AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಯಾಚಿನ್ ಯುದ್ಧ ಭೂಮಿ: ಪ್ರವಾಸಿಗರಿಗೆ ತೆರೆಯಿತು ಸ್ವರ್ಗದ ಬಾಗಿಲು

ದೆಹಲಿ:ವಿಶ್ವದ ಅತೀ ಎತ್ತರದ ಯುದ್ಧ ಭೂಮಿ ಸಿಯಾಚಿನ್​ಗೆ ಇನ್ನು ನೀವು ಕೂಡ ಭೇಟಿ ನೀಡಬಹುದು. ಯಾಕಂದ್ರೆ, ಸಿಯಾಚಿನ್​ನನ್ನ ಪ್ರವಾಸಿ ತಾಣವಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಘೋಷಿಸಿದ್ದಾರೆ. ಎತ್ತರದ ಯುದ್ಧಭೂಮಿಗೆ ಪ್ರವಾಸಿಗರ ಎಂಟ್ರಿ..! ಸಿಯಾಚಿನ್ ಭಾರತಕ್ಕೆ ಬಹುಮುಖ್ಯವಾದ ಪ್ರದೇಶ. ಯಾಕಂದ್ರೆ ಪಾಪಿ ಪಾಕಿಸ್ತಾನ ಹಾಗೂ ಡ್ರ್ಯಾಗನ್ ಚೀನಾ ಎದುರಿಸಲು ಸಿಯಾಚಿನ್ ಅಮೂಲ್ಯವಾದ ಜಾಗ. ಹೀಗಾಗಿ ಸಿಯಾಚಿನ್ ಬಗ್ಗೆ ಮುತುವರ್ಜಿ ವಹಿಸಲಾಗುತ್ತೆ. ಮೈನಸ್ -40 ಡಿಗ್ರಿಯಷ್ಟು ಸರಾಸರಿ ಉಷ್ಣಾಂಶ ಇರುವ ಪ್ರದೇಶದಲ್ಲಿ ಸೈನಿಕರು ದೇಶದ ಗಡಿ ಕಾಯಬೇಕು. ವೈರಿ […]

ಸಿಯಾಚಿನ್ ಯುದ್ಧ ಭೂಮಿ: ಪ್ರವಾಸಿಗರಿಗೆ ತೆರೆಯಿತು ಸ್ವರ್ಗದ ಬಾಗಿಲು
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Oct 22, 2019 | 12:18 PM

Share

ದೆಹಲಿ:ವಿಶ್ವದ ಅತೀ ಎತ್ತರದ ಯುದ್ಧ ಭೂಮಿ ಸಿಯಾಚಿನ್​ಗೆ ಇನ್ನು ನೀವು ಕೂಡ ಭೇಟಿ ನೀಡಬಹುದು. ಯಾಕಂದ್ರೆ, ಸಿಯಾಚಿನ್​ನನ್ನ ಪ್ರವಾಸಿ ತಾಣವಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಘೋಷಿಸಿದ್ದಾರೆ.

ಎತ್ತರದ ಯುದ್ಧಭೂಮಿಗೆ ಪ್ರವಾಸಿಗರ ಎಂಟ್ರಿ..! ಸಿಯಾಚಿನ್ ಭಾರತಕ್ಕೆ ಬಹುಮುಖ್ಯವಾದ ಪ್ರದೇಶ. ಯಾಕಂದ್ರೆ ಪಾಪಿ ಪಾಕಿಸ್ತಾನ ಹಾಗೂ ಡ್ರ್ಯಾಗನ್ ಚೀನಾ ಎದುರಿಸಲು ಸಿಯಾಚಿನ್ ಅಮೂಲ್ಯವಾದ ಜಾಗ. ಹೀಗಾಗಿ ಸಿಯಾಚಿನ್ ಬಗ್ಗೆ ಮುತುವರ್ಜಿ ವಹಿಸಲಾಗುತ್ತೆ. ಮೈನಸ್ -40 ಡಿಗ್ರಿಯಷ್ಟು ಸರಾಸರಿ ಉಷ್ಣಾಂಶ ಇರುವ ಪ್ರದೇಶದಲ್ಲಿ ಸೈನಿಕರು ದೇಶದ ಗಡಿ ಕಾಯಬೇಕು. ವೈರಿ ಪಡೆಗಳಿಂದ ದೇಶ ರಕ್ಷಿಸಲು ಭಾರತೀಯ ಯೋಧರು ಅಕ್ಷರಶಃ ನರಕಯಾತನೆ ಅನುಭವಿಸ್ತಾರೆ.

ಆದ್ರೆ ಈ ಜಾಗವನ್ನ ಪ್ರವಾಸಿಗರಿಗೆ ಮುಕ್ತಗೊಳಿಸಬೇಕು ಅನ್ನೋ ಒತ್ತಾಯ ಬಹು ಹಿಂದಿನಿಂದಲೂ ಕೇಳಿಬರುತ್ತಿತ್ತು. ಮನವಿಗೆ ಸ್ಪಂದಿಸಿರುವ ಮೋದಿ ಸರ್ಕಾರ, ವಿಶ್ವದ ಎತ್ತರದ ಯುದ್ಧಭೂಮಿಯಲ್ಲೂ ಪ್ರವಾಸೋದ್ಯಮದ ಬಾಗಿಲು ತೆರೆಸಿದೆ. ಹೀಗೆ ಸಾವಿರಾರು ಅಡಿ ಎತ್ತರದಲ್ಲೂ ಟೂರಿಸ್ಟ್​ಗಳು ಚಲಿಸಬಹುದಾಗಿದೆ. ದಶಕಗಳ ಬೇಡಿಕೆಗೆ ಕಡೆಗೂ ಗ್ರೀನ್ ಸಿಗ್ನಲ್ ಸಿಕ್ಕಿರೋದು ಸಾಹಸಿಗರ ದಿಲ್ ಖುಷ್ ಮಾಡಿದೆ.

ಪ್ರವಾಸಿಗರ ಸ್ವರ್ಗದ ಬಾಗಿಲು ಸಿಯಾಚಿನ್ ಪ್ರವಾಸೋದ್ಯಮಕ್ಕೆ ಮುಕ್ತವಾಗಿದೆ. ಲಡಾಖ್ ಪ್ರವಾಸಿಗರನ್ನು ಸೇಳೆಯುವ ಸಾಮರ್ಥ್ಯ ಹೊಂದಿದೆ. ಈ ಪ್ರದೇಶದಲ್ಲಿರುವ ಉತ್ತಮ ಸಂಪರ್ಕ ಕೂಡ ಟೂರಿಸ್ಟ್​ಗಳಿಗೆ ಅನುಕೂಲಕರವಾಗಿದೆ. ಹೀಗಾಗಿ ಸಿಯಾಚಿನ್‍ ಮೂಲ ಶಿಬಿರದಿಂದ ಕುಮಾರ್ ಪೋಸ್ಟ್​ವರೆಗಿನ ಜಾಗವನ್ನು ಪ್ರವಾಸೋದ್ಯಮ ಉದ್ದೇಶಗಳಿಗೆ ಮುಕ್ತಗೊಳಿಸಲಾಗಿದೆ. ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ವಿಶ್ವದ ಕೇಂದ್ರಬಿಂದು ಸಿಯಾಚಿನ್ ಕಣ್ತುಂಬಿಕೊಳ್ಳಲು ಇನ್ಮುಂದೆ ಪ್ರವಾಸಿಗರಿಗೂ ಸಾಧ್ಯವಾಗಲಿದೆ. ಅಲ್ಲದೆ ಸಿಯಾಚಿನ್ ವಾತಾವರಣ, ಜೀವನ ಶೈಲಿ ಅಧ್ಯಯನಕ್ಕೂ ಸಹಾಯಕವಾಗಲಿದೆ. ಮತ್ತೊಂದ್ಕಡೆ ವೈಜ್ಞಾನಿಕ ಆವಿಷ್ಕಾರಕ್ಕೂ ಕೇಂದ್ರ ಸರ್ಕಾರದ ಈ ನಿರ್ಧಾರ ದೊಡ್ಡ ಅವಕಾಶ ನೀಡಲಿದೆ. ಇದು ಭಾರತದ ಬದ್ಧ ವೈರಿ ಪಾಪಿ ಪಾಕಿಸ್ತಾನ ಮತ್ತು ಚೀನಾಗೆ ಬೇಸರ ತಂದಿದೆ.

Published On - 6:55 am, Tue, 22 October 19

Follow Us
ಬಿಜೆಪಿ ಪಾದಯಾತ್ರೆಗೆ ತೆರೆ: ಹೋರಾಟ ಅಂತ್ಯವಲ್ಲ, ಆರಂಭ ಎಂದ ಕೇಸರಿ ಪಡೆ
ಬಿಜೆಪಿ ಪಾದಯಾತ್ರೆಗೆ ತೆರೆ: ಹೋರಾಟ ಅಂತ್ಯವಲ್ಲ, ಆರಂಭ ಎಂದ ಕೇಸರಿ ಪಡೆ
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
ಮಂಜನ ಮಾತಿನಿಂದ ಬಿಗ್ ಬಾಸ್ ಮನೆಯಲ್ಲಿ ಕಿರಿಕಿರಿ; ಕಣ್ಣೀರು ಹಾಕಿದ ಸ್ಪರ್ಧಿ
ಮಂಜನ ಮಾತಿನಿಂದ ಬಿಗ್ ಬಾಸ್ ಮನೆಯಲ್ಲಿ ಕಿರಿಕಿರಿ; ಕಣ್ಣೀರು ಹಾಕಿದ ಸ್ಪರ್ಧಿ
'ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ'; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
'ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ'; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
ಹೈಕಮಾಂಡ್ ಬುಲಾವ್: ದೆಹಲಿಗೆ ಹೊರಟ ಮಾಜಿ ಸಿಎಂ ಸಿದ್ದರಾಮಯ್ಯ
ಹೈಕಮಾಂಡ್ ಬುಲಾವ್: ದೆಹಲಿಗೆ ಹೊರಟ ಮಾಜಿ ಸಿಎಂ ಸಿದ್ದರಾಮಯ್ಯ
ಡಿಕೆಶಿ 100 ದಿನಗಳ ಸಂಭ್ರಮಕ್ಕೆ ನೊಣವಿನಕೆರೆ ಶ್ರೀಗಳ ಆಶೀರ್ವಚನ ಹೀಗಿದೆ
ಡಿಕೆಶಿ 100 ದಿನಗಳ ಸಂಭ್ರಮಕ್ಕೆ ನೊಣವಿನಕೆರೆ ಶ್ರೀಗಳ ಆಶೀರ್ವಚನ ಹೀಗಿದೆ
ರಂಗನತಿಟ್ಟು ವಿದೇಶಿ ಪ್ರಯೋಗ: ಪಕ್ಷಿಗಳ ರಕ್ಷಣೆಗೆ ಗೇಬಿಯನ್ ತಂತ್ರಜ್ಞಾನ
ರಂಗನತಿಟ್ಟು ವಿದೇಶಿ ಪ್ರಯೋಗ: ಪಕ್ಷಿಗಳ ರಕ್ಷಣೆಗೆ ಗೇಬಿಯನ್ ತಂತ್ರಜ್ಞಾನ
ಬಿಗ್​​ಬಾಸ್​​ನಲ್ಲಿ ಓಪನ್ ಆಗ್ತಿದೆ ಹಳೆ ಲವ್ ಸ್ಟೋರಿಗಳು: ವಿಡಿಯೋ ನೋಡಿ
ಬಿಗ್​​ಬಾಸ್​​ನಲ್ಲಿ ಓಪನ್ ಆಗ್ತಿದೆ ಹಳೆ ಲವ್ ಸ್ಟೋರಿಗಳು: ವಿಡಿಯೋ ನೋಡಿ
ಮಹಾಸಂಕಲ್ಪ ಮತ್ತು ನವಸಂಕಲ್ಪ: 2037ರ ಭವ್ಯ ಕನಸು ಬಿಚ್ಚಿಟ್ಟ ಡಿಕೆಶಿ
ಮಹಾಸಂಕಲ್ಪ ಮತ್ತು ನವಸಂಕಲ್ಪ: 2037ರ ಭವ್ಯ ಕನಸು ಬಿಚ್ಚಿಟ್ಟ ಡಿಕೆಶಿ
ಬೆಂಗಳೂರು ದಕ್ಷಿಣದಲ್ಲಿ ಮಾದಕ ವಸ್ತುಗಳ ವಿರುದ್ಧ ಪೊಲೀಸರ ಸಮರ
ಬೆಂಗಳೂರು ದಕ್ಷಿಣದಲ್ಲಿ ಮಾದಕ ವಸ್ತುಗಳ ವಿರುದ್ಧ ಪೊಲೀಸರ ಸಮರ