AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಯಾಚಿನ್ ಯುದ್ಧ ಭೂಮಿ: ಪ್ರವಾಸಿಗರಿಗೆ ತೆರೆಯಿತು ಸ್ವರ್ಗದ ಬಾಗಿಲು

ದೆಹಲಿ:ವಿಶ್ವದ ಅತೀ ಎತ್ತರದ ಯುದ್ಧ ಭೂಮಿ ಸಿಯಾಚಿನ್​ಗೆ ಇನ್ನು ನೀವು ಕೂಡ ಭೇಟಿ ನೀಡಬಹುದು. ಯಾಕಂದ್ರೆ, ಸಿಯಾಚಿನ್​ನನ್ನ ಪ್ರವಾಸಿ ತಾಣವಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಘೋಷಿಸಿದ್ದಾರೆ. ಎತ್ತರದ ಯುದ್ಧಭೂಮಿಗೆ ಪ್ರವಾಸಿಗರ ಎಂಟ್ರಿ..! ಸಿಯಾಚಿನ್ ಭಾರತಕ್ಕೆ ಬಹುಮುಖ್ಯವಾದ ಪ್ರದೇಶ. ಯಾಕಂದ್ರೆ ಪಾಪಿ ಪಾಕಿಸ್ತಾನ ಹಾಗೂ ಡ್ರ್ಯಾಗನ್ ಚೀನಾ ಎದುರಿಸಲು ಸಿಯಾಚಿನ್ ಅಮೂಲ್ಯವಾದ ಜಾಗ. ಹೀಗಾಗಿ ಸಿಯಾಚಿನ್ ಬಗ್ಗೆ ಮುತುವರ್ಜಿ ವಹಿಸಲಾಗುತ್ತೆ. ಮೈನಸ್ -40 ಡಿಗ್ರಿಯಷ್ಟು ಸರಾಸರಿ ಉಷ್ಣಾಂಶ ಇರುವ ಪ್ರದೇಶದಲ್ಲಿ ಸೈನಿಕರು ದೇಶದ ಗಡಿ ಕಾಯಬೇಕು. ವೈರಿ […]

ಸಿಯಾಚಿನ್ ಯುದ್ಧ ಭೂಮಿ: ಪ್ರವಾಸಿಗರಿಗೆ ತೆರೆಯಿತು ಸ್ವರ್ಗದ ಬಾಗಿಲು
ಸಾಧು ಶ್ರೀನಾಥ್​
|

Updated on:Oct 22, 2019 | 12:18 PM

Share

ದೆಹಲಿ:ವಿಶ್ವದ ಅತೀ ಎತ್ತರದ ಯುದ್ಧ ಭೂಮಿ ಸಿಯಾಚಿನ್​ಗೆ ಇನ್ನು ನೀವು ಕೂಡ ಭೇಟಿ ನೀಡಬಹುದು. ಯಾಕಂದ್ರೆ, ಸಿಯಾಚಿನ್​ನನ್ನ ಪ್ರವಾಸಿ ತಾಣವಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಘೋಷಿಸಿದ್ದಾರೆ.

ಎತ್ತರದ ಯುದ್ಧಭೂಮಿಗೆ ಪ್ರವಾಸಿಗರ ಎಂಟ್ರಿ..! ಸಿಯಾಚಿನ್ ಭಾರತಕ್ಕೆ ಬಹುಮುಖ್ಯವಾದ ಪ್ರದೇಶ. ಯಾಕಂದ್ರೆ ಪಾಪಿ ಪಾಕಿಸ್ತಾನ ಹಾಗೂ ಡ್ರ್ಯಾಗನ್ ಚೀನಾ ಎದುರಿಸಲು ಸಿಯಾಚಿನ್ ಅಮೂಲ್ಯವಾದ ಜಾಗ. ಹೀಗಾಗಿ ಸಿಯಾಚಿನ್ ಬಗ್ಗೆ ಮುತುವರ್ಜಿ ವಹಿಸಲಾಗುತ್ತೆ. ಮೈನಸ್ -40 ಡಿಗ್ರಿಯಷ್ಟು ಸರಾಸರಿ ಉಷ್ಣಾಂಶ ಇರುವ ಪ್ರದೇಶದಲ್ಲಿ ಸೈನಿಕರು ದೇಶದ ಗಡಿ ಕಾಯಬೇಕು. ವೈರಿ ಪಡೆಗಳಿಂದ ದೇಶ ರಕ್ಷಿಸಲು ಭಾರತೀಯ ಯೋಧರು ಅಕ್ಷರಶಃ ನರಕಯಾತನೆ ಅನುಭವಿಸ್ತಾರೆ.

ಆದ್ರೆ ಈ ಜಾಗವನ್ನ ಪ್ರವಾಸಿಗರಿಗೆ ಮುಕ್ತಗೊಳಿಸಬೇಕು ಅನ್ನೋ ಒತ್ತಾಯ ಬಹು ಹಿಂದಿನಿಂದಲೂ ಕೇಳಿಬರುತ್ತಿತ್ತು. ಮನವಿಗೆ ಸ್ಪಂದಿಸಿರುವ ಮೋದಿ ಸರ್ಕಾರ, ವಿಶ್ವದ ಎತ್ತರದ ಯುದ್ಧಭೂಮಿಯಲ್ಲೂ ಪ್ರವಾಸೋದ್ಯಮದ ಬಾಗಿಲು ತೆರೆಸಿದೆ. ಹೀಗೆ ಸಾವಿರಾರು ಅಡಿ ಎತ್ತರದಲ್ಲೂ ಟೂರಿಸ್ಟ್​ಗಳು ಚಲಿಸಬಹುದಾಗಿದೆ. ದಶಕಗಳ ಬೇಡಿಕೆಗೆ ಕಡೆಗೂ ಗ್ರೀನ್ ಸಿಗ್ನಲ್ ಸಿಕ್ಕಿರೋದು ಸಾಹಸಿಗರ ದಿಲ್ ಖುಷ್ ಮಾಡಿದೆ.

ಪ್ರವಾಸಿಗರ ಸ್ವರ್ಗದ ಬಾಗಿಲು ಸಿಯಾಚಿನ್ ಪ್ರವಾಸೋದ್ಯಮಕ್ಕೆ ಮುಕ್ತವಾಗಿದೆ. ಲಡಾಖ್ ಪ್ರವಾಸಿಗರನ್ನು ಸೇಳೆಯುವ ಸಾಮರ್ಥ್ಯ ಹೊಂದಿದೆ. ಈ ಪ್ರದೇಶದಲ್ಲಿರುವ ಉತ್ತಮ ಸಂಪರ್ಕ ಕೂಡ ಟೂರಿಸ್ಟ್​ಗಳಿಗೆ ಅನುಕೂಲಕರವಾಗಿದೆ. ಹೀಗಾಗಿ ಸಿಯಾಚಿನ್‍ ಮೂಲ ಶಿಬಿರದಿಂದ ಕುಮಾರ್ ಪೋಸ್ಟ್​ವರೆಗಿನ ಜಾಗವನ್ನು ಪ್ರವಾಸೋದ್ಯಮ ಉದ್ದೇಶಗಳಿಗೆ ಮುಕ್ತಗೊಳಿಸಲಾಗಿದೆ. ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ವಿಶ್ವದ ಕೇಂದ್ರಬಿಂದು ಸಿಯಾಚಿನ್ ಕಣ್ತುಂಬಿಕೊಳ್ಳಲು ಇನ್ಮುಂದೆ ಪ್ರವಾಸಿಗರಿಗೂ ಸಾಧ್ಯವಾಗಲಿದೆ. ಅಲ್ಲದೆ ಸಿಯಾಚಿನ್ ವಾತಾವರಣ, ಜೀವನ ಶೈಲಿ ಅಧ್ಯಯನಕ್ಕೂ ಸಹಾಯಕವಾಗಲಿದೆ. ಮತ್ತೊಂದ್ಕಡೆ ವೈಜ್ಞಾನಿಕ ಆವಿಷ್ಕಾರಕ್ಕೂ ಕೇಂದ್ರ ಸರ್ಕಾರದ ಈ ನಿರ್ಧಾರ ದೊಡ್ಡ ಅವಕಾಶ ನೀಡಲಿದೆ. ಇದು ಭಾರತದ ಬದ್ಧ ವೈರಿ ಪಾಪಿ ಪಾಕಿಸ್ತಾನ ಮತ್ತು ಚೀನಾಗೆ ಬೇಸರ ತಂದಿದೆ.

Published On - 6:55 am, Tue, 22 October 19

ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?