AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಂಧ್ರದಲ್ಲಿ ಆಡಳಿತ ಪಕ್ಷದ ಬ್ಯಾನರ್ ಹಾಳು ಮಾಡಿದ್ದಾರೆಂದು 4ನೇ ಕ್ಲಾಸ್​ ಮಕ್ಕಳನ್ನು ಸ್ಟೇಶನ್​​ಗೆ ಕರೆದುಕೊಂಡು ಹೋದ ಪೊಲೀಸರು !

ಆಂಧ್ರ ಪೊಲೀಸರು ಒಂದು ಚಿಕ್ಕ ಕಾರಣಕ್ಕಾಗಿ ಅಪ್ರಾಪ್ತರನ್ನು ಕರೆದುಕೊಂಡು ಹೋಗಿ ಸ್ಟೇಶನ್​​ನಲ್ಲಿ ಇಟ್ಟುಕೊಂಡಿದ್ದನ್ನು ಪ್ರತಿಪಕ್ಷ ತೆಲುಗು ದೇಸಂ ಪಾರ್ಟಿ ಖಂಡಿಸಿದೆ. ದೂರು ನೀಡಿದ ವೈಎಸ್​ಪಿ ಪಕ್ಷದ ನಾಯಕರು ಮತ್ತು ಕರೆದುಕೊಂಡು ಹೋದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.

ಆಂಧ್ರದಲ್ಲಿ ಆಡಳಿತ ಪಕ್ಷದ ಬ್ಯಾನರ್ ಹಾಳು ಮಾಡಿದ್ದಾರೆಂದು 4ನೇ ಕ್ಲಾಸ್​ ಮಕ್ಕಳನ್ನು ಸ್ಟೇಶನ್​​ಗೆ ಕರೆದುಕೊಂಡು ಹೋದ ಪೊಲೀಸರು !
ಪೊಲೀಸರು ಕರೆದುಕೊಂಡು ಹೋದ ಮಕ್ಕಳು
TV9 Web
| Updated By: Lakshmi Hegde|

Updated on:Apr 27, 2022 | 3:36 PM

Share

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಪಲ್ನಾಡು ಪೊಲೀಸರು 3 ಮತ್ತು 4ನೇ ತರಗತಿ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ಈ ಚಿಕ್ಕಪುಟ್ಟ ಹುಡುಗರು ಆಂಧ್ರಪ್ರದೇಶದ ಆಡಳಿತ ಪಕ್ಷವಾದ ಯುವಜನ ಶ್ರಮಿಕ ರೈತು ಕಾಂಗ್ರೆಸ್​ ಪಾರ್ಟಿ (YSRCP)ಯ ಬ್ಯಾನರ್​​ಗಳನ್ನು ಹಾಳು ಮಾಡಿದ್ದಾರೆಂಬ ಕಾರಣಕ್ಕೆ ಅವರನ್ನು ಪೊಲೀಸರು ಬಂಧಿಸಿ ಸ್ಟೇಶನ್​ಗೆ ಕರೆದುಕೊಂಡು ಹೋಗಿದ್ದಾರೆಂದು ಇಂಡಿಯಾ ಟುಡೆ ವರದಿ ಮಾಡಿದೆ.  ಪೊಲೀಸರು ಈ ವಿದ್ಯಾರ್ಥಿಗಳನ್ನು ಬೆಳಗ್ಗೆಯಿಂದ ಸಂಜೆಯವರೆಗೂ ಸ್ಟೇಶನ್​​ನೊಳಗೆ ಕೂರಿಸಿದ್ದರು. ಜೈಲಿಗೆ ಹಾಕದಿದ್ದರೂ ಠಾಣೆಯಲ್ಲಿ ನೆಲಕ್ಕೆ ಕೂರಿಸಿ, ಪ್ರಶ್ನೆ ಕೇಳಿದ್ದಾರೆ ಎಂದೂ ವರದಿಯಲ್ಲಿ ಉಲ್ಲೇಖವಾಗಿದೆ.

ವೈಎಸ್​ಆರ್​ಸಿಪಿ ಪಕ್ಷದ ಪೋಸ್ಟರ್​​ಗಳನ್ನು ಹುಡುಗರು ಹಾಳು ಮಾಡಿದ್ದಾರೆ ಎಂದು ಆ ಪಕ್ಷದ ಸದಸ್ಯರು ದೂರು ನೀಡಿದ ಹಿನ್ನೆಲೆಯಲ್ಲಿ ಅವರನ್ನೆಲ್ಲ ಸ್ಟೇಶನ್​​ಗೆ ಕರೆಸಲಾಗಿತ್ತು. ಅವರೊಂದಿಗೆ ಬರುವಂತೆ ಪಾಲಕರಿಗೂ ಹೇಳಿದ್ದೆವು.  ಇವರೆಲ್ಲ 10-15ವರ್ಷದ ವಯಸ್ಸಿನ ಹುಡುಗರಾಗಿದ್ದು ಜನಪಡು ಗ್ರಾಮದವರು ಎಂದು ಡೆಪ್ಯೂಟಿ ಎಸ್​ಪಿ ಜಯರಾಮ್​ ಪ್ರಸಾದ್​ ತಿಳಿಸಿದ್ದಾರೆ. ಸಂಜೆ ಹೊತ್ತಿಗೆ ಎಲ್ಲರನ್ನೂ ಬಿಟ್ಟುಕಳಿಸಿದ್ದಾಗಿಯೂ ಮಾಹಿತಿ ನೀಡಿದ್ದಾರೆ.

ಟಿಡಿಪಿಯಿಂದ ಖಂಡನೆ

ಆಂಧ್ರ ಪೊಲೀಸರು ಒಂದು ಚಿಕ್ಕ ಕಾರಣಕ್ಕಾಗಿ ಅಪ್ರಾಪ್ತರನ್ನು ಕರೆದುಕೊಂಡು ಹೋಗಿ ಸ್ಟೇಶನ್​​ನಲ್ಲಿ ಇಟ್ಟುಕೊಂಡಿದ್ದನ್ನು ಪ್ರತಿಪಕ್ಷ ತೆಲುಗು ದೇಸಂ ಪಾರ್ಟಿ ಖಂಡಿಸಿದೆ. ದೂರು ನೀಡಿದ ವೈಎಸ್​ಪಿ ಪಕ್ಷದ ನಾಯಕರು ಮತ್ತು ಕರೆದುಕೊಂಡು ಹೋದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ. ಟಿಡಿಪಿ ಪಕ್ಷದ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ನರಾ ಲೋಕೇಶ್​ ಟ್ವೀಟ್ ಮಾಡಿ, ಒಂದು ಕ್ಷುಲ್ಲಕ ಕಾರಣಕ್ಕಾಗಿ ಮಕ್ಕಳನ್ನು ಹೀಗೆ ಸ್ಟೇಶನ್​​​ಗೆ ಕರೆದುಕೊಂಡು ಬರುವುದು ಎಷ್ಟು ಸರಿ? ಇದು ಮಕ್ಕಳ ಹಕ್ಕುಗಳ ಉಲ್ಲಂಘನೆ. ಮುಖ್ಯಮಂತ್ರಿ ಜಗನ್​ ರೆಡ್ಡಿ ಇದಕ್ಕೆ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: AirAsia India: ಏರ್​ಏಷ್ಯಾ ಇಂಡಿಯಾದ ಸ್ವಾಧೀನಕ್ಕೆ ಟಾಟಾ ಒಡೆತನದ ಏರ್ ಇಂಡಿಯಾ ಯೋಜನೆ

Published On - 3:35 pm, Wed, 27 April 22

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?