AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಬರಿಮಲೆ ವಿಗ್ರಹದಿಂದ ನಾಪತ್ತೆಯಾಗಿದ್ದ 4 ಕೆಜಿ ಚಿನ್ನ ಪತ್ತೆ, ಎಲ್ಲಿತ್ತು ಗೊತ್ತಾ?

ಕೇರಳದ ಪ್ರಸಿದ್ಧ ಶಬರಿಮಲೆ(Sabarimala) ದೇವಸ್ಥಾನದಿಂದ ಕಣ್ಮರೆಯಾಗಿದ್ದ ಚಿನ್ನ ಸಿಕ್ಕಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ದೇವಸ್ಥಾನದ ವಿಗ್ರಹದಿಂದ 4 ಕೆಜಿ ತೂಕದ ಕೋಟಿಗಟ್ಟಲೆ ಬೆಲೆ ಬಾಳುವ ಚಿನ್ನ ನಿಗೂಢವಾಗಿ ಕಣ್ಮರೆಯಾಗಿತ್ತು. ದೇವಾಲಯದ ಆಡಳಿತ ಮಂಡಳಿಗೆ ಈ ವಿಷಯ ತಿಳಿದಾಗ, ಕೋಲಾಹಲ ಭುಗಿಲೆದ್ದಿತ್ತು. ಈ ವಿಷಯ ಹೈಕೋರ್ಟ್ ಮೆಟ್ಟಿಲೇರಿತು, ಅದು ಈಗ ತನಿಖೆಗೆ ಆದೇಶಿಸಿತ್ತು. 2019 ರಲ್ಲಿ, ಶಬರಿಮಲೆ ದೇವಸ್ಥಾನದ ಗರ್ಭಗುಡಿಯ (ಸನ್ನಿಧಾನಂ) ಕೆಲಸ ಪ್ರಾರಂಭವಾಯಿತು.

ಶಬರಿಮಲೆ ವಿಗ್ರಹದಿಂದ ನಾಪತ್ತೆಯಾಗಿದ್ದ 4 ಕೆಜಿ ಚಿನ್ನ ಪತ್ತೆ, ಎಲ್ಲಿತ್ತು ಗೊತ್ತಾ?
ಶಬರಿಮಲೆ
ನಯನಾ ರಾಜೀವ್
|

Updated on: Sep 29, 2025 | 2:54 PM

Share

ಶಬರಿಮಲೆ, ಸೆಪ್ಟೆಂಬರ್ 29: ಕೇರಳದ ಪ್ರಸಿದ್ಧ ಶಬರಿಮಲೆ(Sabarimala) ದೇವಸ್ಥಾನದಿಂದ ಕಣ್ಮರೆಯಾಗಿದ್ದ ಚಿನ್ನ ಸಿಕ್ಕಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ದೇವಸ್ಥಾನದ ವಿಗ್ರಹದಿಂದ 4 ಕೆಜಿ ತೂಕದ ಕೋಟಿಗಟ್ಟಲೆ ಬೆಲೆ ಬಾಳುವ ಚಿನ್ನ ನಿಗೂಢವಾಗಿ ಕಣ್ಮರೆಯಾಗಿತ್ತು. ದೇವಾಲಯದ ಆಡಳಿತ ಮಂಡಳಿಗೆ ಈ ವಿಷಯ ತಿಳಿದಾಗ, ಕೋಲಾಹಲ ಭುಗಿಲೆದ್ದಿತ್ತು. ಈ ವಿಷಯ ಹೈಕೋರ್ಟ್ ಮೆಟ್ಟಿಲೇರಿತು, ಅದು ಈಗ ತನಿಖೆಗೆ ಆದೇಶಿಸಿತ್ತು. 2019 ರಲ್ಲಿ, ಶಬರಿಮಲೆ ದೇವಸ್ಥಾನದ ಗರ್ಭಗುಡಿಯ (ಸನ್ನಿಧಾನಂ) ಕೆಲಸ ಪ್ರಾರಂಭವಾಯಿತು.

ಈ ಉದ್ದೇಶಕ್ಕಾಗಿ ದೇವಾಲಯದಿಂದ ಸುಮಾರು 42 ಕೆಜಿ ಚಿನ್ನವನ್ನು ತೆಗೆದುಕೊಳ್ಳಲಾಗಿದೆ. ಯೋಜನೆಯ ಪ್ರಕಾರ, ಈ ಚಿನ್ನದ ತಟ್ಟೆಗಳನ್ನು ವಿಶೇಷ ಪ್ರಕ್ರಿಯೆಯನ್ನು ಬಳಸಿಕೊಂಡು ಪುನಃ ಲೇಪಿಸಿ ನಂತರ ಗರ್ಭಗುಡಿಯಲ್ಲಿ ಮರು ಸ್ಥಾಪಿಸಬೇಕಾಗಿತ್ತು. ಈ ತಟ್ಟೆಗಳನ್ನು ಹಿಂತಿರುಗಿಸಿ ದೇವಾಲಯದಲ್ಲಿ ಸ್ಥಾಪಿಸಿದಾಗ, ಆಘಾತಕಾರಿ ಸತ್ಯ ಬಹಿರಂಗವಾಯಿತು, ಅವುಗಳ ತೂಕ ಸುಮಾರು 38 ಕೆಜಿಗೆ ಇಳಿದಿತ್ತು, ಅಂದರೆ ಸರಿಸುಮಾರು 4.45 ಕೆಜಿ ಚಿನ್ನ ಕಣ್ಮರೆಯಾಗಿತ್ತು.

ಇದೀಗ ಆ ಚಿನ್ನ ಸಿಕ್ಕಿದೆ ಎನ್ನುವ ಮಾಹಿತಿ ಸಿಕ್ಕಿದೆ. 2019ರಲ್ಲಿ ದೇವಸ್ಥಾನಕ್ಕೆ ಚಿನ್ನವನ್ನು ನೀಡಿದ್ದ ಪ್ರಾಯೋಜಕರ ಸಂಬಂಧಿಕರೊಬ್ಬರ ಮನೆಯಲ್ಲಿ ಈ ಚಿನ್ನ ಪತ್ತೆಯಾಗಿದೆ. ತಿರುವನಂತಪುರಂನ ಉಪನಗರದಲ್ಲಿರುವ ವೆಂಜರಮೂಡು ಎಂಬಲ್ಲಿ ಸಿಕ್ಕಿದೆ. ಟಿಡಿಬಿ ವಿಜಿಲೆನ್ಸ್ ಮತ್ತು ಭದ್ರತಾ ಪೊಲೀಸ್ ವರಿಷ್ಠಾಧಿಕಾರಿ ಸುನಿಲ್ ಕುಮಾರ್ ವಿ ನೇತೃತ್ವದ ತಂಡವು ಶನಿವಾರ ಬೆಂಗಳೂರಿನ ಮಲಯಾಳಿ ಉನ್ನಿಕೃಷ್ಣನ್ ಪೊಟ್ಟಿ ಅವರ ವೆಂಜರಮೂಡಿನಲ್ಲಿರುವ ಸಂಬಂಧಿಕರ ಮನೆಯಲ್ಲಿ ಇದನ್ನು ಪತ್ತೆಹಚ್ಚಿತ್ತು.

ನಾವು ಪೀಠವನ್ನು ವಶಪಡಿಸಿಕೊಂಡು ಶಬರಿಮಲೆಗೆ ಸ್ಥಳಾಂತರಿಸಿದ್ದೇವೆ. ಸೋಮವಾರ ಪ್ರಕರಣವನ್ನು ಪರಿಗಣಿಸುವಾಗ ಕೇರಳ ಹೈಕೋರ್ಟ್‌ಗೆ ವಿವರವಾದ ವರದಿಯನ್ನು ಸಲ್ಲಿಸಲಾಗುವುದು ಎಂದು ವಿಜಿಲೆನ್ಸ್ ಎಸ್‌ಪಿ ಸುನಿಲ್ ಕುಮಾರ್ ಪಿಟಿಐಗೆ ತಿಳಿಸಿದ್ದಾರೆ.

ಮತ್ತಷ್ಟು ಓದಿ: ಹುಬ್ಬಳ್ಳಿ ಶಬರಿಮಲೆ ರೈಲು: ಅಯ್ಯಪ್ಪ ಭಕ್ತರಿಗಾಗಿ ನೈಋತ್ಯ ರೈಲ್ವೇಸ್ ವಿಶೇಷ ಕೊಡುಗೆ

ಸಚಿವ ಕೆ. ರಾಧಾಕೃಷ್ಣನ್ ಮಾತನಾಡಿ,ಶಬರಿಮಲೆಯಲ್ಲಿ ಎಲ್ಲವೂ ಪಾರದರ್ಶಕವಾಗಿ ನಡೆಯುತ್ತಿದೆ. ನ್ಯಾಯಾಲಯ ವರದಿಯನ್ನು ಪರಿಗಣಿಸಿದ ನಂತರ ಇತರ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ಚಿನ್ನದ ಲೇಪನದಲ್ಲಿನ ಅಕ್ರಮಗಳನ್ನು ಹೈಕೋರ್ಟ್ ಪ್ರಶ್ನಿಸಿದ್ದಲ್ಲದೆ, ದೇವಾಲಯದೊಳಗಿನ ದ್ವಾರಪಾಲಕ ಪ್ರತಿಮೆಗಳು ಮತ್ತು ಇತರ ರಚನೆಗಳನ್ನು ತಕ್ಷಣ ಪರಿಶೀಲಿಸುವಂತೆ ಆದೇಶಿಸಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ