ವಿಶೇಷ ಸಂದರ್ಶನ: ಪ್ರಧಾನಿ ಮೋದಿಯವರ ದೂರದೃಷ್ಟಿ, ಮಧ್ಯಮ ವರ್ಗ ಮತ್ತು ಆರ್ಥಿಕ ಸುಧಾರಣೆಗಳ ಬಗ್ಗೆ ಅಶ್ವಿನಿ ವೈಷ್ಣವ್ ಹೇಳಿದ್ದೇನು?

|

Updated on: Aug 15, 2023 | 6:37 PM

ರೈಲ್ವೇ, ಸಂವಹನ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾಗಿರುವ ವೈಷ್ಣವ್, ನ್ಯೂಸ್ 9 ಮೀಡಿಯಾ ವರ್ಸ್‌ನ ಸಂಪಾದಕ ರಾಕೇಶ್ ಖಾರ್ ಅವರೊಂದಿಗಿನ ಸಂದರ್ಶನದಲ್ಲಿ ಮಧ್ಯಮ ವರ್ಗದ ಉನ್ನತಿ ಮತ್ತು ಅವರ ಸುಧಾರಣೆಗಾಗಿ ಕೈಗೊಳ್ಳುತ್ತಿರುವ ಕ್ರಮಗಳ ಕುರಿತು ಮಾತನಾಡಿದ್ದಾರೆ. ಅದೇ ವೇಳೆ ಭಾರತದ ಐಕಾನಿಕ್ ವಂದೇ ಭಾರತ್ ಯೋಜನೆ ಮತ್ತು ಭವಿಷ್ಯದ ಯೋಜನೆಗಳ ಬಗ್ಗೆಯೂ ಅವರು ಮಾತನಾಡಿದ್ದಾರೆ. ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ದೆಹಲಿ ಆಗಸ್ಟ್ 15: ನ್ಯೂಸ್ 9 (News9) ಜೊತೆಗಿನ ವಿಶೇಷ ಸಂದರ್ಶನದಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಅವರು ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಅಭಿವೃದ್ಧಿ ಹೊಂದಿದ ಭಾರತದ ದೃಷ್ಟಿಯ ಬಗ್ಗೆ ಮಾತನಾಡಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಯಶಸ್ಸನ್ನು ಸಾಧಿಸುವತ್ತ ಸರ್ಕಾರ ಹೇಗೆ ಚಲಿಸುತ್ತಿದೆ ಎಂಬುದನ್ನು ವಿವರಿಸಿದ್ದಾರೆ. ಭಾರತದ ಐಕಾನಿಕ್ ವಂದೇ ಭಾರತ್ ಯೋಜನೆ ಮತ್ತು ಭವಿಷ್ಯದ ಯೋಜನೆಗಳ ಬಗ್ಗೆಯೂ ಅವರು ಮಾತನಾಡಿದ್ದಾರೆ. ಪ್ರಸ್ತುತ ರೈಲ್ವೇ, ಸಂವಹನ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾಗಿರುವ ವೈಷ್ಣವ್, ನ್ಯೂಸ್ 9 ಮೀಡಿಯಾ ವರ್ಸ್‌ನ ಸಂಪಾದಕ ರಾಕೇಶ್ ಖಾರ್ ಅವರೊಂದಿಗಿನ ಸಂದರ್ಶನದಲ್ಲಿ ಮಧ್ಯಮ ವರ್ಗದ ಉನ್ನತಿ ಮತ್ತು ಅವರ ಸುಧಾರಣೆಗಾಗಿ ಕೈಗೊಳ್ಳುತ್ತಿರುವ ಕ್ರಮಗಳ ಕುರಿತು ಮಾತನಾಡಿದ್ದಾರೆ. ಸಂದರ್ಶನದ ಅಕ್ಷರ ರೂಪ ಇಲ್ಲಿದೆ.

ರಾಕೇಶ್ ಖಾರ್: ಈ ಸರ್ಕಾರ ಮಾತನಾಡುತ್ತಿರುವ ಸಂಪೂರ್ಣ ಅಭಿವೃದ್ಧಿ ಅಜೆಂಡಾ ಚರ್ಚೆ ಏನೆಂದರೆ ಇದು ಅಭಿವೃದ್ಧಿಗಾಗಿ ‘ಅರ್ಹತೆ ಮತ್ತು ಸಬಲೀಕರಣ’ ಸ್ವರೂಪವನ್ನು ಅಳವಡಿಸುತ್ತಿದೆಯೇ ಎಂಬುದು. ಪ್ರಧಾನಮಂತ್ರಿಯವರು ಸ್ವತಃ ಚರ್ಚೆಯಲ್ಲಿ ರೇವಡಿ (ಉಚಿತ) ಮತ್ತು ಸಬ್ಸಿಡಿ ರಾಜಕೀಯ ಮತ್ತು ತಮ್ಮದೇ ಆದ ಆರ್ಥಿಕ ಕಲ್ಯಾಣ ಟೆಂಪ್ಲೇಟ್ ಬಗ್ಗೆ ಮಾತನಾಡಿದ್ದಾರೆ. ನೀವು ಈ ಚರ್ಚೆಯನ್ನು ನೀವು ಹೇಗೆ ನೋಡುತ್ತೀರಿ ಮತ್ತು ಅಭಿವೃದ್ಧಿ ಕಾರ್ಯಸೂಚಿಯಲ್ಲಿ ‘ಅರ್ಹತೆ Vs ಸಬಲೀಕರಣ’ ದೃಷ್ಟಿಕೋನವನ್ನು ಹೇಗೆ ವ್ಯಾಖ್ಯಾನಿಸುತ್ತೀರಿ?

ಅಶ್ವಿನಿ ವೈಷ್ಣವ್: ನೀವು ಜಾಗತಿಕ ಆರ್ಥಿಕ ಇತಿಹಾಸವನ್ನು ನೋಡಿದರೆ, ಭಾರತವು ಸಾಂಪ್ರದಾಯಿಕವಾಗಿ ಜಾಗತಿಕ ಜಿಡಿಪಿಯ ಹೆಚ್ಚಿನ ಶೇಕಡಾವಾರು ಪ್ರಮಾಣವನ್ನು ಹೊಂದಿತ್ತು. ಇದರ ಬಗ್ಗೆ ನೀವು ಯಾವುದೇ ಇತಿಹಾಸಕಾರರ ವಿವರಣೆಯನ್ನು ತೆಗೆದುಕೊಳ್ಳಬಹುದು. ಮುಂದಿನ ಪೀಳಿಗೆಗೆ ನಾವು ಏನು ನೀಡಲು ಬಯಸುತ್ತೇವೆ? ನಾವು ಬ್ರಿಟಿಷರಿಂದ 100 ನೇ ವರ್ಷದ ಸ್ವಾತಂತ್ರ್ಯವನ್ನು ಆಚರಿಸುವಾಗ ನಮ್ಮ ದೇಶವನ್ನು ಎಲ್ಲಿಗೆ ಕೊಂಡೊಯ್ಯಲು ಬಯಸುತ್ತೇವೆ? ಮೂಲಭೂತವಾಗಿ, 2047 ರ ವೇಳೆಗೆ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕು ಎಂದು ನಮ್ಮ ಪ್ರಧಾನಿ ಸ್ಪಷ್ಟ ಕರೆ ನೀಡಿದ್ದಾರೆ ಎಂಬುದು ಅಜೆಂಡಾ. ಇದಕ್ಕೆ ವಿರುದ್ಧವಾಗಿ, ಎಲ್ಲಾ ವಿರೋಧ ಪಕ್ಷಗಳು ಅಲ್ಪಾವಧಿಯ ಗುರಿಗಳನ್ನು ನೋಡುತ್ತಿವೆ. ಅವರು ಅಭಿವೃದ್ಧಿ ಹೊಂದಿದ ರಾಷ್ಟ್ರದ ಅಡಿಪಾಯ ಹಾಕಲು ನೋಡುತ್ತಿಲ್ಲ. ಅವರು ಸಂಕುಚಿತ, ಪಂಥೀಯ, ಅತ್ಯಂತ ಕನಿಷ್ಠ ರೀತಿಯ ಗುರಿಗಳನ್ನು ನೋಡುತ್ತಿದ್ದಾರೆ. ಆದರೆ 2047 ರ ವೇಳೆಗೆ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕು ಎಂಬುದು ಪ್ರಧಾನಿಯವರ ದೃಷ್ಟಿಯಾಗಿದೆ. ಅದನ್ನು ಮಾಡಲು, ಈಗ ಬೇಕಾದುದನ್ನು ಹೊಂದಿಸಲಾಗುತ್ತಿದೆ. ಮೂಲಸೌಕರ್ಯ, ಮೇಕ್ ಇನ್ ಇಂಡಿಯಾ ಮತ್ತು ಡಿಜಿಟಲ್ ಇಂಡಿಯಾ – ಈ ಮೂರು ಈ ದೃಷ್ಟಿಗೆ ಬಹಳ ಮೂಲಭೂತವಾಗಿವೆ. ಈ ಮೂರು ಉದ್ದೇಶಗಳ ಮೇಲೆ ಮೇಲೆ ನಾವು ಗಮನಾರ್ಹವಾಗಿ ದೊಡ್ಡ ಆರ್ಥಿಕತೆಯನ್ನು ನಿರ್ಮಿಸಬಹುದು.

ಇದನ್ನೂ ಓದಿ:  Independence Day 2023: ಕೆಂಪುಕೋಟೆಯಲ್ಲಿ ಭಾಯಿಯೋ ಔರ್ ಬೆಹೆನೋ ಬಿಟ್ಟು ಬೇರೆ ಪದ ಬಳಸಿ ಭಾಷಣ ಆರಂಭಿಸಿದ ಮೋದಿ

ರಾಕೇಶ್ ಖಾರ್: ಆದ್ದರಿಂದ, ರಾಜಕೀಯ ರಂಗದಲ್ಲಿ ಸ್ವಲ್ಪ ಹಿನ್ನಡೆಯ ಹೊರತಾಗಿಯೂ ನೀವು ಈ ಪ್ರಮುಖ ಕಾರ್ಯಸೂಚಿಗೆ ಅಂಟಿಕೊಂಡಿದ್ದೀರಿ, ಉದಾಹರಣೆಗೆ – ಕರ್ನಾಟಕ ಚುನಾವಣೆಗಳಲ್ಲಿ ಈ ಗ್ಯಾರಂಟಿ ರಾಜಕೀಯವು ಅಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸುವ ವಿಷಯದಲ್ಲಿ ಕೆಲವು ರಾಜಕೀಯ ಲಾಭವನ್ನು ನೀಡಿದೆ. ಅಸೆಂಬ್ಲಿ ಚುನಾವಣೆಗಳು ಮತ್ತು ನಂತರ ಸಾರ್ವತ್ರಿಕ ಚುನಾವಣೆಗಳು ಸಮೀಪಿಸುತ್ತಿರುವಾಗ, ನಿಮ್ಮ ಮಾದರಿಯನ್ನು ಬದಲಿಸುವ ಅಗತ್ಯವಿಲ್ಲವೇ? ಬಡತನ ರೇಖೆಯಿಂದ ದೊಡ್ಡ ವರ್ಗದ ಜನರನ್ನು ಮೇಲೆತ್ತುವ ಮತ್ತು ನಿಮ್ಮನ್ನು ಮತ್ತೆ ಅಧಿಕಾರಕ್ಕೆ ತರುವ ವಿಷಯದಲ್ಲಿ ಇದು ಅಪೇಕ್ಷಿತ ಫಲಿತಾಂಶಗಳನ್ನು ನೀಡುತ್ತದೆ ಎಂದು ನೀವು ದೃಢವಾಗಿ ನಂಬುತ್ತೀರಾ?

ಅಶ್ವಿನಿ ವೈಷ್ಣವ್: ನೋಡಿ, ನಮ್ಮ ಯುವ ಪೀಳಿಗೆಯು ಸ್ಪೂರ್ತಿದಾಯಕ ಪೀಳಿಗೆಯಾಗಿದೆ. ಅವರು ನೇರವಾಗಿ ಅಥವಾ ಸಾಮಾಜಿಕ ಮಾಧ್ಯಮದ ಮೂಲಕ ಜಗತ್ತನ್ನು ನೋಡಿದ್ದಾರೆ. ಇಂದಿನ ಜಗತ್ತು ಏನಾಗಿದೆ ಎಂದು ಅವರಿಗೆ ತಿಳಿದಿದೆ. ಅಭಿವೃದ್ಧಿ ಹೊಂದಿದ ದೇಶಗಳಿಗೆ ಸಮಾನವಾದ ಸೌಲಭ್ಯಗಳು ಮತ್ತು ಮೂಲಸೌಕರ್ಯಗಳೊಂದಿಗೆ ಅಭಿವೃದ್ಧಿ ಹೊಂದಿದ ದೇಶವನ್ನು ಹೊಂದಲು ಅವರು ಬಯಸುತ್ತಾರೆ. ಕರ್ನಾಟಕದಲ್ಲಿ ನಮ್ಮ ಮತ ಪ್ರಮಾಣ ಹಾಗೇ ಉಳಿದಿದ್ದು, ಜನರು ಅಭಿವೃದ್ಧಿ ಬಯಸಿದ್ದಾರೆ. ಜನರು ತಮ್ಮ ಜೀವನದಲ್ಲಿ ಮಹತ್ವದ ಬದಲಾವಣೆಯನ್ನು ಬಯಸುತ್ತಾರೆ. ನೀವು ನಮ್ಮ ಸರ್ಕಾರದ ಸಂಪೂರ್ಣ ರಾಜಕೀಯ ಮತ್ತು ಆರ್ಥಿಕ ತತ್ವವನ್ನು ನೋಡಿದರೆ, ನಮ್ಮ ಪ್ರಧಾನಿ ಕೆಳ-ಮಧ್ಯಮ ಆದಾಯದ ವರ್ಗಗಳಿಗೆ ಸುರಕ್ಷತೆಯನ್ನು ಖಾತರಿ ಪಡಿಸಿದ್ದಾರೆ. 80 ಕೋಟಿ ಜನರಿಗೆ ಉಚಿತ ಆಹಾರ ಸಿಗುತ್ತಿದೆ. ಮಧ್ಯಮ-ಆದಾಯದ ಮತ್ತು ಕಡಿಮೆ-ಆದಾಯದ ಕುಟುಂಬದ ಮಾಸಿಕ ಬಜೆಟ್‌ನ ಮೇಲೆ ಪರಿಣಾಮ ಬೀರುವ ಆರೋಗ್ಯ ಮತ್ತು ನೈರ್ಮಲ್ಯ ಸೇರಿದಂತೆ ಜೀವನದ ಪ್ರತಿಯೊಂದು ಅಂಶವನ್ನು ನೀತಿಗಳಲ್ಲಿ ಒದಗಿಸಲಾಗಿದೆ.

ರಾಕೇಶ್ ಖಾರ್: ನೀವು ಭಾರತೀಯ ಮಧ್ಯಮ ವರ್ಗ ಅಥವಾ ಕೆಲಸ ಮಾಡುವ ವೃತ್ತಿಪರರಿಗಾಗಿ ಹೆಚ್ಚಿನದನ್ನು ಮಾಡಬೇಕೆಂದು ನೀವು ಹೇಗಾದರೂ ಚಿಂತಿಸುತ್ತಿದ್ದೀರಾ?

ಅಶ್ವಿನಿ ವೈಷ್ಣವ್: ಮಧ್ಯಮ ವರ್ಗದವರಿಗಾಗಿ ಸಾಕಷ್ಟು ಕಾರ್ಯ ಮಾಡಲಾಗುತ್ತಿದೆ. ಮಧ್ಯಮ ವರ್ಗದವರು ರೈಲ್ವೆ, ರಸ್ತೆಮಾರ್ಗ ಮತ್ತು ಟೆಲಿಕಾಂ ಮೂಲಸೌಕರ್ಯದಿಂದ ಗರಿಷ್ಠ ಲಾಭವನ್ನು ಪಡೆಯುತ್ತಾರೆ. ಪ್ರತಿ ತಿಂಗಳು 14 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತಿವೆ. ಔಪಚಾರಿಕ ವಲಯದಲ್ಲಿ ಪ್ರತಿ ವರ್ಷ 1.5 ಕೋಟಿ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ. ಮೇಕ್ ಇನ್ ಇಂಡಿಯಾ ಆಪಲ್ ಮತ್ತು ಟೆಸ್ಲಾದಂತಹ ಕಂಪನಿಗಳನ್ನು ಭಾರತಕ್ಕೆ ತರುತ್ತಿದೆ. ಕಳೆದ 60-65 ವರ್ಷಗಳಿಂದ ಕಳೆದು ಹೋಗಿದ್ದ ಸರ್ಕಾರದ ಮೇಲಿನ ನಂಬಿಕೆ ಈಗ ಮರಳಿ ಬರುತ್ತಿದೆ

ರಾಕೇಶ್ ಖಾರ್: ಪ್ರಧಾನಮಂತ್ರಿಯವರು ಈಕ್ವಿಟಿಗಳಲ್ಲಿ ನಂಬಿಕೆಯನ್ನು ಹೂಡಿಕೆ ಮಾಡುವ ಸಂದರ್ಭದಲ್ಲಿ ಮತ್ತು ಅದೇ ಸಮಯದಲ್ಲಿ ಪಿಎಸ್‌ಯುಗಳಿಗೆ ಹಿಂತಿರುಗುವ ಸಂದರ್ಭದಲ್ಲಿ ‘ಮೋದಿನೋಮಿಕ್ಸ್’ ಎಲ್ಲಿದೆ?

ಅಶ್ವಿನಿ ವೈಷ್ಣವ್: ಮೋದಿನಾಮಿಕ್ಸ್‌ಗೆ ಬಹು ಆಯಾಮಗಳಿವೆ. ಮೊದಲ ಆಯಾಮವು ಅಭಿವೃದ್ಧಿ ಹೊಂದಿದ ರಾಷ್ಟ್ರದ ಅಡಿಪಾಯವನ್ನು ನಿರ್ಮಿಸುವುದು ಮತ್ತು ಅದನ್ನು ಮೂಲಸೌಕರ್ಯ ಹೂಡಿಕೆಗಳಾಗಿ ಮಾರ್ಪಾಡು ಮಾಡುವುದು. ಎರಡನೆಯದು ರಾಷ್ಟ್ರೀಯ ಸುಧಾರಣೆಗಳು. ಸುಮಾರು 2,000 ಪುರಾತನ ಕಾನೂನುಗಳನ್ನು ರದ್ದುಗೊಳಿಸಲಾಗಿದೆ. ಸುಮಾರು 37,000 ನಿಯಮಗಳನ್ನು ತೆಗೆದುಹಾಕಲಾಗಿದೆ. ಮೂರನೇ ದೊಡ್ಡ ಆಯಾಮವೆಂದರೆ ಮೇಕ್ ಇನ್ ಇಂಡಿಯಾ ಅಭಿಯಾನ. ಇದು ಅತಿ ದೊಡ್ಡ ಉದ್ಯೋಗ ಸೃಷ್ಟಿಯೂ ಆಗಿದೆ. ನಾಲ್ಕನೆಯದು ಡಿಜಿಟಲ್ ಇಂಡಿಯಾ. ಐದನೆಯದು ಭಾರತದ ಜನರಿಗೆ ಸುರಕ್ಷತೆ.

ರಾಕೇಶ್ ಖಾರ್: 2024 ರಲ್ಲಿ, ಮೋದಿ ಸರ್ಕಾರವು ಮತ್ತೆ ಅಧಿಕಾರಕ್ಕೆ ಬಂದರೆ, ದೊಡ್ಡ ಆರ್ಥಿಕ ಪ್ರಕ್ರಿಯೆಯ ಭಾಗವಾಗಿ ಅಜೆಂಡಾದಲ್ಲಿ ಭೂಮಿ ಮತ್ತು ಕಾರ್ಮಿಕ ಸುಧಾರಣೆಗಳು ತಮ್ಮ ಸ್ಥಾನವನ್ನು ಕಂಡುಕೊಳ್ಳುವುದನ್ನು ನೀವು ನೋಡುತ್ತೀರಾ?
ಅಶ್ವಿನಿ ವೈಷ್ಣವ್: ಮೂಲಭೂತ ಅಂಶವೆಂದರೆ ಇಂದು ಜಗತ್ತು ಭಾರತವನ್ನು ವಿಶ್ವಾಸಾರ್ಹ ಪಾಲುದಾರನಾಗಿ ನೋಡುತ್ತಿದೆ. ಸೆಮಿಕಂಡಕ್ಟರ್ ಪ್ರಯಾಣವನ್ನು ನೋಡಿ. ತಂತ್ರಜ್ಞಾನಗಳನ್ನು ಒಟ್ಟಾಗಿ ಅಭಿವೃದ್ಧಿಪಡಿಸಲು, ಪೂರಕ ಸಾಮರ್ಥ್ಯಗಳನ್ನು ಕಂಡುಕೊಳ್ಳಲು ಮತ್ತು ವಿಶ್ವಾಸಾರ್ಹ ಜಾಗತಿಕ ಮೌಲ್ಯ ಸರಪಳಿಯನ್ನು ರಚಿಸಲು ಅಮೆರಿಕ ಮತ್ತು ಜಪಾನ್ ಭಾರತದೊಂದಿಗೆ ಸಹಕಾರದ ಒಪ್ಪಂದಕ್ಕೆ ಸಹಿ ಹಾಕಿವೆ. ಅದು ಅತ್ಯಂತ ಮುಖ್ಯವಾದ ವಿಷಯ. ಈಗಾಗಲೇ ಆಗಿರುವ ಸುಧಾರಣೆಗಳು ಜಗತ್ತು ಗಮನಿಸಲು ಮತ್ತು ಭಾರತಕ್ಕೆ ಬರಲು ಸಾಕಷ್ಟು ಒಳ್ಳೆಯದು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:27 pm, Tue, 15 August 23