ನಾನು ಮಾಜಿ ಮುಖ್ಯಮಂತ್ರಿಯಷ್ಟೇ, ತಿರಸ್ಕೃತ ಅಲ್ಲ: ಶಿವರಾಜ್​ ಸಿಂಗ್ ಚೌಹಾಣ್

ನಾನು ಮಾಜಿ ಮುಖ್ಯಮಂತ್ರಿಯಷ್ಟೇ ತಿರಸ್ಕೃತ ಅಲ್ಲ ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ. ಪುಣೆಯಲ್ಲಿ ಆಯೋಜಿಸಲಾಗಿದ್ದ ವಿದ್ಯಾರ್ಥಿ ಸಂಸತ್ತನ್ನು ಉದ್ದೇಶಿಸಿ ಮಾತನಾಡಿರುವ ಚೌಹಾಣ್​, ಜನರ ಪ್ರೀತಿಯೇ ನಿಜವಾದ ಸಂಪತ್ತು, ನಾನು ರಾಜಕೀಯ ಮಾಡುತ್ತೇನೆ ಆದರೆ ಯಾವುದೇ ಹುದ್ದೆಗೆ ರಾಜಕೀಯ ಮಾಡುವುದಿಲ್ಲ ಎಂದರು

ನಾನು ಮಾಜಿ ಮುಖ್ಯಮಂತ್ರಿಯಷ್ಟೇ, ತಿರಸ್ಕೃತ ಅಲ್ಲ: ಶಿವರಾಜ್​ ಸಿಂಗ್ ಚೌಹಾಣ್
ಶಿವರಾಜ್ ಸಿಂಗ್ ಚೌಹಾಣ್​
Image Credit source: MPTak

Updated on: Jan 13, 2024 | 8:35 AM

ನಾನು ಮಾಜಿ ಮುಖ್ಯಮಂತ್ರಿಯಷ್ಟೇ ತಿರಸ್ಕೃತ ಅಲ್ಲ ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್(Shivraj Singh Chouhan) ಹೇಳಿದ್ದಾರೆ. ಪುಣೆಯಲ್ಲಿ ಆಯೋಜಿಸಲಾಗಿದ್ದ ವಿದ್ಯಾರ್ಥಿ ಸಂಸತ್ತನ್ನು ಉದ್ದೇಶಿಸಿ ಮಾತನಾಡಿರುವ ಚೌಹಾಣ್​, ಜನರ ಪ್ರೀತಿಯೇ ನಿಜವಾದ ಸಂಪತ್ತು, ನಾನು ರಾಜಕೀಯ ಮಾಡುತ್ತೇನೆ ಆದರೆ ಯಾವುದೇ ಹುದ್ದೆಗೆ ರಾಜಕೀಯ ಮಾಡುವುದಿಲ್ಲ ಎಂದರು.

ಶಿವರಾಜ್ ಸಿಂಗ್ ಚೌಹಾಣ್ ಅವರು ತಮ್ಮ ಜೀವನದ ಮೊದಲ ಚಳುವಳಿಯ ಕಥೆಯನ್ನೂ ಹೇಳಿದರು. ಶಿವರಾಜ್ ಅವರು 7ನೇ ತರಗತಿಯಲ್ಲಿದ್ದಾಗ ಕೂಲಿ ಕಾರ್ಮಿಕರ ಕೂಲಿ ವಿಚಾರದಲ್ಲಿ ಮೊದಲ ಬಾರಿಗೆ ಪ್ರತಿಭಟನೆ ನಡೆಸಿದ್ದು, ಅದಕ್ಕೆ ಚಿಕ್ಕಪ್ಪ ವಿರೋಧ ವ್ಯಕ್ತಪಡಿಸಿದ್ದರು.

ಮಧ್ಯಪ್ರದೇಶದಲ್ಲಿ 2023 ರಲ್ಲಿ ವಿಧಾನಸಭೆ ಚುನಾವಣೆ ನಡೆದಿತ್ತು, ಬಿಜೆಪಿ ಬಂಪರ್ ಗೆಲುವು ದಾಖಲಿಸಿತ್ತು. ಬಿಜೆಪಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಸಿಎಂ ಮಾಡಲಿಲ್ಲ. ಅವರ ಸ್ಥಾನಕ್ಕೆ ಮೋಹನ್ ಯಾದವ್ ಅವರನ್ನು ಮಧ್ಯಪ್ರದೇಶದ ಮುಖ್ಯಮಂತ್ರಿಯನ್ನಾಗಿ ಮಾಡಲಾಗಿದೆ.

ಮತ್ತಷ್ಟು ಓದಿ: ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಮೋಹನ್​ ಯಾದವ್ ಆಯ್ಕೆ

ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದೇನೆ ಎಂದರೆ ನಾನು ಸಕ್ರಿಯ ರಾಜಕಾರಣವನ್ನು ತೊರೆಯುತ್ತೇನೆ ಎಂದು ಅರ್ಥವಲ್ಲ,ನು ಯಾವುದೇ ಹುದ್ದೆಗಾಗಿ ರಾಜಕೀಯದಲ್ಲಿಲ್ಲ, ಆದರೆ ಜನರ ಸೇವೆಗಾಗಿ ಮಾಡಿದ್ದೇವೆ.

1990 ರಲ್ಲಿ ತನ್ನ ತವರು ಸ್ಥಾನವಾದ ಬುಧ್ನಿಯಿಂದ ತನ್ನ ಚೊಚ್ಚಲ ಅಸೆಂಬ್ಲಿ ಚುನಾವಣೆಯ ಗೆಲುವಿನಿಂದ ಪ್ರಾರಂಭಿಸಿ ತನ್ನ ಸುದೀರ್ಘ ಚುನಾವಣಾ ವೃತ್ತಿಜೀವನದ ಮಾತನಾಡಿದರು. ನಾನು ದುರಹಂಕಾರದ ಭಾಷೆಯಲ್ಲಿ ಮಾತನಾಡುವುದಿಲ್ಲ, ನಾನು 11 ಚುನಾವಣೆಯಲ್ಲಿ ಗೆದ್ದಿದ್ದೇನೆ ಆದರೆ ನಾನು ಚುನಾವಣೆಯಲ್ಲಿ ನನ್ನ ಪರವಾಗಿ ಪ್ರಚಾರ ಮಾಡುವುದಿಲ್ಲ.

ನಾನು ನಾಮಪತ್ರ ಸಲ್ಲಿಸುವ ಒಂದು ದಿನ ಮೊದಲು ಕ್ಷೇತ್ರಕ್ಕೆ ಹೋಗುತ್ತೇನೆ, ಹಳ್ಳಿಯ ಜನರು ನನ್ನ ಬಳಿಗೆ ಬರುತ್ತಾರೆ, ನೀವು ಪ್ರಾಮಾಣಿಕವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದರೆ, ಜನರು ನಿಮ್ಮ ಪರವಾಗಿ ನಿಲ್ಲುತ್ತಾರೆ ಎಂದು ಜನರೇ ಹೇಳುತ್ತಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us