AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಧಾನಿ ಮೋದಿ ಬ್ಯಾಂಕ್​ ಬ್ಯಾಲೆನ್ಸ್​ ಹೆಚ್ಚಾಯ್ತು! ಎಷ್ಟು?

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಬ್ಯಾಂಕ್​ ಖಾತೆಯಲ್ಲಿನ ಹಣದ ಮೊತ್ತ ಹೆಚ್ಚಾಗಿದೆ! ಎಷ್ಟು ಎಂಬ ಪ್ರಶ್ನೆಗೆ ವಿವರ ಇಲ್ಲಿದೆ: 2020ರ ಕೊರೊನಾ ವರ್ಷದಲ್ಲಿ ಇಡೀ ಜಗತ್ತಿನ ಆರ್ಥಿಕತೆ ಮಕಾಡೆ ಮಲಗಿಬಿಟ್ಟಿದೆ. ಆದ್ರೆ, ತುಸು ಉಳಿತಾಯ ಮನೋಭಾವದಿಂದಾಗಿ ಪ್ರಧಾನಿ ಮೋದಿಯ ಬ್ಯಾಂಕ್​ ಬ್ಯಾಲೆನ್ಸ್​ ಹೆಚ್ಚಾಗಿದೆ. ಅಂದ ಹಾಗೆ, ದೇಶದ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಮಾಸಿಕ ಸಂಬಳ 2 ಲಕ್ಷ ರೂಪಾಯಿ. ಇದರಲ್ಲಿ ಕೊರೊನಾ ವೈರಸ್​ ವಿರುದ್ಧದ ಹೋರಾಟದ ಲೆಕ್ಕಕ್ಕೆ ಶೇ. 30 ರಷ್ಟು ಕಡಿತವಿದೆ. ಪ್ರಧಾನಿ ಕಚೇರಿಗೆ […]

ಪ್ರಧಾನಿ ಮೋದಿ ಬ್ಯಾಂಕ್​ ಬ್ಯಾಲೆನ್ಸ್​ ಹೆಚ್ಚಾಯ್ತು! ಎಷ್ಟು?
ಪ್ರಧಾನಿ ನರೇಂದ್ರ ಮೋದಿ
ಸಾಧು ಶ್ರೀನಾಥ್​
| Edited By: |

Updated on: Oct 15, 2020 | 4:30 PM

Share

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಬ್ಯಾಂಕ್​ ಖಾತೆಯಲ್ಲಿನ ಹಣದ ಮೊತ್ತ ಹೆಚ್ಚಾಗಿದೆ! ಎಷ್ಟು ಎಂಬ ಪ್ರಶ್ನೆಗೆ ವಿವರ ಇಲ್ಲಿದೆ: 2020ರ ಕೊರೊನಾ ವರ್ಷದಲ್ಲಿ ಇಡೀ ಜಗತ್ತಿನ ಆರ್ಥಿಕತೆ ಮಕಾಡೆ ಮಲಗಿಬಿಟ್ಟಿದೆ. ಆದ್ರೆ, ತುಸು ಉಳಿತಾಯ ಮನೋಭಾವದಿಂದಾಗಿ ಪ್ರಧಾನಿ ಮೋದಿಯ ಬ್ಯಾಂಕ್​ ಬ್ಯಾಲೆನ್ಸ್​ ಹೆಚ್ಚಾಗಿದೆ. ಅಂದ ಹಾಗೆ, ದೇಶದ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಮಾಸಿಕ ಸಂಬಳ 2 ಲಕ್ಷ ರೂಪಾಯಿ. ಇದರಲ್ಲಿ ಕೊರೊನಾ ವೈರಸ್​ ವಿರುದ್ಧದ ಹೋರಾಟದ ಲೆಕ್ಕಕ್ಕೆ ಶೇ. 30 ರಷ್ಟು ಕಡಿತವಿದೆ.

ಪ್ರಧಾನಿ ಕಚೇರಿಗೆ ನರೇಂದ್ರ ಮೋದಿ ಸಲ್ಲಿಸಿರುವ ಆಸ್ತಿಪಾಸ್ತಿ ಘೋಷಣಾ ಪತ್ರದಲ್ಲಿ ಕಳೆದ 15 ತಿಂಗಳಲ್ಲಿ 36.53 ಲಕ್ಷ ರೂಪಾಯಿಯೊಂದಿಗೆ ಚರಾಸ್ತಿ ಮೊತ್ತ ಅಧಿಕಗೊಂಡಿದೆ. ಇನ್ನು 2019ರ ಲೋಕಸಭಾ ಚುನಾವಣೆ ವೇಳೆ ಸಲ್ಲಿಸಿದ್ದ ಅಫಿಡವಿಟ್ ಪ್ರಕಾರ ಪ್ರಧಾನಿ ಮೋದಿ ಬಳಿ ಒಟ್ಟು 2.5 ಕೋಟಿ ರೂ. ಆಸ್ತಿಯಿದೆ. ಪ್ರಧಾನಿ ಮೋದಿಯ ನಿವ್ವಳ ಆಸ್ತಿ ಜೂನ್ 30ಕ್ಕೆ ಅನುಗುಣವಾಗಿ 2.85 ಕೋಟಿ ರೂ ಆಗಿದೆ. ಅಂದ್ರೆ 36 ಲಕ್ಷ ರೂ ನಷ್ಟು ಹೆಚ್ಚಾಗಿದೆ.

ಪ್ರಧಾನಿ ಮೋದಿ ಕೈಯಲ್ಲಿರುವ ನಗದು 31,450 ರೂ. ಬ್ಯಾಂಕ್​ ಬ್ಯಾಲೆನ್ಸ್​ 3,38,173 ರೂ. ಬ್ಯಾಂಕ್​ ಫಿಕ್ಸೆಡ್​ ಡೆಪಾಸಿಟ್ಸ್​ 1,60,28,939 ರೂ. NSC ಯೋಜನೆಯಲ್ಲಿ ಹೂಡಿಕೆ 8,43,124 ರೂ. ಜೀವ ವಿಮೆ 1,50,957 ರೂ. ಮೂಲಸೌಕರ್ಯ ಬಾಂಡ್ 20,000 ರೂ. ಚರಾಸ್ತಿ 1.75 ಕೋಟಿ ರೂ.

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ