ಕೊವಿಡ್​ 19 ಲಸಿಕೆ ವಿಚಾರದಲ್ಲಿ ರಾಜಕೀಯ, ವಿವಾದ ಮಾಡುವುದನ್ನು ನಿಲ್ಲಿಸಿ: ಬಿಎಸ್​​ಪಿ ಮುಖ್ಯಸ್ಥೆ ಮಾಯಾವತಿ ಟ್ವೀಟ್​

ದೇಶದಲ್ಲಿ ಪ್ರತಿಯೊಬ್ಬರೂ ಲಸಿಕೆ ಪಡೆಯಬೇಕು. ಈ ಮೂಲಕ ಕೊರೊನಾದಿಂದ ಪಾರಾಗುವ ಜತೆ ನಮ್ಮಲ್ಲಿನ ತಜ್ಞರು, ವಿಜ್ಞಾನಿಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಮಾಯಾವತಿ ಹೇಳಿದ್ದಾರೆ.

ಕೊವಿಡ್​ 19 ಲಸಿಕೆ ವಿಚಾರದಲ್ಲಿ ರಾಜಕೀಯ, ವಿವಾದ ಮಾಡುವುದನ್ನು ನಿಲ್ಲಿಸಿ: ಬಿಎಸ್​​ಪಿ ಮುಖ್ಯಸ್ಥೆ ಮಾಯಾವತಿ ಟ್ವೀಟ್​
ಮಾಯಾವತಿ
Edited By:

Updated on: Jun 22, 2021 | 3:45 PM

ಲಖನೌ: ಕೊರೊನಾ ಸೋಂಕು ನಿಯಂತ್ರಣದ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು. ಸದ್ಯ ದೇಶದ ಎಲ್ಲ ಜನರೂ ಕೊವಿಡ್​ ವ್ಯಾಕ್ಸಿನ್ ಪಡೆಯುವುದು ತುಂಬ ಮುಖ್ಯ ಎಂದು ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ. ಕೊರೊನಾ ದೇಶಕ್ಕೆ ಕಾಲಿಟ್ಟಾಗಿನಿಂದಲೂ ಒಂದಲ್ಲ ಒಂದು ವಿಚಾರದಲ್ಲಿ ರಾಜಕೀಯದೊಂದಿಗೆ ತಳುಕು ಹಾಕಿಕೊಳ್ಳುತ್ತಲೇ ಬಂದಿದೆ. ಹಾಗೇ, ಲಸಿಕೆ ಅಭಿವೃದ್ಧಿಯಾದ ಮೇಲೆ ಕೂಡ ಪ್ರತಿಪಕ್ಷಗಳು ಅದರೊಂದಿಗೆ ರಾಜಕೀಯ ಬೆರೆಸಿದ್ದು ಗೊತ್ತೇ ಇದೆ. ಕೊರೊನಾ ಲಸಿಕೆ ಅಭಿವೃದ್ಧಿಗೆ ಸಂಬಂಧಪಟ್ಟಂತೆ ವಿವಿಧ ರೀತಿಯ ರಾಜಕೀಯ ಆರೋಪ-ಪ್ರತ್ಯಾರೋಪಗಳು, ವಿವಾದಗಳು ಎದ್ದಿದ್ದವು. ಈಗಲೂ ಸಹ ಮುಂದುವರಿಯುತ್ತಲೇ ಇದೆ.

ಹೀಗಿರುವಾಗ ಮಾಯಾವತಿ ಈ ರಾಜಕೀಯ ಕೊನೆಗೊಳಿಸುವಂತೆ ಟ್ವೀಟ್​ ಮೂಲಕ ಕರೆ ಕೊಟ್ಟಿದ್ದಾರೆ. ಕೊರೊನಾ ಲಸಿಕೆಗಳ ಸಂಬಂಧ ರಾಜಕೀಯ, ವಿವಾದಗಳನ್ನು ಅಂತ್ಯಗೊಳಿಸಬೇಕು. ಲಸಿಕೆಗಳು ದೇಶದ ಪ್ರತಿಯೊಬ್ಬನಿಗೂ ಸಿಗುವಂತಾಗಬೇಕು. ಅದಕ್ಕಾಗಿ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಮಾಯಾವತಿ ಹೇಳಿದ್ದಾರೆ.

ದೇಶದಲ್ಲಿ ಪ್ರತಿಯೊಬ್ಬರೂ ಲಸಿಕೆ ಪಡೆಯಬೇಕು. ಈ ಮೂಲಕ ಕೊರೊನಾದಿಂದ ಪಾರಾಗುವ ಜತೆ ನಮ್ಮಲ್ಲಿನ ತಜ್ಞರು, ವಿಜ್ಞಾನಿಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಇನ್ನು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಲಸಿಕೆ ಪೂರೈಕೆ ಮಾಡುವ ಜತೆಗೆ, ಅಗತ್ಯವಿರುವ ವೈದ್ಯಕೀಯ ಸೌಕರ್ಯಗಳನ್ನೂ ಒದಗಿಸಬೇಕು. ಈ ಮೂಲಕ ದೇಶದ ವೈದ್ಯಕೀಯ ಕ್ಷೇತ್ರವನ್ನು ಮತ್ತಷ್ಟು ಸದೃಢಗೊಳಿಸಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅಯ್ಯೋ ಪಾಪ ಎನ್ನುವ ಮುನ್ನ ಪೂರ್ತಿ ವಿಡಿಯೋ ನೋಡಿ; ವೈರಲ್​ ಸುದ್ದಿಯ ಅಸಲಿ ಕರಾಮತ್ತು ಇಲ್ಲಿದೆ

Web contact

TV9 Kannada

Read More
Follow Us