AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಕ್ಷಿಣ ಭಾರತದ ಎನ್ ​440 ಕೆ ಕೊವಿಡ್-19 ರೂಪಾಂತರ ಯಾವುದು? ಇದು 15 ಪಟ್ಟು ಹೆಚ್ಚು ಮಾರಕವೇ?

ಜ್ವರ, ಸ್ನಾಯುಗಳಲ್ಲಿ ನೋವು, ನಿರಂತರವಾಗಿ ಕೆಮ್ಮು, ವಾಸನೆ ಮತ್ತು ರುಚಿ ಇಲ್ಲದಿರುವುದು, ಗಂಟಲು ನೋವು, ತಲೆನೋವು, ಹೊಟ್ಟೆ ಉಬ್ಬರ ಜೊತೆಗೆ ಕೈ ಮತ್ತು ಕಾಲ್ಬೆರಳುಗಳ ಬಣ್ಣಗಳ ಬದಲಾವಣೆ N440K ರೂಪಾಂತರಿ ಕೊರೊನಾ ಲಕ್ಷಣಗಳು.

ದಕ್ಷಿಣ ಭಾರತದ ಎನ್ ​440 ಕೆ ಕೊವಿಡ್-19 ರೂಪಾಂತರ ಯಾವುದು? ಇದು 15 ಪಟ್ಟು ಹೆಚ್ಚು ಮಾರಕವೇ?
ಸಂಗ್ರಹ ಚಿತ್ರ
shruti hegde
| Edited By: |

Updated on:May 05, 2021 | 7:21 PM

Share

ಈಗಾಗಲೇ B.1617 ಎಂದು ಕರೆಯಲ್ಪಡುವ SARS-CoV-2 ನ ಭಾರತೀಯ ರೂಪಾಂತರವು ದೇಶದಲ್ಲಿ ಹೆಚ್ಚು ಪರಿಣಾಮ ಬೀರುತ್ತಿದೆ. ಈ ಮಧ್ಯೆ, ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿ ಅದರಲ್ಲಿಯೂ ಮುಖ್ಯವಾಗಿ ಆಂಧ್ರಪ್ರದೇಶದಲ್ಲಿ ಹೊಸ ರೂಪಾಂತರಿ ಕೊರೊನಾ ಕಂಡು ಬಂದಿದೆ. ಈ ಕುರಿತಂತೆ ಹೈದರಾಬಾದ್​ ಸಂಶೋಧಕರು ತಿಳಿಸಿದ್ದಾರೆ. ಇದು ಹಿಂದಿನದಕ್ಕಿಂತ 15 ಪಟ್ಟು ಹೆಚ್ಚು ಮಾರಕವಾಗಿದೆ ಎಂಬುದು ಸಂಶೋಧನೆಯಿಂದ ತಿಳಿದು ಬಂದಿದೆ. ಮುಖ್ಯವಾಗಿ N440K ರೂಪಾಂತರಿ ಕೊರೊನಾ ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಹಾಗೂ ಛತ್ತೀಸ್​ಗಡದಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ .

ಸೆಂಟರ್​ ಫಾರ್​ ಸೆಲ್ಯುಲರ್​ ಮತ್ತು ಮಾಲಿಕ್ಯುಲರ್​ ಬಯಾಲಜಿ(ಸಿಸಿಎಂಬಿ) ವಿಜ್ಞಾನಿಗಳು ಹೊಸ ಕೊರೊನಾ ವೈರಸ್​ ರೂಪಾಂತರ N440K ಅನ್ನು ಕಂಡು ಹಿಡಿದಿದ್ದಾರೆ. ಮೊದಲ ಬಾರಿಗೆ ಆಂಧ್ರಪ್ರದೇಶದ ಕರ್ನೂಲ್​ನಲ್ಲಿ ಈ ವೈರಸ್​ ಕಂಡುಹಿಡಿಯಲಾಗಿದೆ.

ಜಿಲ್ಲಾ ಕೊವಿಡಿ ವಿಶೇಷ ಅಧಿಕಾರಿ ಮತ್ತು ಆಂಧ್ರ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಪಿ.ವಿ. ಸುಧಾಕರ್​ ಅವರು ವೈರಸ್​ ಕುರಿತಂತೆ ಮಾಹಿತಿ ಹಂಚಿಕೊಂಡಿದ್ದು, ‘ಈ ರೂಪಾಂತರ ಕೊರೊನಾ ವೈರಸ್​ ಹೆಚ್ಚು ವೇಗದಲ್ಲಿ ಹರಡುತ್ತದೆ. ಈ ಕುರಿತಂತೆ ನಾವು ಗಮನ ಹರಿಸಿದ್ದೇವೆ. ಪ್ರಸ್ತುತದಲ್ಲಿ ರೋಗಿಗಳು ಮೂರು ಅಥವಾ ನಾಲ್ಕು ದಿನಗಳಲ್ಲಿಯೇ ಗಂಭೀರ ಸ್ಥಿತಿಗೆ ತಲುಪುತ್ತಿದ್ದಾರೆ. ಅದಕ್ಕಾಗಿಯೇ ಆಮ್ಲಜನಕ ಹೊಂದಿರುವ ಬೆಡ್​ಗಳ ಮೇಲೆ ಭಾರೀ ಒತ್ತಡವಿದೆ ಎಂದು ಹೇಳಿದ್ದಾರೆ. ಈ ವೈರಸ್​ ಕಡಿಮೆ ಅವಧಿಯಲ್ಲಿ ಬಹುಬೇಗ ಹರಡುವುದರಿಂದಾಗಿ ನಾಲ್ಕರಿಂದ ಐದು ವ್ಯಕ್ತಿಗಳಿಗೆ ಸೋಂಕು ತಗುಲುವಂತೆ ಮಾಡುತ್ತದೆ. ಹೀಗಾಗಿ ಇದು ಹೆಚ್ಚು ಮಾರಕವಾಗಿದೆ ಎಂದು ಸಂಶೋಧನೆ ತಿಳಿಸಿದೆ. ಈ ಕುರಿತಂತೆ ಭಯಭೀತರಾಗುವ ಅವಶ್ಯಕತೆ ಇಲ್ಲ. ಈ ಒತ್ತಡವನ್ನು ಮುಂಬರುವ ದಿನಗಳಲ್ಲಿ ನಿಭಾಯಿಸಲಾಗುತ್ತದೆ ಎಂದು ತಜ್ಞರು ಸೂಚನೆ ನೀಡಿದ್ದಾರೆ.

ನಾವು ಹೊಸ ಕೊವಿಡ್ ರೂಪಾಂತರವನ್ನು ನೋಡುತ್ತಿದ್ದೇವೆ. ಇದರ ಲಕ್ಷಣಗಳೆಂದರೆ ಜ್ವರ, ಸ್ನಾಯುಗಳಲ್ಲಿ ನೋವು, ನಿರಂತರವಾಗಿ ಕೆಮ್ಮು, ವಾಸನೆ ಮತ್ತು ರುಚಿ ಇಲ್ಲದಿರುವುದು, ಗಂಟಲು ನೋವು, ತಲೆನೋವು, ಹೊಟ್ಟೆ ಉಬ್ಬರ ಜೊತೆಗೆ ಕೈ ಮತ್ತು ಕಾಲ್ಬೆರಳುಗಳ ಬಣ್ಣಗಳ ಮೂಲಕ ಈ ವೈರಸ್​ ಪತ್ತೆಯಾಗುತ್ತದೆ ಎಂದು ಉಜಾಲಾ ಸಿಗ್ನಸ್ ಗ್ರೂಫ್ ಆಫ್​ ಹಾಸ್ಪಿಟಲ್​ನ ಸ್ಥಾಪಕ ಮತ್ತು ನಿರ್ದೇಶಕ ಡಾ.ಶುಚಿನ್​ ಬಜಾಜ್​ ಮಾಹಿತಿ ತಿಳಿಸಿದ್ದಾರೆ.

ಇದನ್ನೂ ಓದಿ: 17 ದೇಶಗಳಲ್ಲಿ ಭಾರತದ ಕೊರೊನಾ ರೂಪಾಂತರಿ ವೈರಾಣು ಪತ್ತೆ: ವಿಶ್ವ ಆರೋಗ್ಯಸಂಸ್ಥೆ

Published On - 4:12 pm, Wed, 5 May 21

Follow Us
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್