AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತನಿಖಾ ಸಂಸ್ಥೆಗಳು ದೇಶದ ವಿರುದ್ಧವಿರುವ ಅಪರಾಧಗಳ ಬಗ್ಗೆ ಗಮನ ಹರಿಸಲಿ: ಸಿಜೆಐ

ದೆಹಲಿಯಲ್ಲಿ 20ನೇ ಡಿ ಪಿ ಕೊಹ್ಲಿ ಸ್ಮಾರಕ ಉಪನ್ಯಾಸದಲ್ಲಿ ಮಾತನಾಡಿದ ಸಿಜೆಐ, "ಕ್ರಿಮಿನಲ್ ನ್ಯಾಯದ ಕ್ಷೇತ್ರದಲ್ಲಿ, ಹುಡುಕಾಟ ಮತ್ತು ವಶಪಡಿಸಿಕೊಳ್ಳುವ ಅಧಿಕಾರಗಳು ಮತ್ತು ವೈಯಕ್ತಿಕ ಗೌಪ್ಯತೆ ಹಕ್ಕುಗಳ ನಡುವಿನ ಸೂಕ್ಷ್ಮ ಸಮತೋಲನವು ನಿಂತಿದೆ. ಇದು ನ್ಯಾಯೋಚಿತ ಮತ್ತು ನ್ಯಾಯಯುತ ಸಮಾಜದ ಮೂಲಾಧಾರವಾಗಿದೆ ಎಂದಿದ್ದಾರೆ.

ತನಿಖಾ ಸಂಸ್ಥೆಗಳು ದೇಶದ ವಿರುದ್ಧವಿರುವ ಅಪರಾಧಗಳ ಬಗ್ಗೆ ಗಮನ ಹರಿಸಲಿ: ಸಿಜೆಐ
ಡಿವೈ ಚಂದ್ರಚೂಡ್
ರಶ್ಮಿ ಕಲ್ಲಕಟ್ಟ
|

Updated on: Apr 01, 2024 | 8:50 PM

Share

ದೆಹಲಿ ಏಪ್ರಿಲ್ 01: ಭಾರತದ ಮುಖ್ಯ ನ್ಯಾಯಮೂರ್ತಿ (CJI) ಡಿವೈ ಚಂದ್ರಚೂಡ್ (DY Chandrachud) ಅವರು ಕೇಂದ್ರೀಯ ತನಿಖಾ ದಳ (CBI) ನಂತಹ ತನಿಖಾ ಸಂಸ್ಥೆಗಳಿಗೆ ವಹಿಸಲಾದ ಶೋಧ, ವಶಪಡಿಸಿಕೊಳ್ಳುವ ಅಧಿಕಾರಗಳು ಮತ್ತು ಖಾಸಗಿತನದ ಹಕ್ಕುಗಳ ನಡುವೆ ‘ಸೂಕ್ಷ್ಮ ಸಮತೋಲನ’ ಬೇಕು ಎಂದು ಹೇಳಿದ್ದಾರೆ. ಸೋಮವಾರ ದೆಹಲಿಯಲ್ಲಿ 20ನೇ ಡಿ ಪಿ ಕೊಹ್ಲಿ ಸ್ಮಾರಕ ಉಪನ್ಯಾಸದಲ್ಲಿ ಮಾತನಾಡಿದ ಸಿಜೆಐ, “ಕ್ರಿಮಿನಲ್ ನ್ಯಾಯದ ಕ್ಷೇತ್ರದಲ್ಲಿ, ಹುಡುಕಾಟ ಮತ್ತು ವಶಪಡಿಸಿಕೊಳ್ಳುವ ಅಧಿಕಾರಗಳು ಮತ್ತು ವೈಯಕ್ತಿಕ ಗೌಪ್ಯತೆ ಹಕ್ಕುಗಳ ನಡುವಿನ ಸೂಕ್ಷ್ಮ ಸಮತೋಲನವು ನಿಂತಿದೆ. ಇದು ನ್ಯಾಯೋಚಿತ ಮತ್ತು ನ್ಯಾಯಯುತ ಸಮಾಜದ ಮೂಲಾಧಾರವಾಗಿದೆ ಎಂದಿದ್ದಾರೆ. ‘ಈ ಸಮತೋಲನದ ಪ್ರಮುಖ ಅಂಶವೇ ಪ್ರಕ್ರಿಯೆಯನ್ನು ಎತ್ತಿಹಿಡಿಯುವುದು ಎಂದು ಸಿಜೆಐ ಹೇಳಿದರು.

ಪಿಟಿಐ ವರದಿಯ ಪ್ರಕಾರ, ಸಿಜೆಐ ಅವರು ‘ವೈಯಕ್ತಿಕ ಸಾಧನಗಳ ಅನಧಿಕೃತ ಮುಟ್ಟುಗೋಲು’ ಬಗ್ಗೆಯೂ ಮಾತನಾಡಿದ್ದಾರೆ. ಇಲ್ಲೂ ಶೋಧ ಕಾರ್ಯ ಮತ್ತು ವೈಯಕ್ತಿಕ ಗೌಪ್ಯತೆ ಹಕ್ಕುಗಳ ನಡುವೆ ಸಮತೋಲನವನ್ನು ಸಾಧಿಸುವ ಅಗತ್ಯವಿದೆ ಎಂದು ಹೇಳಿದರು.

ವಿವಿಧ ಪ್ರಕರಣಗಳಲ್ಲಿ ತೊಡಗಿಸಿಕೊಳ್ಳುವ ಬದಲು ದೇಶದ ಭದ್ರತೆ ಮತ್ತು ಆರ್ಥಿಕ ಆರೋಗ್ಯ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವ ಅಪರಾಧಗಳ ಮೇಲೆ ಕೇಂದ್ರೀಕರಿಸಿ ಎಂದು ಅವರು ತನಿಖಾ ಸಂಸ್ಥೆಗಳಿಗೆ ಹೇಳಿದ್ದಾರೆ. ಅಪರಾಧದ ರೀತಿಯು “ಅಭೂತಪೂರ್ವ ವೇಗದಲ್ಲಿ” ವಿಕಸನಗೊಳ್ಳುತ್ತಿದೆ. ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ನಂತಹ ತನಿಖಾ ಸಂಸ್ಥೆಗಳು ಕೃತಕ ಬುದ್ಧಿಮತ್ತೆ (AI) ಉಪಕರಣಗಳನ್ನು ಬಳಸುವುದರ ಹೊರತಾಗಿ ಅವುಗಳನ್ನು ನಿಭಾಯಿಸಲು ತಮ್ಮ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಎಂದಿದ್ದಾರೆ ಅವರು.

ಇದನ್ನೂ ಓದಿ: ಲೋಕಸಭೆ ಚುನಾವಣೆಯಲ್ಲಿ ಗೆದ್ದರೆ ಬಡವರಿಗೆ ವಿಸ್ಕಿ, ಬಿಯರ್; ಮಹಾರಾಷ್ಟ್ರದ ಅಭ್ಯರ್ಥಿಯಿಂದ ಹೀಗೊಂದು ಭರವಸೆ

ಸೈಬರ್ ಕ್ರೈಮ್ ಮತ್ತು ಡಿಜಿಟಲ್ ವಂಚನೆಯಿಂದ ಉದಯೋನ್ಮುಖ ತಂತ್ರಜ್ಞಾನಗಳವರೆಗೆ ಡಿಜಿಟಲ್ ತಂತ್ರಜ್ಞಾನಗಳ ವಿಸ್ತರಣೆಯ ಮೂಲಕ ಜಗತ್ತು ಹೆಚ್ಚು ಪರಸ್ಪರ ಸಂಪರ್ಕ ಹೊಂದಿದೆ ಎಂದು ಹೇಳಿದ ಭಾರತದ ಮುಖ್ಯ ನ್ಯಾಯಮೂರ್ತಿ, ಸಿಬಿಐನಂತಹ ಕಾನೂನು ಜಾರಿ ಸಂಸ್ಥೆಗಳು ನವೀನತೆಯನ್ನು ಬೇಡುವ ಹೊಸ ಮತ್ತು ಸಂಕೀರ್ಣ ಸವಾಲುಗಳನ್ನು ಎದುರಿಸುತ್ತಿವೆ.. ತನಿಖಾ ಸಂಸ್ಥೆಗಳು ಅಪರಾಧದಲ್ಲಿ ಆಮೂಲಾಗ್ರ ಬದಲಾವಣೆಯೊಂದಿಗೆ ಮುಂದುವರಿಯಬೇಕು ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು
ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು
ಬಿಗ್ ಬಾಸ್ ನಾಮಿನೇಷನ್ ಪ್ರಕ್ರಿಯೆ: ಕ್ಯಾಪ್ಟನ್ ಗಿಲ್ಲಿ ನಟ ಯಾರ ಪರ?
ಬಿಗ್ ಬಾಸ್ ನಾಮಿನೇಷನ್ ಪ್ರಕ್ರಿಯೆ: ಕ್ಯಾಪ್ಟನ್ ಗಿಲ್ಲಿ ನಟ ಯಾರ ಪರ?
ಕಾರಿಗೆ ಗುದ್ದಿ ಪಾದಚಾರಿ ಮೇಲೆ ಕ್ಯಾಂಟರ್ ಪಲ್ಟಿ​​: ಎದೆ ಝಲ್ ಎನಿಸೋ ದೃಶ್ಯ!
ಕಾರಿಗೆ ಗುದ್ದಿ ಪಾದಚಾರಿ ಮೇಲೆ ಕ್ಯಾಂಟರ್ ಪಲ್ಟಿ​​: ಎದೆ ಝಲ್ ಎನಿಸೋ ದೃಶ್ಯ!
ಬಾರ್​ಗೆ ನುಗ್ಗಿದ ಕೊಬ್ಬರಿ ಹೋರಿ, ಮದ್ಯಪ್ರಿಯರು ಕಕ್ಕಾಬಿಕ್ಕಿ!
ಬಾರ್​ಗೆ ನುಗ್ಗಿದ ಕೊಬ್ಬರಿ ಹೋರಿ, ಮದ್ಯಪ್ರಿಯರು ಕಕ್ಕಾಬಿಕ್ಕಿ!
ರಾಯಚೂರಲ್ಲೂ ಘರ್ಜಿಸಿದ ಜೆಸಿಬಿಗಳು: 20ಕ್ಕೂ ಅಧಿಕ ಮನೆಗಳ ತೆರವು
ರಾಯಚೂರಲ್ಲೂ ಘರ್ಜಿಸಿದ ಜೆಸಿಬಿಗಳು: 20ಕ್ಕೂ ಅಧಿಕ ಮನೆಗಳ ತೆರವು
ಅಪಾರ್ಟ್ಮೆಂಟ್​​ನಲ್ಲಿ ಸಿಲುಕಿಕೊಂಡ ಬೆಕ್ಕನ್ನು ಕಾಪಾಡಿದ ಅಗ್ನಿಶಾಮಕ ದಳ
ಅಪಾರ್ಟ್ಮೆಂಟ್​​ನಲ್ಲಿ ಸಿಲುಕಿಕೊಂಡ ಬೆಕ್ಕನ್ನು ಕಾಪಾಡಿದ ಅಗ್ನಿಶಾಮಕ ದಳ
ಬಿಗ್ ಬಾಸ್​​ನಿಂದ ಹೊರ ಬರಲು ಅದುವೇ ಕಾರಣವಾಯ್ತು; ಸೂರಜ್ ಬೇಸರ
ಬಿಗ್ ಬಾಸ್​​ನಿಂದ ಹೊರ ಬರಲು ಅದುವೇ ಕಾರಣವಾಯ್ತು; ಸೂರಜ್ ಬೇಸರ
ಹುಟ್ಟೂರಿನಲ್ಲಿ ಮನೆ ದೇವರಿಗೆ ಪೂಜೆ ಸಲ್ಲಿಸಿದ ಹೆಚ್.ಡಿ.ದೇವೇಗೌಡ
ಹುಟ್ಟೂರಿನಲ್ಲಿ ಮನೆ ದೇವರಿಗೆ ಪೂಜೆ ಸಲ್ಲಿಸಿದ ಹೆಚ್.ಡಿ.ದೇವೇಗೌಡ
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಿಲ್ಲದ ಹಿಂಸಾಚಾರ, ಹಿಂದೂಗಳ ಮನೆಗಳಿಗೆ ಬೆಂಕಿ
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಿಲ್ಲದ ಹಿಂಸಾಚಾರ, ಹಿಂದೂಗಳ ಮನೆಗಳಿಗೆ ಬೆಂಕಿ
ಬಾರ್​​​ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ
ಬಾರ್​​​ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ