Narendra Modi: 3 ರಾಷ್ಟ್ರಗಳ ಪ್ರವಾಸ ಮುಗಿಸಿ ದೆಹಲಿಗೆ ಹಿಂದಿರುಗಿದ ಪ್ರಧಾನಿ ಮೋದಿ ಹೇಳಿದ್ದೇನು? ಇಲ್ಲಿದೆ ಮಾಹಿತಿ

ಮೂರು ರಾಷ್ಟ್ರಗಳ ಪ್ರವಾಸ ಮುಗಿಸಿ ಪ್ರಧಾನಿ ನರೇಂದ್ರ ಮೋದಿ(Narendra Modi) ಭಾರತಕ್ಕೆ ಹಿಂದಿರುಗಿದ್ದು, ದೆಹಲಿ ಏರ್​ಪೋರ್ಟ್​ನಲ್ಲಿ ಅದ್ಧೂರಿ ಸ್ವಾಗತ ದೊರೆತಿದೆ.

Narendra Modi: 3 ರಾಷ್ಟ್ರಗಳ ಪ್ರವಾಸ ಮುಗಿಸಿ ದೆಹಲಿಗೆ ಹಿಂದಿರುಗಿದ ಪ್ರಧಾನಿ ಮೋದಿ ಹೇಳಿದ್ದೇನು? ಇಲ್ಲಿದೆ ಮಾಹಿತಿ
ಪ್ರಧಾನಿ ನರೇಂದ್ರ ಮೋದಿ

Updated on: May 25, 2023 | 8:02 AM

ಮೂರು ರಾಷ್ಟ್ರಗಳ ಪ್ರವಾಸ ಮುಗಿಸಿ ಪ್ರಧಾನಿ ನರೇಂದ್ರ ಮೋದಿ(Narendra Modi) ಭಾರತಕ್ಕೆ ಹಿಂದಿರುಗಿದ್ದು, ದೆಹಲಿ ಏರ್​ಪೋರ್ಟ್​ನಲ್ಲಿ ಅದ್ಧೂರಿ ಸ್ವಾಗತ ದೊರೆತಿದೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸ್ವಾಗತಿಸಿದರು. ಪ್ರಧಾನಿ ನರೇಂದ್ರ ಮೋದಿ ಜಪಾನ್, ಪಪುವಾ ನ್ಯೂಗಿನಿಯಾ, ಆಸ್ಟ್ರೇಲಿಯಾ ಪ್ರವಾಸ ಮುಗಿಸಿ ಹಿಂದಿರುಗಿದ್ದಾರೆ. ಮೂರು ದೇಶಗಳ ಪ್ರವಾಸ ಮುಗಿಸಿ ಪ್ರಧಾನಿ ನರೇಂದ್ರ ಮೋದಿ ಭಾರತಕ್ಕೆ ಮರಳಿದ್ದಾರೆ. ಅವರ ವಿಮಾನವು ದೆಹಲಿಯ ಪಾಲಂ ವಿಮಾನ ನಿಲ್ದಾಣದಲ್ಲಿ ಬೆಳಿಗ್ಗೆ 5:10 ರ ಸುಮಾರಿಗೆ ಇಳಿಯಿತು. ಈ ವೇಳೆ ಹಲವು ಬಿಜೆಪಿ ಕಾರ್ಯಕರ್ತರು ಕೈಯಲ್ಲಿ ತ್ರಿವರ್ಣ ಧ್ವಜ ಹಾಗೂ ವಿಶ್ವದ ನೆಚ್ಚಿನ ನಾಯಕ ಎಂಬ ಬೋರ್ಡ್​ ಹಿಡಿದು ನಿಂತಿದ್ದರು.

‘ಕಳೆದ ಆರು ದಿನಗಳಲ್ಲಿ ಪ್ರಧಾನಿ ಮೋದಿ ಜಪಾನ್, ಪಪುವಾ ನ್ಯೂ ಗಿನಿಯಾ ಮತ್ತು ಆಸ್ಟ್ರೇಲಿಯಾದಲ್ಲಿ ಹಲವು ಸಭೆಗಳನ್ನು ನಡೆಸಿದ್ದಾರೆ.
ಪ್ರಧಾನಿ ಮೋದಿ ಮಾತು: ಈ ಪ್ರವಾಸದಲ್ಲಿ ನನಗೆ ಲಭ್ಯವಾದ ಸಮಯವನ್ನು ನಾನು ದೇಶದ ಬಗ್ಗೆ ಮಾತನಾಡಲು ಹಾಗೂ ದೇಶದ ಒಳಿತಿಗಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಂಪೂರ್ಣವಾಗಿ ಬಳಸಿದ್ದೇನೆ, ಈಗ ಸವಾಲುಗಳು ದೊಡ್ಡದಾಗಿವೆ, ಈ ಸವಾಲುಗಳಿಗೆ ಸವಾಲು ಹಾಕುವುದು ನನ್ನ ಸ್ವಭಾವ ಎಂದರು.

ಮತ್ತಷ್ಟು ಓದಿ: ಆಸ್ಟ್ರೇಲಿಯಾದಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ ನೊಬೆಲ್ ಪ್ರಶಸ್ತಿ ವಿಜೇತ ಬ್ರಿಯಾನ್ ಪಿ ಸ್ಮಿತ್ ಯಾರು?

ಕೊರೊನಾದಿಂದ ಪರಿಸ್ಥಿತಿ ಕೆಟ್ಟು ನಿಂತಾಗ ವಿಶ್ವದ ಶ್ರೀಮಂತ ರಾಷ್ಟ್ರಗಳು ಸಹ ಕೊರೊನಾಗೆ ತುತ್ತಾಗಿದ್ದವು, ನಮ್ಮ ಅನೇಕ ಕುಟುಂಬಗಳು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿವೆ, ಆದರೆ ನಾನು ವಿದೇಶದಲ್ಲಿ ಜನರನ್ನು ಭೇಟಿಯಾದಾಗ ಅವರ ಕಣ್ಣಲ್ಲಿ ನೀರು ತುಂಬಿತ್ತು, ನೀವು ನಮಗೆ ಲಸಿಕೆ ಕೊಟ್ಟಿದ್ದರಿಂದ ನಾವು ಬದುಕಿದ್ದೇವೆ ಎಂದು ಅವರ ಕಣ್ಣುಗಳು ಹೇಳುತ್ತಿದ್ದವು, ಭಾರತದ ಲಸಿಕೆ ಪ್ರಪಂಚದ ಕೋಟ್ಯಂತರ ಜನರ ಜೀವನದ ಕಾಳಜಿವಹಿಸಿದೆ ಎಂದು ಹೇಳಿದರು.

ಇದು ಬುದ್ಧ, ಗಾಂಧಿಯ ನಾಡು ನಾವು ನಮ್ಮ ಶತ್ರುಗಳಿಗೆ ಕೂಡ ಸಹಾಯ ಮಾಡುತ್ತೇವೆ, ನಮ್ಮ ಜನರು ಸಹಾನುಭೂತಿಯಿಂದ ಕೂಡಿರುವವರು, ನಾವು ಹಾಗೆಯೇ ಮುನ್ನಡೆಯುತ್ತೇವೆ. ಆಸ್ಟ್ರೇಲಿಯಾ ಇಂದು ಭಾರತವನ್ನು ತನ್ನದೇ ಎಂದು ಪರಿಗಣಿಸುತ್ತಿದೆ, ಗೌರವದಿಂದ ಕಾಣುತ್ತಿದೆ, ನಾನು ವಿಶ್ವದ ಮೂಲೆ ಮೂಲೆಗಳಿಗೆ ಹೋಗುತ್ತೇನೆ, ಭಾರತದ ಯುವ ಪೀಳಿಕೆಯ ಪ್ರತಿಭೆಯನ್ನು ಸಾರುತ್ತೇನೆ, ರಾಷ್ಟ್ರದ ಸಂಸ್ಕೃತಿಯನ್ನು ವೈಭವೀಕರಿಸುವಾಗ ಎಂದೂ ಹಿಂದೆ ಸರಿಯುವುದಿಲ್ಲ.

ಪಪುವಾ ನ್ಯೂ ಗಿನಿಯಾದಲ್ಲಿ ತಮಿಳಿನ ಕೃತಿ ತಿರುಕ್ಕುರಳ್​ ಅನ್ನು ಟೋಕ್ ಪಿಸಿನ್ ಭಾಷೆಗೆ ಅನುವಾದಿಸಿರುವ ಪುಸ್ತಕವನ್ನು ಬಿಡುಗಡೆ ಮಾಡುವ ಅವಕಾಶ ದೊರೆಯಿತು ಎಂದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us