AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

UNWTO–Pochampally: ಪೂಚಂಪಲ್ಲಿ ಗ್ರಾಮಕ್ಕೆ ವಿಶ್ವಸಂಸ್ಥೆ ಮಾನ್ಯತೆ- ಭಾರತದಿಂದ ಆಯ್ಕೆಯಾದ ಏಕೈಕ ಗ್ರಾಮ! ಏನಿದರ ವಿಶೇಷತೆ?

ಕೇಂದ್ರ ಸರ್ಕಾರವು ಒಟ್ಟು ಮೂರು ರಾಜ್ಯಗಳಿಂದ ಮೂರು ಗ್ರಾಮಗಳನ್ನು ವಿಶ್ವ ಸಂಸ್ಥೆಗೆ ಕಳಿಸಿತ್ತು. ಮೇಘಾಲಯದಿಂದ ಕೊಂಗ್​ತಾಂಗ್​, ಮಧ್ಯಪ್ರದೇಶದಿಂದ ಲಾಧ್​ಪುರಖಾಸ್​ ಮತ್ತು ತೆಲಗಾಣದಲ್ಲಿನ ಈ ಪೂಚಂಪಲ್ಲಿ ಗ್ರಾಮವನ್ನು ಆಯ್ದು ಕಳಿಸಿತ್ತು. ಈ ಮೂರೂ ಗ್ರಾಮಗಳನ್ನು ಖುದ್ದಾಗಿ ಪರಿಶೀಲಿಸಿದ ವಿಶ್ವ ಸಂಸ್ಥೆಯ ಪ್ರಪಂಚ ಪ್ರವಾಸೋದ್ಯಮ ಸಂಸ್ಥೆಯ ಪ್ರತಿನಿಧಿಗಳ ತಂಡವು ಅಂತಿಮವಾಗಿ ತೆಲಗಾಣದ ಪೂಚಂಪಲ್ಲಿ ಗ್ರಾಮವನ್ನು ಆಯ್ಕೆ ಮಾಡಿದೆ.

UNWTO–Pochampally: ಪೂಚಂಪಲ್ಲಿ ಗ್ರಾಮಕ್ಕೆ ವಿಶ್ವಸಂಸ್ಥೆ ಮಾನ್ಯತೆ- ಭಾರತದಿಂದ ಆಯ್ಕೆಯಾದ ಏಕೈಕ ಗ್ರಾಮ! ಏನಿದರ ವಿಶೇಷತೆ?
ಪೂಚಂಪಲ್ಲಿ ಗ್ರಾಮಕ್ಕೆ ವಿಶ್ವಸಂಸ್ಥೆ ಮಾನ್ಯತೆ- ಭಾರತದಿಂದ ಆಯ್ಕೆಯಾದ ಏಕೈಕ ಗ್ರಾಮ! ಏನಿದರ ವಿಶೇಷತೆ?
Follow us
TV9 Web
| Updated By: ಸಾಧು ಶ್ರೀನಾಥ್​

Updated on: Nov 17, 2021 | 10:32 AM

UNWTO–Pochampally: ತೆಲಂಗಾಣ ರಾಜ್ಯದ ಪೂಚಂಪಲ್ಲಿ ಎಂಬ ಗ್ರಾಮಕ್ಕೆ ವಿಶ್ವ ಮಾನ್ಯತೆ ಲಭಿಸಿದೆ. ಭಾರತದಿಂದ ಆಯ್ಕೆಯಾದ ಏಕೈಕ ಗ್ರಾಮ ಇದಾಗಿದೆ! ವಿಶ್ವ ಸಂಸ್ಥೆಯ ಪ್ರಪಂಚ ಪ್ರವಾಸೋದ್ಯಮ ಸಂಸ್ಥೆ (united nations world tourism organisation – un wto) ಈ ಆಯ್ಕೆ ಮಾಡಿದೆ. ಡಿಸೆಂಬರ್ 2 ರಂದು ಸ್ಪೇನ್​ನ ಮ್ಯಾಡ್ರಿಡ್​​ನಲ್ಲಿ ನಡೆದ ವಿಶ್ವ ಸಂಸ್ಥೆಯ ಪ್ರಪಂಚ ಪ್ರವಾಸೋದ್ಯಮ ಸಂಸ್ಥೆಯ (un wto) 24ನೇ ಹನರ್​ದ ಅಸೆಂಬ್ಲಿ ಸಭೆಯಲ್ಲಿ ಈ ಪ್ರತಿಷ್ಠಿತ ಅವಾರ್ಡ್​​ ಅನ್ನು ಕೊಡಮಾಡಲಿದ್ದಾರೆ. ಕೇಂದ್ರ ಸರ್ಕಾರವು ಒಟ್ಟು ಮೂರು ರಾಜ್ಯಗಳಿಂದ ಮೂರು ಗ್ರಾಮಗಳನ್ನು ವಿಶ್ವ ಸಂಸ್ಥೆಗೆ ಕಳಿಸಿತ್ತು. ಮೇಘಾಲಯದಿಂದ ಕೊಂಗ್​ತಾಂಗ್​, ಮಧ್ಯಪ್ರದೇಶದಿಂದ ಲಾಧ್​ಪುರಖಾಸ್​ ಮತ್ತು ತೆಲಗಾಣದಲ್ಲಿನ ಈ ಪೂಚಂಪಲ್ಲಿ ಗ್ರಾಮವನ್ನು ಆಯ್ದು ಕಳಿಸಿತ್ತು.

ಈ ಮೂರೂ ಗ್ರಾಮಗಳನ್ನು ಖುದ್ದಾಗಿ ಪರಿಶೀಲಿಸಿದ ವಿಶ್ವ ಸಂಸ್ಥೆಯ ಪ್ರಪಂಚ ಪ್ರವಾಸೋದ್ಯಮ ಸಂಸ್ಥೆಯ ಪ್ರತಿನಿಧಿಗಳ ತಂಡವು ಅಂತಿಮವಾಗಿ ತೆಲಗಾಣದ ಪೂಚಂಪಲ್ಲಿ ಗ್ರಾಮವನ್ನು ಆಯ್ಕೆ ಮಾಡಿದೆ. ಪೂಚಂಪಲ್ಲಿ ಗ್ರಾಮಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ಲಭಿಸಿರುವುದಕ್ಕೆ ಕೇಂದ್ರ ಸಚಿವ ಕಿಷನ್​ ರೆಡ್ಡಿ ಹರ್ಷ ವ್ಯಕ್ತಪಡಿಸಿದ್ದು, ಈ ನಿಟ್ಟಿನಲ್ಲಿ ಶ್ರಮಿಸಿದ ಅಧಿಕಾರಿ ವರ್ಗವನ್ನು ಮತ್ತು ಗ್ರಾಮಸ್ಥರನ್ನು ಅಭಿನಂದಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ್ ಭಾರತ್​​ ಅಭಿಯಾನದ ಭಾಗವಾಗಿ (Atmanirbhar Bharat Abhiyaan or Self-reliant India campaign vocal for local) ವೋಕಲ್​ ಫಾರ್​ ಲೋಕಲ್​ ಘೋಷ ಮಂತ್ರದಡಿ ಈ ಗ್ರಾಮಕ್ಕೆ ವಿಶ್ವ ಮಾನ್ಯತೆ ಲಭಿಸುವಂತೆ ಅಧಿಕಾರಿವರ್ಗ ಶ್ರಮಿಸಿದೆ. ಪೂಚಂಪಲ್ಲಿ ಗ್ರಾಮದಲ್ಲಿ ಸೀರೆಗಳ ತಯಾರಿಕೆಯಲ್ಲಿ ಅಳವಡಿಸಿಕೊಂಡಿರುವ ವಿಶೇಷವಾದ ನೇಯ್ಗೆ ಶೈಲಿಗಳು (Weaving styles), ವಿನೂತನ ನಮೂನೆಗಳು ಪ್ರಪಂಚವನ್ನು ಆಕರ್ಷಿಸಿದೆ. ಗ್ರಾಮಸ್ಥರ ಶ್ರಮ, ಸ್ವಯಂಕೃಷಿ, ಅಧಿಕಾರಿಗಳ ಮಾರ್ಗದರ್ಶನದಿಂದಾಗಿ ಈ ಸಾಧನೆ ಮಾಡಲಾಗಿದೆ ಎಂದು ಕೇಂದ್ರ ಮಂತ್ರಿ ಕಿಷನ್​ ರೆಡ್ಡಿ (Minister for Municipal Admin & Urban Dev, Industry & Commerce, ITE&C, MLA from Siricilla, Telangana) ಸಂತಸ ವ್ಯಕ್ತಪಡಿಸಿದ್ದಾರೆ.

(pochampally village in telangana selected as best tourism village by united nations world tourism organisation un wto)

ಕೋಮು ನಿಗ್ರಹ ದಳ ರಚಿಸಿರುವುದು ಯಾಕೆ ಅಂತ ಗೊತ್ತಿದೆ: ವಿಜಯೇಂದ್ರ
ಕೋಮು ನಿಗ್ರಹ ದಳ ರಚಿಸಿರುವುದು ಯಾಕೆ ಅಂತ ಗೊತ್ತಿದೆ: ವಿಜಯೇಂದ್ರ
ಇಡೀ ಪಂದ್ಯದ ಚಿತ್ರಣ ಬದಲಿಸಿದ ಫಾಫ್ ಡುಪ್ಲೆಸಿಸ್ ಸ್ಟನ್ನಿಂಗ್ ಕ್ಯಾಚ್
ಇಡೀ ಪಂದ್ಯದ ಚಿತ್ರಣ ಬದಲಿಸಿದ ಫಾಫ್ ಡುಪ್ಲೆಸಿಸ್ ಸ್ಟನ್ನಿಂಗ್ ಕ್ಯಾಚ್
ಕೆಆರ್​ಎಸ್​ ಡ್ಯಾಂನ ಕ್ರಸ್ಟ್ ಗೇಟ್ ಬಳಿ ಯುವಕರ ಹುಚ್ಚಾಟ: ವಿಡಿಯೋ ವೈರಲ್
ಕೆಆರ್​ಎಸ್​ ಡ್ಯಾಂನ ಕ್ರಸ್ಟ್ ಗೇಟ್ ಬಳಿ ಯುವಕರ ಹುಚ್ಚಾಟ: ವಿಡಿಯೋ ವೈರಲ್
ದ್ಯಾಮೇಶ್ ಧ್ವನಿಗೆ ಮೆಚ್ಚುಗೆ ಸೂಚಿಸಿದ ನಟಿ ರಚಿತಾ ರಾಮ್
ದ್ಯಾಮೇಶ್ ಧ್ವನಿಗೆ ಮೆಚ್ಚುಗೆ ಸೂಚಿಸಿದ ನಟಿ ರಚಿತಾ ರಾಮ್
ಬೆಣ್ಣೆಹಳ್ಳದಲ್ಲಿ ಪ್ರತಿವರ್ಷ ಪ್ರವಾಹದಂಥ ಸ್ಥಿತಿಯಿಂದ ಮೂರು ಬೆಳೆ ನಷ್ಟ
ಬೆಣ್ಣೆಹಳ್ಳದಲ್ಲಿ ಪ್ರತಿವರ್ಷ ಪ್ರವಾಹದಂಥ ಸ್ಥಿತಿಯಿಂದ ಮೂರು ಬೆಳೆ ನಷ್ಟ
ಶನಿವಾರದಂದು ಶ್ರೀ ವೆಂಕಟೇಶ್ವರನ ಆರಾಧನೆಯ ಮಹತ್ವ ತಿಳಿಯಿರಿ
ಶನಿವಾರದಂದು ಶ್ರೀ ವೆಂಕಟೇಶ್ವರನ ಆರಾಧನೆಯ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ವೈರಾಗ್ಯದ ಭಾವನೆಗಳು ಕಾಡಬಹುದು
Daily Horoscope: ಈ ರಾಶಿಯವರಿಗೆ ವೈರಾಗ್ಯದ ಭಾವನೆಗಳು ಕಾಡಬಹುದು
ಸೆಲೆಬ್ರಿಟಿಗಳಿಗೆ ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಇಷ್ಟ ಆಯ್ತಾ?
ಸೆಲೆಬ್ರಿಟಿಗಳಿಗೆ ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಇಷ್ಟ ಆಯ್ತಾ?
ಗರ್ಭಾವಸ್ಥೆಯ ಹಸುವಿನ ಕೆಚ್ಚಲು ಕತ್ತರಿಸಿ ವಿಕೃತಿ ಮೆರೆದ ದುಷ್ಕರ್ಮಿಗಳು
ಗರ್ಭಾವಸ್ಥೆಯ ಹಸುವಿನ ಕೆಚ್ಚಲು ಕತ್ತರಿಸಿ ವಿಕೃತಿ ಮೆರೆದ ದುಷ್ಕರ್ಮಿಗಳು
ಇರಾನ್‌ ಮೇಲಿನ ಕ್ಷಿಪಣಿ ದಾಳಿ, ರಹಸ್ಯ ಕಾರ್ಯಾಚರಣೆಯ ವಿಡಿಯೋ ರಿಲೀಸ್
ಇರಾನ್‌ ಮೇಲಿನ ಕ್ಷಿಪಣಿ ದಾಳಿ, ರಹಸ್ಯ ಕಾರ್ಯಾಚರಣೆಯ ವಿಡಿಯೋ ರಿಲೀಸ್