ಅಯ್ಯೋ ಪಾಪ ಎನ್ನುವ ಮುನ್ನ ಪೂರ್ತಿ ವಿಡಿಯೋ ನೋಡಿ; ವೈರಲ್​ ಸುದ್ದಿಯ ಅಸಲಿ ಕರಾಮತ್ತು ಇಲ್ಲಿದೆ

Viral Video: ಇದೇನು ಕಥೆ ಎಂದುಕೊಳ್ಳುವಷ್ಟರಲ್ಲಿ ಆತ ಏಕಾಏಕಿ ಎದ್ದು ಕುಣಿಯಲಾರಂಭಿಸಿ ಅಷ್ಟು ಹೊತ್ತು ಏನೋ ವಿಷಯವಿದೆ ಎಂದು ವಿಡಿಯೋ ನೋಡಿದವರೆಲ್ಲಾ ತಲೆ ಚಚ್ಚಿಕೊಳ್ಳುವಂತೆ ಮಾಡುತ್ತಾನೆ.

ಅಯ್ಯೋ ಪಾಪ ಎನ್ನುವ ಮುನ್ನ ಪೂರ್ತಿ ವಿಡಿಯೋ ನೋಡಿ; ವೈರಲ್​ ಸುದ್ದಿಯ ಅಸಲಿ ಕರಾಮತ್ತು ಇಲ್ಲಿದೆ
ವೈರಲ್​ ವಿಡಿಯೋದ ತುಣುಕು
Follow us
| Updated By: Skanda

Updated on:Jun 22, 2021 | 3:24 PM

ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರಗಿಟ್ಟಿಸಿಕೊಳ್ಳುವ ಗೀಳು ಆರಂಭವಾದ ನಂತರ ಕೃತಕ ವರ್ತನೆ ಸಾಧಾರಣ ವಿಷಯ ಎಂಬಂತಾಗಿದೆ. ಎಷ್ಟೋ ಜನ ಉದ್ದೇಶಪೂರ್ವಕವಾಗಿಯೇ ವಿಚಿತ್ರವಾಗಿ ವರ್ತಿಸುತ್ತಾ ಗಮನ ಸೆಳೆಯುವ ತಂತ್ರ ಅನುಸರಿಸುತ್ತಾರೆ. ಕೆಲ ಸಂದರ್ಭಗಳಲ್ಲಿ ಹೀಗೆಲ್ಲಾ ಮಾಡೋದು ಸಾಧ್ಯವಿದೆಯಾ ಎಂದು ನೋಡಿದವರು ಹುಬ್ಬೇರಿಸುವ ಮಟ್ಟಿಗೆ ಅವರ ಹಾವ, ಭಾವ, ನಡವಳಿಕೆಗಳು ವಿಭಿನ್ನವಾಗಿರುತ್ತವೆ. ವಿಪರ್ಯಾಸವೆಂದರೆ ಅಂತಹ ಘಟನೆಗಳನ್ನೆಲ್ಲಾ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟರೆ ಸಾಕು ಅವು ಲಂಗು ಲಗಾಮಿಲ್ಲದಂತೆ ಓಡುತ್ತವೆ. ಬಿಡುವಿನಲ್ಲಿ ಮೊಬೈಲ್​ ನೋಡುತ್ತಾ ಕುಳಿತಾಗ ಅರಿವಿಗೆ ಬಾರದಂತೆಯೇ ಇಂತಹ ಅದೆಷ್ಟೋ ಸಂಗತಿಗಳು ಕಣ್ಣಿಗೆ ಬಿದ್ದು ನಮ್ಮನ್ನು ಹಿಡಿದಿಟ್ಟುಕೊಳ್ಳುತ್ತವೆ. ಆದರೆ, ಅವುಗಳಲ್ಲಿ ಹೆಚ್ಚಿನವುಗಳ ಅಸಲಿಯತ್ತೇ ಬೇರೆ ಇದ್ದು, ಅದನ್ನು ತಿಳಿದುಕೊಂಡ ನಂತರ ನಾವು ತಲೆಚಚ್ಚಿಕೊಳ್ಳವಂತಿರುತ್ತದೆ.

ಇತ್ತೀಚೆಗೆ ವೈರಲ್​ ಆದ ವಿಡಿಯೋ ಒಂದು ನೋಡುಗರನ್ನು ಹೀಗೆಯೇ ಪೇಚಿಗೆ ಸಿಲುಕಿಸಿದೆ. ಅಯ್ಯೋ, ಏನಾಯಿತಪ್ಪಾ ಎಂದು ಕಣ್ಣರಳಿಸಕೊಂಡು, ಬಾಯಿ ಬಿಟ್ಟುಕೊಂಡು ವಿಡಿಯೋ ನೋಡುತ್ತಿದ್ದವರೆಲ್ಲಾ ಕೊನೆಗೆ ತಲೆ ಚಚ್ಚಿಕೊಳ್ಳುವಂತಾಗಿದೆ. ಈ ವೈರಲ್​ ವಿಡಿಯೋದಲ್ಲಿ ಪ್ರಜ್ಞಾಹೀನ ವ್ಯಕ್ತಿಯೊಬ್ಬ ನೆಲದ ಮೇಲೆ ಅಂಗಾತ ಬಿದ್ದುಕೊಂಡಿದ್ದು, ಇನ್ನೋರ್ವ ಆತನ ಎದೆ ಭಾಗವನ್ನು ಒತ್ತುವ ಮೂಲಕ ಪ್ರಜ್ಞೆ ತರಿಸಲು ಪ್ರಯತ್ನಿಸುತ್ತಿದ್ದಾನೆ ಎಂದು ಬಿಂಬಿಸುವಂತೆ ಆರಂಭದ ದೃಶ್ಯಾವಳಿಗಳಿವೆ.

ಸೂಟುಬೂಟು ತೊಟ್ಟ ವ್ಯಕ್ತಿಗಳನ್ನು ನೋಡಿದರೆ ಅವರೆಲ್ಲಾ ಯಾವುದೋ ಸಮಾರಂಭದಲ್ಲಿ ಪಾಲ್ಗೊಂಡಿರುವುದು ಸ್ಪಷ್ಟವಾಗಿದ್ದು, ಅದನ್ನು ಪುಷ್ಟೀಕರಿಸುವಂತೆ ಹಿನ್ನೆಲೆ ಸಂಗೀತವೂ ಕೇಳಿಬರುತ್ತದೆ. ವಿಡಿಯೋ ನೋಡಿದ ತಕ್ಷಣ ಯಾರೇ ಆದರೂ ಛೇ, ಗಟ್ಟಿಮುಟ್ಟಾದ ಈ ವ್ಯಕ್ತಿಗೆ ಏನಾಯಿತಪ್ಪಾ ಎಂದು ಚಿಂತೆ ಮಾಡುವ ರೀತಿಯಲ್ಲಿ ಆತ ಬಿದ್ದುಕೊಂಡಿದ್ದು, ಇನ್ನೋರ್ವ ವ್ಯಕ್ತಿ ಕೂಡಾ ಆತನನ್ನು ಬದುಕಿಸಲು ಯತ್ನಿಸುತ್ತಿರುವಂತೆಯೇ ವರ್ತಿಸಿದ್ದಾನೆ.

ಹೃದಯಾಘಾತವಾದವರಿಗೆ ಎದೆ ಭಾಗವನ್ನು ಒತ್ತಿ ಪ್ರಥಮ ಚಿಕಿತ್ಸೆ ನೀಡುವ ರೀತಿಯಲ್ಲೇ ಅಲ್ಲಿದ್ದಾತ ನಡೆದುಕೊಂಡಿದ್ದಾನೆ. ಆದರೆ, ಸುತ್ತಮುತ್ತಲಿನವರು ಮಾತ್ರ ಹಿನ್ನೆಲೆ ಸಂಗೀತಕ್ಕೆ ಹೆಜ್ಜೆ ಹಾಕುತ್ತಾ ಆರಾಮಾಗಿರುವುದನ್ನು ನೋಡಿದರೆ ಅಲ್ಲಿ ಆಗಿದ್ದಾದರೂ ಏನು ಎಂಬ ಸಣ್ಣ ಸಂದೇಹವೂ ಮೂಡದೇ ಇರದು. ಇಷ್ಟೆಲ್ಲದರ ನಡುವೆ ವಿಡಿಯೋ ಕೆಲ ಸೆಕೆಂಡುಗಳನ್ನು ದಾಟುತ್ತಿದ್ದಂತೆಯೇ ಅಂಗಾತ ಮಲಗಿದ್ದ ವ್ಯಕ್ತಿ ಕೈಕಾಲುಗಳನ್ನು ಆಡಿಸಲಾರಂಭಿಸಿದ್ದಾನೆ.

View this post on Instagram

A post shared by hepgul5 (@hepgul5)

ಆತ ಹಾಗೆ ದೇಹವನ್ನು ಅಲುಗಾಡಿಸುವುದನ್ನು ನೋಡಿದಾಗ ಪ್ರಜ್ಞೆ ಬಂತೇನು ಎಂಬ ಯೋಚನೆ ಬರುತ್ತದೆಯಾದರೂ ಅಷ್ಟರಲ್ಲಿ ಆತ ಹಿನ್ನೆಲೆ ಸಂಗೀತಕ್ಕೆ ತಕ್ಕಂತೆ ಮೈ ಕುಣಿಸಲಾರಂಭಿಸಿ ನೋಡುಗರನ್ನು ಗೊಂದಲಗೊಳಿಸುತ್ತಾನೆ. ಇದೇನು ಕಥೆ ಎಂದುಕೊಳ್ಳುವಷ್ಟರಲ್ಲಿ ಆತ ಏಕಾಏಕಿ ಎದ್ದು ಕುಣಿಯಲಾರಂಭಿಸಿ ಅಷ್ಟು ಹೊತ್ತು ಏನೋ ವಿಷಯವಿದೆ ಎಂದು ವಿಡಿಯೋ ನೋಡಿದವರೆಲ್ಲಾ ತಲೆ ಚಚ್ಚಿಕೊಳ್ಳುವಂತೆ ಮಾಡುತ್ತಾನೆ.

ವಿಡಿಯೋವನ್ನು ಪೂರ್ತಿ ನೋಡಿದವರಿಗೆ ಅರೆಕ್ಷಣ ಸಿಟ್ಟು ಬರಬಹುದಾದರೂ ಇದು ವೈರಲ್​ ಆಗಿದ್ದನ್ನು ಗಮನಿಸಿದರೆ ಸಾಮಾಜಿಕ ಜಾಲತಾಣಗಳಲ್ಲಿ ಇಂತಹವುಗಳು ಎಷ್ಟು ಬೇಗ ಪ್ರಚಾರ ಗಿಟ್ಟಿಸಿಕೊಳ್ಳುತ್ತವೆ ಎನ್ನುವುದೂ ಅರ್ಥವಾಗುತ್ತದೆ. ಇದೊಂದು ರೀತಿಯಲ್ಲಿ ಜನ ಮರುಳೋ, ಜಾತ್ರೆ ಮರುಳೋ ಗಾದೆಯನ್ನು ನೆಪಿಸುವುದೂ ಸುಳ್ಳಲ್ಲ!

ಇದನ್ನೂ ಓದಿ: Viral Video : ಉರುಳಿ ಬಿದ್ದ ಕಾರನ್ನು ಎತ್ತಲು ಹಲವು ಜನರು ಸೇರಿರುವ ವಿಡಿಯೋ ಸಿಕ್ಕಾ ಪಟ್ಟೆ ವೈರಲ್

Published On - 3:23 pm, Tue, 22 June 21

ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ