ಅಮೃತ ಮಹೋತ್ಸವದ ಅಧಿವೇಶನ ಇದು, ಸಂಸತ್ತಿನ ಘನತೆ ಹೆಚ್ಚಿಸುವ ವರ್ತನೆ ಇರಲಿ: ನರೇಂದ್ರ ಮೋದಿ

‘ನಾವೀಗ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಸಂಭ್ರಮದಲ್ಲಿದ್ದೇವೆ. ದೇಶಕ್ಕೆ ಮಾರ್ಗದರ್ಶನ ನೀಡುವ ರೀತಿಯಲ್ಲಿ ಸಂಸತ್ತಿನ ಹಿರಿಮೆ ಹೆಚ್ಚಿಸಲು ಎಲ್ಲರೂ ಶ್ರಮಿಸಬೇಕು’ ಎಂದು ತಿಳಿಸಿದರು.

ಅಮೃತ ಮಹೋತ್ಸವದ ಅಧಿವೇಶನ ಇದು, ಸಂಸತ್ತಿನ ಘನತೆ ಹೆಚ್ಚಿಸುವ ವರ್ತನೆ ಇರಲಿ: ನರೇಂದ್ರ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ
Edited By:

Updated on: Jul 18, 2022 | 10:09 AM

ದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ (Monsoon Session) ಇಂದಿನಿಂದ (ಜುಲೈ 18) ಆರಂಭವಾಗಲಿದ್ದು, ಸಂಸತ್ ಭವನದ (Parliament) ಆವರಣದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ‘ಸಂಸತ್ತು ಎನ್ನುವುದು ಪವಿತ್ರ ಸ್ಥಳ. ಯಾವುದೇ ವಿಷಯವನ್ನು ಚರ್ಚಿಸೋಣ, ಇಲ್ಲಿ ಅತ್ಯುತ್ತಮ ವಿಚಾರಗಳು ಚರ್ಚೆಯಾಗಬೇಕು. ಚರ್ಚೆಗಳಲ್ಲಿ ವಿರೋಧ ಪಕ್ಷಗಳು ಸಹ ಸಕ್ರಿಯವಾಗಿ ಭಾಗಿಯಾಗಬೇಕು. ಅರ್ಥಪೂರ್ಣ ಸಂವಾದ ನಡೆಸೋಣ. ಬೇಕಿದ್ದ ವಾದ-ವಿವಾದಗಳು ನಡೆಯಲಿ’ ಎಂದು ಸಲಹೆ ಮಾಡಿದರು.

ಈ ಬಾರಿಯ ಅಧಿವೇಶನವು ಹಲವು ಕಾರಣಗಳಿಂದ ಮಹತ್ವ ಪಡೆದುಕೊಂಡಿದೆ ಎಂದ ಮೋದಿ, ಇದೇ ಅಧಿವೇಶನದಲ್ಲಿ ರಾಷ್ಟ್ರಪತಿ, ಉಪರಾಷ್ಟ್ರಪತಿ ಚುನಾವಣೆ ನಡೆಯಲಿದೆ. ನಾವೀಗ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಸಂಭ್ರಮದಲ್ಲಿದ್ದೇವೆ. ದೇಶಕ್ಕೆ ಮಾರ್ಗದರ್ಶನ ನೀಡುವ ರೀತಿಯಲ್ಲಿ ಸಂಸತ್ತಿನ ಹಿರಿಮೆ ಹೆಚ್ಚಿಸಲು ಎಲ್ಲರೂ ಶ್ರಮಿಸಬೇಕು’ ಎಂದು ತಿಳಿಸಿದರು.

ದೇಶದ ಸ್ವಾತಂತ್ರ್ಯ ಹೋರಾಟವನ್ನು ಮತ್ತು ಅಭಿವೃದ್ಧಿಯನ್ನು ನೆನಪಿಸಿಕೊಳ್ಳುವ ಕಾಲಘಟ್ಟ ಇದು. ನಾವು ಈ ಹಂತಕ್ಕೆ ಹೇಗೆ ಬಂದೆವು ಎಂದು ಯೋಚಿಸಬೇಕು. ದೇಶಕ್ಕೆ ಸಂಸತ್ತು ಮಾರ್ಗದರ್ಶನ ಮಾಡಬೇಕು. ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು, ಹೊಸ ಉತ್ಸಾಹ ತುಂಬಲು ಸಂಸತ್ತು ಶ್ರಮಿಸಬೇಕು ಎಂದು ಸಲಹೆ ಮಾಡಿದರು. ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ತ್ಯಾಗ ಮತ್ತು ಬಲಿದಾನಗಳನ್ನು ನಾವೆಲ್ಲರೂ ನೆನಪಿನಲ್ಲಿ ಇಟ್ಟುಕೊಳ್ಳೋಣ. ಅವರ ಆಶಯಗಳಿಗೆ ದಕ್ಕೆಯಾಗದಂತೆ ವರ್ತಿಸೋಣ ಎಂದು ಕರೆ ನೀಡಿದರು.

PM Modi's remarks at the start of the Monsoon Session of Parliament

ಸದನವನ್ನು ಸಂವಾದದ ಸತ್ಸಂಗದ ಕ್ಷೇತ್ರ, ತೀರ್ಥಕ್ಷೇತ್ರ ಎಂದುಕೊಳ್ಳಬೇಕು. ಯಾವುದೇ ವಿಷಯಗಳ ಬಗ್ಗೆ ಉತ್ತಮ ವಿಶ್ಲೇಷಣೆಗಳು ನಡೆಯಬೇಕು. ನೀತಿ ಮತ್ತು ನಿರ್ಣಯಗಳ ಬಗ್ಗೆ ನಿಮ್ಮ ಆಲೋಚನೆ ಹಂಚಿಕೊಳ್ಳಿ. ಸಕಾರಾತ್ಮಕ ಚಿಂತನೆಗೆ ಆದ್ಯತೆ ಇರಲಿ ಎಂದು ಸಲಹೆ ಮಾಡಿದರು.

Published On - 10:08 am, Mon, 18 July 22

Follow Us