AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬದುಕೆಲ್ಲ ಚಿಂದಿ ಆಯುತ್ತಾ.. ಕೊನೆಗೆ ತನ್ನದೇ ಪುತ್ಥಳಿ ನಿರ್ಮಿಸಿಕೊಂಡ ಆ ವ್ಯಕ್ತಿ! ಎಲ್ಲಿ?

ಚೆನ್ನೈ: ದೇಶದ ಗಣ್ಯರು ಹಾಗೂ ಮಹಾನ್​ ವ್ಯಕ್ತಿಗಳ ಪ್ರತಿಮೆ ಮತ್ತು ಪುತ್ಥಳಿಗಳನ್ನು ಹಲವೆಡೆ ಸ್ಥಾಪಿಸುವುದನ್ನು ನೋಡಿದ್ದೇವೆ. ಇದಕ್ಕಾಗಿ ಹಲವಾರು ಹೋರಾಟಗಳು ಮತ್ತು ಬಡಿದಾಟಗಳು ನಡೆಯುವುದನ್ನು ಸಹ ಕಂಡಿದ್ದೇವೆ. ಆದರೆ ಇಲ್ಲೊಬ್ಬ ಚಿಂದಿ ಆಯುವ ವ್ಯಕ್ತಿ ಇದ್ಯಾವುದರ ಗೋಜಿಗೆ ಹೋಗದೆಯೇ ತನ್ನದೇ ಜಮೀನೊಂದನ್ನು ಖರೀದಿಸಿ ಅದರಲ್ಲಿ ತನ್ನ ಪುತ್ಥಳಿಯನ್ನು ಪ್ರತಿಷ್ಠಾಪಿಸಿರುವ ಸ್ವಾರಸ್ಯಕರ ಘಟನೆ ತಮಿಳುನಾಡಿನ ಸೇಲಂನಲ್ಲಿ ನಡೆದಿದೆ. ಇದನ್ನ ಕೇಳೋಕೆ ಅಚ್ಚರಿ ಎನಿಸಿದರೂ ಸತ್ಯ ಸಂಗತಿ. 60 ವರ್ಷದ ನಲ್ಲತಂಬಿ ಎಂಬ ಚಿಂದಿ ವ್ಯಾಪಾರಿ ಕಳೆದ ಭಾನುವಾರ ತನ್ನದೇ […]

ಬದುಕೆಲ್ಲ ಚಿಂದಿ ಆಯುತ್ತಾ.. ಕೊನೆಗೆ ತನ್ನದೇ ಪುತ್ಥಳಿ ನಿರ್ಮಿಸಿಕೊಂಡ ಆ ವ್ಯಕ್ತಿ! ಎಲ್ಲಿ?
Follow us
KUSHAL V
| Updated By: ಸಾಧು ಶ್ರೀನಾಥ್​

Updated on: Sep 22, 2020 | 2:39 PM

ಚೆನ್ನೈ: ದೇಶದ ಗಣ್ಯರು ಹಾಗೂ ಮಹಾನ್​ ವ್ಯಕ್ತಿಗಳ ಪ್ರತಿಮೆ ಮತ್ತು ಪುತ್ಥಳಿಗಳನ್ನು ಹಲವೆಡೆ ಸ್ಥಾಪಿಸುವುದನ್ನು ನೋಡಿದ್ದೇವೆ. ಇದಕ್ಕಾಗಿ ಹಲವಾರು ಹೋರಾಟಗಳು ಮತ್ತು ಬಡಿದಾಟಗಳು ನಡೆಯುವುದನ್ನು ಸಹ ಕಂಡಿದ್ದೇವೆ.

ಆದರೆ ಇಲ್ಲೊಬ್ಬ ಚಿಂದಿ ಆಯುವ ವ್ಯಕ್ತಿ ಇದ್ಯಾವುದರ ಗೋಜಿಗೆ ಹೋಗದೆಯೇ ತನ್ನದೇ ಜಮೀನೊಂದನ್ನು ಖರೀದಿಸಿ ಅದರಲ್ಲಿ ತನ್ನ ಪುತ್ಥಳಿಯನ್ನು ಪ್ರತಿಷ್ಠಾಪಿಸಿರುವ ಸ್ವಾರಸ್ಯಕರ ಘಟನೆ ತಮಿಳುನಾಡಿನ ಸೇಲಂನಲ್ಲಿ ನಡೆದಿದೆ. ಇದನ್ನ ಕೇಳೋಕೆ ಅಚ್ಚರಿ ಎನಿಸಿದರೂ ಸತ್ಯ ಸಂಗತಿ.

60 ವರ್ಷದ ನಲ್ಲತಂಬಿ ಎಂಬ ಚಿಂದಿ ವ್ಯಾಪಾರಿ ಕಳೆದ ಭಾನುವಾರ ತನ್ನದೇ ಪ್ರತಿಮೆಯನ್ನ ತಾನು ಖರೀದಿಸಿದ ಜಮೀನಿನಲ್ಲಿ ಪ್ರತಿಷ್ಠಾಪಿಸಿದ್ದಾನೆ. ಅಂದ ಹಾಗೆ, ಚಿಂದಿ ಆಯುವ ಈ ವ್ಯಕ್ತಿಯ ಬಳಿ ಜಮೀನು ಖರೀದಿಸಲು ಇಷ್ಟೊಂದು ದುಡ್ಡು ಹೇಗೆ ಇರಲು ಸಾಧ್ಯ ಅಂತಾ ಅಂದುಕೊಳ್ಳಬೇಡಿ. ನಲ್ಲತಂಬಿ ಜಮೀನು ಕೊಂಡುಕೊಳ್ಳಲು ಸುಮಾರು 10 ಲಕ್ಷ ರೂಪಾಯಿ ಖರ್ಚು ಮಾಡಿದ್ದಾನೆ. ಇನ್ನು ತನ್ನ ಪ್ರತಿಮೆ ನಿರ್ಮಾಣಕ್ಕಾಗಿ 1 ಲಕ್ಷ ರೂಪಾಯಿ ಸಹ ಕೊಟ್ಟಿದ್ದಾನೆ.

ಮೂಲತಃ ಕಟ್ಟಡ ಕೆಲಸ ಮಾಡುತ್ತಿದ್ದ ನಲ್ಲತಂಬಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ 20 ವರ್ಷಗಳ ಹಿಂದೆ ಮನೆತೊರೆದಿದ್ದನಂತೆ. ಇಷ್ಟು ವರ್ಷಗಳ ಕಾಲ ಚಿಂದಿ ಆಯುತ್ತಾ ಬದುಕು ಸಾಗಿಸಿದ್ದ. ಆದರೆ, ಈಗ ಜಗತ್ತಿನಲ್ಲಿ ತನ್ನದೇ ಆದ ಒಂದು ನೆನಪು ಉಳಿಸಲು ತನ್ನ ಪ್ರತಿಮೆಯನ್ನು ಸ್ಥಾಪಿಸಿದ್ದಾನೆ.

ರೀಲ್ಸ್ ಮಾಡುತ್ತಿದ್ದ ಯುವತಿಗೆ ಮಾಡೆಲಿಂಗ್​ನಲ್ಲಿ ಆಸಕ್ತಿಯಿತ್ತು: ಸಂಬಂಧಿ
ರೀಲ್ಸ್ ಮಾಡುತ್ತಿದ್ದ ಯುವತಿಗೆ ಮಾಡೆಲಿಂಗ್​ನಲ್ಲಿ ಆಸಕ್ತಿಯಿತ್ತು: ಸಂಬಂಧಿ
ನನ್ನನ್ನು ರಾಜನಾಗಿ ಮೆರೆಸಿದ್ದು ಹಂಸಲೇಖ: ರವಿಚಂದ್ರನ್
ನನ್ನನ್ನು ರಾಜನಾಗಿ ಮೆರೆಸಿದ್ದು ಹಂಸಲೇಖ: ರವಿಚಂದ್ರನ್
ಜಮೀರ್ ಅಹ್ಮದ್ ಕರೆದರೆ ಹೋಗಿ ಮಾತಾಡುತ್ತೇನೆ: ಬಿಆರ್ ಪಾಟೀಲ್
ಜಮೀರ್ ಅಹ್ಮದ್ ಕರೆದರೆ ಹೋಗಿ ಮಾತಾಡುತ್ತೇನೆ: ಬಿಆರ್ ಪಾಟೀಲ್
ಪಕ್ಷದ ಸಾರಥ್ಯ ನನ್ನ ಕೈಗೆ ಕೊಟ್ಟರೆ 150 ಸೀಟು ಗೆಲ್ಲುತ್ತೇನೆ: ಯತ್ನಾಳ್
ಪಕ್ಷದ ಸಾರಥ್ಯ ನನ್ನ ಕೈಗೆ ಕೊಟ್ಟರೆ 150 ಸೀಟು ಗೆಲ್ಲುತ್ತೇನೆ: ಯತ್ನಾಳ್
ರೈಲಿನಲ್ಲಿ ಅಂಗಿ, ಪ್ಯಾಂಟ್ ಬಿಚ್ಚಿ ನಿಂತ ಪ್ರಯಾಣಿಕ: ಮುಂದೇನಾಯ್ತು?
ರೈಲಿನಲ್ಲಿ ಅಂಗಿ, ಪ್ಯಾಂಟ್ ಬಿಚ್ಚಿ ನಿಂತ ಪ್ರಯಾಣಿಕ: ಮುಂದೇನಾಯ್ತು?
ದೆಹಲಿ: ಸಿದ್ದರಾಮಯ್ಯ ವರ್ತನೆ ಒತ್ತಡದಲ್ಲಿರುವುದನ್ನು ಸ್ಪಷ್ಟಪಡಿಸುತ್ತದೆ
ದೆಹಲಿ: ಸಿದ್ದರಾಮಯ್ಯ ವರ್ತನೆ ಒತ್ತಡದಲ್ಲಿರುವುದನ್ನು ಸ್ಪಷ್ಟಪಡಿಸುತ್ತದೆ
ಮುತ್ತೊಂದ ಕೊಡವೆ ಹತ್ತಿರ..ಹತ್ತಿರ.. ಬಾ: ವ್ಯಕ್ತಿಗೆ ಕಿಸ್ ಕೊಟ್ಟ ಜಮೀರ್!
ಮುತ್ತೊಂದ ಕೊಡವೆ ಹತ್ತಿರ..ಹತ್ತಿರ.. ಬಾ: ವ್ಯಕ್ತಿಗೆ ಕಿಸ್ ಕೊಟ್ಟ ಜಮೀರ್!
ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಚಿನ್ನ, ಬೆಳ್ಳಿ ಪದಕ ಗೆದ್ದ ಮೈಸೂರಿನ ಬಾಲಕಿ
ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಚಿನ್ನ, ಬೆಳ್ಳಿ ಪದಕ ಗೆದ್ದ ಮೈಸೂರಿನ ಬಾಲಕಿ
ಮಿನಿಸ್ಟರ್ ಪಿಎ ಸರ್ಫ್ರಾಜ್​ರನ್ನು ರೂಪೇಶ್ ಬ್ಲ್ಯಾಕ್​ಮೇಲ್ ಮಾಡಿರುವ ಆರೋಪ
ಮಿನಿಸ್ಟರ್ ಪಿಎ ಸರ್ಫ್ರಾಜ್​ರನ್ನು ರೂಪೇಶ್ ಬ್ಲ್ಯಾಕ್​ಮೇಲ್ ಮಾಡಿರುವ ಆರೋಪ
ಯಾವ ಇಲಾಖೆ ಮೇಲೂ ಸರ್ಕಾರಕ್ಕೆ ನಿಯಂತ್ರಣವಿಲ್ಲ, ಅದೇ ನೋವು: ರಾಜು ಕಾಗೆ
ಯಾವ ಇಲಾಖೆ ಮೇಲೂ ಸರ್ಕಾರಕ್ಕೆ ನಿಯಂತ್ರಣವಿಲ್ಲ, ಅದೇ ನೋವು: ರಾಜು ಕಾಗೆ