ಟಿಎಂಸಿ ನಿಧಿಯಲ್ಲಿ ಶೇಖ್ ಷಹಜಹಾನ್ ಭೂ ಭ್ರಷ್ಟಾಚಾರದ ಹಣ; ಚಾರ್ಜ್​ಶೀಟ್‌ನಲ್ಲಿ ಇಡಿ ಉಲ್ಲೇಖ

Sheikh Shahjahan: ಟಿಎಂಸಿ ನಾಯಕ ಶೇಖ್ ಷಹಜಹಾನ್‌ಗೆ ನಿಕಟವಾಗಿರುವ 5 ಜನರು ಪ್ರಸ್ತುತ ಇಡಿ ನಿಗಾದಲ್ಲಿದ್ದಾರೆ. ಅವರೆಲ್ಲರ ಹುಡುಕಾಟ ನಡೆಯುತ್ತಿದೆ. ಅವರ ಹೆಸರಿನಲ್ಲಿ ಕಂಪನಿ ತೆರೆದು ಹಣ ವರ್ಗಾವಣೆ ಮಾಡಲಾಗಿದೆ ಎಂದು ಗುಪ್ತಚರ ಸಂಸ್ಥೆ ಹೇಳಿಕೊಂಡಿದೆ. ಶೇಖ್ ಷಹಜಹಾನ್ ಅವರ ನಿಕಟವರ್ತಿಯಾಗಿರುವ ಶಿವಪ್ರಸಾದ್ ಹಜ್ರಾ ಅವರು ಜೆಲಿಯಾಖಾಲಿಯಲ್ಲಿ ಭಾರೀ ಮೌಲ್ಯದ ಭೂಮಿಯನ್ನು ವಶಪಡಿಸಿಕೊಂಡಿದ್ದಾರೆ ಎಂದು ಇಡಿ ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಟಿಎಂಸಿ ನಿಧಿಯಲ್ಲಿ ಶೇಖ್ ಷಹಜಹಾನ್ ಭೂ ಭ್ರಷ್ಟಾಚಾರದ ಹಣ; ಚಾರ್ಜ್​ಶೀಟ್‌ನಲ್ಲಿ ಇಡಿ ಉಲ್ಲೇಖ
ಶೇಖ್ ಷಹಜಹಾನ್
Follow us
|

Updated on: Jun 11, 2024 | 5:02 PM

ಕೊಲ್ಕತ್ತಾ: ಟಿಎಂಸಿ ನಾಯಕ ಶೇಖ್ ಷಹಜಹಾನ್ (Sheikh Shahajahan) ಬಗ್ಗೆ ಇಡಿ ಸ್ಫೋಟಕ ಮಾಹಿತಿಗಳನ್ನು ಬಿಡುಗಡೆ ಮಾಡುತ್ತಿದೆ. ಆರೋಪಪಟ್ಟಿಯಲ್ಲಿ ಕೇಂದ್ರೀಯ ತನಿಖಾ ಗುಪ್ತಚರ ಸಂಸ್ಥೆಯು ಷಹಜಹಾನ್ ಅವರ ಭೂ ಭ್ರಷ್ಟಾಚಾರದ ಹಣ (land corruption money) ತೃಣಮೂಲ ಕಾಂಗ್ರೆಸ್ ನಿಧಿಗೆ ತಲುಪಿದೆ ಎಂದು ಉಲ್ಲೇಖಿಸಿದೆ. ಸಂದೇಶಖಾಲಿಯ ಸ್ವಯಂಘೋಷಿತ ‘ಹುಲಿ’ ಶೇಖ್ ಷಹಜಹಾನ್ ಹೇಳಿಕೆಗಳಿಂದ ಸ್ಫೋಟಕ ಮಾಹಿತಿ ವರದಿಯಾಗಿದೆ. ಮೀನು ರಫ್ತು ಹೆಸರಿನಲ್ಲಿ ಷಹಜಹಾನ್ 5 ವರ್ಷಗಳಲ್ಲಿ 198 ಕೋಟಿ ಕಪ್ಪುಹಣವನ್ನು ಬಿಳಿಯಾಗಿ ಪರಿವರ್ತಿಸಿದ್ದಾರೆ ಎಂದು ಇಡಿ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದೆ.

ಕೇಂದ್ರೀಯ ತನಿಖಾ ಸಂಸ್ಥೆಯ ಮೂಲಗಳ ಪ್ರಕಾರ, ಶೇಖ್ ಷಹಜಹಾನ್‌ಗೆ ನಿಕಟವಾಗಿರುವ ಐವರು ಪ್ರಸ್ತುತ ಇಡಿ ನಿಗಾದಲ್ಲಿದ್ದಾರೆ. ಅವರೆಲ್ಲರ ಹುಡುಕಾಟ ನಡೆಯುತ್ತಿದೆ. ಅವರ ಹೆಸರಿನಲ್ಲಿ ಕಂಪನಿ ತೆರೆದು ಹಣ ವರ್ಗಾವಣೆ ಮಾಡಲಾಗಿದೆ ಎಂದು ಗುಪ್ತಚರ ಸಂಸ್ಥೆ ಹೇಳಿಕೊಂಡಿದೆ. ಶೇಖ್ ಷಹಜಹಾನ್ ಅವರ ನಿಕಟವರ್ತಿಯಾಗಿರುವ ಶಿವಪ್ರಸಾದ್ ಹಜ್ರಾ ಅವರು ಜೆಲಿಯಾಖಾಲಿಯಲ್ಲಿ 900 ಬಿಘಾ ಭೂಮಿಯನ್ನು ವಶಪಡಿಸಿಕೊಂಡಿದ್ದಾರೆ ಎಂದು ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಮೋದಿ ಸರ್ಕಾರದಲ್ಲಿ ಕರ್ನಾಟಕಕ್ಕೆ ಬಂಪರ್, ತಪ್ಪಿದ ರಾಜ್ಯ ಬಿಜೆಪಿ ನಾಯಕರ ಲೆಕ್ಕಾಚಾರ!

ಈ ಕುರಿತು ಇಡಿ ವಕೀಲ ಅರಿಜಿತ್ ಚಕ್ರವರ್ತಿ ಮಾಹಿತಿ ನೀಡಿದ್ದು, “ಎಸ್‌ಕೆ ಸಬೀನಾ ಅವರು ಮೀನು ರಫ್ತು ಮಾಡುವ ಮೂಲಕ ಒಟ್ಟು 90 ಕೋಟಿ ಆದಾಯ ಗಳಿಸುತ್ತಿದ್ದಾರೆ ಎಂಬುದು ಈವರೆಗಿನ ತನಿಖೆಯಿಂದ ಗೊತ್ತಾಗಿದೆ” ಎಂದಿದ್ದಾರೆ.

ಇನ್ನು ಶೇಖ್ ಷಹಜಹಾನ್ ಪರ ವಕೀಲರು ಕೂಡ ಪ್ರತಿಕ್ರಿಯೆ ನೀಡಿದ್ದು, “ನನ್ನ ಕಕ್ಷಿದಾರನನ್ನು ಬಂಧಿಸಲಾಗಿದೆ. 24 ಗಂಟೆಗಳ ಒಳಗೆ ನ್ಯಾಯಾಲಯಕ್ಕೆ ಕರೆದೊಯ್ಯಲಿಲ್ಲ. ಇದು ಅಕ್ರಮ ಅಲ್ಲವೇ? ಎಂದು ನ್ಯಾಯಾಲಯವನ್ನು ಕೇಳಿದ್ದೇನೆ” ಎಂದಿದ್ದಾರೆ. ಮತ್ತೊಂದೆಡೆ, ಇಡಿ ಪರ ವಕೀಲರು, “ನ್ಯಾಯಾಲಯವು ಅವರ ಹಕ್ಕನ್ನು ತಿರಸ್ಕರಿಸಿತು. ಷಹಜಹಾನ್‌ನನ್ನು ಬಂಧಿಸುವುದರಲ್ಲಿ ಅಥವಾ ನ್ಯಾಯಾಲಯಕ್ಕೆ ಹಾಜರುಪಡಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ನ್ಯಾಯಾಲಯ ಹೇಳಿದೆ” ಎಂದಿದ್ದಾರೆ.

ಇದನ್ನೂ ಓದಿ: BJP President: ಬಿಜೆಪಿ ನೂತನ ಅಧ್ಯಕ್ಷ ಯಾರಾಗಲಿದ್ದಾರೆ?; ಅಚ್ಚರಿಯ ಪಟ್ಟಿಯಲ್ಲಿದೆ ಕರ್ನಾಟಕದ ನಾಯಕನ ಹೆಸರು!

ಬಿಜೆಪಿಯ ರಾಜ್ಯಸಭಾ ಸಂಸದ ಶಮಿಕ್ ಭಟ್ಟಾಚಾರ್ಯ, “ಇಡಿ ಖಂಡಿತವಾಗಿಯೂ ಹೈಕೋರ್ಟ್ ಆದೇಶದ ಮೇರೆಗೆ ತನಿಖೆ ನಡೆಸುತ್ತಿದೆ. ಎರಡೂ ಕಡೆ ವಕೀಲರಿದ್ದಾರೆ. ಈಗ ಈ ಘಟನೆಯಲ್ಲಿ ಪಶ್ಚಿಮ ಬಂಗಾಳ ಸರ್ಕಾರ ಭಾಗಿಯಾಗಿದೆ” ಎಂದಿದ್ದಾರೆ.

ಸಂದೇಶಖಾಲಿಯ ಟಿಎಂಸಿ ನಾಯಕ ಶೇಖ್ ಷಹಜಹಾನ್ 2013ರಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷವು ಪಶ್ಚಿಮ ಬಂಗಾಳ ರಾಜ್ಯದಲ್ಲಿ ಎಡರಂಗದ ಸರ್ಕಾರವನ್ನು ಪದಚ್ಯುತಗೊಳಿಸಿ ಅಧಿಕಾರಕ್ಕೆ ಬಂದ 2 ವರ್ಷಗಳ ನಂತರ ಪಕ್ಷಕ್ಕೆ ಸೇರಿದರು. ಅಂದಿನಿಂದಲೇ ಅವರು ಪಕ್ಷದಲ್ಲಿ ಅಪಾರ ಜನಪ್ರಿಯತೆಯನ್ನು ಗಳಿಸಿದರು. ಅವರು ಅನೇಕ ಶಾಸಕರು ಮತ್ತು ಮಂತ್ರಿಗಳಿಗಿಂತ ಹೆಚ್ಚು ಶಕ್ತಿಶಾಲಿಯಾಗಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ
ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು
ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್
ನನಗೆ ಸೈಟು ಸಿಕ್ಕಿದ್ದು ನಿಜ ಆದರೆ ಅದು 1984ರಲ್ಲಿ: ಹೆಚ್ ಡಿ ಕುಮಾರಸ್ವಾಮಿ
ನನಗೆ ಸೈಟು ಸಿಕ್ಕಿದ್ದು ನಿಜ ಆದರೆ ಅದು 1984ರಲ್ಲಿ: ಹೆಚ್ ಡಿ ಕುಮಾರಸ್ವಾಮಿ
ರಾಮನಗರ ಇನ್ನು ಮುಂದೆ ರಾಮನಗರವಲ್ಲ ಬೆಂಗಳೂರು ದಕ್ಷಿಣ ಜಿಲ್ಲೆ!
ರಾಮನಗರ ಇನ್ನು ಮುಂದೆ ರಾಮನಗರವಲ್ಲ ಬೆಂಗಳೂರು ದಕ್ಷಿಣ ಜಿಲ್ಲೆ!
ಆಫೀಸಲ್ಲಿ ಗಬಕ್ಕಂತ ಹಾವು ಹಿಡಿದ ಮಹಿಳೆ, ನೋಡಿದರೆ ಎದೆ ಝಲ್ಲೆನ್ನುತ್ತೆ!
ಆಫೀಸಲ್ಲಿ ಗಬಕ್ಕಂತ ಹಾವು ಹಿಡಿದ ಮಹಿಳೆ, ನೋಡಿದರೆ ಎದೆ ಝಲ್ಲೆನ್ನುತ್ತೆ!
ನದಿಲಿ ಕೊಚ್ಚಿಕೊಂಡು ಹೋಗ್ತಿದ್ದ ಹಸು ಉಳಿಸಲು ಜೀವ ಪಣಕ್ಕಿಟ್ಟ ಹೋಂ ಗಾರ್ಡ್ಸ್
ನದಿಲಿ ಕೊಚ್ಚಿಕೊಂಡು ಹೋಗ್ತಿದ್ದ ಹಸು ಉಳಿಸಲು ಜೀವ ಪಣಕ್ಕಿಟ್ಟ ಹೋಂ ಗಾರ್ಡ್ಸ್
ಆಷಾಢ ಮಾಸದ ಮೂರನೇ ಶುಕ್ರವಾರ ಚಾಮುಂಡೇಶ್ವರಿ ಸನ್ನಿಧಿಗೆ ಬಂದ ಸೂರಜ್ ರೇವಣ್ಣ
ಆಷಾಢ ಮಾಸದ ಮೂರನೇ ಶುಕ್ರವಾರ ಚಾಮುಂಡೇಶ್ವರಿ ಸನ್ನಿಧಿಗೆ ಬಂದ ಸೂರಜ್ ರೇವಣ್ಣ