Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಯ್ಯಪ್ಪ ಮಾಲೆ ಧರಿಸಿ ಬಂದ ವಿದ್ಯಾರ್ಥಿಗೆ ನೋ ಎಂಟ್ರಿ ಎಂದ ಪ್ರಿನ್ಸಿಪಾಲ್​​, ಕೊನೆಗೇನಾಯ್ತು?

ಪೋಷಕರು ಶಾಲೆಗೆ ಆಗಮಿಸಿ ಸ್ವಾಮಿ ಮಾಲೆ ಧರಿಸಿದ್ದಕ್ಕಾಗಿ ತಮ್ಮ ಮಗನ ಮೇಲೆ ಅನುಚಿತ ಕಾಮೆಂಟ್‌ಗಳ ಮಾಡಿದ್ದಕ್ಕೆ ಮುಖ್ಯೋಪಾಧ್ಯಾಯರಾದ ಶ್ರೀ ಮನ್ನಾರಾಯಣ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಮೇಲಾಗಿ ಈ ವಿಷಯ ತಿಳಿದ ಇತರೆ ಅಯ್ಯಪ್ಪ ಸ್ವಾಮಿ ಭಕ್ತರೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಗೆ ಆಗಮಿಸಿದ್ದರಿಂದ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು.

ಅಯ್ಯಪ್ಪ ಮಾಲೆ ಧರಿಸಿ ಬಂದ ವಿದ್ಯಾರ್ಥಿಗೆ ನೋ ಎಂಟ್ರಿ ಎಂದ ಪ್ರಿನ್ಸಿಪಾಲ್​​, ಕೊನೆಗೇನಾಯ್ತು?
ಪ್ರಾತಿನಿಧಿಕ ಚಿತ್ರ
Follow us
ಸಾಧು ಶ್ರೀನಾಥ್​
|

Updated on: Nov 02, 2023 | 10:23 AM

ವಿದ್ಯಾರ್ಥಿಯೊಬ್ಬರ ಬಗ್ಗೆ ಶಾಲೆಯ ಪ್ರಾಂಶುಪಾಲರು ಮಾಡಿದ ಅನುಚಿತ ವ್ಯಾಖ್ಯಾನಗಳಿಂದಾಗಿ ಅದು ವಿವಾದಕ್ಕೀಡಾಗಿದ್ದು, ವಿದ್ಯಾರ್ಥಿ ಸಮೂಹ ಆಕ್ರೋಶ ವ್ಯಕ್ತಪಡಿಸಿದೆ. ಇದರಿಂದ ಶಾಲೆ ಆವರಣದಲ್ಲಿ ಇತರೆ ಅಯ್ಯಪ್ಪ ಭಕ್ತರು ಜಮಾಯಿಸಿದ್ದರಿಂದ ಪರಿಸ್ಥಿತಿ ಇನ್ನಷ್ಟು ಉದ್ವಿಗ್ನಗೊಂಡಿತ್ತು. ಪೊಲೀಸರು ವಿದ್ಯಾರ್ಥಿಗಳ ಮನವೊಲಿಸಲು ಏನು ಹೇಳಿದರೂ ಅವರು ಕೇಳಲಿಲ್ಲ. ಕೊನೆಗೆ ಶಾಲೆಯ ಮುಖ್ಯೋಪಾಧ್ಯಾಯರು ವಿದ್ಯಾರ್ಥಿಗಳಲ್ಲಿ ಕ್ಷಮೆಯಾಚಿಸಿದರು. ಅದರೊಮದಿಗೆ ವಿವಾದ ಸದ್ಯಕ್ಕೆ ಪರಿಹಾರವಾದಂತಾಗಿದೆ. ಅಷ್ಟಕ್ಕೂ ಶಾಲೆಯ ಪ್ರಾಂಶುಪಾಲರು ವಿದ್ಯಾರ್ಥಿಯ ಬಗ್ಗೆ ವಿವಾದಾತ್ಮಕ ಕಾಮೆಂಟ್‌ಗಳನ್ನು ಏಕೆ ಮಾಡಿದರು? ಪ್ರಾಂಶುಪಾಲರಿಗೆ ಅಷ್ಟೊಂದು ಕೋಪ ಬರುವಂತೆ ಮಾಡಲು ಆ ವಿದ್ಯಾರ್ಥಿ ಮಾಡಿದ್ದೇನು? ಶಾಲಾ ಆವರಣದಲ್ಲಿ ಅಷ್ಟೊಂದು ಮಂದಿ ಬಂದು ಸೇರಲು ಕಾರಣವಾದರೂ ಏನು ಎಂಬುದನ್ನು ವಿವರವಾಗಿ ನೋಡಿದಾಗ…

ಪಶ್ಚಿಮ ಗೋದಾವರಿ ಜಿಲ್ಲೆಯ ನರಸಾಪುರಂ ಮಂಡಲದ ಪೂರ್ವ ತಾಳ್ಳು ಗ್ರಾಮದಲ್ಲಿ ಈಶ್ವರ್ ಆಂಗ್ಲ ಮಾಧ್ಯಮ ಕಾನ್ವೆಂಟ್‌ನಲ್ಲಿ ನಾಗ ಮನೋಹರ್ ಎಂಬ ವಿದ್ಯಾರ್ಥಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಮನೋಹರ್ ಇತ್ತೀಚೆಗೆ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿದ್ದ. ಅಯ್ಯಪ್ಪ ಸ್ವಾಮಿ ಉಡುಪು (Ayyappa Swamy Dress) ಧರಿಸಿದ್ದ ಕಾರಣಕ್ಕೆ ಶಾಲಾ ಸಮವಸ್ತ್ರ ಧರಿಸದೆ ಶಾಲೆಗೆ ತೆರಳಿದ್ದರು. ಇದರಿಂದ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಮನ್ನಾರಾಯಣ ಸಿಟ್ಟಿಗೆದ್ದಿದ್ದಾರೆ. ಸಮವಸ್ತ್ರವಿಲ್ಲದೆ ಅಯ್ಯಪ್ಪ ಉಡುಪು ಹಾಕಿಕೊಂಡು ಶಾಲೆಗೆ ಬಂದಿದ್ದಕ್ಕೆ ಪ್ರಿನ್ಸಿ ಸ್ವಾಮಿ ಕೋಪದಿಂದ ಮನೋಹರ್ ನನ್ನು ಗದರಿಸಿದ್ದಾರೆ. ಪ್ರಾಂಶುಪಾಲರ ಮಾತಿನಿಂದ ಕಂಗಾಲಾದ ವಿದ್ಯಾರ್ಥಿ ನಾಗ್ ಮನೋಹರ್ ಮನೆಗೆ ತೆರಳಿ ಪೋಷಕರಿಗೆ ವಿಷಯ ತಿಳಿಸಿದ್ದಾನೆ. ಪ್ರಿನ್ಸಿ ಸ್ವಾಮಿ ಅವರು ಮಾಡಿರುವ ಅನುಚಿತ ಕಾಮೆಂಟ್‌ಗಳ ಬಗ್ಗೆಯೂ ವಿದ್ಯಾರ್ಥಿಯು ತನ್ನ ಪೋಷಕರಿಗೆ ತಿಳಿಸಿದ್ದಾನೆ. ಇದರಿಂದ ಅವರು ಕೆರಳಿದ್ದಾರೆ (Ayyappa dress sparks row).

ಪೋಷಕರು ಶಾಲೆಗೆ ಆಗಮಿಸಿ ಸ್ವಾಮಿ ಮಾಲೆ ಧರಿಸಿದ್ದಕ್ಕಾಗಿ ತಮ್ಮ ಮಗನ ಮೇಲೆ ಅನುಚಿತ ಕಾಮೆಂಟ್‌ಗಳ ಮಾಡಿದ್ದಕ್ಕೆ ಮುಖ್ಯೋಪಾಧ್ಯಾಯರಾದ ಶ್ರೀ ಮನ್ನಾರಾಯಣ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಮೇಲಾಗಿ ಈ ವಿಷಯ ತಿಳಿದ ಇತರೆ ಅಯ್ಯಪ್ಪ ಸ್ವಾಮಿ ಭಕ್ತರೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಗೆ ಆಗಮಿಸಿದ್ದರಿಂದ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು, ಆರ್‌ಎಸ್‌ಎಸ್ ಕಾರ್ಯಕರ್ತರು ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿದ ವಿದ್ಯಾರ್ಥಿ ನಾಗ್ ಮನೋಹರ್ ಅವರ ಬಗ್ಗೆ ಅನುಚಿತ ಕಾಮೆಂಟ್ ಮಾಡಿದ ಶಾಲೆಯ ಪ್ರಾಂಶುಪಾಲ ಶ್ರೀಮನ್ನಾರಾಯಣ ಅವರನ್ನು ಕೂಡಲೇ ಬಂಧಿಸಬೇಕು ಮತ್ತು ಶಾಲೆಯ ಲೈಸೆನ್ಸ್​ ರದ್ದುಗೊಳಿಸಬೇಕು ಎಂದು ಅವರೆಲ್ಲಾ ಒತ್ತಾಯಿಸಿದರು.

ಶಾಲೆಯ ಪ್ರಾಂಶುಪಾಲರು ಹಿಂದೂ ಧರ್ಮದ ಬಗ್ಗೆ ಅನುಚಿತ ಕಾಮೆಂಟ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿದ್ದ ವಿದ್ಯಾರ್ಥಿಗೆ ಅವಹೇಳನಕಾರಿಯಾಗಿ ಮಾತನಾಡಿದ್ದು, ಒಂದು ಹಂತದಲ್ಲಿ ಹೊಡೆಯುವುದಕ್ಕೂ ಹೋಗಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಅಯ್ಯಪ್ಪ ಸ್ವಾಮಿ ಭಕ್ತರು ಹಾಗೂ ಆರ್‌ಎಸ್‌ಎಸ್ ಕಾರ್ಯಕರ್ತರನ್ನು ಸಮಾಧಾನಪಡಿಸಲು ಯತ್ನಿಸಿದರು. ಅದಕ್ಕೆ ಪ್ರಾಂಶುಪಾಲ ಶ್ರೀಮನ್ನಾರಾಯಣ ಅವರು ವಿದ್ಯಾರ್ಥಿಗಳ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು. ಕೊನೆಗೆ ಪ್ರಾಂಶುಪಾಲ ಶ್ರೀಮನ್ನಾರಾಯಣ ಅಯ್ಯಪ್ಪ ಅವರು ಎಲ್ಲಾ ಭಕ್ತರಲ್ಲಿ ಕ್ಷಮೆಯಾಚಿಸಿದರು ಮತ್ತು ಅಯ್ಯಪ್ಪ ಸ್ವಾಮಿ ನಾಮಸ್ಮರಣೆಯನ್ನೂ ಮಾಡಿದರು. ಇದರಿಂದ ಸಮಾಧಾನಗೊಂಡ ಅಯ್ಯಪ್ಪ ಭಕ್ತರು ಅಲ್ಲಿಂದ ತೆರಳಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ