AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಂಧ್ರದಲ್ಲಿ ಆಡಳಿತ ಪಕ್ಷದ ಬ್ಯಾನರ್ ಹಾಳು ಮಾಡಿದ್ದಾರೆಂದು 4ನೇ ಕ್ಲಾಸ್​ ಮಕ್ಕಳನ್ನು ಸ್ಟೇಶನ್​​ಗೆ ಕರೆದುಕೊಂಡು ಹೋದ ಪೊಲೀಸರು !

ಆಂಧ್ರ ಪೊಲೀಸರು ಒಂದು ಚಿಕ್ಕ ಕಾರಣಕ್ಕಾಗಿ ಅಪ್ರಾಪ್ತರನ್ನು ಕರೆದುಕೊಂಡು ಹೋಗಿ ಸ್ಟೇಶನ್​​ನಲ್ಲಿ ಇಟ್ಟುಕೊಂಡಿದ್ದನ್ನು ಪ್ರತಿಪಕ್ಷ ತೆಲುಗು ದೇಸಂ ಪಾರ್ಟಿ ಖಂಡಿಸಿದೆ. ದೂರು ನೀಡಿದ ವೈಎಸ್​ಪಿ ಪಕ್ಷದ ನಾಯಕರು ಮತ್ತು ಕರೆದುಕೊಂಡು ಹೋದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.

ಆಂಧ್ರದಲ್ಲಿ ಆಡಳಿತ ಪಕ್ಷದ ಬ್ಯಾನರ್ ಹಾಳು ಮಾಡಿದ್ದಾರೆಂದು 4ನೇ ಕ್ಲಾಸ್​ ಮಕ್ಕಳನ್ನು ಸ್ಟೇಶನ್​​ಗೆ ಕರೆದುಕೊಂಡು ಹೋದ ಪೊಲೀಸರು !
ಪೊಲೀಸರು ಕರೆದುಕೊಂಡು ಹೋದ ಮಕ್ಕಳು
TV9 Web
| Edited By: |

Updated on:Apr 27, 2022 | 3:36 PM

Share

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಪಲ್ನಾಡು ಪೊಲೀಸರು 3 ಮತ್ತು 4ನೇ ತರಗತಿ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ಈ ಚಿಕ್ಕಪುಟ್ಟ ಹುಡುಗರು ಆಂಧ್ರಪ್ರದೇಶದ ಆಡಳಿತ ಪಕ್ಷವಾದ ಯುವಜನ ಶ್ರಮಿಕ ರೈತು ಕಾಂಗ್ರೆಸ್​ ಪಾರ್ಟಿ (YSRCP)ಯ ಬ್ಯಾನರ್​​ಗಳನ್ನು ಹಾಳು ಮಾಡಿದ್ದಾರೆಂಬ ಕಾರಣಕ್ಕೆ ಅವರನ್ನು ಪೊಲೀಸರು ಬಂಧಿಸಿ ಸ್ಟೇಶನ್​ಗೆ ಕರೆದುಕೊಂಡು ಹೋಗಿದ್ದಾರೆಂದು ಇಂಡಿಯಾ ಟುಡೆ ವರದಿ ಮಾಡಿದೆ.  ಪೊಲೀಸರು ಈ ವಿದ್ಯಾರ್ಥಿಗಳನ್ನು ಬೆಳಗ್ಗೆಯಿಂದ ಸಂಜೆಯವರೆಗೂ ಸ್ಟೇಶನ್​​ನೊಳಗೆ ಕೂರಿಸಿದ್ದರು. ಜೈಲಿಗೆ ಹಾಕದಿದ್ದರೂ ಠಾಣೆಯಲ್ಲಿ ನೆಲಕ್ಕೆ ಕೂರಿಸಿ, ಪ್ರಶ್ನೆ ಕೇಳಿದ್ದಾರೆ ಎಂದೂ ವರದಿಯಲ್ಲಿ ಉಲ್ಲೇಖವಾಗಿದೆ.

ವೈಎಸ್​ಆರ್​ಸಿಪಿ ಪಕ್ಷದ ಪೋಸ್ಟರ್​​ಗಳನ್ನು ಹುಡುಗರು ಹಾಳು ಮಾಡಿದ್ದಾರೆ ಎಂದು ಆ ಪಕ್ಷದ ಸದಸ್ಯರು ದೂರು ನೀಡಿದ ಹಿನ್ನೆಲೆಯಲ್ಲಿ ಅವರನ್ನೆಲ್ಲ ಸ್ಟೇಶನ್​​ಗೆ ಕರೆಸಲಾಗಿತ್ತು. ಅವರೊಂದಿಗೆ ಬರುವಂತೆ ಪಾಲಕರಿಗೂ ಹೇಳಿದ್ದೆವು.  ಇವರೆಲ್ಲ 10-15ವರ್ಷದ ವಯಸ್ಸಿನ ಹುಡುಗರಾಗಿದ್ದು ಜನಪಡು ಗ್ರಾಮದವರು ಎಂದು ಡೆಪ್ಯೂಟಿ ಎಸ್​ಪಿ ಜಯರಾಮ್​ ಪ್ರಸಾದ್​ ತಿಳಿಸಿದ್ದಾರೆ. ಸಂಜೆ ಹೊತ್ತಿಗೆ ಎಲ್ಲರನ್ನೂ ಬಿಟ್ಟುಕಳಿಸಿದ್ದಾಗಿಯೂ ಮಾಹಿತಿ ನೀಡಿದ್ದಾರೆ.

ಟಿಡಿಪಿಯಿಂದ ಖಂಡನೆ

ಆಂಧ್ರ ಪೊಲೀಸರು ಒಂದು ಚಿಕ್ಕ ಕಾರಣಕ್ಕಾಗಿ ಅಪ್ರಾಪ್ತರನ್ನು ಕರೆದುಕೊಂಡು ಹೋಗಿ ಸ್ಟೇಶನ್​​ನಲ್ಲಿ ಇಟ್ಟುಕೊಂಡಿದ್ದನ್ನು ಪ್ರತಿಪಕ್ಷ ತೆಲುಗು ದೇಸಂ ಪಾರ್ಟಿ ಖಂಡಿಸಿದೆ. ದೂರು ನೀಡಿದ ವೈಎಸ್​ಪಿ ಪಕ್ಷದ ನಾಯಕರು ಮತ್ತು ಕರೆದುಕೊಂಡು ಹೋದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ. ಟಿಡಿಪಿ ಪಕ್ಷದ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ನರಾ ಲೋಕೇಶ್​ ಟ್ವೀಟ್ ಮಾಡಿ, ಒಂದು ಕ್ಷುಲ್ಲಕ ಕಾರಣಕ್ಕಾಗಿ ಮಕ್ಕಳನ್ನು ಹೀಗೆ ಸ್ಟೇಶನ್​​​ಗೆ ಕರೆದುಕೊಂಡು ಬರುವುದು ಎಷ್ಟು ಸರಿ? ಇದು ಮಕ್ಕಳ ಹಕ್ಕುಗಳ ಉಲ್ಲಂಘನೆ. ಮುಖ್ಯಮಂತ್ರಿ ಜಗನ್​ ರೆಡ್ಡಿ ಇದಕ್ಕೆ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: AirAsia India: ಏರ್​ಏಷ್ಯಾ ಇಂಡಿಯಾದ ಸ್ವಾಧೀನಕ್ಕೆ ಟಾಟಾ ಒಡೆತನದ ಏರ್ ಇಂಡಿಯಾ ಯೋಜನೆ

Published On - 3:35 pm, Wed, 27 April 22

Follow Us
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು