AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Saroornagar Apsara Murder: ಶಂಶಾಬಾದ್​​ನಲ್ಲಿ ಅರ್ಚಕನಿಂದ ಪ್ರೇಯಸಿಯ ಹತ್ಯೆ, ಸರೂರ್ ನಗರದ ಮ್ಯಾನ್ ಹೋಲ್​ನಲ್ಲಿ ಶವ ಪತ್ತೆ

ಶಂಶಾಬಾದ್ ಅಪ್ಸರಾ ಹತ್ಯೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಸಾಯಿಕೃಷ್ಣ ಎಂಬಾತನೇ ಅಪ್ಸರಾಳನ್ನು ಬರ್ಬರವಾಗಿ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಸರೂರ್ ನಗರದಲ್ಲಿ ವ್ಯಕ್ತಿಯೊಬ್ಬನನ್ನು ಶಂಶಾಬಾದ್‌ನಲ್ಲಿ ಕೊಲೆ ಮಾಡಿ ಗುಂಡಿಗೆ ಎಸೆದಿರುವುದು ಇತ್ತೀಚೆಗೆ ಪೊಲೀಸರ ಗಮನಕ್ಕೆ ಬಂದಿತ್ತು.

Saroornagar Apsara Murder: ಶಂಶಾಬಾದ್​​ನಲ್ಲಿ ಅರ್ಚಕನಿಂದ ಪ್ರೇಯಸಿಯ ಹತ್ಯೆ, ಸರೂರ್ ನಗರದ ಮ್ಯಾನ್ ಹೋಲ್​ನಲ್ಲಿ ಶವ ಪತ್ತೆ
ಶಂಶಾಬಾದ್​​ನಲ್ಲಿ ಕೊಲೆ, ಸರೂರ್ ನಗರದ ಮ್ಯಾನ್ ಹೋಲ್ ನಲ್ಲಿ ಶವ, ಪ್ರೇಯಸಿಯ ಹತ್ಯೆ
ಸಾಧು ಶ್ರೀನಾಥ್​
| Updated By: Digi Tech Desk|

Updated on:Jun 09, 2023 | 4:15 PM

Share

ಹೈದರಾಬಾದ್:ರಂಗಾರೆಡ್ಡಿ ಜಿಲ್ಲೆಯ (R R District) ಶಂಶಾಬಾದ್ (​Shamshabad) ಮಂಡಲದ ಸುಲ್ತಾನಪಲ್ಲಿಯಲ್ಲಿ ಶುಕ್ರವಾರ ಬೆಳಗ್ಗೆ ದುಷ್ಕೃತ್ಯವೊಂದು ಬೆಳಕಿಗೆ ಬಂದಿದೆ. ಅಪ್ಸರಾ ಎಂಬಾಕೆಯನ್ನು ಆಕೆಯ ಪ್ರಿಯಕರ ಸಾಯಿಕೃಷ್ಣ ಕೊಂದು ಸರೂರ್ ನಗರದ ಮ್ಯಾನ್ ಹೋಲ್ (Manhole) ನಲ್ಲಿ ಎಸೆದಿದ್ದ. ಅದಾದ ಮೇಲೆ ಅಪ್ಸರಾ ನಾಪತ್ತೆಯಾಗಿದ್ದಾರೆ ಎಂದು ಸಾಯಿಕೃಷ್ಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಿಸಿಟಿವಿ ದೃಶ್ಯಾವಳಿ ಆಧರಿಸಿ ತನಿಖೆ ನಡೆಸಿದ್ದು, ಗೆಳೆಯ ಸಾಯಿಕೃಷ್ಣನೇ ಹಂತಕ ಎಂಬುದನ್ನು ಪತ್ತೆ ಹಚ್ಚಿದ್ದಾರೆ. ಜೂನ್ 3 ರಂದು ಅಪ್ಸರಾ ಆಕೆಯ ಪ್ರಿಯಕರನಿಂದ ಕೊಲೆಯಾಗಿದ್ದಾಳೆ (Murder). ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿಯಬೇಕಿದೆ.

ಶಂಶಾಬಾದ್ ಅಪ್ಸರಾ ಹತ್ಯೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಸಾಯಿಕೃಷ್ಣ ಎಂಬಾತನೇ ಅಪ್ಸರಾಳನ್ನು ಬರ್ಬರವಾಗಿ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಸರೂರ್ ನಗರದಲ್ಲಿ ವ್ಯಕ್ತಿಯೊಬ್ಬನನ್ನು ಶಂಶಾಬಾದ್‌ನಲ್ಲಿ ಕೊಲೆ ಮಾಡಿ ಗುಂಡಿಗೆ ಎಸೆದಿರುವುದು ಇತ್ತೀಚೆಗೆ ಪೊಲೀಸರ ಗಮನಕ್ಕೆ ಬಂದಿತ್ತು. ಸಾಯಿಕೃಷ್ಣ  ಎಂಬಾತ ಅಪ್ಸರಾ ಅವರನ್ನು ಕೊಂದು, ನಾಪತ್ತೆ ದೂರು ದಾಖಲಿಸಿದ್ದರು. ಈ ತಿಂಗಳ 3 ರಂದು ಅಪ್ಸರಾ ತನ್ನ ಸ್ನೇಹಿತರೊಂದಿಗೆ ಭದ್ರಾಚಲಂಗೆ ಹೋಗಬೇಕೆಂದು ಬಯಸಿದ್ದರು. ಅವರು ಅಪ್ಸರಾಗೆ ಸೆಂಡ್‌ಆಫ್ ನೀಡಿದ್ದಾಗಿ ಮಾವ ಸಾಯಿಕೃಷ್ಣ ಹೇಳಿದ್ದ. ಶಂಶಾಬಾದ್ ಅಂಬೇಡ್ಕರ್ ಪ್ರತಿಮೆ ಬಳಿ ತಾನು ವಾಹನದಿಂದ ಇಳಿದಿದ್ದಾಗಿ ಆರೋಪಿ ಈ ಹಿಂದೆ ಪೊಲೀಸರಿಗೆ ಹೇಳಿದ್ದ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಹೆಚ್ಚುತ್ತಿವೆ ಪ್ರೇಮಿಗಳ ಕೊಲೆ: 8 ತಿಂಗಳಲ್ಲಿ 7 ಭಯಾನಕ ಹತ್ಯೆ

ಅಪ್ಸರಾ ಭದ್ರಾಚಲಂಗೆ ಆಕೆಯ ಸ್ನೇಹಿತರೊಂದಿಗೆ ಹೋಗಿರುವುದಾಗಿ ವಿಷಯವನ್ನು ಮುಚ್ಚಿಡಲು ಮಾವ ಸಾಯಿಕೃಷ್ಣ ಯತ್ನಿಸಿದ್ದಾನೆ. ಅಂದಿನಿಂದ ಅಪ್ಸರಾ ಫೋನ್ ಎತ್ತುತ್ತಿಲ್ಲ ಎಂದು ದೂರಿನಲ್ಲಿ ಮಾವ ಸಾಯಿಕೃಷ್ಣ ತಿಳಿಸಿದ್ದ. ಈ ತಿಂಗಳ 5 ರಂದು ಸಾಯಿಕೃಷ್ಣ ಪೊಲೀಸ್ ಠಾಣೆಗೆ ಹೋಗಿ ಅಪ್ಸರಾ ಕಾಣಿಸುತ್ತಿಲ್ಲ ಎಂದು ದೊಡ್ಡ ನಾಟಕವಾಡಲು ಆರಂಭಿಸಿದ್ದ. ಆದರೆ ಸಿಸಿಟಿವಿ ದೃಶ್ಯಾವಳಿ ಮತ್ತು ಕಾಲ್ ಡೇಟಾ ಆಧರಿಸಿ ಪೊಲೀಸರು ನಾಟಕಕ್ಕೆ ತೆರೆ ಎಳೆದಿದ್ದಾರೆ. ಮಾವ ಸಾಯಿಕೃಷ್ಣನೇ ಹಂತಕ ಎಂದು ಪೊಲೀಸರು ತೀರ್ಮಾನಿಸಿದ್ದಾರೆ. ಆರೋಪಿ ಸಾಯಿಕೃಷ್ಣ ಈಗ ಪೊಲೀಸರ ವಶದಲ್ಲಿದ್ದಾನೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:14 pm, Fri, 9 June 23