AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ಧರಿಸಿದ್ದ ಮುಂಡಾಸನ್ನು ಯಾರು ನೀಡಿದ್ದು ಗೊತ್ತಾ?

ದೆಹಲಿ: ಭಾರತದ 74ನೇ ಸ್ವಾತಂತ್ರ್ಯ ದಿನಾಚರಣೆಯಂದು ದೆಹಲಿಯ ಕೆಂಪುಕೋಟೆ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿಯವರು ಧರಿಸಿದ್ದ ಮುಂಡಾಸು ಎಲ್ಲರ ಗಮನವನ್ನು ತನ್ನತ್ತ ಸೆಳೆದಿತ್ತು. ಅಂದ ಹಾಗೆ, ಈ ಪೇಟವನ್ನು ಗುಜರಾತ್​ನ ತಾಪಿ ಜಿಲ್ಲೆಯ 38 ವರ್ಷದ ರೈತ ಸುಜಾನ್​ಸಿಂಗ್​ ಪಾರ್ಮಾರ್ ಪ್ರಧಾನಿಗೆ ಉಡುಗೊರೆಯಾಗಿ ಕಳುಹಿಸಿದ್ದರು ಎಂದು ತಿಳಿದುಬಂದಿದೆ. ಪ್ರಧಾನಿ ನಾನು ಕಳಿಸಿದ ಪೇಟವನ್ನು ಧರಿಸಬೇಕು. ಆಗ ನನ್ನ ಕನಸು ಈಡೇರುತ್ತದೆ ಎಂದು ಪಾರ್ಮಾರ್ ಆಶಯಪಟ್ಟಿದ್ದರಂತೆ. ಈ ಸಂತಸವನ್ನು ಖುದ್ದು ಹಂಚಿಕೊಂಡಿರುವ ಪಾರ್ಮಾರ್ ಗುಜರಾತ್​​ ಸಂಸದ ಸಿ.ಆರ್​ […]

ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ಧರಿಸಿದ್ದ ಮುಂಡಾಸನ್ನು ಯಾರು ನೀಡಿದ್ದು ಗೊತ್ತಾ?
ಸಾಧು ಶ್ರೀನಾಥ್​
| Edited By: |

Updated on: Aug 19, 2020 | 5:57 PM

Share

ದೆಹಲಿ: ಭಾರತದ 74ನೇ ಸ್ವಾತಂತ್ರ್ಯ ದಿನಾಚರಣೆಯಂದು ದೆಹಲಿಯ ಕೆಂಪುಕೋಟೆ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿಯವರು ಧರಿಸಿದ್ದ ಮುಂಡಾಸು ಎಲ್ಲರ ಗಮನವನ್ನು ತನ್ನತ್ತ ಸೆಳೆದಿತ್ತು. ಅಂದ ಹಾಗೆ, ಈ ಪೇಟವನ್ನು ಗುಜರಾತ್​ನ ತಾಪಿ ಜಿಲ್ಲೆಯ 38 ವರ್ಷದ ರೈತ ಸುಜಾನ್​ಸಿಂಗ್​ ಪಾರ್ಮಾರ್ ಪ್ರಧಾನಿಗೆ ಉಡುಗೊರೆಯಾಗಿ ಕಳುಹಿಸಿದ್ದರು ಎಂದು ತಿಳಿದುಬಂದಿದೆ. ಪ್ರಧಾನಿ ನಾನು ಕಳಿಸಿದ ಪೇಟವನ್ನು ಧರಿಸಬೇಕು. ಆಗ ನನ್ನ ಕನಸು ಈಡೇರುತ್ತದೆ ಎಂದು ಪಾರ್ಮಾರ್ ಆಶಯಪಟ್ಟಿದ್ದರಂತೆ.

ಈ ಸಂತಸವನ್ನು ಖುದ್ದು ಹಂಚಿಕೊಂಡಿರುವ ಪಾರ್ಮಾರ್ ಗುಜರಾತ್​​ ಸಂಸದ ಸಿ.ಆರ್​ ಪಾಟೀಲ್ ಅವರಿಂದ ನನಗೆ ಕರೆ ಬಂದಿದ್ದು, ಆರು ಮುಂಡಾಸುಗಳನ್ನು ತಯಾರಿಸುವಂತೆ ತಿಳಿಸಿದ್ದರು. ಆ ಪೇಟಗಳನ್ನು ಪ್ರಧಾನಿ ಕಚೇರಿಗೆ ಕಳುಹಿಸಲಾಗುವುದು ಎಂದು ಹೇಳಿದರು. ಪಾಟೀಲ್ ಅಣತಿಯಂತೆ ಪಾರ್ಮಾರ್ ಆರು ಪೇಟಗಳನ್ನು ತಯಾರಿಸಿ ಆಗಸ್ಟ್ 10 ರಂದು ಪಾಟೀಲ್ ಕಚೇರಿಗೆ ಕಳುಹಿಸಿದ್ದರು.

ಪ್ರಧಾನಿ ಮೋದಿ ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಎರಡು ಬಾರಿ ಅವರನ್ನು ಭೇಟಿಯಾಗಲು ನನಗೆ ಅವಕಾಶ ಸಿಕ್ಕಿತು. ಆ ಸಮಯದಲ್ಲಿ ನಾನು ಅವರಿಗೆ ಪೇಟಗಳನ್ನು ಉಡುಗೊರೆಯಾಗಿ ನೀಡಿದ್ದೆ. ಆದರೆ ಅಂದು ಅವರು ಆ ಮುಂಡಾಸುಗಳನ್ನು ಧರಿಸಿರಲಿಲ್ಲ. ಆದರೆ, ಈ ಬಾರಿ ದೆಹಲಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಭಾಷಣ ಮಾಡುವಾಗ ಪ್ರಧಾನಿ ನಾನು ಕಳಿಸಿದ್ದ ಮುಂಡಾಸನ್ನು ಧರಿಸಿದ್ದು ನನಗೆ ತುಂಬಾ ಸಂತೋಷ ತಂದುಕೊಟ್ಟಿದೆ ಎಂದಿದ್ದಾರೆ. ಜೊತೆಗೆ, ರಾಜನಾಥ್ ಸಿಂಗ್, ಅಮಿತ್ ಶಾ ಮತ್ತು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯಂಥ ಹಲವಾರು ನಾಯಕರು ಸಹ ನನ್ನಿಂದ ಉಡುಗೊರೆಯಾಗಿ ಪೇಟಗಳನ್ನು ಪಡೆದಿದ್ದಾರೆ ಎಂದು ಪಾರ್ಮಾರ್ ಹೇಳಿದರು.

ಪಾರ್ಮಾರ್ ವೃತ್ತಿಯಲ್ಲಿ ಕೃಷಿಕರಾಗಿದ್ರೂ ಮುಂಡಾಸುಗಳನ್ನ ತಯಾರಿಸುವುದು ಅವರ ಹವ್ಯಾಸ. ಕಳೆದ 16 ವರ್ಷಗಳಿಂದ ನಾನು ರಜಪೂತ ಸಮುದಾಯದ ಜನರಿಗಾಗಿ ಪೇಟಗಳನ್ನು ಕಟ್ಟುತ್ತಿದ್ದೇನೆ. ನಾನು ಕೇವಲ 18 ಸೆಕೆಂಡ್​ನಲ್ಲಿ ಒಂದು ಪೇಟವನ್ನು ಕಟ್ಟಬಲ್ಲೆ ಎಂದು ಪಾರ್ಮಾರ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ