AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಳ್ಳಿನ ಕಂಟಿಗಳನ್ನೇ ಸಿಂಹಾಸನವನ್ನಾಗಿಸಿಕೊಂಡು ಪೂಜಾರಿ ಅದರ ಮೇಲೆ ಮಲಗಿ, ಗಾಳಿಯಲ್ಲಿ ತೂಗಾಡುವ ವಿಶೇಷ ಜಾತ್ರೆ! ಎಲ್ಲಿ?

Sirimanothsavam Festival in In Anantapur: ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಸಿರಿಮಾನೋತ್ಸವ ಉತ್ಸವ. ಮುಳ್ಳಿನ ಕಂಟಿಗಳನ್ನೇ ಸಿಂಹಾಸನವನ್ನಾಗಿಸಿಕೊಂಡು ಅದರ ಮೇಲೆ ಮಲಗಿ, ಗಾಳಿಯಲ್ಲಿ ತೂಗಾಡುವ ವಿಶೇಷ ಜಾತ್ರೆ

ಮುಳ್ಳಿನ ಕಂಟಿಗಳನ್ನೇ ಸಿಂಹಾಸನವನ್ನಾಗಿಸಿಕೊಂಡು ಪೂಜಾರಿ ಅದರ ಮೇಲೆ ಮಲಗಿ, ಗಾಳಿಯಲ್ಲಿ ತೂಗಾಡುವ ವಿಶೇಷ ಜಾತ್ರೆ!  ಎಲ್ಲಿ?
ಮುಳ್ಳಿನ ಕಂಟಿಗಳನ್ನೇ ಸಿಂಹಾಸನವನ್ನಾಗಿಸಿಕೊಂಡು ಅದರ ಮೇಲೆ ಮಲಗಿ, ಗಾಳಿಯಲ್ಲಿ ತೂಗಾಡುವ ವಿಶೇಷ ಜಾತ್ರೆ
ಸಾಧು ಶ್ರೀನಾಥ್​
|

Updated on: Sep 29, 2023 | 2:45 PM

Share

ಸಿರಿಮಾನೋತ್ಸವ: ಕಾಲಿಗೆ ಮುಳ್ಳು ಚುಚ್ಚಿದರೆ ಅಮ್ಮಾ ಅಂತೀವಿ, ಆತಂಕ ಪಡ್ತೀವಿ, ಭಯ ಪಡ್ತೀವಿ .. ಅಂಥಾದ್ದರಲ್ಲಿ ಅಲ್ಲಿ ಆ ಜಾತ್ರೆಯಲ್ಲಿ ಪೂಜಾರಿಯೊಬ್ಬರು ರಾಶಿ ರಾಶಿ ಹಾಕಿರುವ ಮುಳ್ಳುಗಳ ಮೇಲೆ ಅರೆಬರೆ ಬಟ್ಟೆ ಧರಿಸಿ, ಬರಗಾಲಲ್ಲಿ ಏರಿ, ಮುಳ್ಳಿನ ಕಂಟಿಗಳನ್ನೇ ಸಿಂಹಾಸನವನ್ನಾಗಿಸಿಕೊಂಡು ಅದರ ಮೇಲೆ ಪವಡಿಸುವ ಆಚರಣೆಯೇ ಮಾರೆಮ್ಮನ ಜಾತ್ರೆ! ಅನಂತಪುರ ಜಿಲ್ಲೆಯ ಬೆಳಗುಪ್ಪ ಮಂಡಲದ ಬೆಳಗುಪ್ಪ ತಾಂಡಾದಲ್ಲಿ ಮಾರೆಮ್ಮ ಜಾತ್ರೆ ಹೀಗೆ ವಿನೂತನವಾಗಿ ನಡೆಯಿತು. ಇದನ್ನು ಸೀಮಾ ಸಿರಿಮಾನೋತ್ಸವ ಎನ್ನುತ್ತಾರೆ. ಕರ್ನಾಟಕದ ಗಡಿ ಭಾಗದ ಆದಿವಾಸಿಗಳು ಹಾಗೂ ಬೆಳಗುಪ್ಪ ಮಂಡಲದ ತಾಂಡಾ ನಿವಾಸಿಗಳು ಜಾತ್ರೆಗೆ ಆಗಮಿಸಿದ್ದರು. ಈ ವಿಶೇಷ ಜಾತ್ರೆಯಲ್ಲಿ ದೇವಿಯನ್ನು ನೋಡಲು ಭಕ್ತರ ದಂಡೇ ನೆರೆದಿತ್ತು ಅಲ್ಲಿ.

ಅವರನ್ನು ಭೇಟಿ ಮಾಡಿ ನಮನ ಸಲ್ಲಿಸಿದರು. ಪೂರ್ಣಕುಂಭ ಕಲಶಗಳೊಂದಿಗೆ ಮಹಿಳೆಯರಿಂದ ಬೆಳಗಿನ ಜಾವ ಮೆರವಣಿಗೆಯೊಂದಿಗೆ ಆರಂಭವಾಗಿ ಸಿರಿಮಾನೋತ್ಸವದವರೆಗೆ ಈ ಜಾತ್ರೆ ನಡೆಯಿತು. ಇದು ವೈವಿಧ್ಯಮಯ ವಿಧಾನಗಳು ಮತ್ತು ಆಚರಣೆಗಳೊಂದಿಗೆ ಕಣ್ಮನಕ್ಕೆ ಹಬ್ಬವಾಗಿದೆ. ಅದರಲ್ಲೂ ಈ ಬಾರಿಯ ಮಾರೆಮ್ಮನ ಜಾತ್ರೆಯಲ್ಲಿ ದೇವಸ್ಥಾನದ ಪೂಜಾರಿ ಮುಳ್ಳುತಂತಿಯ ಮೇಲೆ ಹತ್ತುತ್ತಿದ್ದುದ್ದು ವಿಶೇಷವಾಗಿ ಗಮನ ಸೆಳೆಯಿತು. ಹಾಗೆ ಸಾಗಿದ ಪೂಜಾರಿಯು ಇನ್ನೊಂದು ಬದಿಯಲ್ಲಿರುವ ದೇವಿಯ ದರ್ಶನ ಪಡೆಯುತ್ತಾರೆ. ಈ ಮಧ್ಯೆ ಚೂಪಾದ ಆ ಮುಳ್ಳುಗಳ ಮೇಲೆಯೇ ಮಲಗುತ್ತಾರೆ.

ಭಕ್ತರ ಕಿರುಚಾಟದ ನಡುವೆ ಡೊಳ್ಳು ಬಾರಿಸುವ, ಮೈನಡುಕ ತರಿಸುವ ಈ ಕರುಣಾಜನಕ ದೃಶ್ಯ ಭಕ್ತಿ ಪ್ರಧಾನವಾಗಿ ನೆರವೇರುತ್ತದೆ. ಅಲ್ಲದೆ ಉದ್ದನೆಯ ಕೋಲಿನ ಮುಂದೆ ಪುಟ್ಟ ಪಲ್ಲಕ್ಕಿಯನ್ನು ಇಟ್ಟು ಅದರಲ್ಲಿ ಪೂಜಾರಿಯನ್ನು ಕಟ್ಟಿ ಆಕಾಶದಲ್ಲಿ ವೃತ್ತಾಕಾರವಾಗಿ ಗಾಳಿಯಲ್ಲಿ ತಿರುಗುವಂತೆ ಮಾಡುತ್ತಾರೆ. ತಲೆಮಾರುಗಳಿಂದ ನಡೆದುಕೊಂಡು ಬಂದಿರುವ ಈ ವಿಚಿತ್ರ ಆಚರಣೆಯನ್ನು ವೀಕ್ಷಿಸಲು ನಾನಾ ಕಡೆಗಳಿಂದ ಭಕ್ತರ ದಂಡು ಹರಿದು ಬರುತ್ತಿದ್ದು, ಗಾಳಿಯಲ್ಲಿ ತೂಗಾಡುವ, ಕೈಯಲ್ಲಿ ಕತ್ತಿ ಹಿಡಿದು ಝಳಪಿಸುವ ಕುತೂಹಲಕಾರಿ ಕ್ಷಣಗಳು ಕಣ್ಣಿಗೆ ಕಟ್ಟಿದಂತಿದ್ದವು.

ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್
ಪಾಕ್ ಆಟಗಾರನ ವಿರುದ್ಧ ಸಿಡಿದೆದ್ದ ವೈಭವ್ ಸೂರ್ಯವಂಶಿ
ಪಾಕ್ ಆಟಗಾರನ ವಿರುದ್ಧ ಸಿಡಿದೆದ್ದ ವೈಭವ್ ಸೂರ್ಯವಂಶಿ