ರಾಜಕೀಯ ಸೇರಿದ್ದು ಖುಷಿ ಕೊಟ್ಟಿಲ್ಲ, ವಿನೇಶ್ ಒಲಿಂಪಿಕ್ಸ್ ಚಿನ್ನ ಬಗ್ಗೆ ಗಮನ ಹರಿಸಬೇಕಿತ್ತು: ಮಹಾವೀರ್ ಫೋಗಟ್

|

Updated on: Sep 09, 2024 | 8:15 PM

ವಿನೇಶ್ ಇನ್ನೂ ಒಂದು ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿ ಚಿನ್ನದ ಪದಕ ಗೆಲ್ಲಬೇಕೆಂದು ನಾನು ಬಯಸಿದ್ದೆ. ಅವಳು ತನ್ನ ಒಲಿಂಪಿಕ್ ಗುರಿಯನ್ನು ಸಾಧಿಸುವತ್ತ ಗಮನಹರಿಸಬೇಕಾಗಿತ್ತು. ಅವರು ರಾಜಕೀಯಕ್ಕೆ ಸೇರುವುದನ್ನು ನಾನು ವಿರೋಧಿಸುತ್ತೇನೆ. “ಚಿಕ್ಕ ಮಕ್ಕಳು ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅದು ಅವರ ಮೇಲೆ ಅವಲಂಬಿತವಾಗಿದೆ ಎಂದು ಮಹಾವೀರ್ ಘೋಗಟ್ ಹೇಳಿದ್ದಾರೆ.

ರಾಜಕೀಯ ಸೇರಿದ್ದು ಖುಷಿ ಕೊಟ್ಟಿಲ್ಲ, ವಿನೇಶ್ ಒಲಿಂಪಿಕ್ಸ್ ಚಿನ್ನ ಬಗ್ಗೆ ಗಮನ ಹರಿಸಬೇಕಿತ್ತು: ಮಹಾವೀರ್ ಫೋಗಟ್
ವಿನೇಶ್ ಘೋಗಟ್- ಮಹಾವೀರ್ ಘೋಗಟ್
Follow us on

ದೆಹಲಿ ಸೆಪ್ಟೆಂಬರ್ 09: ಮಾಜಿ ಕುಸ್ತಿ ತರಬೇತುದಾರ ಮತ್ತು ವಿನೇಶ್ ಫೋಗಟ್ (Vinesh Phogat) ಅವರ ಮಾವ ಮಹಾವೀರ್ ಫೋಗಟ್ (Mahavir Phogat) ಅವರು ಒಲಿಂಪಿಕ್ ತಾರೆ ರಾಜಕೀಯಕ್ಕೆ ಸೇರಿರುವುದು ಮತ್ತು ಮುಂದಿನ ತಿಂಗಳು ಹರ್ಯಾಣ ಚುನಾವಣೆಯಲ್ಲಿ (Haryana Polls) ಸ್ಪರ್ಧಿಸುವುದಕ್ಕೆ ಸಹಮತ ಇಲ್ಲ ಎಂದು ಸೋಮವಾರ ಹೇಳಿದ್ದಾರೆ. ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ, ಮಹಾವೀರ್ ಫೋಗಟ್ ಅವರು, ವಿನೇಶ್ ರಾಜಕೀಯಕ್ಕೆ ಸೇರುವ ಬದಲು 2028 ರ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವತ್ತ ಗಮನ ಹರಿಸಬೇಕಿತ್ತು ಎಂದು ಹೇಳಿದ್ದಾರೆ.

ವಿನೇಶ್ ಅವರು ಕುಸ್ತಿಯಿಂದ ನಿವೃತ್ತಿ ಘೋಷಿಸುವ ಮೊದಲು ಇನ್ನೂ ಒಂದು ಒಲಿಂಪಿಕ್ಸ್‌ನಲ್ಲಿ ಭಾಗವಹಿಸಬೇಕಾಗಿತ್ತು ಎಂದ ಮಹಾವೀರ್, ಕಾಂಗ್ರೆಸ್ ಪಕ್ಷಕ್ಕೆ ಸೇರುವ ನಿರ್ಧಾರಕ್ಕೆ ನನ್ನ ಸಹಮತ ಇಲ್ಲ ಎಂದಿದ್ದಾರೆ.

ವಿನೇಶ್ ಇನ್ನೂ ಒಂದು ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿ ಚಿನ್ನದ ಪದಕ ಗೆಲ್ಲಬೇಕೆಂದು ನಾನು ಬಯಸಿದ್ದೆ. ಅವಳು ತನ್ನ ಒಲಿಂಪಿಕ್ ಗುರಿಯನ್ನು ಸಾಧಿಸುವತ್ತ ಗಮನಹರಿಸಬೇಕಾಗಿತ್ತು. ಅವರು ರಾಜಕೀಯಕ್ಕೆ ಸೇರುವುದನ್ನು ನಾನು ವಿರೋಧಿಸುತ್ತೇನೆ. “ಚಿಕ್ಕ ಮಕ್ಕಳು ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅದು ಅವರ ಮೇಲೆ ಅವಲಂಬಿತವಾಗಿದೆ. ಅವರನ್ನು ಪೋಷಿಸಿ ಬೆಳೆಸುವುದು ನನ್ನ ಕರ್ತವ್ಯವಾಗಿತ್ತು. ಈ ವಯಸ್ಸಿನಲ್ಲಿ ವಿನೇಶ್ ಇನ್ನೂ ಒಂದು ಒಲಿಂಪಿಕ್ಸ್‌ನಲ್ಲಿ ಭಾಗವಹಿಸಬಹುದಿತ್ತು. ಈ ಬಾರಿ ಆಕೆ ಚಿನ್ನದ ಪದಕ ಗೆಲ್ಲಬೇಕೆಂದು ನಾನು ಬಯಸಿದ್ದೆ,”  ಎಂದಿದ್ದಾರೆ ಮಹಾವೀರ್.

ಮಾಜಿ ಡಬ್ಲ್ಯುಎಫ್‌ಐ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ವಿನೇಶ್ ಫೋಗಟ್ ಅವರ ಪ್ರತಿಭಟನೆಯು ಅವರ ರಾಜಕೀಯ ಜೀವನಕ್ಕೆ ದಾರಿ ಮಾಡಿಕೊಟ್ಟಿದೆಯೇ ಎಂದು ಕೇಳಿದಾಗ, ಪ್ರತಿಭಟನೆಗಳು ವ್ಯಕ್ತಿಯ ವಿರುದ್ಧ ಆಗಿದ್ದು ಇದಕ್ಕೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ.
“ಬ್ರಿಜ್ ಭೂಷಣ್ ವಿರುದ್ಧ ಪ್ರತಿಭಟನೆ ನಡೆದಿದೆ. ಅದಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಈ ಹಿಂದೆ ಯಾವುದೇ ಸಮಸ್ಯೆಗಳಿರಲಿಲ್ಲ. ಚುನಾವಣೆ ಘೋಷಣೆಯಾಯಿತು ಅದರ ನಂತರ ವಿನೇಶ್ ಕಾಂಗ್ರೆಸ್ ಸೇರುವ ಬಗ್ಗೆ ಎಲ್ಲಾ ಚರ್ಚೆಗಳು ನಡೆದವು . ಇದು ಸತ್ಯ” ಎಂದು ಮಹಾವೀರ್ ಹೇಳಿದ್ದಾರೆ.

2024 ರ ಒಲಂಪಿಕ್ಸ್‌ನಿಂದ ಅನರ್ಹಗೊಂಡ ನಂತರ ವಿನೇಶ್ ಕುಸ್ತಿಯಿಂದ ನಿವೃತ್ತಿ ಘೋಷಿಸಿದಾಗ, ಆಕೆಯ ಮಾವ ಮಹಾವೀರ್ ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿದ್ದು ಶೀಘ್ರದಲ್ಲೇ ಪ್ಯಾರಿಸ್ ಕ್ರೀಡಾಕೂಟ ಈ ನೋವು ನಿವಾರಿಸುತ್ತದೆ ಎಂದಿದ್ದರು.

ವಿನೇಶ್ ಫೋಗಟ್ ಶುಕ್ರವಾರ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದು ಅಕ್ಟೋಬರ್ 5 ರಂದು ನಡೆಯಲಿರುವ ಹರ್ಯಾಣ ವಿಧಾನಸಭಾ ಚುನಾವಣೆ 2024 ರಲ್ಲಿ ಜೂಲಾನಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಆದರೆ, ವಿನೇಶ್ ಜೊತೆಗೆ ಪಕ್ಷಕ್ಕೆ ಸೇರಿದ ಕುಸ್ತಿಪಟು ಬಜರಂಗ್ ಪುನಿಯಾ ಅವರಿಗೆ ಟಿಕೆಟ್ ನೀಡಲಾಗಿಲ್ಲ.

ಇದನ್ನೂ ಓದಿ: ಮಣಿಪುರ ಹಿಂಸಾಚಾರವನ್ನು ಕೊನೆಗಾಣಿಸುವಲ್ಲಿ ವಿಫಲ; ಮೋದಿ ವಿರುದ್ಧ ಖರ್ಗೆ ವಾಗ್ದಾಳಿ

ಕಾಂಗ್ರೆಸ್ ಸೇರಿದ ನಂತರ ಮಾತನಾಡಿದ ವಿನೇಶ್ ಫೋಗಟ್, ನಮ್ಮ ಕಣ್ಣೀರು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಅರ್ಥವಾಗಿತ್ತು. ಇದು ನನ್ನ ಜೀವನದಲ್ಲಿ ಹೊಸ ಅಧ್ಯಾಯ. ನಾನು ಇತರ ಅಥ್ಲೀಟ್‌ಗಳಿಗಾಗಿ ಕೆಲಸ ಮಾಡುತ್ತೇನೆ. ಇದರಿಂದ ನಾವು ಅನುಭವಿಸಿದ ಕಷ್ಟಗಳನ್ನು ಅವರು ಅನುಭವಿಸಬೇಕಾಗಿ ಬರುವುದಿಲ್ಲ ಎಂದು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:13 pm, Mon, 9 September 24