AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಡಿಯೋ: ಆ ಗ್ರಾಮದಲ್ಲಿ ಕತ್ತಲಾಗುತ್ತಿದ್ದಂತೆ ಚಲಿಸುತ್ತವೆ ಕಪ್ಪು ಆಕಾರಗಳು.. ಅರಚುವಿಕೆ, ವಿಚಿತ್ರ ಕೇಕೆಗಳ ಆರ್ಭಟ

ಅದೊಂದು ದಿನ ಅಮಾವಾಸ್ಯೆ ಸಮಯದಲ್ಲಿ ಮಧ್ಯರಾತ್ರಿ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ನಗ್ನವಾಗಿ, ಉದ್ದದ ಕೂದಲು ಇಳಿಯಬಿಟ್ಟು, ದೊಡ್ಡ ದೊಡ್ಡ ಪಾದಗಳೊಂದಿಗೆ ಕಪ್ಪನೆ ಮಿರಿಮಿರಿ ಮಿಂಚುತ್ತಾ ಮರದಿಂದ ಹಾರಿ ನಾಪತ್ತೆಯಾಯಿತು ಎಂದು ಅದನ್ನು ಕಂಡ ಕೆಲವು ಮಹಿಳೆಯರು ಹೇಳುತ್ತಾರೆ.

TV9 Web
| Edited By: ಸಾಧು ಶ್ರೀನಾಥ್​|

Updated on: Feb 12, 2024 | 2:09 PM

Share

ಅದು ದೆವ್ವವೇ? ಅಥವಾ ಅಗೋಚರ ಶಕ್ತಿಯಾ..? ಕಾಕಿನಾಡ ಜಿಲ್ಲೆಯ ಪೆದ್ದಾಪುರಂ ಮಂಡಲದ ಕಾಂಡ್ರಕೋಟ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆ ಅದೃಶ್ಯ ಶಕ್ತಿಯ ಅಟ್ಟಹಾಸದಿಂದ ಸ್ಥಳೀಯರು ತೀವ್ರ ಭಯದಲ್ಲಿದ್ದಾರೆ. ಕತ್ತಲಾದರೆ ಜನ ಮನೆಯಿಂದ ಹೊರಗೆ ಬರಲು ಹೆದರುತ್ತಾರೆ. ಮತ್ತು ಹಳ್ಳಿಯಲ್ಲಿ ನಿಜವಾಗಿಯೂ ಅದೃಶ್ಯ ಶಕ್ತಿಯು ತಿರುಗುತ್ತಿದೆಯೇ? ಛೋಲ್ಲಂಗಿ ಅಮಾವಾಸ್ಯ ದಿನ ದೆವ್ವಗಳು ಇಳಿದುಬಂದಿವೆಯಾ? ಈಗ ವಾಸ್ತವವಾದ ಕಥೆಯತ್ತ ಹೊರಳೋಣ.

ಕೆಲವು ದಿನಗಳ ಹಿಂದೆ ಕಾಕಿನಾಡ ಜಿಲ್ಲೆಯ ಪೆದ್ದಾಪುರಂ ಮಂಡಲದ ಕಂಡ್ರಕೋಟ್ ಗ್ರಾಮದಲ್ಲಿ ಹಳದಿ, ಕುಂಬಳಕಾಯಿ, ನಿಂಬೆ, ಮೆಣಸಿನಕಾಯಿಗಳಿಂದ ಪೂಜಿಸುವ ಬಗ್ಗೆ ಪ್ರಚಾರವಾಗಿತ್ತು. ಅದರ ನಂತರ, ಗ್ರಾಮದ ಮನೆಯೊಂದರ ಬಳಿ ಅಲೆಮಾರಿ ಹೊರ ಊರಿನವರು ಮೇಕೆಯನ್ನು ಕೊಂದು ತಿಂದಿದ್ದರು. ಮತ್ತು ಅವರು ಊರಿನಲ್ಲಿಯೇ ಠಿಕಾಣಿ ಹೂಡಿದ್ದರು. ಈ ಮಧ್ಯೆ ಅಮಾವಾಸ್ಯೆಯ ದಿನ ನೂಕಾಲಮ್ಮ ತಾಯಿಯ ದೇವಸ್ಥಾನದಲ್ಲಿ ಅಷ್ಟಭೈರವಿ ಮಹಾಶಕ್ತಿ ಹೋಮವನ್ನು ಗ್ರಾಮಸ್ಥರು ಮಾಡತೊಡಗಿದರು.

ಆದರೆ ಅದೊಂದು ದಿನ ಅಮಾವಾಸ್ಯೆ ಸಮಯದಲ್ಲಿ ಮಧ್ಯರಾತ್ರಿ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ನಗ್ನವಾಗಿ, ಉದ್ದದ ಕೂದಲು ಇಳಿಯಬಿಟ್ಟು, ದೊಡ್ಡ ದೊಡ್ಡ ಪಾದಗಳೊಂದಿಗೆ ಕಪ್ಪನೆ ಮಿರಿಮಿರಿ ಮಿಂಚುತ್ತಾ ಮರದಿಂದ ಹಾರಿ ನಾಪತ್ತೆಯಾಯಿತು ಎಂದು ಅದನ್ನು ಕಂಡ ಕೆಲವು ಮಹಿಳೆಯರು ಹೇಳುತ್ತಾರೆ. ಅದಾದಮೇಲೆ ಗ್ರಾಮದಲ್ಲಿ ರಾತ್ರಿ ವೇಳೆ ಕತ್ತಲು ಆವರಿಸುತ್ತಿದ್ದಂತೆ ಹಳ್ಳಿಯ ಬೀದಿ ಬೀದಿಗಳಲ್ಲಿ ಯುವಕರು ಬಾರು ಕೋಲು ಹಿಡಿದುಕೊಂಡು ಓಡಾಡುವುದು ಕಾಣುತ್ತಿದೆ. ಅನೇಕ ಮುದುಕರು ಮತ್ತು ಮಹಿಳೆಯರು ಆ ಭಾಯನಕ ಆಕೃತಿಯನ್ನು ನೋಡಿ ಗಾಬರಿಗೊಂಡಿರುವುದಾಗಿ ಹೇಳಿದ್ದಾರೆ.

ಕೆಲ ದಿನಗಳ ಹಿಂದೆ ಗ್ರಾಮದ ಹೊರವಲಯದಲ್ಲಿರುವ ತೋಟದಲ್ಲಿ ಇಬ್ಬರು ಬೆತ್ತಲೆಯಾಗಿ ಓಡುತ್ತಿರುವ ವಿಡಿಯೋವೊಂದು ಗ್ರಾಮದಲ್ಲಿ ವೈರಲ್ ಆಗಿದೆ. ಹಾಗಾದರೆ ಇದರ ಅಸಲಿ ಸತ್ಯ ತಿಳಿಯಬೇಕಾದರೆ ಇನ್ನಷ್ಟು ದಿನ ಕಾಯಬೇಕು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Web contact
Web contact

TV9 Kannada

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!