AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಂಧ್ರದಲ್ಲಿ ಆಡಳಿತ ಪಕ್ಷದ ಬ್ಯಾನರ್ ಹಾಳು ಮಾಡಿದ್ದಾರೆಂದು 4ನೇ ಕ್ಲಾಸ್​ ಮಕ್ಕಳನ್ನು ಸ್ಟೇಶನ್​​ಗೆ ಕರೆದುಕೊಂಡು ಹೋದ ಪೊಲೀಸರು !

ಆಂಧ್ರ ಪೊಲೀಸರು ಒಂದು ಚಿಕ್ಕ ಕಾರಣಕ್ಕಾಗಿ ಅಪ್ರಾಪ್ತರನ್ನು ಕರೆದುಕೊಂಡು ಹೋಗಿ ಸ್ಟೇಶನ್​​ನಲ್ಲಿ ಇಟ್ಟುಕೊಂಡಿದ್ದನ್ನು ಪ್ರತಿಪಕ್ಷ ತೆಲುಗು ದೇಸಂ ಪಾರ್ಟಿ ಖಂಡಿಸಿದೆ. ದೂರು ನೀಡಿದ ವೈಎಸ್​ಪಿ ಪಕ್ಷದ ನಾಯಕರು ಮತ್ತು ಕರೆದುಕೊಂಡು ಹೋದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.

ಆಂಧ್ರದಲ್ಲಿ ಆಡಳಿತ ಪಕ್ಷದ ಬ್ಯಾನರ್ ಹಾಳು ಮಾಡಿದ್ದಾರೆಂದು 4ನೇ ಕ್ಲಾಸ್​ ಮಕ್ಕಳನ್ನು ಸ್ಟೇಶನ್​​ಗೆ ಕರೆದುಕೊಂಡು ಹೋದ ಪೊಲೀಸರು !
ಪೊಲೀಸರು ಕರೆದುಕೊಂಡು ಹೋದ ಮಕ್ಕಳು
TV9 Web
| Edited By: |

Updated on:Apr 27, 2022 | 3:36 PM

Share

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಪಲ್ನಾಡು ಪೊಲೀಸರು 3 ಮತ್ತು 4ನೇ ತರಗತಿ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ಈ ಚಿಕ್ಕಪುಟ್ಟ ಹುಡುಗರು ಆಂಧ್ರಪ್ರದೇಶದ ಆಡಳಿತ ಪಕ್ಷವಾದ ಯುವಜನ ಶ್ರಮಿಕ ರೈತು ಕಾಂಗ್ರೆಸ್​ ಪಾರ್ಟಿ (YSRCP)ಯ ಬ್ಯಾನರ್​​ಗಳನ್ನು ಹಾಳು ಮಾಡಿದ್ದಾರೆಂಬ ಕಾರಣಕ್ಕೆ ಅವರನ್ನು ಪೊಲೀಸರು ಬಂಧಿಸಿ ಸ್ಟೇಶನ್​ಗೆ ಕರೆದುಕೊಂಡು ಹೋಗಿದ್ದಾರೆಂದು ಇಂಡಿಯಾ ಟುಡೆ ವರದಿ ಮಾಡಿದೆ.  ಪೊಲೀಸರು ಈ ವಿದ್ಯಾರ್ಥಿಗಳನ್ನು ಬೆಳಗ್ಗೆಯಿಂದ ಸಂಜೆಯವರೆಗೂ ಸ್ಟೇಶನ್​​ನೊಳಗೆ ಕೂರಿಸಿದ್ದರು. ಜೈಲಿಗೆ ಹಾಕದಿದ್ದರೂ ಠಾಣೆಯಲ್ಲಿ ನೆಲಕ್ಕೆ ಕೂರಿಸಿ, ಪ್ರಶ್ನೆ ಕೇಳಿದ್ದಾರೆ ಎಂದೂ ವರದಿಯಲ್ಲಿ ಉಲ್ಲೇಖವಾಗಿದೆ.

ವೈಎಸ್​ಆರ್​ಸಿಪಿ ಪಕ್ಷದ ಪೋಸ್ಟರ್​​ಗಳನ್ನು ಹುಡುಗರು ಹಾಳು ಮಾಡಿದ್ದಾರೆ ಎಂದು ಆ ಪಕ್ಷದ ಸದಸ್ಯರು ದೂರು ನೀಡಿದ ಹಿನ್ನೆಲೆಯಲ್ಲಿ ಅವರನ್ನೆಲ್ಲ ಸ್ಟೇಶನ್​​ಗೆ ಕರೆಸಲಾಗಿತ್ತು. ಅವರೊಂದಿಗೆ ಬರುವಂತೆ ಪಾಲಕರಿಗೂ ಹೇಳಿದ್ದೆವು.  ಇವರೆಲ್ಲ 10-15ವರ್ಷದ ವಯಸ್ಸಿನ ಹುಡುಗರಾಗಿದ್ದು ಜನಪಡು ಗ್ರಾಮದವರು ಎಂದು ಡೆಪ್ಯೂಟಿ ಎಸ್​ಪಿ ಜಯರಾಮ್​ ಪ್ರಸಾದ್​ ತಿಳಿಸಿದ್ದಾರೆ. ಸಂಜೆ ಹೊತ್ತಿಗೆ ಎಲ್ಲರನ್ನೂ ಬಿಟ್ಟುಕಳಿಸಿದ್ದಾಗಿಯೂ ಮಾಹಿತಿ ನೀಡಿದ್ದಾರೆ.

ಟಿಡಿಪಿಯಿಂದ ಖಂಡನೆ

ಆಂಧ್ರ ಪೊಲೀಸರು ಒಂದು ಚಿಕ್ಕ ಕಾರಣಕ್ಕಾಗಿ ಅಪ್ರಾಪ್ತರನ್ನು ಕರೆದುಕೊಂಡು ಹೋಗಿ ಸ್ಟೇಶನ್​​ನಲ್ಲಿ ಇಟ್ಟುಕೊಂಡಿದ್ದನ್ನು ಪ್ರತಿಪಕ್ಷ ತೆಲುಗು ದೇಸಂ ಪಾರ್ಟಿ ಖಂಡಿಸಿದೆ. ದೂರು ನೀಡಿದ ವೈಎಸ್​ಪಿ ಪಕ್ಷದ ನಾಯಕರು ಮತ್ತು ಕರೆದುಕೊಂಡು ಹೋದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ. ಟಿಡಿಪಿ ಪಕ್ಷದ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ನರಾ ಲೋಕೇಶ್​ ಟ್ವೀಟ್ ಮಾಡಿ, ಒಂದು ಕ್ಷುಲ್ಲಕ ಕಾರಣಕ್ಕಾಗಿ ಮಕ್ಕಳನ್ನು ಹೀಗೆ ಸ್ಟೇಶನ್​​​ಗೆ ಕರೆದುಕೊಂಡು ಬರುವುದು ಎಷ್ಟು ಸರಿ? ಇದು ಮಕ್ಕಳ ಹಕ್ಕುಗಳ ಉಲ್ಲಂಘನೆ. ಮುಖ್ಯಮಂತ್ರಿ ಜಗನ್​ ರೆಡ್ಡಿ ಇದಕ್ಕೆ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: AirAsia India: ಏರ್​ಏಷ್ಯಾ ಇಂಡಿಯಾದ ಸ್ವಾಧೀನಕ್ಕೆ ಟಾಟಾ ಒಡೆತನದ ಏರ್ ಇಂಡಿಯಾ ಯೋಜನೆ

Published On - 3:35 pm, Wed, 27 April 22

Follow Us
ಎಂಎನ್‌ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
ಎಂಎನ್‌ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್
ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ
ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ
ಸ್ಕ್ಯಾನ್ ಮಾಡಿ, ದೂರು ನೀಡಿ; ಕಳಪೆ ಆಹಾರ, ನಕಲಿ ಔಷಧಿಗೆ ಬ್ರೇಕ್!
ಸ್ಕ್ಯಾನ್ ಮಾಡಿ, ದೂರು ನೀಡಿ; ಕಳಪೆ ಆಹಾರ, ನಕಲಿ ಔಷಧಿಗೆ ಬ್ರೇಕ್!