AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂತೂ ಪಿಎಫ್‌ಐ ನಿಷೇಧವಾಯ್ತು, ಆ ಸಂಘಟನೆಯ ಜೊತೆ ಸಂಪರ್ಕ ಹೊಂದುವುದು ಇನ್ನು ನಿಷಿದ್ಧ!

ದೇಶಾದ್ಯಂತ ಪಾಪ್ಯುಲರ್ ಫ್ರಂಟ್ ಆಫ್‌ ಇಂಡಿಯಾ ಹಾಗೂ ಅದರ ಅಂಗಸಂಸ್ಥೆಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಇಷ್ಟು ವರ್ಷ ಅಳೆದೂ ತೂಗಿ ಇದೀಗ ಕೊನೆಗೂ ಕೇಂದ್ರ ಸರ್ಕಾರ ಪಿಎಫ್‌ಐ ಅನ್ನು ನಿಷೇಧಿಸಿದೆ.

ಅಂತೂ ಪಿಎಫ್‌ಐ ನಿಷೇಧವಾಯ್ತು, ಆ ಸಂಘಟನೆಯ ಜೊತೆ ಸಂಪರ್ಕ ಹೊಂದುವುದು ಇನ್ನು ನಿಷಿದ್ಧ!
ಪಿಎಫ್​ಐ ನಿಷೇಧ
TV9 Web
| Edited By: |

Updated on: Sep 28, 2022 | 10:41 PM

Share

ದೇಶಾದ್ಯಂತ ಪಾಪ್ಯುಲರ್ ಫ್ರಂಟ್ ಆಫ್‌ ಇಂಡಿಯಾ ಹಾಗೂ ಅದರ ಅಂಗಸಂಸ್ಥೆಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಇಷ್ಟು ವರ್ಷ ಅಳೆದೂ ತೂಗಿ ಇದೀಗ ಕೊನೆಗೂ ಕೇಂದ್ರ ಸರ್ಕಾರ ಪಿಎಫ್‌ಐ ಅನ್ನು ನಿಷೇಧಿಸಿದೆ. ಎಂದೋ ಈ ಸಂಘಟನೆಗಳನ್ನು ನಿಷೇದಿಸಬಹುದಿತ್ತಲ್ಲಾ ಎಂಬ ಪ್ರಶ್ನೆಗಳು ಏಳುವುದು ಸಹಜ. ಆದರೆ ಸಂಘಗಳು, ಒಕ್ಕೂಟಗಳನ್ನು ಕಟ್ಟುವುದು ಸಂವಿಧಾನದ ಆರ್ಟಿಕಲ್ 19(c) ಅಡಿಯಲ್ಲಿ ನಾಗರಿಕರ ಮೂಲಭೂತ ಹಕ್ಕು. ಹೀಗಾಗಿ ಯಾವುದೇ ಸಂಘಟನೆಯನ್ನು ನಿಷೇಧಿಸುವುದು ಸುಲಭವಲ್ಲ. ಆದರೆ ದೇಶದ ಏಕತೆ, ಸಮಗ್ರತೆಗೆ ಧಕ್ಕೆಯುಂಟಾದಾಗ, ಸಾರ್ವಜನಿಕ ಸುವ್ಯವಸ್ಥೆಗೆ ಅಡ್ಡಿಯಾದಾಗ, ನೈತಿಕತೆಗೆ ಭಂಗ ತರುವ ಸಂಘಟನೆಗಳ ಮೇಲೆ ಕ್ರಮ ಕೈಗೊಳ್ಳಲು ಸಂವಿಧಾನದಲ್ಲೇ ಅವಕಾಶ ಮಾಡಿಕೊಡಲಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಎಲ್ಲಾ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ ನಂತರವೇ ಪಿಎಫ್‌ಐ ನಿಷೇಧಿಸುವ ಕೆಲಸಕ್ಕೆ ಕೈ ಹಾಕಿದೆ. 1967 ರಲ್ಲಿ ರಚಿಸಲಾದ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಯುಎಪಿಎ ಸಂಪೂರ್ಣ ಭಾರತ ದೇಶದ ಜನರಿಗೆ ಮಾತ್ರವಲ್ಲ ವಿದೇಶಗಳಲ್ಲಿರುವ ಭಾರತದ ನಾಗರಿಕರಿಗೂ, ನೋಂದಣಿಯಾದ, ನೋಂದಣಿಯಾಗದ ಸಂಘಟನೆಗಳಿಗೂ ಅನ್ವಯವಾಗುತ್ತದೆ.

ಯುಎಪಿ ಕಾಯ್ದೆಯ ಸೆಕ್ಷನ್ 3 ರ ಅಡಿ ಕೇಂದ್ರ ಸರ್ಕಾರದ ಗೃಹ ಸಚಿವಾಲಯ ಪಿಎಫ್‌ಐ ಹಾಗೂ ಅದರ ಅಂಗಸಂಸ್ಥೆಗಳನ್ನು ದೇಶಾದ್ಯಂತ ಹಿಂಸಾತ್ಮಕ ಉಗ್ರ ಕೃತ್ಯಗಳನ್ನು ನಡೆಸಿದ ಆರೋಪದ ಮೇರೆಗೆ ನಿಷೇಧಿಸಿದೆ. ಕೇಂದ್ರ ಸರ್ಕಾರ ಈಗ ಪಿಎಫ್‌ಐ ಹಾಗೂ ಅದರ ಅಂಗ ಸಂಸ್ಥೆಗಳನ್ನು ನಿಷೇಧಿಸಿದ್ದರೂ ಇದೇ ಅಂತಿಮವಲ್ಲ. ಗೃಹ ಇಲಾಖೆಯ ಕ್ರಮವನ್ನು ಯುಎಪಿ ಕಾಯ್ದೆಯಡಿ ರಚಿಸಲಾಗಿರುವ ನ್ಯಾಯಮಂಡಳಿ ಪರಾಮರ್ಶಿಸುತ್ತದೆ. ಸಂತ್ರಸ್ತ ಸಂಘಟನೆಗಳಿಗೆ 30 ದಿನಗಳಲ್ಲಿ ನೋಟಿಸ್ ಜಾರಿಗೊಳಿಸಿ ಅವರ ವಾದವನ್ನೂ ಕೇಳಲಾಗುತ್ತದೆ. ಯುಎಪಿ ಕಾಯ್ದೆಯ ಸೆಕ್ಷನ್ 4 ರಲ್ಲಿ ನಿಗದಿಪಡಿಸಿರುವಂತೆ 6 ತಿಂಗಳಲ್ಲಿ ನ್ಯಾಯಮಂಡಳಿ ನಿಷೇಧ ಸರಿಯೋ, ತಪ್ಪೋ ಎಂದು ತೀರ್ಮಾನಿಸಬೇಕಾಗುತ್ತದೆ. ನಿಷೇಧಕ್ಕೆ ಸಕಾರಣಗಳಿಲ್ಲವೆಂದು ಕಂಡುಬಂದರೆ ಕೇಂದ್ರ ಸರ್ಕಾರದ ಆದೇಶವನ್ನು ರದ್ದುಪಡಿಸುವ ಅಧಿಕಾರ ಯುಎಪಿಎ ನ್ಯಾಯಮಂಡಳಿಗೆ ಇದೆ. ಒಂದು ವೇಳೆ ಗೃಹ ಸಚಿವಾಲಯ ಆದೇಶ ಸರಿಯಾಗಿದೆ ಎಂದು ಆದೇಶ ನೀಡಿದರೆ ಮುಂದಿನ 5 ವರ್ಷಗಳ ಕಾಲ ಪಿಎಫ್‌ಐ ನಿಷೇಧ ಮುಂದುವರಿಯಲಿದೆ. ಇನ್ನು ಯುಎಪಿಎ ಅಡಿ ಪಿಎಫ್‌ಐ ನಿಷೇಧವಾದ ಕೂಡಲೇ ಅದರ ಜೊತೆ ಸಂಪರ್ಕ ಹೊಂದುವುದು ನಿಷಿದ್ಧವಾಗಲಿದೆ. ಸೆಕ್ಷನ್ 7 ರ ಅಡಿ ಸಂಘಟನೆಯ ಹಣವನ್ನು ವರ್ಗಾವಣೆ ಮಾಡುವುದಾಗಲೀ, ಬಳಸಿಕೊಳ್ಳುವುದಾಗಲೀ ನಿಷಿದ್ಧವಾಗಲಿದೆ. ಸಂಘಟನೆಯ ಹಣದ ಮೂಲದ ತನಿಖೆ ನಡೆಸಲು ತನಿಖಾ ಸಂಸ್ಥೆಗಳಿಗೆ ಸಂಪೂರ್ಣ ಅಧಿಕಾರ ದೊರೆಯಲಿದೆ. ಅದೇ ರೀತಿ ಸೆಕ್ಷನ್ 8 ರ ಅಡಿಯಲ್ಲಿ ಜಿಲ್ಲಾ ದಂಡಾಧಿಕಾರಿ ಅಥವಾ ಅವರಿಂದ ನಿಯೋಜಿತ ಅಧಿಕಾರಿ ನಿಷೇಧಿತ ಸಂಘಟನೆಯ ಎಲ್ಲಾ ಸ್ಥಳಗಳನ್ನು ಮಹಜರು ಮಾಡಿ ವಸ್ತುಗಳ ಪಟ್ಟಿ ತಯಾರಿಸಬೇಕು. ಅಂತಹ ಸ್ಥಳಗಳನ್ನು ಪಟ್ಟಿ ಮಾಡಿ ಅಧಿಸೂಚನೆ ಹೊರಡಿಸಬೇಕು. ಸಂಘಟನೆಗೆ ಬಳಸುತ್ತಿದ್ದ ವಸ್ತುಗಳನ್ನು ಮುಂದಿನ ಆದೇಶದವರೆಗೂ ಬಳಸದಂತೆ ನಿರ್ಬಂಧ ಹೇರಬಹುದು. ಆ ಪ್ರದೇಶಕ್ಕೆ 3ನೇ ವ್ಯಕ್ತಿಗಳ ಪ್ರವೇಶಕ್ಕೆ ನಿರ್ಬಂಧವನ್ನೂ ಹೇರಬಹುದು.

ಯುಎಪಿ ಕಾಯ್ದೆಯ ಸೆಕ್ಷನ್ 10 ರಡಿ ನಿಷೇಧಿತ ಸಂಘಟನೆಯ ಸದಸ್ಯತ್ವ ಮುಂದುವರಿಸಿದರೆ, ಯಾವುದೇ ರೀತಿಯ ನೆರವು ನೀಡಿದರೆ, 2 ವರ್ಷದವರೆಗೆ ಶಿಕ್ಷೆಗೆ ಗುರಿಪಡಿಸಬಹುದು. ಇನ್ನು ಸಂಘಟನೆಯ ಸದಸ್ಯನಾಗಿ ಮಾರಕ ಶಸ್ತ್ರಾಸ್ತ್ರಗಳಿಂದ ಪ್ರಾಣಹಾನಿ ಮಾಡಿದರೆ ಜೀವಾವಧಿ ಅಥವಾ ಮರಣದಂಡನೆಗೂ ಗುರಿಪಡಿಸಬಹುದು. ಸೆಕ್ಷನ್ 11 ರಡಿ ನಿಷೇಧಿತ ಸಂಘಟನೆಗೆ ನೆರವು ನೀಡದಂತೆ ನಿರ್ಬಂಧ ಹೇರಿದರೂ ಹಣಕಾಸಿನ ನೆರವು ಮುಂದುವರಿಸಿದರೆ 3 ವರ್ಷ ಶಿಕ್ಷೆಗೆ ಗುರಿಯಾಗಬೇಕಾಗಲಿದೆ. ಹೀಗಾಗಿ ಯುಎಪಿ ಕಾಯ್ದೆ ಉಲ್ಲಂಘಿಸಿ ದುಷ್ಕೃತ್ಯ ಎಸಗುವುದು, ಅಥವಾ ಅದಕ್ಕೆ ನೆರವು ನೀಡುವುದು ದಂಡನಾರ್ಹ ಅಪರಾಧವಾಗಲಿದೆ.

ರಮೇಶ

ಎಣ್ಣೆ ನಶೆಯಲ್ಲಿ ನಾಯಿ ಜೊತೆ ಯುವಕನ ಡ್ಯಾನ್ಸ್​​: ವಿಡಿಯೋ ವೈರಲ್​
ಎಣ್ಣೆ ನಶೆಯಲ್ಲಿ ನಾಯಿ ಜೊತೆ ಯುವಕನ ಡ್ಯಾನ್ಸ್​​: ವಿಡಿಯೋ ವೈರಲ್​
‘ನಗ್ತಾ ಇರಿ, ಖುಷಿಯಾಗಿರಿ’; ಮಾತಿನ ಮೂಲಕ ವಿಶ್ ಮಾಡಿದ ಸುದೀಪ್
‘ನಗ್ತಾ ಇರಿ, ಖುಷಿಯಾಗಿರಿ’; ಮಾತಿನ ಮೂಲಕ ವಿಶ್ ಮಾಡಿದ ಸುದೀಪ್
ನಮಗೊಂದು ಟ್ವೀಟ್ ಮಾಡಿಕೊಡಿ: ಕೇರಳ ಸಿಎಂಗೆ ದುಂಬಾಲು ಬಿದ್ದ ಬಿಜೆಪಿ!
ನಮಗೊಂದು ಟ್ವೀಟ್ ಮಾಡಿಕೊಡಿ: ಕೇರಳ ಸಿಎಂಗೆ ದುಂಬಾಲು ಬಿದ್ದ ಬಿಜೆಪಿ!
ಹೊಸ ವರ್ಷಾಚರಣೆ ವೇಳೆ ಸ್ವಿಟ್ಜರ್​ಲ್ಯಾಂಡ್​ನ ಬಾರ್‌ನಲ್ಲಿ ಬಾಂಬ್ ಸ್ಫೋಟ
ಹೊಸ ವರ್ಷಾಚರಣೆ ವೇಳೆ ಸ್ವಿಟ್ಜರ್​ಲ್ಯಾಂಡ್​ನ ಬಾರ್‌ನಲ್ಲಿ ಬಾಂಬ್ ಸ್ಫೋಟ
ಹೊಸ ವರ್ಷದ ದಿನ ನಮ್ಮ ಮೆಟ್ರೋಗೆ ಬಂಪರ್​ ಆದಾಯ: ಕಲೆಕ್ಷನ್​ ಎಷ್ಟು?
ಹೊಸ ವರ್ಷದ ದಿನ ನಮ್ಮ ಮೆಟ್ರೋಗೆ ಬಂಪರ್​ ಆದಾಯ: ಕಲೆಕ್ಷನ್​ ಎಷ್ಟು?
ಪರೋಕ್ಷವಾಗಿ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಡಾ. ಜಿ. ಪರಮೇಶ್ವರ್
ಪರೋಕ್ಷವಾಗಿ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಡಾ. ಜಿ. ಪರಮೇಶ್ವರ್
ಹೂ, ಎಲೆಗಳ ಸಿಂಗಾರ; ವಿಶೇಷ ಅಲಂಕಾರದಲ್ಲಿ ಕಂಗೊಳಿಸಿದ ನಾಡ ದೇವತೆ
ಹೂ, ಎಲೆಗಳ ಸಿಂಗಾರ; ವಿಶೇಷ ಅಲಂಕಾರದಲ್ಲಿ ಕಂಗೊಳಿಸಿದ ನಾಡ ದೇವತೆ
ಮಂತ್ರಾಲಯದಲ್ಲಿ ಹೊಸ ವರ್ಷದ ಸಂಭ್ರಮ: ಸಾಗರೋಪಾದಿಯಲ್ಲಿ ಹರಿದುಬಂದ ಭಕ್ತರು
ಮಂತ್ರಾಲಯದಲ್ಲಿ ಹೊಸ ವರ್ಷದ ಸಂಭ್ರಮ: ಸಾಗರೋಪಾದಿಯಲ್ಲಿ ಹರಿದುಬಂದ ಭಕ್ತರು
ಪಕ್ಕದಮನೆಯವರ ಬಗ್ಗೆ ಮಾತನಾಡಲ್ಲ; ವಿಜಯಲಕ್ಷ್ಮೀ ಬಗ್ಗೆ ಸುದೀಪ್ ಮಾತು
ಪಕ್ಕದಮನೆಯವರ ಬಗ್ಗೆ ಮಾತನಾಡಲ್ಲ; ವಿಜಯಲಕ್ಷ್ಮೀ ಬಗ್ಗೆ ಸುದೀಪ್ ಮಾತು
ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಭಕ್ತರ ದಂಡು
ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಭಕ್ತರ ದಂಡು