AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದು ಕಾನೂನು ಉಲ್ಲಂಘನೆ; ಪಂಜಾಬ್ ಅಸೆಂಬ್ಲಿಯಲ್ಲಿ ಅಂಗೀಕರಿಸಿದ ಮಸೂದೆಗಳನ್ನು ಪ್ರಶ್ನಿಸಿದ ಗವರ್ನರ್

ಸಿಖ್ ಗುರುದ್ವಾರಗಳ (ತಿದ್ದುಪಡಿ) ಮಸೂದೆ, 2023 ರ ಜೊತೆಗೆ, ರಾಜ್ಯ ವಿಶ್ವವಿದ್ಯಾಲಯಗಳ ಕುಲಪತಿಯಾಗಿ ರಾಜ್ಯಪಾಲರನ್ನು ತೆಗೆದುಹಾಕಲು ಪಂಜಾಬ್ ವಿಶ್ವವಿದ್ಯಾಲಯ ಕಾನೂನುಗಳು (ತಿದ್ದುಪಡಿ) ಮಸೂದೆ 2023 ಅನ್ನು ಅಸೆಂಬ್ಲಿ ಅಂಗೀಕರಿಸಿತು

ಇದು ಕಾನೂನು ಉಲ್ಲಂಘನೆ; ಪಂಜಾಬ್ ಅಸೆಂಬ್ಲಿಯಲ್ಲಿ ಅಂಗೀಕರಿಸಿದ ಮಸೂದೆಗಳನ್ನು ಪ್ರಶ್ನಿಸಿದ ಗವರ್ನರ್
ಭಗವಂತ್ ಮಾನ್ -ಬನ್ವಾರಿ ಲಾಲ್ ಪುರೋಹಿತ್
ರಶ್ಮಿ ಕಲ್ಲಕಟ್ಟ
|

Updated on: Jul 19, 2023 | 2:07 PM

Share

ಅಮೃತ್​​ಸರ ಜುಲೈ 19: ಎಎಪಿ (AAP) ನೇತೃತ್ವದ ಪಂಜಾಬ್ ಸರ್ಕಾರ (Punjab) ವಿಧಾನಸಭೆಯಲ್ಲಿ ಕಳೆದ ತಿಂಗಳು ವಿಶೇಷ ಎರಡು ದಿನಗಳ ವಿಧಾನಸಭೆ ಅಧಿವೇಶನದಲ್ಲಿ ಅಂಗೀಕರಿಸಿದ ನಾಲ್ಕು ಮಸೂದೆಗಳಿಗೆ ಸಹಿ ಹಾಕಲು ಗವರ್ನರ್ ಬನ್ವಾರಿ ಲಾಲ್ ಪುರೋಹಿತ್ (Banwari Lal Purohit) ನಿರಾಕರಿಸಿದ್ದಾರೆ. ಅಧಿವೇಶನದ ಕರೆ ಕಾನೂನು ಮತ್ತು ಕಾರ್ಯವಿಧಾನದ ಉಲ್ಲಂಘನೆಯಾಗಿದೆ ಎಂದು ಅವರು ಗವರ್ನರ್ ಹೇಳಿದ್ದಾರೆ.“ಈ ನಾಲ್ಕು ಮಸೂದೆಗಳನ್ನು ಅಂಗೀಕರಿಸಿದಾಗ ಜೂನ್ 19 ಮತ್ತು 20, 2023 ರಂದು ನೀವು ವಿಧಾನ ಸಭೆಯ ಅಧಿವೇಶನವನ್ನು ಕರೆಯುವುದು ಕಾನೂನು ಮತ್ತು ಕಾರ್ಯವಿಧಾನದ ಉಲ್ಲಂಘನೆಯಾಗಿದೆ. ಅದಕ್ಕಾಗಿ ನಾನು ಕಾನೂನು ಸಲಹೆ ಪಡೆಯುತ್ತೇನೆ. ಆ ಮಸೂದೆಗಳ ನ್ಯಾಯಸಮ್ಮತತೆಯ ಮತ್ತು ಕಾನೂನುಬದ್ಧತೆ ಬಗ್ಗೆ ಅನುಮಾನವಿದೆ ಎಂದು ರಾಜ್ಯಪಾಲರು ಸೋಮವಾರ ಸಿಎಂ ಭಗವಂತ್ ಮಾನ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಬನ್ವಾರಿ ಲಾಲ್ ಪುರೋಹಿತ್ ಅವರು ಪತ್ರದಲ್ಲಿ “ಭಾರತದ ಅಟಾರ್ನಿ ಜನರಲ್‌ನಿಂದ ಕಾನೂನು ಅಭಿಪ್ರಾಯವನ್ನು ಪಡೆಯಬೇಕೇ ಅಥವಾ ಸಂವಿಧಾನದ ಪ್ರಕಾರ ಈ ಮಸೂದೆಗಳನ್ನು ಭಾರತದ ರಾಷ್ಟ್ರಪತಿಗಳ ಪರಿಗಣನೆ ಮತ್ತು ಒಪ್ಪಿಗೆಗಾಗಿ ಕಾಯ್ದಿರಿಸಬೇಕೆ ಎಂಬುದನ್ನು ಪರಿಗಣಿಸುತ್ತಿದ್ದೇನೆ” ಎಂದು ಹೇಳಿದ್ದಾರೆ.

ಗೋಲ್ಡನ್ ಟೆಂಪಲ್‌ನಿಂದ ಗುರುಬಾನಿ ಉಚಿತ ಪ್ರಸಾರವನ್ನು ಖಚಿತಪಡಿಸಿಕೊಳ್ಳಲು ಸಿಖ್ ಗುರುದ್ವಾರಗಳ ಕಾಯಿದೆ, 1925 ಅನ್ನು ತಿದ್ದುಪಡಿ ಮಾಡಲಾದ ಸಿಖ್ ಗುರುದ್ವಾರಸ್ (ತಿದ್ದುಪಡಿ) ಮಸೂದೆ, 2023 ಅನ್ನು ಪರೋಕ್ಷವಾಗಿ ಉಲ್ಲೇಖಿಸಿದ ರಾಜ್ಯಪಾಲರು, “ನಿರ್ದಿಷ್ಟ ರಾಜಕೀಯ ಕುಟುಂಬದ ಕೆಲವು ಕ್ರಮಗಳ ಬಗ್ಗೆ ಸರ್ಕಾರವು ಕಾಳಜಿ ವಹಿಸಿದೆ. ಅದು ಮಸೂದೆಯನ್ನು ಅಂಗೀಕರಿಸಲು ಪ್ರೇರೇಪಿಸಿದೆ ಎಂದಿದ್ದಾರೆ.

ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಮಸೂದೆಯ ಅಂಗೀಕಾರವನ್ನು ಸಮರ್ಥಿಸಿಕೊಂಡಿದ್ದು, “ಪವಿತ್ರವಾದ ಗುರ್ಬಾನಿ (ಪವಿತ್ರ ಸ್ತೋತ್ರ) ಪ್ರಸಾರ ಮಾಡುವ ಹಕ್ಕುಗಳ ಮೇಲೆ ನಿರ್ದಿಷ್ಟ ಕುಟುಂಬದ (ಬಾದಲ್) ಅನಗತ್ಯ ನಿಯಂತ್ರಣವನ್ನು ಮುಕ್ತಗೊಳಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರು.

“ನಿಮ್ಮ ಖಾಸಗಿ ಗ್ರಹಿಕೆಯ ವಿಷಯದಲ್ಲಿ ನಾನು ನಿಮ್ಮೊಂದಿಗೆ ಜಗಳವಾಡಲು ಬಯಸುವುದಿಲ್ಲ, ಆದರೆ ರಾಜ್ಯಪಾಲನಾಗಿ ಕಾನೂನಿಗೆ ಅನುಸಾರವಾಗಿ ಮಸೂದೆಗಳನ್ನು ಅಂಗೀಕರಿಸುವುದನ್ನು ಖಚಿತಪಡಿಸಿಕೊಳ್ಳಲು ನನಗೆ ಭಾರತ ಸಂವಿಧಾನ ಹೇಳುತ್ತದೆ ಎಂದು ಬನ್ವಾರಿ ಲಾಲ್ ಪುರೋಹಿತ್ ಪತ್ರದಲ್ಲಿ ಬರೆದಿದ್ದಾರೆ.

ವಿಧೇಯಕಗಳನ್ನು ತೆರವುಗೊಳಿಸುವಲ್ಲಿನ ವಿಳಂಬದ ಬಗ್ಗೆ ಆಡಳಿತಾರೂಢ ಎಎಪಿ ನಾಯಕರು ಮಾಡಿರುವ ಆರೋಪಗಳನ್ನೂ ರಾಜ್ಯಪಾಲರು ಪ್ರಸ್ತಾಪಿಸಿದ್ದಾರೆ. ಮಸೂದೆಗೆ ತಕ್ಷಣವೇ ಸಹಿ ಮಾಡುವಲ್ಲಿ ನನ್ನ ಕಡೆಯಿಂದ ಯಾವುದೇ ವಿಳಂಬ ಬಗ್ಗೆ ನೀವು ಗ್ರಹಿಸಿರುವುದಾಗಿ ಸೂಚಿಸಿದ್ದೀರಿ. ನಾನು ತೆಗೆದುಕೊಂಡ ಸಮಯವನ್ನು ‘ಪಂಜಾಬ್‌ನ ಜನರ ಪ್ರಜಾಸತ್ತಾತ್ಮಕ ಇಚ್ಛೆಯನ್ನು ಹತ್ತಿಕ್ಕುವಂಥದ್ದು’ ಎಂದು ವಿವರಿಸುವುದು ಸೂಕ್ತ ಎಂದು ನೀವು ಭಾವಿಸಿದ್ದೀರಿ” ಎಂದು ಅವರು ಬರೆದಿದ್ದಾರೆ.

ಸಿಖ್ ಗುರುದ್ವಾರಗಳ (ತಿದ್ದುಪಡಿ) ಮಸೂದೆ, 2023 ರ ಜೊತೆಗೆ, ರಾಜ್ಯ ವಿಶ್ವವಿದ್ಯಾಲಯಗಳ ಕುಲಪತಿಯಾಗಿ ರಾಜ್ಯಪಾಲರನ್ನು ತೆಗೆದುಹಾಕಲು ಪಂಜಾಬ್ ವಿಶ್ವವಿದ್ಯಾಲಯ ಕಾನೂನುಗಳು (ತಿದ್ದುಪಡಿ) ಮಸೂದೆ 2023 ಅನ್ನು ಅಸೆಂಬ್ಲಿ ಅಂಗೀಕರಿಸಿತು. ಅದೇ ವೇಳೆ ಪೊಲೀಸ್ ಮಹಾನಿರ್ದೇಶಕರ (ಪೊಲೀಸ್ ಫೋರ್ಸ್ ಮುಖ್ಯಸ್ಥ) ಆಯ್ಕೆ ಮತ್ತು ನೇಮಕಾತಿಗಾಗಿ ಸ್ವತಂತ್ರ ಕಾರ್ಯವಿಧಾನವನ್ನು ತರಲು ಪಂಜಾಬ್ ಪೊಲೀಸ್ (ತಿದ್ದುಪಡಿ) ಮಸೂದೆ, 2023 ಅನ್ನು ಕೂಡಾ ವಿಧಾನಸಭೆ ಅಂಗೀಕರಿಸಿತು.

ಮುಖ್ಯಮಂತ್ರಿಯಾಗಿ ಪಂಜಾಬ್‌ನ ಜನರು ಅಂತಿಮವಾಗಿ ತಮ್ಮ ಮೇಲೆ ಪರಿಣಾಮ ಬೀರುವ ಕಾನೂನುಗಳನ್ನು ಸರಿಯಾದ ಕಾರ್ಯವಿಧಾನವನ್ನು ಅನುಸರಿಸಿದ ನಂತರ ಅಂಗೀಕರಿಸುವುದನ್ನು ಖಾತ್ರಿಪಡಿಸಿಕೊಳ್ಳುವಲ್ಲಿ ಸಮಾನ ಕಾಳಜಿಯನ್ನು ಹೊಂದಿದ್ದಾರೆ ಎಂದು ನೀವು ಪ್ರಶಂಸಿಸುತ್ತೀರಿ. ವಿಧಾನ ಸಭಾ ಅಧಿವೇಶನದ ಕಾನೂನುಬದ್ಧತೆಯನ್ನು ಮೊದಲು ಪರಿಶೀಲಿಸಿದ ನಂತರ ನಾನು ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇನೆ ಎಂದು ನೀವು ಖಚಿತವಾಗಿ ಹೇಳಬಹುದು ಎಂದಿದ್ದಾರೆ ರಾಜ್ಯಪಾಲರು.

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಶನಿವಾರ ಸಿಖ್ ಗುರುದ್ವಾರಗಳ (ತಿದ್ದುಪಡಿ) ಮಸೂದೆ, 2023 ಗೆ ಸಹಿ ಹಾಕದ ರಾಜ್ಯಪಾಲ ಬನ್ವಾರಿ ಲಾಲ್ ಪುರೋಹಿತ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ರಾಜ್ಯಪಾಲರು ರಾಜ್ಯದ ಜನರ ಪ್ರಜಾಪ್ರಭುತ್ವದ ಇಚ್ಛೆಯನ್ನು ಹತ್ತಿಕ್ಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ