ಹುಡುಗಿ ಸುಂದರಿಯಾಗಿದ್ದರೆ ರಾತ್ರೋರಾತ್ರಿ ಕಿಡ್ನಾಪ್ ಮಾಡುತ್ತಾರೆ; ಸಂದೇಶಖಾಲಿಯ ಭೀಕರ ಅನುಭವ ಬಿಚ್ಚಿಟ್ಟ ಮಹಿಳೆ

ಪಶ್ಚಿಮ ಬಂಗಾಳದ ಸಂದೇಶಖಾಲಿಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆದಿದೆ ಎಂದು ಅಲ್ಲಿನ ಮಹಿಳೆಯರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಮನೆಯಲ್ಲಿ ಹುಡುಗಿ ಚೆನ್ನಾಗಿದ್ದರೆ ಆಕೆಯನ್ನು ಎತ್ತಿಕೊಂಡು ಹೋಗುತ್ತಾರೆ ಎಂದು ಆರತಿಪಾತ್ರಾ ಎಂಬ ಮಹಿಳೆ ಮಾಧ್ಯಮದವರ ಮುಂದೆ ಕಣ್ಣೀರಿಟ್ಟಿದ್ದಾರೆ. ಇತ್ತ ಬಿಜೆಪಿ ಆಡಳಿತಾರೂಢ ಟಿಎಂಸಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು ಮಹಿಳೆಯೇ ಮುಖ್ಯಮಂತ್ರಿ ಆಗಿರುವ ರಾಜ್ಯದಲ್ಲಿ ಮಹಿಳೆಯರು ಸುರಕ್ಷಿತರಾಗಿಲ್ಲ ಎಂದು ಆರೋಪಿಸಿದೆ.

ಹುಡುಗಿ ಸುಂದರಿಯಾಗಿದ್ದರೆ ರಾತ್ರೋರಾತ್ರಿ ಕಿಡ್ನಾಪ್ ಮಾಡುತ್ತಾರೆ; ಸಂದೇಶಖಾಲಿಯ ಭೀಕರ ಅನುಭವ ಬಿಚ್ಚಿಟ್ಟ ಮಹಿಳೆ
ಆರತಿ ಪಾತ್ರಾImage Credit source: TV9 Bangla
Follow us
|

Updated on:Feb 19, 2024 | 2:10 PM

ಸಂದೇಶಖಾಲಿ ಫೆಬ್ರುವರಿ 19: ಸಂದೇಶಖಾಲಿಯಲ್ಲಿನ(Sandeshkhali) ಪರಿಸ್ಥಿತಿ ಇನ್ನೂ ತಣ್ಣಗಾಗಿಲ್ಲ. ಪ್ರತಿಪಕ್ಷಗಳು ಸಂದೇಶಖಾಲಿ ವಿಷಯವನ್ನು ಉಲ್ಲೇಖಿಸಿ ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ನಡೆಸುತ್ತಿವೆ. ಇಲ್ಲಿ ಹಳ್ಳಿಯ ಮಹಿಳೆಯರು ರಸ್ತೆಗಿಳಿದಿದ್ದಾರೆ. ಇವರಿಗೆ ಸಾಕಷ್ಟು ದೂರುಗಳಿವೆ. ಈ ಬಾರಿ ಸಂದೇಶಖಾಲಿಯಲ್ಲಿ ಮತದಾನವಿಲ್ಲ ಎಂದು ಒಬ್ಬರು ಮಹಿಳೆ ಹೇಳಿದ್ದಾರೆ. ಸಂದೇಶಖಾಲಿ ಮತದಾರರಲ್ಲಿ ಹೆಚ್ಚಿನವರು 13 ವರ್ಷಗಳಿಂದ ಮತ ಚಲಾಯಿಸಲಿಲ್ಲ. ಆರತಿ ಪಾತ್ರಾ ಎಂಬ ಸ್ಥಳೀಯ ಮಹಿಳೆ ಕಳೆದ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿಗೆ ಅಭ್ಯರ್ಥಿಯಾಗಿ ಸ್ಪರ್ಧಿಸಲು ಯೋಚಿಸಿದ್ದರು.

ಟಿವಿ 9 ಬೆಂಗಾಲ್‌ ಜತೆ ಮಾತಾಡಿ ತಮಗಾದ ಭೀಕರ ಅನುಭವವನ್ನು ಅವರು ಈ ರೀತಿ ವಿವರಿಸಿದ್ದಾರೆ. ಬಿಜೆಪಿ (BJP) ಪರ ನಿಲ್ಲಬೇಕಿದ್ದ ಆರತಿ ಪಾತ್ರಾ ನಾಮಪತ್ರ ತೆಗೆದುಕೊಳ್ಳಲು ಹೋದಾಗ ಕಪಾಳಕ್ಕೆ ‘ಅವರು’ ಹೊಡೆದಿದ್ದಾರೆ. ಆರತಿ ಅವರು ಶಿಬು ಹಜ್ರಾ ಮತ್ತು ಶಹಜಹಾನ್ ಶೇಖ್‌ಗಳ (Shahjahan sheikh) ವಿರುದ್ಧ ಆರೋಪಗಳನ್ನು ಮಾಡಿದ್ದಾರೆ. ‘ಇಲ್ಲಿ ಬೆದರಿಕೆ ಹಾಕಿ ಮತದಾನ ಮಾಡಲಾಗುತ್ತದೆ. ನಾನು ಚುನಾವಣೆಯಲ್ಲಿ ನಿಲ್ಲಬೇಕಾದರೆ ಬೆದರಿಕೆಯೊಡ್ಡಿದರು. ಶಾಹಜಹಾನ್-ಶಿಬು ಹಾಜ್ರಾ-ಉತ್ತಮ್ ಸರ್ದಾರ್ ಇದರ ಹಿಂದೆ ಇರುವ ವ್ಯಕ್ತಿಗಳು. ನಾನು ಸುಮಾರು 13 ವರ್ಷಗಳಿಂದ ಮತದಾನ ಮಾಡಲು ಸಾಧ್ಯವಾಗಲಿಲ್ಲ.

ಈಗ ಅವರನ್ನು ಬಂಧಿಸಿರುವುದರಿಂದ ಇಡೀ ಗ್ರಾಮ ಸ್ವಲ್ಪ ಮಟ್ಟಿಗೆ ಶಾಂತಿಯುತವಾಗಿದೆ.“ನಾವು ಹೇಗೋ ಬದುಕಿದ್ದೇವೆ. ಚಿತ್ರಹಿಂಸೆ ಪ್ರತಿದಿನ ನಡೆಯುತ್ತದೆ. ನಾನು ಈಗ ಮಾತನಾಡುತ್ತಿದ್ದೇನೆ. ನಾನು ಕೂಡ ಮಹಿಳಾ ದೌರ್ಜನ್ಯದ ಬಗ್ಗೆ ದೂರು ನೀಡಿದ್ದೇನೆ ಎಂದು ಆರತಿ ದೇವಿ ಹೇಳಿದ್ದಾರೆ. ನನ್ನ ಹಿರಿಯ ಮಗಳು ಮತ್ತು ನನ್ನ ಹಿರಿಯ ಮಗ ಇಲ್ಲಿ ವಾಸಿಸುವುದಿಲ್ಲ. ಮಗಳು ಸುಂದರವಾಗಿ ಕಾಣುತ್ತಾಳೆ. ಚೆನ್ನಾಗಿದ್ದವರನ್ನು ಅವರು ರಾತ್ರೋರಾತ್ರಿ ಎತ್ತಿಕೊಂಡು ಹೋಗುತ್ತಾರೆ. ಹಾಗಾಗಿ ಆಕೆಯನ್ನು ಇಲ್ಲಿ ಇರಿಸಿಲ್ಲ ಎಂದು ಅವರು ಹೇಳಿದ್ದಾರೆ.

ಟಿಎಂಸಿ ವಿರುದ್ಧ ಬಿಜೆಪಿ ಆಕ್ರೋಶ

ಪಶ್ಚಿಮ ಬಂಗಾಳದ ಬಿಜೆಪಿ ಘಟಕವು ಸೋಮವಾರ ಸಂದೇಶಖಾಲಿ ವಿಷಯದ ಕುರಿತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅನ್ನು ತರಾಟೆಗೆ ತೆಗೆದುಕೊಂಡಿದ್ದು”ಟಿಎಂಸಿ ಗೂಂಡಾಗಳು” ಹಿಂದೂ ಮಹಿಳೆಯರನ್ನು ಬೇಟೆಯಾಡುತ್ತಿದ್ದಾರೆ ಮತ್ತು ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಸಂಸದೆ ಲಾಕೆಟ್ ಚಟರ್ಜಿ ಅವರು ಮಾಧ್ಯಮಗಳಿಗೆ ಸಂದರ್ಶನಗಳನ್ನು ನೀಡಿದ ನಂತರ ಸ್ಥಳೀಯ ಟಿಎಂಸಿ ನಾಯಕರಿಂದ ಲೈಂಗಿಕ ದೌರ್ಜನ್ಯದ ಆರೋಪ ಹೊತ್ತಿರುವ ಮಹಿಳೆಯರ ಮನೆಗಳನ್ನು ದರೋಡೆ ಮಾಡಲಾಗುತ್ತಿದೆ ಎಂದು ಹೇಳಿದರು.

ಮಮತಾ ಬ್ಯಾನರ್ಜಿ ಇದುವರೆಗೂ ಒಂದೇ ಒಂದು ಹೇಳಿಕೆ ನೀಡಿಲ್ಲ. ಶಹಜಾನ್ ಶೇಖ್ ಇನ್ನೂ ತಲೆಮರೆಸಿಕೊಂಡಿದ್ದಾನೆ. ಆತನನ್ನು ಪತ್ತೆ ಹಚ್ಚಲು ಪೊಲೀಸರಿಗೆ ಸಾಧ್ಯವಾಗುತ್ತಿಲ್ಲ. ಯಾವುದೇ ಎಫ್‌ಐಆರ್ ದಾಖಲಾಗಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಏಕೆ? ಏಕೆಂದರೆ ಪೊಲೀಸರು ಯಾವುದೇ ಪ್ರಕರಣ ದಾಖಲಿಸಿಲ್ಲ. ಪೊಲೀಸ್ ಆಡಳಿತವು ಟಿಎಂಸಿ ಕಚೇರಿಯಾಗಿ ಮಾರ್ಪಟ್ಟಿದೆ ಎಂದು ಚಟರ್ಜಿ ಆರೋಪಿಸಿದ್ದಾರೆ.

ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರು ಸಂದರ್ಶನಗಳನ್ನು ನೀಡಿದರು. ಅವರು ಮುಖ ಮುಚ್ಚಿಕೊಂಡಿದ್ದರು. ನಮ್ಮ ಮುಖ ತೋರಿಸಬೇಡಿ, ಇಲ್ಲದಿದ್ದರೆ ಮತ್ತೆ ದಾಳಿ ಮಾಡುತ್ತಾರೆ ಎಂದರು. ಜನರು ಪೊಲೀಸ್ ಸಮವಸ್ತ್ರದಲ್ಲಿ ಬಂದು ಅವರ ಮನೆಗಳನ್ನು ಲೂಟಿ ಮಾಡುತ್ತಿದ್ದಾರೆ ಎಂದು ಮಹಿಳೆಯರು ಆರೋಪಿಸಿದ್ದಾರೆ.

ಇದನ್ನೂ ಓದಿ:ಸಂದೇಶಖಾಲಿ ಪ್ರಕರಣ: ಅಧಿಕಾರಿಗಳ ವಿರುದ್ಧ ಸಂಸತ್ ಸಮಿತಿ ತನಿಖೆಗೆ ಸುಪ್ರೀಂಕೋರ್ಟ್ ತಡೆ 

ಪಶ್ಚಿಮ ಬಂಗಾಳದ ಮಹಿಳೆಯರು “ಅತ್ಯಂತ ಅಸುರಕ್ಷಿತ” ಎಂದು ಆರೋಪಿಸಿದ ಅವರು, “ಈ ಮಹಿಳೆಯರು 2011 ರಲ್ಲಿ ಮಮತಾ ಬ್ಯಾನರ್ಜಿಗೆ ಮತ ಹಾಕಿದ್ದಾರೆ. ಎಡ ಸರ್ಕಾರದ 34 ವರ್ಷಗಳ ಆಡಳಿತದಲ್ಲಿ ಅವರು ಅಸುರಕ್ಷಿತರಾಗಿದ್ದರು.ಮತ್ತೆ ಈಗ ಮಹಿಳೆ ಮುಖ್ಯಮಂತ್ರಿಯಾಗಿರುವ ರಾಜ್ಯದಲ್ಲಿ ಮಹಿಳೆಯರು ಅತ್ಯಂತ ಅಸುರಕ್ಷಿತರಾಗಿದ್ದಾರೆ.  ಅವರಿಗೆ ಶೇ.30ರಷ್ಟು ಮತಗಳು ಬೇಕು, ಹಿಂದೂ ಮಹಿಳೆಯರನ್ನು ಬೇಟೆಯಾಡಿ ಹಲ್ಲೆ ಮಾಡುತ್ತಿದ್ದಾರೆ .ಪಾಕಿಸ್ತಾನದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ಕೇಳಿದ್ದೇವೆ.ಪಶ್ಚಿಮ ಬಂಗಾಳದಲ್ಲೂ ಅದೇ ನಡೆಯುತ್ತಿದ್ದು ಮಮತಾ ಬ್ಯಾನರ್ಜಿ ಮೌನವಾಗಿದ್ದಾರೆ ಎಂದು ಚಟರ್ಜಿ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:08 pm, Mon, 19 February 24

ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
VIDEO: ಮೈದಾನದಲ್ಲೇ ಹೊಡೆದಾಡಿಕೊಂಡ ಬ್ಯಾಟರ್-ಬೌಲರ್..!
VIDEO: ಮೈದಾನದಲ್ಲೇ ಹೊಡೆದಾಡಿಕೊಂಡ ಬ್ಯಾಟರ್-ಬೌಲರ್..!