AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬದುಕೆಲ್ಲ ಚಿಂದಿ ಆಯುತ್ತಾ.. ಕೊನೆಗೆ ತನ್ನದೇ ಪುತ್ಥಳಿ ನಿರ್ಮಿಸಿಕೊಂಡ ಆ ವ್ಯಕ್ತಿ! ಎಲ್ಲಿ?

ಚೆನ್ನೈ: ದೇಶದ ಗಣ್ಯರು ಹಾಗೂ ಮಹಾನ್​ ವ್ಯಕ್ತಿಗಳ ಪ್ರತಿಮೆ ಮತ್ತು ಪುತ್ಥಳಿಗಳನ್ನು ಹಲವೆಡೆ ಸ್ಥಾಪಿಸುವುದನ್ನು ನೋಡಿದ್ದೇವೆ. ಇದಕ್ಕಾಗಿ ಹಲವಾರು ಹೋರಾಟಗಳು ಮತ್ತು ಬಡಿದಾಟಗಳು ನಡೆಯುವುದನ್ನು ಸಹ ಕಂಡಿದ್ದೇವೆ. ಆದರೆ ಇಲ್ಲೊಬ್ಬ ಚಿಂದಿ ಆಯುವ ವ್ಯಕ್ತಿ ಇದ್ಯಾವುದರ ಗೋಜಿಗೆ ಹೋಗದೆಯೇ ತನ್ನದೇ ಜಮೀನೊಂದನ್ನು ಖರೀದಿಸಿ ಅದರಲ್ಲಿ ತನ್ನ ಪುತ್ಥಳಿಯನ್ನು ಪ್ರತಿಷ್ಠಾಪಿಸಿರುವ ಸ್ವಾರಸ್ಯಕರ ಘಟನೆ ತಮಿಳುನಾಡಿನ ಸೇಲಂನಲ್ಲಿ ನಡೆದಿದೆ. ಇದನ್ನ ಕೇಳೋಕೆ ಅಚ್ಚರಿ ಎನಿಸಿದರೂ ಸತ್ಯ ಸಂಗತಿ. 60 ವರ್ಷದ ನಲ್ಲತಂಬಿ ಎಂಬ ಚಿಂದಿ ವ್ಯಾಪಾರಿ ಕಳೆದ ಭಾನುವಾರ ತನ್ನದೇ […]

ಬದುಕೆಲ್ಲ ಚಿಂದಿ ಆಯುತ್ತಾ.. ಕೊನೆಗೆ ತನ್ನದೇ ಪುತ್ಥಳಿ ನಿರ್ಮಿಸಿಕೊಂಡ ಆ ವ್ಯಕ್ತಿ! ಎಲ್ಲಿ?
KUSHAL V
| Edited By: |

Updated on: Sep 22, 2020 | 2:39 PM

Share

ಚೆನ್ನೈ: ದೇಶದ ಗಣ್ಯರು ಹಾಗೂ ಮಹಾನ್​ ವ್ಯಕ್ತಿಗಳ ಪ್ರತಿಮೆ ಮತ್ತು ಪುತ್ಥಳಿಗಳನ್ನು ಹಲವೆಡೆ ಸ್ಥಾಪಿಸುವುದನ್ನು ನೋಡಿದ್ದೇವೆ. ಇದಕ್ಕಾಗಿ ಹಲವಾರು ಹೋರಾಟಗಳು ಮತ್ತು ಬಡಿದಾಟಗಳು ನಡೆಯುವುದನ್ನು ಸಹ ಕಂಡಿದ್ದೇವೆ.

ಆದರೆ ಇಲ್ಲೊಬ್ಬ ಚಿಂದಿ ಆಯುವ ವ್ಯಕ್ತಿ ಇದ್ಯಾವುದರ ಗೋಜಿಗೆ ಹೋಗದೆಯೇ ತನ್ನದೇ ಜಮೀನೊಂದನ್ನು ಖರೀದಿಸಿ ಅದರಲ್ಲಿ ತನ್ನ ಪುತ್ಥಳಿಯನ್ನು ಪ್ರತಿಷ್ಠಾಪಿಸಿರುವ ಸ್ವಾರಸ್ಯಕರ ಘಟನೆ ತಮಿಳುನಾಡಿನ ಸೇಲಂನಲ್ಲಿ ನಡೆದಿದೆ. ಇದನ್ನ ಕೇಳೋಕೆ ಅಚ್ಚರಿ ಎನಿಸಿದರೂ ಸತ್ಯ ಸಂಗತಿ.

60 ವರ್ಷದ ನಲ್ಲತಂಬಿ ಎಂಬ ಚಿಂದಿ ವ್ಯಾಪಾರಿ ಕಳೆದ ಭಾನುವಾರ ತನ್ನದೇ ಪ್ರತಿಮೆಯನ್ನ ತಾನು ಖರೀದಿಸಿದ ಜಮೀನಿನಲ್ಲಿ ಪ್ರತಿಷ್ಠಾಪಿಸಿದ್ದಾನೆ. ಅಂದ ಹಾಗೆ, ಚಿಂದಿ ಆಯುವ ಈ ವ್ಯಕ್ತಿಯ ಬಳಿ ಜಮೀನು ಖರೀದಿಸಲು ಇಷ್ಟೊಂದು ದುಡ್ಡು ಹೇಗೆ ಇರಲು ಸಾಧ್ಯ ಅಂತಾ ಅಂದುಕೊಳ್ಳಬೇಡಿ. ನಲ್ಲತಂಬಿ ಜಮೀನು ಕೊಂಡುಕೊಳ್ಳಲು ಸುಮಾರು 10 ಲಕ್ಷ ರೂಪಾಯಿ ಖರ್ಚು ಮಾಡಿದ್ದಾನೆ. ಇನ್ನು ತನ್ನ ಪ್ರತಿಮೆ ನಿರ್ಮಾಣಕ್ಕಾಗಿ 1 ಲಕ್ಷ ರೂಪಾಯಿ ಸಹ ಕೊಟ್ಟಿದ್ದಾನೆ.

ಮೂಲತಃ ಕಟ್ಟಡ ಕೆಲಸ ಮಾಡುತ್ತಿದ್ದ ನಲ್ಲತಂಬಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ 20 ವರ್ಷಗಳ ಹಿಂದೆ ಮನೆತೊರೆದಿದ್ದನಂತೆ. ಇಷ್ಟು ವರ್ಷಗಳ ಕಾಲ ಚಿಂದಿ ಆಯುತ್ತಾ ಬದುಕು ಸಾಗಿಸಿದ್ದ. ಆದರೆ, ಈಗ ಜಗತ್ತಿನಲ್ಲಿ ತನ್ನದೇ ಆದ ಒಂದು ನೆನಪು ಉಳಿಸಲು ತನ್ನ ಪ್ರತಿಮೆಯನ್ನು ಸ್ಥಾಪಿಸಿದ್ದಾನೆ.

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್