Patanjali Telemedicine: ಪತಂಜಲಿ ಮತ್ತೊಂದು ದೈತ್ಯ ಹೆಜ್ಜೆ; ವಿಶ್ವದ ಅತಿದೊಡ್ಡ ಆಯುರ್ವೇದ ಟೆಲಿಮೆಡಿಸಿನ್ ಸೆಂಟರ್​​ಗೆ ಚಾಲನೆ

Baba Ramdev's Patanjali Revolutionizes Ayurveda with Telemedicine: ಪತಂಜಲಿ ಆಯುರ್ವೇದವು ಜಾಗತಿಕ ಮಟ್ಟದಲ್ಲಿ ಅತಿದೊಡ್ಡ ಆಯುರ್ವೇದ ಟೆಲಿಮೆಡಿಸಿನ್ ಪ್ಲಾಟ್‌ಫಾರ್ಮ್ ಅನ್ನು ಉದ್ಘಾಟಿಸಿದೆ. ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರು ಈ ಯೋಜನೆಯನ್ನು ಉದ್ಘಾಟಿಸಿದರು. ಉಚಿತ ಆನ್‌ಲೈನ್ ಸಮಾಲೋಚನೆ, ಅನುಭವಿ ವೈದ್ಯರ ತಂಡ ಮತ್ತು ಸುಲಭ ಪ್ರವೇಶ ಇದರ ಪ್ರಮುಖ ಲಕ್ಷಣಗಳು. ಭಾರತೀಯ ಆಯುರ್ವೇದ ಪರಂಪರೆಯನ್ನು ಜಗತ್ತಿಗೆ ಪರಿಚಯಿಸುವಲ್ಲಿ ಇದು ಮಹತ್ವದ ಪಾತ್ರ ವಹಿಸಲಿದೆ.

Patanjali Telemedicine: ಪತಂಜಲಿ ಮತ್ತೊಂದು ದೈತ್ಯ ಹೆಜ್ಜೆ; ವಿಶ್ವದ ಅತಿದೊಡ್ಡ ಆಯುರ್ವೇದ ಟೆಲಿಮೆಡಿಸಿನ್ ಸೆಂಟರ್​​ಗೆ ಚಾಲನೆ
ಪತಂಜಲಿ ಆಯುರ್ವೇದ ಸಂಸ್ಥೆ

Updated on: Jul 09, 2025 | 6:34 PM

ಹರಿದ್ವಾರ, ಜುಲೈ 9: ಜಾಗತಿಕ ಆಯುರ್ವೇದ ಕ್ಷೇತ್ರದಲ್ಲಿ ಪತಂಜಲಿ ಆಯುರ್ವೇದ ಸಂಸ್ಥೆ (Patanjali Ayurveda) ಮಹತ್ವದ ಹೆಜ್ಜೆ ಇರಿಸಿದೆ. ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ನೇತೃತ್ವದ ಈ ಸಂಸ್ಥೆಯು ಇಂದು ಟೆಲಿಮೆಡಿಸಿನ್ ಕೇಂದ್ರವನ್ನು (Patanjali telemedicine center) ಉದ್ಘಾಟಿಸಿದೆ. ಇದು ವಿಶ್ವದ ಅತಿ ದೊಡ್ಡ ಮತ್ತು ಅಧಿಕೃತ ಆಯುರ್ವೇದ ಟೆಲಿಮೆಡಿಸಿನ್ ಪ್ಲಾಟ್​​ಫಾರ್ಮ್ ಎನಿಸಿದೆ. ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರು ವೇದ ಮಂತ್ರೋಚ್ಛಾರ ಮತ್ತು ಯಜ್ಞಗಳ ಮೂಲಕ ಈ ಪತಂಜಲಿ ಟೆಲಿ ಮೆಡಿಸಿನ್ ಸೆಂಟರ್ ಅನ್ನು ಔಪಚಾರಿಕವಾಗಿ ಅನಾವರಣಗೊಳಿಸಿದರು.

ಈ ಟೆಲಿಮೆಡಿಸಿನ್ ಸೆಂಟರ್ ಹರಿದ್ವಾರದಿಂದ ಹಿಡಿದು ದೇಶದ ಪ್ರತೀ ಮನೆ ಬಾಗಿಲಿಗೂ ಭಾರತದ ಋಷಿ ಪರಂಪರೆಯನ್ನು ಹರಡುವ ದೈವಿಕ ಸಾಧನವಾಗಲಿದೆ ಎಂದು ಈ ಸಂದರ್ಭದಲ್ಲಿ ಬಾಬಾ ರಾಮದೇವ್ ಹೇಳಿದರು. ಈಗ ವೈದ್ಯಕೀಯ ಸೇವೆಗಳು ಆನ್‌ಲೈನ್‌ನಲ್ಲೇ ಲಭ್ಯ ಇದ್ದು, ಅನಾರೋಗ್ಯ ಪೀಡಿತರಿಗೆ ಇದು ಬಹಳ ಅನುಕೂಲವಾಗುತ್ತದೆ. ಪತಂಜಲಿಯ ಟೆಲಿಮೆಡಿಸಿನ್ ಕೇಂದ್ರವು ಮಾನವ ಸೇವೆಯ ಅತ್ಯುತ್ತಮ ಉಪಕ್ರಮವಾಗಿದೆ ಎಂದು ಪತಂಜಲಿ ಸಂಸ್ಥಾಪಕರು ಬಣ್ಣಿಸಿದರು.

ಇದನ್ನೂ ಓದಿ: Divya Medha Vati: ತಲೆನೋವು, ನಿದ್ರಾಹೀನತೆ ಸಮಸ್ಯೆಗೆ ಪತಂಜಲಿ ದಿವ್ಯ ಮೇಧಾ ವಟಿ ಪರಿಹಾರ

ಇದನ್ನೂ ಓದಿ
ತಲೆನೋವು, ನಿದ್ರಾಹೀನತೆ ನೀಗಿಸುತ್ತೆ ಈ ಪತಂಜಲಿ ಔಷಧಿ
ಪತಂಜಲಿ ದಿವ್ಯ ಶ್ವಾಸಾರಿ ವಟಿ: ಉಸಿರಾಟದ ಆರೋಗ್ಯಕ್ಕಾಗಿ ಮಾರ್ಗಸೂಚಿ
ನೋವು ನಿವಾರಕವಾದ ಪತಂಜಲಿ ಸರಳ ವ್ಯಾಯಾಮಗಳು
ದೇಹದ ಆರೋಗ್ಯಕ್ಕೆ ವಿವಿಧ ಮುದ್ರೆಗಳು: ಪತಂಜಲಿ ಮಾಹಿತಿ

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಆಚಾರ್ಯ ಬಾಲಕೃಷ್ಣ, ಇಂದು ಇಡೀ ಜಗತ್ತು ಯೋಗಕ್ಕಾಗಿ ಭಾರತದತ್ತ ನೋಡುತ್ತಿರುವಂತೆ, ಆಯುರ್ವೇದ ಮತ್ತು ಅದರ ಸೇವೆಗಳಿಗಾಗಿಯೂ ಜಗತ್ತು ಈಗ ಭಾರತದತ್ತ ಭರವಸೆಯಿಂದ ನೋಡುತ್ತಿದೆ ಎಂದು ಹೇಳಿದರು. ಈ ಟೆಲಿಮೆಡಿಸಿನ್ ಕೇಂದ್ರವು ಆ ದಿಕ್ಕಿನಲ್ಲಿ ಒಂದು ಉತ್ತಮ ಹೆಜ್ಜೆಯಾಗಿದೆ. ಪತಂಜಲಿ ಟೆಲಿಮೆಡಿಸಿನ್ ಕೇಂದ್ರವು ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿದ ಮತ್ತು ಸುಸಂಘಟಿತ ಮಾದರಿಯಾಗಿದೆ ಎಂದು ಆಚಾರ್ಯರು ಅಭಿಪ್ರಾಯಪಟ್ಟರು.

ಪತಂಜಲಿ ಟೆಲಿಮೆಡಿಸಿನ್ ಸೆಂಟರ್​​ನ ವಿಶೇಷತೆಗಳು

  • ಉಚಿತ ಆನ್‌ಲೈನ್ ಆಯುರ್ವೇದ ಸಮಾಲೋಚನೆ
  • ಟೆಲಿಮೆಡಿಸಿನ್ ನಂಬರ್- 18002961111
  • ಉನ್ನತ ತರಬೇತಿ ಪಡೆದ ವೈದ್ಯರ ತಂಡ
  • ಪ್ರಾಚೀನ ಗ್ರಂಥಗಳಲ್ಲಿ ತಿಳಿಸಲಾಗಿರುವ ಮತ್ತು ವ್ಯಕ್ತಿಗತಗೊಳಿಸಲಾಗಿರುವ ಹರ್ಬಲ್ ಸಂಯೋಜನೆಗಳು
  • ಡಿಜಿಟಲ್ ಹೆಲ್ತ್ ರೆಕಾರ್ಡ್ ಮತ್ತು ವ್ಯವಸ್ಥಿತವಾದ ಫಾಲೋಅಪ್
  • WhatsApp, ಫೋನ್ ಮತ್ತು ವೆಬ್ ಆಧಾರಿತ ಪ್ಲಾಟ್​​ಫಾರ್ಮ್​ಗಳ ಮೂಲಕ ಸುಲಭ ಪ್ರವೇಶ

ಈ ಉಪಕ್ರಮವು ಪ್ರತಿ ಮನೆಯಲ್ಲೂ ಅಧಿಕೃತ, ಶಾಸ್ತ್ರಾಧಾರಿತ ಆಯುರ್ವೇದ ಆರೋಗ್ಯ ಪರಿಹಾರಗಳಿಗೆ ಆಧಾರವಾಗಿರುತ್ತದೆ. ದೂರದ ಪ್ರದೇಶಗಳಲ್ಲಿರುವ ಮತ್ತು ವಿದೇಶಗಳಲ್ಲಿ ವಾಸಿಸುವ ಮತ್ತು ಕೇಂದ್ರಕ್ಕೆ ಭೇಟಿ ನೀಡಲು ಸಾಧ್ಯವಾಗದಿರುವ ಜನರಿಗೆ ಈ ಟೆಲಿಮೆಡಿಸಿನ್ ಸೆಂಟರ್ ಪ್ರಯೋಜನ ಆಗಬಹುದು.

ಇದನ್ನೂ ಓದಿ: Patanjali ದಿವ್ಯ ಶ್ವಾಸಾರಿ ವಟಿ: ಪ್ರಯೋಜನಗಳು, ಡೋಸೇಜ್ ಮತ್ತು ಮುನ್ನೆಚ್ಚರಿಕೆಗಳು

ಯಜ್ಞವನ್ನು ಪೂರ್ಣಗೊಳಿಸುವುದರೊಂದಿಗೆ ಈ ಟೆಲಿಮೆಡಿಸಿನ್ ಸೆಂಟರ್ ಉದ್ಘಾಟನಾ ಸಮಾರಂಭವು ಮುಕ್ತಾಯವಾಯಿತು. ಪತಂಜಲಿ ಆಯುರ್ವೇದ ಆಸ್ಪತ್ರೆಯ ಎಲ್ಲಾ ವೈದ್ಯರು ಮತ್ತು ಪತಂಜಲಿ ಆಯುರ್ವೇದ ಕಾಲೇಜಿನ ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

(ಪತ್ರಿಕಾ ಪ್ರಕಟಣೆ)

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us