ಮೂರು ದಿನಗಳ ಹಿಂದೆ ಚರಂಡಿಗೆ ಬಿದ್ದ ಮಗನಿಗಾಗಿ ಅನ್ನ, ನೀರು ಬಿಟ್ಟು ಪೋಷಕರ ಹುಡುಕಾಟ

|

Updated on: Jul 07, 2024 | 11:15 AM

ಮಳೆ ಬರುತ್ತಿದ್ದ ಸಂದರ್ಭದಲ್ಲಿ ತಂದೆಯ ಜತೆ ಸ್ಕೂಟರ್​ನಲ್ಲಿ ಹೋಗುತ್ತಿದ್ದ ಎಂಟು ವರ್ಷದ ಬಾಲಕ ಜಾರಿ ಚರಂಡಿಗೆ ಬಿದ್ದಿದ್ದು, ಮೂರು ದಿನಗಳಿಂದ ಬಾಲಕ ಅವಿನಾಶ್​ನಿಗಾಗಿ ತೀವ್ರ ಶೋಧ ಕಾರ್ಯ ನಡೆಯುತ್ತಿದೆ.

ಮೂರು ದಿನಗಳ ಹಿಂದೆ ಚರಂಡಿಗೆ ಬಿದ್ದ ಮಗನಿಗಾಗಿ ಅನ್ನ, ನೀರು ಬಿಟ್ಟು ಪೋಷಕರ ಹುಡುಕಾಟ
ಚರಂಡಿ
Follow us on

ಅಸ್ಸಾಂನಲ್ಲಿ ಕಳೆದ ಎರಡು ವಾರಗಳಿಂದ ಪ್ರವಾಹದಂಥಾ ಮಳೆಯಾಗುತ್ತಿದೆ. ಎಂಟು ವರ್ಷದ ಬಾಲಕ ಅವಿನಾಶ್ ತನ್ನ ತಂದೆಯ ಸ್ಕೂಟಿಯಲ್ಲಿ ತೆರಳುತ್ತಿದ್ದಾಗ ಜಾರಿ ಚರಂಡಿಗೆ ಬಿದ್ದಿದ್ದು, ಮೂರು ದಿನಗಳಿಂದ ಪೋಷಕರು ಅನ್ನ, ನೀರು ಬಿಟ್ಟು ಹುಡುಕಾಟ ನಡೆಸುತ್ತಿದ್ದಾರೆ. ಹುಡುಗನ ತಂದೆ ಹೀರಾಲಾಲ್ ಸರ್ಕಾರ್ ಅವರು ಜ್ಯೋತಿನಗರ ಪ್ರದೇಶದಲ್ಲಿ ಮೂರು ದಿನಗಳಿಂದ ಹುಡುಕಾಟ ನಡೆಸುತ್ತಿದ್ದು, ಅಲ್ಲಿಂದ ಮನೆಗೆ ಹಿಂದಿರುಗಲು ನಿರಾಕರಿಸಿದ್ದಾರೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಸೇರಿದಂತೆ ಅಧಿಕಾರಿಗಳು ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ಸ್ನಿಫರ್ ಡಾಗ್‌ಗಳು, ಅಗೆಯುವ ಯಂತ್ರಗಳು ಮತ್ತು ಇತರ ಉಪಕರಣಗಳನ್ನು ಚಂಡಮಾರುತದ ಚರಂಡಿಯನ್ನು ಜಾಲಾಡಲು ಬಳಸಲಾಗುತ್ತಿದೆ.

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಹೀರಾಲಾಲ್ ಮತ್ತು ಅವರ ಪತ್ನಿಯನ್ನು ಸಮಾಧಾನ ಪಡಿಸುವ ಪ್ರಯತ್ನ ಮಾಡಿದರು. ಶೋಧ ತಂಡಗಳು ರಾತ್ರಿಯಿಡೀ ತಮ್ಮ ಕಾರ್ಯವನ್ನು ಮುಂದುವರಿಸಲಿವೆ, ಮನೆಯಲ್ಲಿರುವ ಮತ್ತೊಂದು ಮಗುವಿನ ಯೋಗಕ್ಷೇಮ ನೋಡಿಕೊಳ್ಳುವುದಕ್ಕಾದರೂ ನೀವು ಮನೆಗೆ ಹೋಗಿ ಎಂದು ಹೇಳಿದ್ದಾರೆ.

ಮತ್ತಷ್ಟು ಓದಿ: ಅಸ್ಸಾಂನ ಹಲವು ಭಾಗಗಳಲ್ಲಿ ಭಾರೀ ಮಳೆ; ಗುವಾಹಟಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದೊಳಗೆ ನೀರು

ನೀರಿನಲ್ಲಿ ಕೊಚ್ಚಿ ಹೋಗಿದ್ದ ಬಾಲಕ ಘಟನಾ ಸ್ಥಳಿಂದ ತುಂಬಾ ದೂರ ಹೋಗಿರಬಹುದು ಎಂದು ಅಂದಾಜಿಸಲಾಗಿದೆ. ಕೆಳಭಾಗದ ಪ್ರದೇಶಗಳಲ್ಲಿ ಕಾಂಕ್ರೀಟ್ ಚಪ್ಪಡಿಗಳನ್ನು ತೆಗೆಯುವುದರೊಂದಿಗೆ ಹುಡುಕಾಟ ಮುಂದುವರೆದಿದೆ.

ಬಾಲಕ ಜೀವಂತವಾಗಿದ್ದಾನೆಂದು ಭಾವಿಸಿದರೂ ಕೂಡ ಆತನ ಸ್ಥಿತಿ ಹೇಗಿರಬಹುದು ಎಂದು ಅಂದಾಜಿಸಲು ಸಾಧ್ಯವಿಲ್ಲ. ಘಟನೆಗೆ ಕಾರಣವಾದ ಸರ್ಕಾರದ ನಿರ್ಲಕ್ಷ್ಯದ ಆರೋಪವನ್ನು ತಳ್ಳಿಹಾಕಿದ ಮುಖ್ಯಮಂತ್ರಿ, ಗುವಾಹಟಿಯಂತಹ ದೊಡ್ಡ ನಗರದಲ್ಲಿ ಕೆಲವು ಸಮಸ್ಯೆಗಳಿವೆ ಎಂದು ಸಮರ್ಥಿಸಿಕೊಂಡರು. ಎಲ್ಲೆಲ್ಲಿ ಗಮನಸೆಳೆದರೂ ಅವುಗಳನ್ನು ಸರಿಪಡಿಸಲು ಆಡಳಿತ ಸಿದ್ಧವಿದೆ ಎಂದು ತಿಳಿಸಿದರು

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:13 am, Sun, 7 July 24