AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಆಹಾರ ಹುಡುಕುತ್ತಾ ಅಡುಗೆ ಮನೆಗೆ ನುಗ್ಗಿದ ಆನೆಯನ್ನು ನೋಡಿ ಮಹಿಳೆ ಕಂಗಾಲು!

ನಾವು ಸ್ಥಳೀಯ ವನ್ಯ ಜೀವಿ ಅಧಿಕಾರಿಗಳೊಂದಿಗೆ ಮಾತನಾಡಿದ್ದೇವೆ. ಅಡುಗೆ ಮನೆಯಲ್ಲಿ ಆಹಾರಗಳನ್ನು ಹೊರಗಿಡಬೇಡಿ. ಆನೆಗಳಿಗೆ ಕಾಣಿಸುವಂತಿದ್ದರೆ ಹಸಿದ ಪ್ರಾಣಿಗಳು ಆಕ್ರಮಣ ಮಾಡುತ್ತವೆ ಎಂದು ಅಧಿಕಾರಿಗಳು ಹೇಳಿದ್ದಾರೆ ಎಂದು ಮನೆಯ ಮಾಲೀಕೆ ಮಾಹಿತಿ ಹಂಚಿಕೊಂಡಿದ್ದಾರೆ.

Viral Video: ಆಹಾರ ಹುಡುಕುತ್ತಾ ಅಡುಗೆ ಮನೆಗೆ ನುಗ್ಗಿದ ಆನೆಯನ್ನು ನೋಡಿ ಮಹಿಳೆ ಕಂಗಾಲು!
ಆಹಾರ ಹುಡುಕುತ್ತಾ ಅಡುಗೆ ಮನೆಗೇ ನುಗ್ಗಿದ ಆನೆ
TV9 Web
| Edited By: |

Updated on:Jun 24, 2021 | 3:22 PM

Share

ಹಸಿವನ್ನು ತಡೆಯಲಾರದ ದಢೂತಿ ಆನೆಯೊಂದು ಅಡುಗೆ ಮನೆಗೆ ನುಗ್ಗಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಥೈಲೆಂಡ್​ನ ಮನೆಯೊಂದರಲ್ಲಿ ನಡೆದಿದೆ. ಬೆಳಗಿನ ಜಾವ ಸರಿಸುಮಾರು 2ಗಂಟೆಯ ಸಮಯದಲ್ಲಿ ಆನೆ ಅಡುಗೆ ಮನೆಯ ಗೋಡೆಯೊಂದನ್ನು ಒಡೆದು ಒಳ ನುಗ್ಗಿದೆ. ಗೋಡೆ ಒಡೆದ ಶಬ್ದಕ್ಕೆ ಥೈಲೆಂಡ್​ ನಿವಾಸಿ ರಾಚಾದವನ್​​ ಮತ್ತು ಅವಳ ಪತಿಗೆ ಎಚ್ಚರವಾಗಿದೆ. ಗಾಬರಿಯಾಗೊಂಡ ಅವರು ಅಡುಗೆ ಮನೆಗೆ ಬಂದು ನೋಡಿದಾಗ ಆನೆ ಗೋಡೆ ಒಡೆದು ಒಳಗೆ ನುಗ್ಗಿ, ಎದುರಿಗಿದ್ದ ಅಕ್ಕಿ ಚೀಲವನ್ನು ಹರಿದು ಅಕ್ಕಿಯನ್ನು ತಿನ್ನಲು ಪ್ರಯತ್ನಿಸುತ್ತಿದೆ. ಬೆಳ್ಳಂ ಬೆಳಿಗ್ಗೆಯೆ ಆನೆ ಗೋಡೆ ಒಡೆದು ಒಳಗೆ ನುಗ್ಗುತ್ತಿದ್ದ ದೃಶ್ಯ ನೋಡಿ ಒಮ್ಮಲೆ ಭಯವಾಯಿತು ಎಂದು ಮನೆಯ ಮಾಲೀಕೆ ಹೇಳಿದ್ದಾರೆ.

ಗೋಡೆ ಒಡೆದು ಆನೆ ಅಡುಗೆ ಮನೆಗೆ ಪ್ರವೇಶಿಸಿದ ದೃಶ್ಯವನ್ನು ವಿಡಿಯೋದಲ್ಲಿ ನೋಡಬಹುದು. ಈ ಆನೆ ಯಾವಾಗಲೂ ನಗರದಲ್ಲಿ ಓಡಾಡುತ್ತಿರುತ್ತದೆ. ತುಂಬಾ ಹೆಸರುವಾಸಿ ಕೂಡಾ. ಎರಡು ತಿಂಗಳ ಹಿಂದೆ ಮನೆಯ ಸುತ್ತ ಇದೇ ಆನೆ ಬಂದು ನೋಡುತ್ತಾ ನಿಂತಿತ್ತು. ಆದರೆ ಯಾವುದೇ ಹಾನಿ ಮಾಡಿರಲಿಲ್ಲ ಎಂದು ಮನೆಯ ಮಾಲೀಕೆ ರಾಚಾದವನ್​ ಹೇಳಿಕೆ ನೀಡಿದ್ದಾರೆ.

ನಾವು ಸ್ಥಳೀಯ ವನ್ಯ ಜೀವಿ ಅಧಿಕಾರಿಗಳೊಂದಿಗೆ ಮಾತನಾಡಿದ್ದೇವೆ. ಅಡುಗೆ ಮನೆಯಲ್ಲಿ ಆಹಾರಗಳನ್ನು ಹೊರಗಿಡಬೇಡಿ. ಆನೆಗಳಿಗೆ ಕಾಣಿಸುವಂತಿದ್ದರೆ ಹಸಿದ ಪ್ರಾಣಿಗಳು ಆಕ್ರಮಣ ಮಾಡುತ್ತವೆ ಎಂದು ಅಧಿಕಾರಿಗಳು ಹೇಳಿದ್ದಾರೆ ಎಂದು ಮನೆಯ ಮಾಲೀಕೆ ಮಾಹಿತಿ ಹಂಚಿಕೊಂಡಿದ್ದಾರೆ.

ಒಡೆದ ಗೋಡೆಗಳನ್ನು ಸರಿಪಡಿಸಲು ಸುಮಾರು 1.17 ಲಕ್ಷ ಖರ್ಚಾಗಲಿದೆ. ಒಂದು ಕ್ಷಣ ಭಯವಾದರೂ, ಮುಖವನ್ನು ಮಾತ್ರ ಮನೆಯೊಳಗಿಟ್ಟುಕೊಂಡು ಸೊಂಡಿಲಿನಿಂದ ಆಹಾರ ತಿನ್ನುತ್ತಿರುವ ದೃಶ್ಯ ತಮಾಷೆಯಾಗಿತ್ತು. ಆದರೆ, ಮುಂದಿನ ದಿನಗಳಲ್ಲಿ ಮತ್ತೆ ಆನೆ ಅಡುಗೆ ಮನೆಗೆ ಬಂದು ಬಿಡುತ್ತದೆಯೆನೋ ಎಂಬ ಭಯ ಕಾಡುತ್ತಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:

Viral Video: ಕೆಸರು ಕಂಡು ಖುಷಿಪಟ್ಟ ಆನೆ; ಮಣ್ಣಿನಲ್ಲಿ ಹೊರಳಾಡಿದ್ದೇ ಆಡಿದ್ದು! ವಿಡಿಯೋ ನೋಡಿ

Viral Video: ಮದುವೆ ಮನೆಗೆ ಆನೆ ಕರೆತಂದು ಸುಸ್ತಾದ ಮಂದಿ; ವಾಹನ, ಪೆಂಡಾಲ್​​ಗಳನ್ನೆಲ್ಲ ಪುಡಿಪುಡಿ ಮಾಡಿದ ಗಜ

Published On - 10:58 am, Wed, 23 June 21

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ