AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

UNWTO–Pochampally: ಪೂಚಂಪಲ್ಲಿ ಗ್ರಾಮಕ್ಕೆ ವಿಶ್ವಸಂಸ್ಥೆ ಮಾನ್ಯತೆ- ಭಾರತದಿಂದ ಆಯ್ಕೆಯಾದ ಏಕೈಕ ಗ್ರಾಮ! ಏನಿದರ ವಿಶೇಷತೆ?

ಕೇಂದ್ರ ಸರ್ಕಾರವು ಒಟ್ಟು ಮೂರು ರಾಜ್ಯಗಳಿಂದ ಮೂರು ಗ್ರಾಮಗಳನ್ನು ವಿಶ್ವ ಸಂಸ್ಥೆಗೆ ಕಳಿಸಿತ್ತು. ಮೇಘಾಲಯದಿಂದ ಕೊಂಗ್​ತಾಂಗ್​, ಮಧ್ಯಪ್ರದೇಶದಿಂದ ಲಾಧ್​ಪುರಖಾಸ್​ ಮತ್ತು ತೆಲಗಾಣದಲ್ಲಿನ ಈ ಪೂಚಂಪಲ್ಲಿ ಗ್ರಾಮವನ್ನು ಆಯ್ದು ಕಳಿಸಿತ್ತು. ಈ ಮೂರೂ ಗ್ರಾಮಗಳನ್ನು ಖುದ್ದಾಗಿ ಪರಿಶೀಲಿಸಿದ ವಿಶ್ವ ಸಂಸ್ಥೆಯ ಪ್ರಪಂಚ ಪ್ರವಾಸೋದ್ಯಮ ಸಂಸ್ಥೆಯ ಪ್ರತಿನಿಧಿಗಳ ತಂಡವು ಅಂತಿಮವಾಗಿ ತೆಲಗಾಣದ ಪೂಚಂಪಲ್ಲಿ ಗ್ರಾಮವನ್ನು ಆಯ್ಕೆ ಮಾಡಿದೆ.

UNWTO–Pochampally: ಪೂಚಂಪಲ್ಲಿ ಗ್ರಾಮಕ್ಕೆ ವಿಶ್ವಸಂಸ್ಥೆ ಮಾನ್ಯತೆ- ಭಾರತದಿಂದ ಆಯ್ಕೆಯಾದ ಏಕೈಕ ಗ್ರಾಮ! ಏನಿದರ ವಿಶೇಷತೆ?
ಪೂಚಂಪಲ್ಲಿ ಗ್ರಾಮಕ್ಕೆ ವಿಶ್ವಸಂಸ್ಥೆ ಮಾನ್ಯತೆ- ಭಾರತದಿಂದ ಆಯ್ಕೆಯಾದ ಏಕೈಕ ಗ್ರಾಮ! ಏನಿದರ ವಿಶೇಷತೆ?
TV9 Web
| Edited By: |

Updated on: Nov 17, 2021 | 10:32 AM

Share

UNWTO–Pochampally: ತೆಲಂಗಾಣ ರಾಜ್ಯದ ಪೂಚಂಪಲ್ಲಿ ಎಂಬ ಗ್ರಾಮಕ್ಕೆ ವಿಶ್ವ ಮಾನ್ಯತೆ ಲಭಿಸಿದೆ. ಭಾರತದಿಂದ ಆಯ್ಕೆಯಾದ ಏಕೈಕ ಗ್ರಾಮ ಇದಾಗಿದೆ! ವಿಶ್ವ ಸಂಸ್ಥೆಯ ಪ್ರಪಂಚ ಪ್ರವಾಸೋದ್ಯಮ ಸಂಸ್ಥೆ (united nations world tourism organisation – un wto) ಈ ಆಯ್ಕೆ ಮಾಡಿದೆ. ಡಿಸೆಂಬರ್ 2 ರಂದು ಸ್ಪೇನ್​ನ ಮ್ಯಾಡ್ರಿಡ್​​ನಲ್ಲಿ ನಡೆದ ವಿಶ್ವ ಸಂಸ್ಥೆಯ ಪ್ರಪಂಚ ಪ್ರವಾಸೋದ್ಯಮ ಸಂಸ್ಥೆಯ (un wto) 24ನೇ ಹನರ್​ದ ಅಸೆಂಬ್ಲಿ ಸಭೆಯಲ್ಲಿ ಈ ಪ್ರತಿಷ್ಠಿತ ಅವಾರ್ಡ್​​ ಅನ್ನು ಕೊಡಮಾಡಲಿದ್ದಾರೆ. ಕೇಂದ್ರ ಸರ್ಕಾರವು ಒಟ್ಟು ಮೂರು ರಾಜ್ಯಗಳಿಂದ ಮೂರು ಗ್ರಾಮಗಳನ್ನು ವಿಶ್ವ ಸಂಸ್ಥೆಗೆ ಕಳಿಸಿತ್ತು. ಮೇಘಾಲಯದಿಂದ ಕೊಂಗ್​ತಾಂಗ್​, ಮಧ್ಯಪ್ರದೇಶದಿಂದ ಲಾಧ್​ಪುರಖಾಸ್​ ಮತ್ತು ತೆಲಗಾಣದಲ್ಲಿನ ಈ ಪೂಚಂಪಲ್ಲಿ ಗ್ರಾಮವನ್ನು ಆಯ್ದು ಕಳಿಸಿತ್ತು.

ಈ ಮೂರೂ ಗ್ರಾಮಗಳನ್ನು ಖುದ್ದಾಗಿ ಪರಿಶೀಲಿಸಿದ ವಿಶ್ವ ಸಂಸ್ಥೆಯ ಪ್ರಪಂಚ ಪ್ರವಾಸೋದ್ಯಮ ಸಂಸ್ಥೆಯ ಪ್ರತಿನಿಧಿಗಳ ತಂಡವು ಅಂತಿಮವಾಗಿ ತೆಲಗಾಣದ ಪೂಚಂಪಲ್ಲಿ ಗ್ರಾಮವನ್ನು ಆಯ್ಕೆ ಮಾಡಿದೆ. ಪೂಚಂಪಲ್ಲಿ ಗ್ರಾಮಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ಲಭಿಸಿರುವುದಕ್ಕೆ ಕೇಂದ್ರ ಸಚಿವ ಕಿಷನ್​ ರೆಡ್ಡಿ ಹರ್ಷ ವ್ಯಕ್ತಪಡಿಸಿದ್ದು, ಈ ನಿಟ್ಟಿನಲ್ಲಿ ಶ್ರಮಿಸಿದ ಅಧಿಕಾರಿ ವರ್ಗವನ್ನು ಮತ್ತು ಗ್ರಾಮಸ್ಥರನ್ನು ಅಭಿನಂದಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ್ ಭಾರತ್​​ ಅಭಿಯಾನದ ಭಾಗವಾಗಿ (Atmanirbhar Bharat Abhiyaan or Self-reliant India campaign vocal for local) ವೋಕಲ್​ ಫಾರ್​ ಲೋಕಲ್​ ಘೋಷ ಮಂತ್ರದಡಿ ಈ ಗ್ರಾಮಕ್ಕೆ ವಿಶ್ವ ಮಾನ್ಯತೆ ಲಭಿಸುವಂತೆ ಅಧಿಕಾರಿವರ್ಗ ಶ್ರಮಿಸಿದೆ. ಪೂಚಂಪಲ್ಲಿ ಗ್ರಾಮದಲ್ಲಿ ಸೀರೆಗಳ ತಯಾರಿಕೆಯಲ್ಲಿ ಅಳವಡಿಸಿಕೊಂಡಿರುವ ವಿಶೇಷವಾದ ನೇಯ್ಗೆ ಶೈಲಿಗಳು (Weaving styles), ವಿನೂತನ ನಮೂನೆಗಳು ಪ್ರಪಂಚವನ್ನು ಆಕರ್ಷಿಸಿದೆ. ಗ್ರಾಮಸ್ಥರ ಶ್ರಮ, ಸ್ವಯಂಕೃಷಿ, ಅಧಿಕಾರಿಗಳ ಮಾರ್ಗದರ್ಶನದಿಂದಾಗಿ ಈ ಸಾಧನೆ ಮಾಡಲಾಗಿದೆ ಎಂದು ಕೇಂದ್ರ ಮಂತ್ರಿ ಕಿಷನ್​ ರೆಡ್ಡಿ (Minister for Municipal Admin & Urban Dev, Industry & Commerce, ITE&C, MLA from Siricilla, Telangana) ಸಂತಸ ವ್ಯಕ್ತಪಡಿಸಿದ್ದಾರೆ.

(pochampally village in telangana selected as best tourism village by united nations world tourism organisation un wto)

ಬಿಗ್ ಬಾಸ್: ಬಂಗಾರದ ಅಂಗಡಿಯಲ್ಲಿ ಕಾವ್ಯಾ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ
ಬಿಗ್ ಬಾಸ್: ಬಂಗಾರದ ಅಂಗಡಿಯಲ್ಲಿ ಕಾವ್ಯಾ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್