AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜನರು ಸಾಯುವುದನ್ನು ಕಂಡು ಕಣ್ಣು ಮುಚ್ಚಿಕೊಂಡು ಇರಲಾಗದು; ಕೇಂದ್ರ ಸರ್ಕಾರದ ಕಿವಿ ಹಿಂಡಿದ ದೆಹಲಿ ಹೈಕೋರ್ಟ್

Oxygen Shortage: ಇಲ್ಲಿಯವರೆಗೆ ಆದದ್ದು ಸಾಕು, ಇದೀಗ ನೀರು ತಲೆ ಮುಳುಗುವಷ್ಟು ತುಂಬಿಕೊಂಡಿದೆ. 490 ಮೆಟ್ರಿಕ್ ಟನ್​ಗಿಂತ ಹೆಚ್ಚಿನ ಆಮ್ಲಜನಕವನ್ನು ಪೂರೈಸುವಂತೆ ನಾವು ಕೇಳುತ್ತಿಲ್ಲ. ಎಷ್ಟು ಪ್ರಮಾಣದ ಆಮ್ಲಜನಕವನ್ನು ದೆಹಲಿಗೆ ಪೂರೈಸುವಂತೆ ನಿಮಗೆ ನಿಮಗೆ ನಿಯೋಜಿಸಲಾಗಿತ್ತೋ ಅಷ್ಟನ್ನೇ ಕೇಳುತ್ತಿದ್ದೇವೆ. ಅದನ್ನು ಪೂರೈಸಿ

ಜನರು ಸಾಯುವುದನ್ನು ಕಂಡು ಕಣ್ಣು ಮುಚ್ಚಿಕೊಂಡು ಇರಲಾಗದು; ಕೇಂದ್ರ ಸರ್ಕಾರದ ಕಿವಿ ಹಿಂಡಿದ ದೆಹಲಿ ಹೈಕೋರ್ಟ್
ದೆಹಲಿ ಹೈಕೋರ್ಟ್​
guruganesh bhat
|

Updated on:May 01, 2021 | 6:14 PM

Share

ದೆಹಲಿ: ಇಂದು ಎಂಟು ರೋಗಿಗಳು ಆಮ್ಲಜನಕದ ಕೊರತೆಯಿಂದ ಅಸುನೀಗಿರುವ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ನೊಟೀಸ್ ಜಾರಿಗೊಳಿಸಿದೆ. ಯಾವುದೇ ರೀತಿಯಲ್ಲಾದರೂ ಸರಿ, ಇಂದು ದೆಹಲಿಗೆ 490 ಮೆಟ್ರಿಕ್ ಟನ್​ ಆಕ್ಸಿಜನ್​ನ್ನು ಪೂರೈಕೆ ಮಾಡಲೇಬೇಕು ಎಂದು ಕೇಂದ್ರ ಸರ್ಕಾರಕ್ಕೆ ತಾಕೀತು ಮಾಡಿದೆ. ನ್ಯಾಯಾಧೀಶ ವಿಪಿನ್ ಸಂಘಿ ಮತ್ತು ರೇಖಾ ಪಲ್ಲಿ ಅವರುಗಳಿದ್ದ ದೆಹಲಿ ಹೈಕೋರ್ಟ್​​ನ ವಿಭಾಗೀಯ ಪೀಠ ಈ ಸೂಚನೆ ನೀಡಿದೆ.

ಇಲ್ಲಿಯವರೆಗೆ ಆದದ್ದು ಸಾಕು, ಇದೀಗ ನೀರು ತಲೆ ಮುಳುಗುವಷ್ಟು ತುಂಬಿಕೊಂಡಿದೆ. 490 ಮೆಟ್ರಿಕ್ ಟನ್​ಗಿಂತ ಹೆಚ್ಚಿನ ಆಮ್ಲಜನಕವನ್ನು ಪೂರೈಸುವಂತೆ ನಾವು ಕೇಳುತ್ತಿಲ್ಲ. ಎಷ್ಟು ಪ್ರಮಾಣದ ಆಮ್ಲಜನಕವನ್ನು ದೆಹಲಿಗೆ ಪೂರೈಸುವಂತೆ ನಿಮಗೆ ನಿಮಗೆ ನಿಯೋಜಿಸಲಾಗಿತ್ತೋ ಅಷ್ಟನ್ನೇ ಕೇಳುತ್ತಿದ್ದೇವೆ. ಅದನ್ನು ಪೂರೈಸಿ ಅಷ್ಟೇ ಎಂದು ಹೈಕೋರ್ಟ್ ಕೇಂದ್ರ ಸರ್ಕಾರದ ಕಿವಿ ತಿರುಪಿದೆ.

ಏಪ್ರಿಲ್ 20ರಿಂದ ದೆಹಲಿಗೆ ಪ್ರತಿದಿನ 490 ಮೆಟ್ರಿಕ್ ಟನ್ ಆಕ್ಸಿಜನ್ ಸರಬರಾಜು ಮಾಡುವುದು ಕೇಂದ್ರದ ಜವಾಬ್ದಾರಿ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಆದರೆ ಈ ಜವಾಬ್ದಾರಿ ಈವರೆಗೆ ಕೇವಲ ದಾಖಲೆಪತ್ರಗಳಲ್ಲಿ ಮಾತ್ರ ಇದೆ. ಒಂದೇ ಒಂದು ದಿನವೂ ಈ ಪ್ರಮಾಣದ ಆಕ್ಸಿಜನ್ ಪೂರೈಕೆಯಾಗಿಲ್ಲ ಎಂದು ಕೋರ್ಟ್ ಹೇಳಿದೆ. ಜತೆಗೆ ಆಕ್ಸಿಜನ್ ಪೂರೈಕೆಗೆ ಅಗತ್ಯವಿರುವ ಟ್ಯಾಂಕರ್​ಗಳನ್ನು ಸಹ ಕೇಂದ್ರ ಸರ್ಕಾರವೇ ನಿಯೋಜಿಸಬೇಕು. ದೆಹಲಿಯಲ್ಲಿ ಜನರು ಸಾಯುತ್ತಿರುವುದುನ್ನು ಕಂಡು ಮುಚ್ಚಿಕೊಂಡು ನೋಡುತ್ತ ಕೂರಲು ನಮ್ಮ ಬಳಿ ಸಾಧ್ಯವಿಲ್ಲ ಎಂದು ಕೋರ್ಟ್ ಕೇಂದ್ರಕ್ಕೆ ಬಿಸಿ ಮುಟ್ಟಿಸಿದೆ.

ದೆಹಲಿಯ ಬಾತ್ರಾ ಆಸ್ಪತ್ರೆಯಲ್ಲಿ ಆಮ್ಲಜನಕ ಅಭಾವದಿಂದ ಇಂದು 8 ಮಂದಿ  ಮೃತಪಟ್ಟಿದ್ದಾರೆ. ಹೀಗೆ ಮೃತಪಟ್ಟವರಲ್ಲಿ ಒರ್ವರು ವೈದ್ಯರೂ ಹೌದು. ಈ ವಿಷಯವನ್ನು ಬಾತ್ರಾ ಆಸ್ಪತ್ರೆ ಹೈಕೋರ್ಟ್​ಗೆ ತಿಳಿಸಿದೆ. ನಮ್ಮ ಆಸ್ಪತ್ರೆಯಲ್ಲಿ ಮಧ್ಯಾಹ್ನ 12ಗಂಟೆ ಹೊತ್ತಿಗೇ ಆಕ್ಸಿಜನ್ ಖಾಲಿಯಾಗಿತ್ತು. ಆಮ್ಲಜನಕ ಖಾಲಿ ಆಗುವ ಬಗ್ಗೆ ನಾವು ಮಾಹಿತಿ ನೀಡಿದ್ದರೂ ಒಂದು ತಾಸು ತಡ ಮಾಡಿದರು. ಅಂದರೆ ಸುಮಾರು 1.35ರ ಹೊತ್ತಿಗೆ ಆಕ್ಸಿಜನ್ ಪೂರೈಕೆಯಾಗಿದೆ. ಹೀಗಾಗಿ ರೋಗಿಗಳ ಸಾವಾಗಿದೆ. ಅದರಲ್ಲಿ ಓರ್ವ ವೈದ್ಯರೂ ಇದ್ದಾರೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಎಸ್​ಸಿಎಲ್​ ಗುಪ್ತಾ ತಿಳಿಸಿದ್ದಾರೆ.

ಭಾರತದಲ್ಲಿ ಕೊರೊನಾ ಎರಡನೇ ಅಲೆ ತೀವ್ರ ಸ್ವರೂಪಕ್ಕೆ ತಿರುಗಿದ್ದು ಪರಿಸ್ಥಿತಿ ಬಿಗಡಾಯಿಸಿದೆ. ಮೊದಲ ಅಲೆಯ ವೇಳೆಯಲ್ಲಿ ಉಳಿದ ದೇಶಗಳು ಹುಬ್ಬೇರಿಸುವಂತೆ ಪರಿಸ್ಥಿತಿಯನ್ನು ಎದುರಿಸಿದ್ದ ಭಾರತವೀಗ ದಿನವೊಂದರಲ್ಲಿ ಅತಿ ಹೆಚ್ಚು ಕೊರೊನಾ ಪ್ರಕರಣಗಳನ್ನು ದಾಖಲಿಸಿದ ದೇಶ ಎಂದು ಗುರುತಿಸಿಕೊಂಡಿದೆ. ನಿನ್ನೆ (ಏಪ್ರಿಲ್ 30) ರಾತ್ರಿ 11 ಗಂಟೆಯ ಅಂಕಿ ಅಂಶಗಳ ಪ್ರಕಾರ ಕಳೆದ 24 ತಾಸಿನಲ್ಲಿ ಭಾರತದಲ್ಲಿ 4,08,323 ಕೊರೊನಾ ಪಾಸಿಟಿವ್ ಪ್ರಕರಣಗಳು ಹೊಸದಾಗಿ ಕಾಣಿಸಿಕೊಂಡಿದ್ದು, ಇದುವರೆಗೆ ಒಂದೇ ದಿನದಲ್ಲಿ 4 ಲಕ್ಷಕ್ಕೂ ಅಧಿಕ ಪ್ರಕರಣಗಳಿಗೆ ಸಾಕ್ಷಿಯಾದ ಏಕೈಕ ದೇಶವಾಗಿದೆ.

ಇದನ್ನೂ ಓದಿ: Covid Helpline Numbers: ಆಕ್ಸಿಜನ್​, ರೆಮ್​ಡೆಸಿವರ್​ ಬೇಕಾದಲ್ಲಿ ಈ ಸಂಖ್ಯೆಗಳನ್ನು ಸಂಪರ್ಕಿಸಿ

ಭಾರತಕ್ಕೆ ಬಂತು ರಷ್ಯಾದ ಸ್ಪುಟ್ನಿಕ್ ವಿ ಕೊರೊನಾ ಲಸಿಕೆ; ಏಪ್ರಿಲ್ 12 ರಂದೇ ಡಿಸಿಜಿಐ ನಿಂದ ಗ್ರೀನ್ ಸಿಗ್ನಲ್

Oxygen Shortage Eight people have died can not shut our eyes says Delhi High Court to Central Govt

Published On - 5:23 pm, Sat, 1 May 21