ಕೊರೊನಾ ಕಾಲದಲ್ಲಿ ನಡುರಾತ್ರಿ ಕೋರ್ಟ್ ಬಾಗಿಲು ತೆರೆಸಿ, ನಡೆಯಿತು ವಿಶೇಷ ಮದುವೆ!

ಚಂಡೀಗಢ: ಕೊರೊನಾ ಸಮಯದಲ್ಲಿ ದೇಶಾದ್ಯಂತ ಲಾಕ್​ಡೌನ್ ಆಗಿ ಎಲ್ಲರು ಮನೆಯಲ್ಲೇ ಇರುವಂತಾಗಿದೆ. ಆದ್ರೆ ಹರಿಯಾಣದ ಜಿಲ್ಲಾಧಿಕಾರಿ ಕಚೇರಿ ಮಾತ್ರ ಏ.13ರ ರಾತ್ರಿ ವಿಶೇಷ ವಿವಾಹಕ್ಕೆ ಸಾಕ್ಷಿಯಾಗಿದೆ. ಭಾಷಾ ತಜ್ಞರಾಗಿ ಕೆಲಸ ಮಾಡುತ್ತಿರುವ ನಿರಂಜನ್ ಕಶ್ಯಪ್ ಹಾಗೂ ಡಾನಾ ಜೋಡಿ ಲಾಕ್​ಡೌನ್​ ನಡುವೆಯೂ ವಿಶೇಷ ವಿವಾಹ ಕಾಯ್ದೆಯಡಿ ವಿವಾಹವಾಗಿದ್ದಾರೆ. ಈ ವಿಶೇಷ ಜೋಡಿಯು ಭಾಷಾ ಕಲಿಕೆ ಆಪ್ ಮುಖಾಂತರ 2017ರಲ್ಲಿ ಭೇಟಿಯಾಗಿದ್ದರು. ನಂತರ ಮುಂದಿನ ವರ್ಷವೇ ನಿಶ್ಚಿತಾರ್ಥ ಸಹ ನೆರವೇರಿತ್ತು. ನಂತರ ಮೆಕ್ಸಿಕೋಗೆ ವಾಪಸ್ ಹೋಗಿ ಎರಡು ವರ್ಷಗಳ […]

ಕೊರೊನಾ ಕಾಲದಲ್ಲಿ ನಡುರಾತ್ರಿ ಕೋರ್ಟ್ ಬಾಗಿಲು ತೆರೆಸಿ, ನಡೆಯಿತು ವಿಶೇಷ ಮದುವೆ!
ಸಾಧು ಶ್ರೀನಾಥ್​

Updated on: Apr 15, 2020 | 6:34 PM

ಚಂಡೀಗಢ: ಕೊರೊನಾ ಸಮಯದಲ್ಲಿ ದೇಶಾದ್ಯಂತ ಲಾಕ್​ಡೌನ್ ಆಗಿ ಎಲ್ಲರು ಮನೆಯಲ್ಲೇ ಇರುವಂತಾಗಿದೆ. ಆದ್ರೆ ಹರಿಯಾಣದ ಜಿಲ್ಲಾಧಿಕಾರಿ ಕಚೇರಿ ಮಾತ್ರ ಏ.13ರ ರಾತ್ರಿ ವಿಶೇಷ ವಿವಾಹಕ್ಕೆ ಸಾಕ್ಷಿಯಾಗಿದೆ. ಭಾಷಾ ತಜ್ಞರಾಗಿ ಕೆಲಸ ಮಾಡುತ್ತಿರುವ ನಿರಂಜನ್ ಕಶ್ಯಪ್ ಹಾಗೂ ಡಾನಾ ಜೋಡಿ ಲಾಕ್​ಡೌನ್​ ನಡುವೆಯೂ ವಿಶೇಷ ವಿವಾಹ ಕಾಯ್ದೆಯಡಿ ವಿವಾಹವಾಗಿದ್ದಾರೆ.

ಈ ವಿಶೇಷ ಜೋಡಿಯು ಭಾಷಾ ಕಲಿಕೆ ಆಪ್ ಮುಖಾಂತರ 2017ರಲ್ಲಿ ಭೇಟಿಯಾಗಿದ್ದರು. ನಂತರ ಮುಂದಿನ ವರ್ಷವೇ ನಿಶ್ಚಿತಾರ್ಥ ಸಹ ನೆರವೇರಿತ್ತು. ನಂತರ ಮೆಕ್ಸಿಕೋಗೆ ವಾಪಸ್ ಹೋಗಿ ಎರಡು ವರ್ಷಗಳ ಕಾಲ ಡಾನಾ ಅಲ್ಲೇ ಇದ್ದರು.

ನಿರಂಜನ್ ಹುಟ್ಟುಹಬ್ಬ ನೆಪದಲ್ಲಿ ಡಾನಾ ಮತ್ತೊಮ್ಮೆ ಭಾರತಕ್ಕೆ ಬಂದುಹೋಗಿದ್ದರು. ಅದಾದ ಮೇಲೆ ಫೆ.11ರಂದು ಮದುವೆಗಾಗಿ ಡಾನಾ ಮತ್ತು ಆಕೆಯ ತಾಯಿ ಮೆಕ್ಸಿಕೋದಿಂದ ಭಾರತಕ್ಕೆ ಬಂದರು. ಫೆ.17ರಂದು ವಿಶೇಷ ವಿವಾಹ ಕಾಯ್ದೆಯಡಿ ಮದುವೆಯಾಗಲು ರೋಹ್ಟಕ್ ನಿವಾಸಿ ನಿರಂಜನ್ ಹಾಗೂ ಮೆಕ್ಸಿಕೋ ದೇಶದ ಡಾನಾ ಜೋಹೆರಿ ಆಲಿವೆರೋಸ್ ಕ್ರೂಸ್ ಅರ್ಜಿ ಸಲ್ಲಿಸಿದ್ದರು.

ಅದರಂತೆ ಮಾರ್ಚ್​ 18ಕ್ಕೆ ನೋಟಿಸ್ ಅವಧಿ ಮುಕ್ತಾಯವಾಗಿತ್ತು. ಆದ್ರೆ ಮಾ.19ರಿಂದ ಲಾಕ್​ಡೌನ್ ಶುರುವಾದ್ದರಿಂದ ಮದುವೆಯಾಗಲು ಸಾಧ್ಯವಾಗಲಿಲ್ಲ. ನಂತರ ವಿವಾಹ ಸಂಬಂಧ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿ, ವಿವಾಹ ಕೈಂಕರ್ಯಕ್ಕೆ ನೆರವು ಕೋರಿದರು.

ಈಗ ಲಾಕ್​ಡೌನ್ ಸಂದರ್ಭದಲ್ಲಿ ವಿವಾಹವಾಗಲು ಸಾಧ್ಯವಾಗಲಿಲ್ಲ. ಕೊನೆಗೂ… ಏಪ್ರಿಲ್ 13ರ ರಾತ್ರಿ 8ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲೇ ವಿವಾಹ ನೆರವೇರಿತು ಎಂಬುದರ ಮೂಲಕ ನಿರಂಜನ್- ಡಾನಾ ಜೋಡಿ ಪ್ರೇಮ ಶುಭರಸ್ತು ಆಗಿದೆ!

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us