AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಷ್ಟಪಟ್ಟವನೊಂದಿಗೆ ಮದುವೆಯಾಗಲು ಭಾರತಕ್ಕೆ ಬರಲಿದ್ದಾರೆ ಪಾಕ್​ ಯುವತಿ

ಭಾರತದ ಯುವಕ ಹಾಗೂ ಪಾಕಿಸ್ತಾನಿ ಯುವತಿ ನಡುವೆ ಪ್ರೀತಿಯ ಮೊಳಕೆ ಚಿಗುರೊಡೆದಿದೆ. ಹಾಗೆಯೇ ಯುವತಿಯು 45 ದಿನಗಳ ವೀಸಾ ಪಡೆದು ಯುವಕನನ್ನು ಮದುವೆಯಾಗಲು ಭಾರತಕ್ಕೆ ಬರಲಿದ್ದಾರೆ. ಅಟ್ಟಾರಿ-ವಾಘಾ ಗಡಿ ಮೂಲಕ ದೇಶಕ್ಕೆ ಬರುತ್ತಿದ್ದು, ಭಾರತ ಸರ್ಕಾರ ಆಕೆಗೆ 45 ದಿನಗಳ ವೀಸಾ ನೀಡಿದೆ.

ಇಷ್ಟಪಟ್ಟವನೊಂದಿಗೆ ಮದುವೆಯಾಗಲು ಭಾರತಕ್ಕೆ ಬರಲಿದ್ದಾರೆ ಪಾಕ್​ ಯುವತಿ
ಜವ್ರಿಯಾImage Credit source: News 9
ನಯನಾ ರಾಜೀವ್
|

Updated on: Dec 05, 2023 | 12:34 PM

Share

ಭಾರತದ ಯುವಕ ಹಾಗೂ ಪಾಕಿಸ್ತಾನಿ ಯುವತಿ ನಡುವೆ ಪ್ರೀತಿಯ ಮೊಳಕೆ ಚಿಗುರೊಡೆದಿದೆ. ಹಾಗೆಯೇ ಯುವತಿಯು 45 ದಿನಗಳ ವೀಸಾ ಪಡೆದು ಯುವಕನನ್ನು ಮದುವೆಯಾಗಲು ಭಾರತಕ್ಕೆ ಬರಲಿದ್ದಾರೆ. ಅಟ್ಟಾರಿ-ವಾಘಾ ಗಡಿ ಮೂಲಕ ದೇಶಕ್ಕೆ ಬರುತ್ತಿದ್ದು, ಭಾರತ ಸರ್ಕಾರ ಆಕೆಗೆ 45 ದಿನಗಳ ವೀಸಾ ನೀಡಿದೆ.

ಜವ್ರಿಯಾ ಕೋಲ್ಕತ್ತಾ ಮೂಲದ ಸಮೀರ್ ಖಾನ್ ಅವರನ್ನು ವರಿಸಲಿದ್ದಾರೆ. ವರದಿಗಳ ಪ್ರಕಾರ, ಇಬ್ಬರು ಈಗಾಗಲೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮಹಿಳೆ ತನ್ನ ತಂದೆಯೊಂದಿಗೆ ಭಾರತಕ್ಕೆ ಬರಲಿದ್ದಾರೆ. ಕರಾಚಿ ನಿವಾಸಿ, ಅಜ್ಮತ್ ಇಸ್ಮಾಯಿಲ್ ಖಾನ್ ಮತ್ತು ಅವರ ಮಗಳನ್ನು ಸಮೀರ್ ಖಾನ್ ಮತ್ತು ಅವರ ತಂದೆ ಅಹ್ಮದ್ ಕಮಲ್ ಖಾನ್ ಯೂಸುಫ್ಜೈ ಅವರು ದೇಶಕ್ಕೆ ಸ್ವಾಗತಿಸಲಿದ್ದಾರೆ. ಅಮೃತಸರದ ಅಟ್ಟಾರಿ ಗಡಿಯಲ್ಲಿ ಅವರು ತಮ್ಮ ಅತಿಥಿಗಳನ್ನು ಭೇಟಿಯಾಗಲಿದ್ದಾರೆ.

ಸಮೀರ್ ಖಾನ್ ಮತ್ತು ಅವರ ತಂದೆ ಪ್ರಸ್ತುತ ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ ಖಾಡಿಯನ್ ಗ್ರಾಮದಲ್ಲಿ ಸಂಬಂಧಿಕರೊಂದಿಗೆ ಇದ್ದಾರೆ. ತಮ್ಮ ಇಬ್ಬರು ಅತಿಥಿಗಳು ಪಾಕಿಸ್ತಾನದಿಂದ ಬರುತ್ತಾರೆ ಎಂದು ಅವರು ಕುತೂಹಲದಿಂದ ಕಾಯುತ್ತಿದ್ದಾರೆ.

ಭಾರತ ಸರ್ಕಾರವು ಜವಾರಿಯಾ ಖಾನಮ್ ಮತ್ತು ಆಕೆಯ ತಂದೆಗೆ ವೀಸಾ ನೀಡುತ್ತಿರಲಿಲ್ಲ. ಆಗ ಪಂಜಾಬ್‌ನ ಖಾಡಿಯನ್ ಗ್ರಾಮದ ಸಾಮಾಜಿಕ ಕಾರ್ಯಕರ್ತ ಮಕ್ಬೂಲ್ ಅಹ್ಮದ್ ಖಾದಿಯಾನ್ ಅವರು ದೇಶಕ್ಕೆ ವೀಸಾ ಪಡೆಯಲು ಸಹಾಯ ಮಾಡಿದರು. ಅವರ ವೀಸಾ 45 ದಿನಗಳವರೆಗೆ ಮಾನ್ಯವಾಗಿರುತ್ತದೆ.

ಮತ್ತಷ್ಟು ಓದಿ: ಪಾಕಿಸ್ತಾನಕ್ಕೆ ಹೋಗಿ ಫೇಸ್​ಬುಕ್​ ಸ್ನೇಹಿತನನ್ನು ಮದುವೆಯಾಗಿದ್ದ ಅಂಜು ಭಾರತಕ್ಕೆ ವಾಪಸ್

ಮಹಿಳೆ ಅಮೃತಸರಕ್ಕೆ ಬಂದ ಕೂಡಲೇ ನಗರದ ವಿಮಾನ ನಿಲ್ದಾಣಕ್ಕೆ ತೆರಳುತ್ತಾರೆ. ಇಲ್ಲಿಂದ ಕೋಲ್ಕತ್ತಾಗೆ ಹಾರಲು ನಿರ್ಧರಿಸಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ  ಜವ್ರಿಯಾ ಮತ್ತು ಸಮೀರ್ ವಿವಾಹವಾಗಲಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ತನ್ನ ಮದುವೆಯ ನಂತರ, ಮಹಿಳೆ ತನ್ನ ವೀಸಾವನ್ನು ವಿಸ್ತರಿಸಲು ಭಾರತ ಸರ್ಕಾರಕ್ಕೆ ಮನವಿ ಮಾಡಲಿದ್ದಾರೆ.

ಸೀಮಾ ಎಂಬುವವರು ಭಾರತದ ಸಚಿನ್ ಮೀನಾ ಅವರೊಂದಿಗೆ ಪ್ರೀತಿಯಲ್ಲಿ ಬಿದ್ದು, ಮದುವೆ ಮಾಡಿಕೊಳ್ಳುವ ಸಲುವಾಗಿ ತನ್ನ ಮಕ್ಕಳನ್ನೂ ಕಡೆದುಕೊಂಡು ಭಾರತಕ್ಕೆ ಬಂದಿದ್ದರು. ಅಂಜು ಎಂಬುವವರು ಪಾಕಿಸ್ತಾನಿ ಸ್ನೇಹಿತನ್ನು ಮದುವೆಯಾಗಲು ಪತಿ ಹಾಗೂ ಮಕ್ಕಳನ್ನು ಬಿಟ್ಟು ಪಾಕಿಸ್ತಾನಕ್ಕೆ ತೆರಳಿದ್ದ ಘಟನೆಯೂ ಇತ್ತೀಚೆಗಷ್ಟೇ ವರದಿಯಾಗಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಮಹಿಳಾ PSI ವರ್ಗಾವಣೆ ಆಗಿದ್ದಕ್ಕೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು!
ಮಹಿಳಾ PSI ವರ್ಗಾವಣೆ ಆಗಿದ್ದಕ್ಕೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು!
ಬೆಟ್ಟದ ರಂಗನಾಥ ಸ್ವಾಮಿ ದೇವಾಲಯದಲ್ಲಿ ಹೆಚ್.ಡಿ. ಕುಮಾರಸ್ವಾಮಿ ವಿಶೇಷ ಪೂಜೆ
ಬೆಟ್ಟದ ರಂಗನಾಥ ಸ್ವಾಮಿ ದೇವಾಲಯದಲ್ಲಿ ಹೆಚ್.ಡಿ. ಕುಮಾರಸ್ವಾಮಿ ವಿಶೇಷ ಪೂಜೆ
‘ಹಳ್ಳಿ ಪವರ್ ರಿಯಾಲಿಟಿ ಶೋ’: ವಾಡೆ ಮನೆಗೆ ಗ್ರಹಪ್ರವೇಶ ಮಾಡಿದ ಸ್ಪರ್ಧಿಗಳು
‘ಹಳ್ಳಿ ಪವರ್ ರಿಯಾಲಿಟಿ ಶೋ’: ವಾಡೆ ಮನೆಗೆ ಗ್ರಹಪ್ರವೇಶ ಮಾಡಿದ ಸ್ಪರ್ಧಿಗಳು
ಹಳೇ ಹುಬ್ಬಳ್ಳಿ ಆಸಾರ ಓಣಿ ಪುಷ್ಕರಣಿ ವಿವಾದ: ಹಿಂದೂಪರ ಸಂಘಟನೆಗಳ ಪ್ರತಿಭಟನೆ
ಹಳೇ ಹುಬ್ಬಳ್ಳಿ ಆಸಾರ ಓಣಿ ಪುಷ್ಕರಣಿ ವಿವಾದ: ಹಿಂದೂಪರ ಸಂಘಟನೆಗಳ ಪ್ರತಿಭಟನೆ
28 ಕೈದಿಗಳ ಬಿಡುಗಡೆಗೆ ಸಚಿವ ಸಂಪುಟ ಅಸ್ತು
28 ಕೈದಿಗಳ ಬಿಡುಗಡೆಗೆ ಸಚಿವ ಸಂಪುಟ ಅಸ್ತು
ಇಂದು ಶ್ರಾವಣ ಶನಿವಾರ; ವೆಂಕಟೇಶ್ವರನ ದರ್ಶನ ಹಾಗೂ ನಾಮಸ್ಮರಣೆಗೆ ಶುಭ ದಿನ
ಇಂದು ಶ್ರಾವಣ ಶನಿವಾರ; ವೆಂಕಟೇಶ್ವರನ ದರ್ಶನ ಹಾಗೂ ನಾಮಸ್ಮರಣೆಗೆ ಶುಭ ದಿನ
ಬಾಗಲಕೋಟೆಯಲ್ಲಿ ಅಜಾನ್ ವಿವಾದ: ಸಿಡಿದೆದ್ದ ಬಿಜೆಪಿ, ಹಿಂದೂ ಸಂಘಟನೆಗಳು
ಬಾಗಲಕೋಟೆಯಲ್ಲಿ ಅಜಾನ್ ವಿವಾದ: ಸಿಡಿದೆದ್ದ ಬಿಜೆಪಿ, ಹಿಂದೂ ಸಂಘಟನೆಗಳು
ಭಾರತ-ಬಾಂಗ್ಲಾ ಗಡಿ ಭದ್ರಪಡಿಸದೆ ಬಂಗಾಳ ಭದ್ರವಾಗಲು ಸಾಧ್ಯವಿಲ್ಲ; ಅಮಿತ್ ಶಾ
ಭಾರತ-ಬಾಂಗ್ಲಾ ಗಡಿ ಭದ್ರಪಡಿಸದೆ ಬಂಗಾಳ ಭದ್ರವಾಗಲು ಸಾಧ್ಯವಿಲ್ಲ; ಅಮಿತ್ ಶಾ
ಮಠದಲ್ಲೇ ಅಪ್ರಾಪ್ತೆ ಮೇಲೆರಗಿ ಅಟ್ಟಹಾಸ: ಸ್ವಾಮೀಜಿ ಅರೆಸ್ಟ್
ಮಠದಲ್ಲೇ ಅಪ್ರಾಪ್ತೆ ಮೇಲೆರಗಿ ಅಟ್ಟಹಾಸ: ಸ್ವಾಮೀಜಿ ಅರೆಸ್ಟ್
ನೈಸರ್ಗಿಕವಾಗಿ ಬಾಳೆಕಾಯಿ ಹಣ್ಣು ಮಾಡುವ ವಿಧಾನ ಹೇಗೆ? ವಿಡಿಯೋ ನೋಡಿ
ನೈಸರ್ಗಿಕವಾಗಿ ಬಾಳೆಕಾಯಿ ಹಣ್ಣು ಮಾಡುವ ವಿಧಾನ ಹೇಗೆ? ವಿಡಿಯೋ ನೋಡಿ