AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಣೆಕಟ್ಟಿನ ನೀರು ಬತ್ತಿದ್ದರಿಂದ ಮುಳುಗಿದ್ದ ಕಾರು ಮೇಲೆ ಬಂತು, ಇಬ್ಬರ ಅಸ್ಥಿಪಂಜರ ಪತ್ತೆ

ಮಧ್ಯಪ್ರದೇಶದ ನದಿಯೊಂದರಲ್ಲಿ ಕಾರೊಂದು ಗೋಚರವಾಗಿದ್ದು, ಅದರಲ್ಲಿ ಇಬ್ಬರ ಅಸ್ಥಿಪಂಜರ ಪತ್ತೆಯಾಗಿದೆ. ನಾಲ್ಕು ತಿಂಗಳ ಹಿಂದೆ ನಾಪತ್ತೆಯಾಗಿದ್ದವರ ಅಸ್ಥಿಪಂಜರ ಇದು ಎಂಬುದು ತಿಳಿದುಬಂದಿದೆ.

ಅಣೆಕಟ್ಟಿನ ನೀರು ಬತ್ತಿದ್ದರಿಂದ ಮುಳುಗಿದ್ದ ಕಾರು ಮೇಲೆ ಬಂತು, ಇಬ್ಬರ ಅಸ್ಥಿಪಂಜರ ಪತ್ತೆ
ಕಾರುImage Credit source: Patrika.com
ನಯನಾ ರಾಜೀವ್
|

Updated on: Jun 19, 2024 | 11:24 AM

Share

ಮಧ್ಯಪ್ರದೇಶ(Madhya Pradesh)ದ ಮೊರೆನಾ ಜಿಲ್ಲೆಯ ಕುವಾರಿ ನದಿಯ ಗೋಪಿ ಗ್ರಾಮದ ಬಳಿ ನಿರ್ಮಿಸಲಾದ ಸ್ಟಾಪ್ ಅಣೆಕಟ್ಟಿನಲ್ಲಿ ನೀರು ಕಡಿಮೆಯಾದ ಕಾರಣ,  ಕಾರು ಕಾಣಿಸಿಕೊಂಡಿದೆ. ಕಾರಿನ ಮಧ್ಯದ ಸೀಟಿನಲ್ಲಿ ಮಹಿಳೆ ಹಾಗೂ ಪುರುಷರೊಬ್ಬರ ಅಸ್ಥಿಪಂಜರ ಪತ್ತೆಯಾಗಿದೆ ಪೊಲೀಸರು ಸ್ಥಳಕ್ಕಾಗಮಿಸಿ ಕಾರಿನ ಸಮೇತ ಅಸ್ಥಿಪಂಜರಗಳನ್ನು ಹೊರತೆಗೆದಿದ್ದಾರೆ. ಮೊದಲು ಯಾರ ಅಸ್ಥಿಪಂಜರಗಳು ಎಂಬುದು ತಿಳಿದುಬಂದಿರಲಿಲ್ಲ.

ಮೃತರ ಗ್ರಾಮ ಸಮೀಪದಲ್ಲೇ ಇದ್ದುದರಿಂದ ಗ್ರಾಮಸ್ಥರು ಅವರನ್ನು ಪತ್ತೆಹಚ್ಚಿದ್ದಾರೆ. ಮಾಹಿತಿ ಪಡೆದ ಸಿಹೋನಿಯಾ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಪತ್ತೆಯಾದ ಅಸ್ಥಿಪಂಜರಗಳಲ್ಲಿ ಛಟ್ ಕಾ ಪುರದ ನಿವಾಸಿ ಜಗದೀಶ್ ಜಾತವ್ ಅವರ ಪುತ್ರ 26 ವರ್ಷದ ನೀರಜ್ ಮತ್ತು ಛಟ್ ಕಾ ಪುರ ನಿವಾಸಿ ಮುಖೇಶ್ ಜಾತವ್ ಅವರ ಪತ್ನಿ 32 ವರ್ಷದ ಮಿಥಿಲೇಶ್ ಅವರು ಗುರುದ್ವಾರ ಮೊಹಲ್ಲಾ ಅಂಬಾಹ್ ನವರು ಎಂದು ಪೊಲೀಸರು ತಿಳಿಸಿದ್ದಾರೆ.

ನೀರಜ್ ಜಾತವ್ ಮತ್ತು ಮಹಿಳೆಯ ಪತಿ ಮುಖೇಶ್ ಜಾತವ್ ಸೋದರ ಸಂಬಂಧಿಗಳು. ಮಹಿಳೆಯ ಪತಿ ಅಂಬಾದಲ್ಲಿ ಸರ್ಕಾರಿ ಶಿಕ್ಷಕರಾಗಿದ್ದು, ಗುರುದ್ವಾರ ಮೊಹಲ್ಲಾ ಅಂಬಾದಲ್ಲಿ ಬಾಡಿಗೆಗೆ ವಾಸಿಸುತ್ತಿದ್ದರು. ಶಿಕ್ಷಕ ಮುಖೇಶ್ ಜಾತವ್ ಫೆಬ್ರವರಿ ತಿಂಗಳಲ್ಲಿ ಅಂಬಾಹ್ ಪೊಲೀಸ್ ಠಾಣೆಯಲ್ಲಿ ಪತ್ನಿ ಮಿಥಿಲೇಶ್ ನಾಪತ್ತೆ ದೂರು ದಾಖಲಿಸಿದ್ದರು.

ಮತ್ತಷ್ಟು ಓದಿ: ಕಾವೇರಿ ನದಿಯಲ್ಲಿ ತೇಲಿ ಬಂದ ಮಹಿಳೆ-ಪುರುಷನ ಮೃತದೇಹ: ನೋಡಲು ಮುಗಿಬಿದ್ದ ಜನರು

ಅದೇ ಸಮಯದಲ್ಲಿ ನೀರಜ್ ಜಾತವ್ ಕೂಡ ಮನೆಯಿಂದ ನಾಪತ್ತೆಯಾಗಿದ್ದರು. ಮಹಿಳೆಯ ಪತಿ ಅಂಬಾ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದರು, ಆದರೆ ಯುವಕನ ಕುಟುಂಬವು ಯಾವುದೇ ದೂರು ನೀಡಿರಲಿಲ್ಲ. ಇದು ಮರ್ಯಾದಾ ಹತ್ಯೆಯೋ ಅಥವಾ ಅಕಸ್ಮಾತ್​ ಆಗಿ ಕಾರು ನದಿಗೆ ಬಿದ್ದಿದೆಯೋ ಎಂಬುದು ತಿಳಿದುಬಂದಿಲ್ಲ.

ಪ್ರತಿ ವರ್ಷ ಮಳೆಗಾಲದ ಮೊದಲು, ಈ ಸ್ಟಾಪ್ ಅಣೆಕಟ್ಟಿನ ಗೇಟ್‌ಗಳನ್ನು ತೆರೆಯಲಾಗುತ್ತದೆ ಮತ್ತು ನದಿಯಿಂದ ನೀರನ್ನು ಹೊರತೆಗೆಯಲಾಗುತ್ತದೆ, ಇದು ನದಿಯನ್ನು ಸಹ ಸ್ವಚ್ಛಗೊಳಿಸುತ್ತದೆ.

ಮಂಗಳವಾರ ಬೆಳಗ್ಗೆ ಸ್ಟಾಪ್ ಡ್ಯಾಂನ ಗೇಟ್ ತೆರೆಯಲಾಯಿತು. ಮಧ್ಯಾಹ್ನದ ವೇಳೆಗೆ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾದಾಗ ನದಿಯ ಮಧ್ಯದಲ್ಲಿ ಪಾಚಿ ಹಾಗೂ ನದಿಯಲ್ಲಿ ಗಿಡಗಳು ಬೆಳೆದು ನಿಂತಿದ್ದ ಕಾರೊಂದು ಕಾಣಿಸಿಕೊಂಡಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ರಾಯ್ ಆತ್ಮಹತ್ಯೆ ತನಿಖೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ರಾಯ್ ಆತ್ಮಹತ್ಯೆ ತನಿಖೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ
ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ
ಮಹಿಳಾ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು
ಮಹಿಳಾ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ