AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ದಾಖಲೆ ಬರೆದ NTR ಸ್ಮರಣಾರ್ಥ ನಾಣ್ಯ.. ಆರ್​​ಬಿಐ ಇತಿಹಾಸದಲ್ಲಿ ಯಾವ ಎತ್ತರ ತಲುಪಿದೆ ಗೊತ್ತಾ?

ಈ ಹಿಂದೆ ಮುದ್ರಿತ ನಾಣ್ಯಗಳ ಪೈಕಿ ಕೇವಲ 12,000 ಮಾತ್ರ ಮಾರಾಟವಾಗಿತ್ತು. ಆ ದಾಖಲೆಯನ್ನು ಎನ್ ಟಿಆರ್ ನಾಣ್ಯ ಅಳಿಸಿ ಹಾಕಿದೆ ಎಂದಿದ್ದಾರೆ. ಮುದ್ರಣವಾದ ಎರಡು ತಿಂಗಳೊಳಗೆ ಸುಮಾರು 25,000 ನಾಣ್ಯಗಳು ಮಾರಾಟವಾಗಿವೆ. ಇದು ದೇಶದ ಇತಿಹಾಸದಲ್ಲಿ ಹೊಸ ದಾಖಲೆಯಾಗಿದೆ.

ಹೊಸ ದಾಖಲೆ ಬರೆದ NTR ಸ್ಮರಣಾರ್ಥ ನಾಣ್ಯ.. ಆರ್​​ಬಿಐ ಇತಿಹಾಸದಲ್ಲಿ ಯಾವ ಎತ್ತರ ತಲುಪಿದೆ ಗೊತ್ತಾ?
NTR Coin: ಹೊಸ ದಾಖಲೆ ಬರೆದ NTR ಸ್ಮರಣಾರ್ಥ ನಾಣ್ಯ..
ಸಾಧು ಶ್ರೀನಾಥ್​
|

Updated on:Nov 20, 2023 | 1:52 PM

Share

ಇತ್ತೀಚಿನ ದಿನಗಳಲ್ಲಿ ನಾಣ್ಯಗಳ ಮೇಲೆ ಖ್ಯಾತ ನಾಮರ (ಸೆಲೆಬ್ರಿಟಿಗಳ) ಭಾವಚಿತ್ರಗಳನ್ನು ಮುದ್ರಿಸುವುದು ಟ್ರೆಂಡಿಂಗ್ ಆಗಿದೆ. ಆರ್‌ಬಿಐ ಇಂತಹ ವಿಷಯಗಳನ್ನು ಸಾರ್ವಜನಿಕರ ಅಭಿಪ್ರಾಯವನ್ನು ಗಮನದಲ್ಲಿಟ್ಟುಕೊಂಡು ಪ್ರೋತ್ಸಾಹಿಸುತ್ತಿರುವುದೇ ಇದಕ್ಕೆ ಕಾರಣವಾಗಿದೆ. ಮೊದಲು ಅವುಗಳಲ್ಲಿ ಬಹಳ ಕಡಿಮೆ ಸಂಖ್ಯೆಯಲ್ಲಿ ಮಾತ್ರ ಮುದ್ರಿಸಲಾಗುತ್ತಿತ್ತು. ಅವುಗಳನ್ನು ಗಣ್ಯರಿಗೆ ಉಡುಗೊರೆಯಾಗಿ ಅಥವಾ ಆರ್​​ಬಿಐ ಅಧಿಕೃತ ವೆಬ್​ ಸೈಟ್‌ ಮೂಲಕ ಮಾರಾಟಕ್ಕೆ ಇರಿಸಲಾಗುತ್ತಿದೆ. ಆದರೆ, ಇದುವರೆಗೆ ಮುದ್ರಿಸಲಾದ ಎಲ್ಲ ನಾಣ್ಯಗಳ ಪೈಕಿ ಎನ್ ಟಿಆರ್ ನಾಣ್ಯ ಹೆಚ್ಚು ಜನಪ್ರಿಯತೆ ಪಡೆದಿದೆ ಎಂದು ಹೈದರಾಬಾದ್ ಮಿಂಟ್ ಮುಖ್ಯ ಪ್ರಧಾನ ವ್ಯವಸ್ಥಾಪಕ ವಿಎನ್ ಆರ್ ನಾಯ್ಡು ಹೇಳಿದ್ದಾರೆ.

ಈ ಹಿಂದೆ ಮುದ್ರಿತ ನಾಣ್ಯಗಳ ಪೈಕಿ ಕೇವಲ 12,000 ಮಾತ್ರ ಮಾರಾಟವಾಗಿತ್ತು. ಆ ದಾಖಲೆಯನ್ನು ಎನ್ ಟಿಆರ್ ನಾಣ್ಯ ಅಳಿಸಿ ಹಾಕಿದೆ ಎಂದಿದ್ದಾರೆ. ಮುದ್ರಣವಾದ ಎರಡು ತಿಂಗಳೊಳಗೆ ಸುಮಾರು 25,000 ನಾಣ್ಯಗಳು ಮಾರಾಟವಾಗಿವೆ. ಇದು ದೇಶದ ಇತಿಹಾಸದಲ್ಲಿ ಹೊಸ ದಾಖಲೆಯಾಗಿದೆ.

ಹೈದರಾಬಾದ್ ಟಂಕಸಾಲೆಯಲ್ಲಿ ಎನ್ ಟಿಆರ್ ಅವರ ಸ್ಮರಣಾರ್ಥ ನಾಣ್ಯ ತಯಾರಿಸಿರುವುದು ಸಂತಸದ ಸಂಗತಿ ಎಂದು ಎನ್ ಟಿಆರ್ ಶತಮಾನೋತ್ಸವ ಆಚರಣೆ ಸಮಿತಿ ಅಧ್ಯಕ್ಷ ಟಿ.ಡಿ. ಜನಾರ್ದನ್ ತಿಳಿಸಿದ್ದಾರೆ. ದೇಶದಲ್ಲಿ ಈವರೆಗೆ 200 ಖ್ಯಾತನಾಮರಿಗೆ ಸಂಬಂಧಿಸಿದ ಸ್ಮರಣಾರ್ಥ ನಾಣ್ಯಗಳನ್ನು ಬಿಡುಗಡೆ ಮಾಡಲಾಗಿದ್ದು, ದಾಖಲೆ ಮಟ್ಟದಲ್ಲಿ ಮಾರಾಟವಾದ ಕೀರ್ತಿ ಎನ್ ಟಿಆರ್ ಸ್ಮರಣಾರ್ಥ ನಾಣ್ಯಕ್ಕೆ ಸಲ್ಲುತ್ತದೆ ಎಂದರು. ಅದು ಪ್ರಸ್ತುತ ಪ್ರಥಮ ಸ್ಥಾನದಲ್ಲಿದೆ ಎಂದರು. ಬೆಳ್ಳಿ, ಹಿತ್ತಾಳೆ ಮತ್ತು ಚಿನ್ನದ ಒಟ್ಟಿಗೆ ತಯಾರಿಸಲಾಗುವುದು ಎಂದು ಅವರು ವಿವರಿಸಿದ್ದಾರೆ. ಮೂರು ರೀತಿಯ ಪ್ಯಾಕಿಂಗ್‌ನಲ್ಲಿ ನಾಣ್ಯಗಳು ಲಭ್ಯವಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:50 pm, Mon, 20 November 23

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ