದರೆ ಆ ವೇಳೆಗೆ ಗೋಲ್ಡನ್​ ಅವರ್​​ ಅಂದ್ರೆ ಅಮೂಲ್ಯ ಸಮಯ ಕಳೆದಿತ್ತು. ಹೃದಯ ಸ್ತಂಭನದಿಂದಾಗಿ ಬುಧವಾರ ಬೆಳಗ್ಗೆ ಅವರು ಕೊನೆಯುಸಿರೆಳೆದರು. ಭಯೋತ್ಪಾದಕರನ್ನು ಸದೆಬಡಿಯುವ ಅತ್ಯುನ್ನತ ಸಶಸ್ತ್ರ ಪಡೆಯಾದ National Security Guard (NSG) ಯಲ್ಲಿ ಕೊರೊನಾಗೆ ಇದು ಮೊದಲ ಬಲಿಯಾಗಿದೆ. ಅಂದಹಾಗೆ NSG ಪಡೆಯಲ್ಲಿ ಇದುವರೆಗೂ 4,00ಕ್ಕೂ ಹೆಚ್ಚು ಮಂದಿಗೆ ಕೊರೊನಾ ಬಂದಿದೆ. ಅದರಲ್ಲಿ 60 ಪ್ರಕರಣಗಳು ಸಕ್ರಿಯವಾಗಿವೆ.

ಬಿಹಾರ ಮೂಲದ ಬಿ ಕೆ ಝಾ ಅವರು 1993ರಲ್ಲಿ ಗಡಿ ಭದ್ರತಾ ಪಡೆಗೆ (Border Security Force -BSF) ಆಯ್ಕೆಗೊಂಡಿದ್ದರು. 2018ರಲ್ಲಿ ಡೆಪ್ಯುಟೇಶನ್​ ಮೇಲೆ NSG ಪಡೆ ಸೇರಿಕೊಂಡಿದ್ದರು. ಈ ಬಗ್ಗೆ NSG ಪಡೆ ಟ್ವೀಟ್​ ಮಾಡಿದ್ದು, ಹಿರಿಯ ಯೋಧನ ಸಾವಿಗೆ ಕಂಬನಿ ಮಿಡಿದಿದೆ.

(NSG commando BK Jha died of Covid 19 precious time lost in arranging ventilator ambulance) ಇದನ್ನೂ ಓದಿ:

ಆಮ್ಲಜನಕ ಕೊರತೆ ನೀಗಿಸಲು ಆಕ್ಸಿಜನ್ ಪ್ಲಾಂಟ್ ಸಿದ್ಧಪಡಿಸಿದ ಚಾಮರಾಜನಗರ ಜಿಲ್ಲಾಡಳಿತ

Published On - 9:50 am, Thu, 6 May 21

Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!