ವೈದ್ಯೆಗೆ ಕಿರುಕುಳ ನೀಡಿದ ಅಧಿಕಾರಿಯ ಬಂಧಿಸಲು ಆಸ್ಪತ್ರೆಯ ವಾರ್ಡ್​ಗೆ ವಾಹನ ಸಮೇತ ನುಗ್ಗಿದ ಪೊಲೀಸರು

ವೈದ್ಯೆಗೆ ಕಿರುಕುಳ ನೀಡಿದ ಅಧಿಕಾರಿಯನ್ನು ಬಂಧಿಸಲು ಪೊಲೀಸರು ಆಸ್ಪತ್ರೆಯ ವಾರ್ಡ್​ಗೆ ತಮ್ಮ ಜೀಪ್​ನಲ್ಲೇ ತೆರಳಿ ಅಚ್ಚರಿ ಮೂಡಿಸಿದ್ದಾರೆ. ಅವರಿಗೆ ದೂರು ಬರುತ್ತಿದ್ದಂತೆಯೇ ಸನ್ನದ್ಧರಾದ ಪೊಲೀಸರು ಕೂಡಲೇ ವಾಹನದೊಂದಿಗೆ ಆಸ್ಪತ್ರೆಗೆ ತೆರಳಿದ್ದಾರೆ.

ವೈದ್ಯೆಗೆ ಕಿರುಕುಳ ನೀಡಿದ ಅಧಿಕಾರಿಯ ಬಂಧಿಸಲು ಆಸ್ಪತ್ರೆಯ ವಾರ್ಡ್​ಗೆ ವಾಹನ ಸಮೇತ ನುಗ್ಗಿದ ಪೊಲೀಸರು

Updated on: May 23, 2024 | 2:09 PM

ವೈದ್ಯೆಗೆ ಆಸ್ಪತ್ರೆ(Hospital)ಯಲ್ಲಿ ಕಿರುಕುಳ ನೀಡಲಾಗುತ್ತಿದೆ ಎನ್ನುವ ದೂರನ್ನು ಪಡೆದ ಪೊಲೀಸರು ಅಧಿಕಾರಿಯನ್ನು ಬಂಧಿಸಲು ವಾಹನ ಸಮೇತ ಆಸ್ಪತ್ರೆಯ ವಾರ್ಡ್​ಗೆ ನುಗ್ಗಿರುವ ಘಟನೆ ಉತ್ತರಾಖಂಡದಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ವಾಹನವು ಆಸ್ಪತ್ರೆಯ ತುರ್ತು ವಿಭಾಗಕ್ಕೆ ಪ್ರವೇಶಿಸುವುದನ್ನು ಕಾಣಬಹುದು. ಕೆಲವರು ವಾಹನಕ್ಕೆ ದಾರಿ ಮಾಡಿಕೊಡಲು ರೋಗಿಗಳೊಂದಿಗೆ ಸ್ಟ್ರೆಚರ್‌ಗಳನ್ನು ತಳ್ಳುವುದನ್ನು ಕಾಣಬಹುದು.

ವಾರ್ಡ್​ನೊಳಗೆ ವೈದ್ಯೆಗೆ ಕಿರುಕುಳ ನೀಡಿದ ಆರೋಪದ ಮೇಲೆ ಆರೋಪಿ ರಾಜಸ್ಥಾನ ಮೂಲದ ಸತೀಶ್ ಕುಮಾರ್ ಅವರನ್ನು ಮಂಗಳವಾರ ಅಮಾನತು ಮಾಡಿ ಬಂಧಿಸಲಾಗಿದೆ. ಅವರ ವಿರುದ್ಧ ಸೆಕ್ಷನ್ 354 ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸತೀಶ್ ಕುಮಾರ್ ಅವರನ್ನು ವಜಾಗೊಳಿಸುವಂತೆ ಒತ್ತಾಯಿಸಿ ನಿವಾಸಿ ವೈದ್ಯರು ಮುಷ್ಕರ ನಡೆಸಿದ್ದರಿಂದ ಬುಧವಾರ ಏಮ್ಸ್-ಋಷಿಕೇಶದಲ್ಲಿ ಗೊಂದಲ ಉಂಟಾಯಿತು.

ಮತ್ತಷ್ಟು ಓದಿ: Viral Video: ಕಸ ಎಸೆದಿಲ್ಲ ಏಕೆ? ಕೆಲಸದಿಂದ ಮನೆಗೆ ಬರುತ್ತಿದ್ದಂತೆ ಪತಿರಾಯನಿಗೆ ಜಾಡಿಸಿ ಒದ್ದ ಪತ್ನಿ

ನಿವಾಸಿ ವೈದ್ಯರು ಡೀನ್ (ಶಿಕ್ಷಣ ತಜ್ಞರು) ಕಚೇರಿಯ ಹೊರಗೆ ಜಮಾಯಿಸಿ ಘೋಷಣೆಗಳನ್ನು ಕೂಗಿದರು. ಅಧಿಕಾರಿಯನ್ನು ಸೇವೆಯಿಂದ ತಕ್ಷಣವೇ ವಜಾಗೊಳಿಸಬೇಕೆಂದು ಅವರು ಒತ್ತಾಯಿಸಿದರು ಮತ್ತು ಅವರು ಮಾಡಿದ ಅಪರಾಧಕ್ಕೆ ಅಮಾನತು ಸಾಕಾಗುವುದಿಲ್ಲ ಎಂದು ವೈದ್ಯಕೀಯ ಅಧೀಕ್ಷಕ ಸಂಜೀವ್ ಕುಮಾರ್ ಮಿತ್ತಲ್ ಹೇಳಿದರು.

ವಿಡಿಯೋ

ಮಹಿಳಾ ವೈದ್ಯೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ. ಲೈಂಗಿಕ ಕಿರುಕುಳದ ಆರೋಪದ ಮೇಲೆ ಪೊಲೀಸರು ಸತೀಶ್ ಕುಮಾರ್ ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಈ ವಿಷಯವನ್ನು ಗಮನಿಸಿ, ಉತ್ತರಾಖಂಡ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಕುಸುಮ್ ಕಂಡ್ವಾಲ್ ಅವರು ಏಮ್ಸ್ ಆಡಳಿತವನ್ನು ಭೇಟಿ ಮಾಡಿ, ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡರು. ಘಟನೆಯ ಕುರಿತು ತನಿಖೆ ನಡೆಸಲು ಸಮಿತಿಯೊಂದನ್ನು ರಚಿಸುವಂತೆಯೂ ಅವರು ಒತ್ತಾಯಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Loading...
Unable to load recommendations.
Follow Us