AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊತ್ತಿ ಉರಿದ 40 ಪ್ರಯಾಣಿಕರಿದ್ದ ದೆಹಲಿ-ವಾರಾಣಸಿ ಸ್ಲೀಪರ್​ ಬಸ್

ಮೂವತ್ತರಿಂದ ನಲವತ್ತು ಪ್ರಯಾಣಿಕರನ್ನು ಹೊತ್ತು ಹೊರಟಿದ್ದ ದೆಹಲಿ-ವಾರಾಣಸಿ ಸ್ಲೀಪರ್ ಬಸ್(Bus) ಬೆಂಕಿಗಾಹುತಿಯಾಗಿರುವ ಘಟನೆ ವರದಿಯಾಗಿದೆ. ಕಾನ್ಪುರದ ಎನ್​ಎಚ್​19ರ ರಾಮದೇವಿ ಅಡ್ಡರಸ್ತೆಯಲ್ಲಿ ಪ್ರಯಾಣಿಕರು ತಮ್ಮ ಜೀವಗಳನ್ನು ಉಳಿಸಿಕೊಳ್ಳಲು ಅಡ್ಡಾದಿಡ್ಡಿಯಾಗಿ ಓಡಿದ್ದಾರೆ. ಕೂಡಲೇ ಬೆಂಕಿ ಇಡೀ ಬಸ್ಸನ್ನು ಆವರಿಸಿತ್ತು. ಕೆಲವು ಪ್ರಯಾಣಿಕರು ಗಾಯಗೊಂಡಿದ್ದರೂ, ಎಲ್ಲಾ ಜೀವಗಳನ್ನು ಉಳಿಸಲಾಗಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.

ಹೊತ್ತಿ ಉರಿದ 40 ಪ್ರಯಾಣಿಕರಿದ್ದ ದೆಹಲಿ-ವಾರಾಣಸಿ ಸ್ಲೀಪರ್​ ಬಸ್
ಬಸ್Image Credit source: India TV
ನಯನಾ ರಾಜೀವ್
|

Updated on: Nov 28, 2025 | 3:32 PM

Share

ನವದೆಹಲಿ, ನವೆಂಬರ್ 28: ಮೂವತ್ತರಿಂದ ನಲವತ್ತು ಪ್ರಯಾಣಿಕರನ್ನು ಹೊತ್ತು ಹೊರಟಿದ್ದ ದೆಹಲಿ-ವಾರಾಣಸಿ ಸ್ಲೀಪರ್ ಬಸ್(Bus) ಬೆಂಕಿಗಾಹುತಿಯಾಗಿರುವ ಘಟನೆ ವರದಿಯಾಗಿದೆ. ಕಾನ್ಪುರದ ಎನ್​ಎಚ್​19ರ ರಾಮದೇವಿ ಅಡ್ಡರಸ್ತೆಯಲ್ಲಿ ಪ್ರಯಾಣಿಕರು ತಮ್ಮ ಜೀವಗಳನ್ನು ಉಳಿಸಿಕೊಳ್ಳಲು ಅಡ್ಡಾದಿಡ್ಡಿಯಾಗಿ ಓಡಿದ್ದಾರೆ. ಕೂಡಲೇ ಬೆಂಕಿ ಇಡೀ ಬಸ್ಸನ್ನು ಆವರಿಸಿತ್ತು. ಕೆಲವು ಪ್ರಯಾಣಿಕರು ಗಾಯಗೊಂಡಿದ್ದರೂ, ಎಲ್ಲಾ ಜೀವಗಳನ್ನು ಉಳಿಸಲಾಗಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.

ಬಸ್ ವಾರಾಣಸಿಗೆ ಹೋಗುತ್ತಿತ್ತು, ಮೇಲಿನ ಡೆಕ್​ನಲ್ಲಿ ಇರಿಸಿಲಾಗಿದ್ದ ಸಾಮಾನುಗಳಿಂದ ಹಠಾತ್ ಹೊಗೆ ಬೆಂಕಿಗೆ ಕಾರಣವಾಗಿತ್ತು. ಬಸ್ ಚಾಲಕ ಮತ್ತು ನಿರ್ವಾಹಕ ಕೂಡಲೇ ಎಚ್ಚರಿಕೆ ನೀಡಿದ್ದರು. ಬಸ್ಸನ್ನು ಪಕ್ಕಕ್ಕೆ ನಿಲ್ಲಿಸಲು ಪ್ರಯತ್ನಿಸಿದರು ಅಷ್ಟರಲ್ಲಾಗಲೇ ಬೆಂಕಿ ಹೊತ್ತಿಕೊಳ್ಳಲು ಶುರುವಾಗಿತ್ತು.

ಬಸ್ಸಿನ ಮೇಲ್ಛಾವಣಿಯ ಮೇಲೆ ತುಂಬಿದ್ದ ಭಾರವಾದ ಲಗೇಜಿನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿತ್ತು. ಇದರಿಂದಾಗಿ ಪ್ರಯಾಣಿಕರು ಕೂಡಲೇ ಹೊರ ನಡೆದರು. ಕೆಲವರು ಕಿಟಕಿಗಳಿಂದ ಕೆಳಗೆ ಹಾರಿದ್ದಾರೆ. ಕೆಲವರು ಸಿಕ್ಕಿಹಾಕಿಕೊಂಡಿದ್ದರು. ಬೆಂಕಿಯನ್ನು ಕಡಿಮೆ ಮಾಡಲು ನೀರಿನ ಬಾಟಲಿಗಳನ್ನು ಎಸೆದಿದ್ದರು.ಬಸ್ಸಿನಲ್ಲಿ ಅನುಮತಿಸಲಾದ ಪ್ರಮಾಣಕ್ಕಿಂತ ಹೆಚ್ಚಿನ ಸಾಮಾನುಗಳನ್ನು ತುಂಬಿಸಲಾಗಿತ್ತು ಎಂದು ಪ್ರಯಾಣಿಕರೊಬ್ಬರು ಹೇಳಿದ್ದಾರೆ. ಪ್ಲಾಸ್ಟಿಕ್ ಚೀಲಗಳು, ಕಬ್ಬಿಣದ ಪೆಟ್ಟಿಗೆಗಳು ಮತ್ತು ಟ್ರಂಕ್​ಗಳು ಸೇರಿದಂತೆ ಹಲವು ವಸ್ತುಗಳಿದ್ದವು.

ಮತ್ತಷ್ಟು ಓದಿ: ಕರ್ನೂಲ್ ಬಸ್ ದುರಂತ: ಏಕಾಏಕಿ ಬೆಂಕಿ ಹೊತ್ತಿಕೊಂಡಿದ್ಹೇಗೆ? ಅಸಲಿ ಕಾರಣವೇನು?

ಮತ್ತೊಬ್ಬ ಪ್ರಯಾಣಿಕ ತನ್ನ ಬ್ಯಾಗ್‌ನಲ್ಲಿ 20,000 ರೂ. ನಗದು, ಬಟ್ಟೆಗಳು ಮತ್ತು ಪ್ರಮುಖ ದಾಖಲೆಗಳು ಸುಟ್ಟುಹೋಗಿವೆ ಎಂದು ಹೇಳಿದರು. ಮದುವೆಗೆ ಮಿರ್ಜಾಪುರಕ್ಕೆ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ತಮ್ಮ ಲಡ್ಡು ಗೋಪಾಲ್ ವಿಗ್ರಹ, ಲ್ಯಾಪ್‌ಟಾಪ್, ಬಟ್ಟೆಗಳು ಮತ್ತು 40,000 ರೂ. ಮೌಲ್ಯದ ಆಭರಣಗಳಿಟ್ಟುಕೊಂಡಿದ್ದರು ಅವು ಕೂಡ ಸುಟ್ಟುಹೋಗಿವೆ ಎಂದು ಹೇಳುತ್ತಾ ಕಣ್ಣೀರು ಹಾಕಿದ್ದಾರೆ.

ಮಾಹಿತಿ ಪಡೆದ ನಂತರ ಅಗ್ನಿಶಾಮಕ ಇಲಾಖೆ ತ್ವರಿತವಾಗಿ ಕಾರ್ಯನಿರ್ವಹಿಸಿತ್ತು ಮತ್ತು ಸಿಎಫ್‌ಒ ದೀಪಕ್ ಶರ್ಮಾ ರಕ್ಷಣಾ ಕಾರ್ಯಾಚರಣೆಗಾಗಿ ತಕ್ಷಣವೇ ಆರು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಕಳುಹಿಸಿದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿದ್ದರಿಂದ, ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಸುಮಾರು ಒಂದು ಗಂಟೆ ಶ್ರಮಿಸಬೇಕಾಯಿತು. ಇತ್ತೀಚೆಗಷ್ಟೇ ಹೈದರಾಬಾದ್‌ನಿಂದ ಬೆಂಗಳೂರಿಗೆ 41 ಪ್ರಯಾಣಿಕರೊಂದಿಗೆ ತೆರಳುತ್ತಿದ್ದ ಐಷಾರಾಮಿ ಬಸ್ ಬೆಂಕಿಗಾಹುತಿಯಾಗಿ 20 ಮಂದಿ ಸಜೀವ ದಹನಗೊಂಡು, ಹಲವರು ಗಾಯಗೊಂಡಿದ್ದರು.

ಬೆಂಕಿ ತಗುಲಲು ಒಂದು ದ್ವಿಚಕ್ರ ವಾಹನ ಬಸ್‌ಗೆ ಡಿಕ್ಕಿ ಹೊಡೆದಿದ್ದು ಕಾರಣ ಎನ್ನಲಾಗಿದೆ. ನಂತರ ಜೈಸಲ್ಮೇರ್‌ನಿಂದ ಜೋಧ್‌ಪುರಕ್ಕೆ ತೆರಳುತ್ತಿದ್ದ ಬಸ್ ಅಪಘಾತದ ನಂತರ ಬೆಂಕಿಗೆ ಆಹುತಿಯಾಯಿತು. ಈ ಘಟನೆಯಲ್ಲಿ 57 ಜನರಲ್ಲಿ ಕನಿಷ್ಠ 20 ಮಂದಿ ಸಾವನ್ನಪ್ಪಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us