ಪ್ರಶಾಂತ್ ಕಿಶೋರ್​​ನ್ನು ಪಕ್ಷಕ್ಕೆ ಸೇರಿಲು ಕಾಂಗ್ರೆಸ್ ವಿಫಲ​​; ಮಾರಾಟಗಾರ ಎಷ್ಟೇ ಉತ್ತಮವಾಗಿರಲಿ ಉತ್ಪನ್ನ ಕೆಟ್ಟದಾಗಿದ್ದರೆ ಮಾರಾಟ ಮಾಡಲು ಸಾಧ್ಯವಿಲ್ಲ: ಬಿಜೆಪಿ ಲೇವಡಿ

"ಉತ್ಪನ್ನವು ಕೆಟ್ಟದಾಗಿದ್ದರೆ, ಮಾರಾಟಗಾರ ಎಷ್ಟೇ ಉತ್ತಮವಾಗಿರಲಿ ಅಥವಾ ಆ ರೀತಿ ಹೇಳುತ್ತಿದ್ದರೂ, ನೀವು ಪರಿವಾರ್​​ವಾದ್ (ವಂಶಾಡಳಿತ) ಉತ್ಪನ್ನವನ್ನು ಅದರ ಮುಕ್ತಾಯ ದಿನಾಂಕದ ನಂತರ ಮಾರಾಟ ಮಾಡಲು ಸಾಧ್ಯವಿಲ್ಲ" ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಹೇಳಿದ್ದಾರೆ.

ಪ್ರಶಾಂತ್ ಕಿಶೋರ್​​ನ್ನು ಪಕ್ಷಕ್ಕೆ ಸೇರಿಲು ಕಾಂಗ್ರೆಸ್ ವಿಫಲ​​; ಮಾರಾಟಗಾರ ಎಷ್ಟೇ ಉತ್ತಮವಾಗಿರಲಿ ಉತ್ಪನ್ನ ಕೆಟ್ಟದಾಗಿದ್ದರೆ ಮಾರಾಟ ಮಾಡಲು ಸಾಧ್ಯವಿಲ್ಲ: ಬಿಜೆಪಿ ಲೇವಡಿ
ಪ್ರಶಾಂತ್​ ಕಿಶೋರ್​
Follow us
| Updated By: ರಶ್ಮಿ ಕಲ್ಲಕಟ್ಟ

Updated on: Apr 27, 2022 | 1:41 PM

ದೆಹಲಿ: ಪ್ರಶಾಂತ್ ಕಿಶೋರ್ (Prashant Kishor) ಅವರ ಪರಿವರ್ತನಾ ಸುಧಾರಣೆಗಳ ಆವೃತ್ತಿಯನ್ನು ಕಾರ್ಯಗತಗೊಳಿಸುವ ಪ್ರಸ್ತಾಪವನ್ನು ಕೈಗೆತ್ತಿಕೊಳ್ಳದಿರಲು ಕಾಂಗ್ರೆಸ್ (Congress) ನಿರ್ಧರಿಸಿದೆ. ಇತ್ತ ಬಿಜೆಪಿ (BJP) ಪಕ್ಷದ ನಾಯಕರು 2024 ರ ಸಾರ್ವತ್ರಿಕ ಚುನಾವಣೆಯ ಮೊದಲು ಪಕ್ಷವನ್ನು ಉಳಿಸುವ ಕಾಂಗ್ರೆಸ್ ಪ್ರಯತ್ನವನ್ನು ಲೇವಡಿ ಮಾಡಿದ್ದಾರೆ. “ಉತ್ಪನ್ನವು ಕೆಟ್ಟದಾಗಿದ್ದರೆ, ಮಾರಾಟಗಾರ ಎಷ್ಟೇ ಉತ್ತಮವಾಗಿರಲಿ ಅಥವಾ ಆ ರೀತಿ ಹೇಳುತ್ತಿದ್ದರೂ, ನೀವು ಪರಿವಾರ್​​ವಾದ್ (ವಂಶಾಡಳಿತ) ಉತ್ಪನ್ನವನ್ನು ಅದರ ಮುಕ್ತಾಯ ದಿನಾಂಕದ ನಂತರ ಮಾರಾಟ ಮಾಡಲು ಸಾಧ್ಯವಿಲ್ಲ” ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಹೇಳಿದ್ದಾರೆ. ಪ್ರಶಾಂತ್ ಕಿಶೋರ್ ಅವರನ್ನು ಕಾಂಗ್ರೆಸ್ ತನ್ನ ಪಕ್ಷಕ್ಕೆ ಸೇರಿಸಲು ವಿಫಲವಾಗಿದ್ದರ ಬಗ್ಗೆ ಪೂನಾವಾಲಾ ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಪಕ್ಷದ ಅಜೆಂಡಾವು “ಪರಿವಾರ್ ಬಚಾವೋ (ಕುಟುಂಬವನ್ನು ಉಳಿಸಿ) ಪಕ್ಷ ಬಚಾವೋ (ಪಕ್ಷವನ್ನು ಉಳಿಸಿ)” ಆಗಿದೆ. ಅದಕ್ಕಾಗಿಯೇ ಅವರು ಪಕ್ಷದೊಳಗಿನ ಪರಿವರ್ತನಾ ಮತ್ತು ರಚನಾತ್ಮಕ ಸುಧಾರಣೆಗಳ ಕುರಿತು ಪ್ರಶಾಂತ್ ಕಿಶೋರ್ ಅವರ ಸಲಹೆಗಳಿಂದ “ವಿಚಲಿತರಾದರು” ಎಂದು ಇಂಡಿಯಾ ಟುಡೇ ಸುದ್ದಿವಾಹಿನಿ ಜತೆ ಮಾತನಾಡಿದ ಪೂನಾವಾಲಾ ಹೇಳಿದ್ದಾರೆ. ಬಿಜೆಪಿ ವಕ್ತಾರ ಗುರು ಪ್ರಕಾಶ್ ಪಾಸ್ವಾನ್ ಇದೇ ವಿಷಯವನ್ನು ಪ್ರಸ್ತಾಪಿಸಿ, ಪ್ರಶಾಂತ್ ಕಿಶೋರ್ ಅವರ ಅರ್ಹತೆಯನ್ನೂ ಪ್ರಶ್ನಿಸಿದ್ದಾರೆ. ಮಾಧ್ಯಮಗಳು ಅವರನ್ನು ಸೆಲೆಬ್ರಿಟಿಯನ್ನಾಗಿ ಮಾಡಿದೆ. ರಾಜಕೀಯ ಪಕ್ಷಗಳು ಚುನಾವಣೆಯ ಸಮಯದಲ್ಲಿ ಮಾರಾಟಗಾರರನ್ನು ಬಳಸುತ್ತವೆ ಮತ್ತು ಅವರು ಮಾರಾಟಗಾರರಾಗಿದ್ದಾರೆ. ನೀವು ಅವರ ದಾಖಲೆಯನ್ನು ನೋಡಿ, ಅವರು ಪಂಜಾಬ್, ಉತ್ತರ ಪ್ರದೇಶ ಮತ್ತು ಇತರ ಸ್ಥಳಗಳಲ್ಲಿ ಸೋತಿದ್ದಾರೆ. ಇಲ್ಲಿ ದೊಡ್ಡ ಪ್ರಶ್ನೆಯೆಂದರೆ ಕಾಂಗ್ರೆಸ್ ನಾಯಕತ್ವದ ಕೊರತೆಯನ್ನು ಹೊಂದಿದೆಯೇ ಎಂಬುದು. ಪಕ್ಷವು ಹೊರಗಿನವರನ್ನು ನೇಮಿಸಿಕೊಳ್ಳಬೇಕಾಗಿದೆ ಎಂದು ಪಾಸ್ವಾನ್ ಹೇಳಿದ್ದಾರೆ.

ಕಾಂಗ್ರೆಸ್ ಮತ್ತು ಪ್ರಶಾಂತ್ ಕಿಶೋರ್ ಅವರ ಮಂಗಳವಾರದ ಘೋಷಣೆಯು ಕಿಶೋರ್ ಕಾಂಗ್ರೆಸ್‌ಗೆ ಔಪಚಾರಿಕ ಪ್ರಸ್ತುತಿ ನೀಡಿದ 10 ದಿನಗಳ ನಂತರ ಬಂದಿದೆ. ಚುನಾವಣಾ ತಂತ್ರಜ್ಞರನ್ನು ಭೇಟಿ ಮಾಡಲು ದೆಹಲಿಗೆ ಹಾರಿದ ಮುಖ್ಯಮಂತ್ರಿಗಳು ಸೇರಿದಂತೆ ಉನ್ನತ ನಾಯಕತ್ವದೊಂದಿಗೆ ಬಹುತೇಕ ದೈನಂದಿನ ಸಮಾಲೋಚನೆಗಳನ್ನು ನಡೆಸಿದರು. ಪಕ್ಷದಲ್ಲಿ ಅವರಿಗೆ ಯಾವ ಪಾತ್ರವನ್ನು ನೀಡಲಾಗುತ್ತದೆ ಎಂಬುದರ ಕುರಿತು ವ್ಯಾಪಕ ಊಹಾಪೋಹಗಳು ಕೇಳಿ ಬಂದಿತ್ತು.

ನನಗೆ ಹೆಚ್ಚಿನ ಸ್ವಾತಂತ್ರ್ಯವನ್ನು ನೀಡದಿದ್ದರೆ ಕಾಂಗ್ರೆಸ್‌ಗೆ ಪರಿಣಾಮಕಾರಿಯಾಗಿ ಸಹಾಯ ಮಾಡಲು ಸಾಧ್ಯವಿಲ್ಲ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದರು. ಆದರೆ ಕಾಂಗ್ರೆಸ್ ಅವರನ್ನು ಸ್ಟ್ರಾಟಜಿ ಗ್ರೂಪ್ ಎಂಪವರ್ಡ್ ಆಕ್ಷನ್ ಗ್ರೂಪ್ ಅಥವಾ ಇಎಜಿ ಸದಸ್ಯರನ್ನಾಗಿ ಮಾಡಲು ಮಾತ್ರ ಸಿದ್ಧವಾಗಿತ್ತು. ಕಿಶೋರ್ ಅವರ ಪ್ರಕಾರ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಮಾತ್ರ ಅವರು ವರದಿ ಮಾಡುತ್ತಾರೆ. ಅಭ್ಯರ್ಥಿಗಳ ಆಯ್ಕೆಯಲ್ಲಿ ದತ್ತಾಂಶದ ಬಳಕೆಗಾಗಿ ಅವರ ಬೇಡಿಕೆಗೆ ಅವರಿಗೆ ಸ್ವಾತಂತ್ರ್ಯವಿರಬೇಕು. ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಬಗ್ಗೆ ಅವರ ದೃಷ್ಟಿಕೋನ ಮತ್ತು 2024 ರಲ್ಲಿ ಸಂಸತ್ತಿನ ಚುನಾವಣೆಗಳ ಮೇಲೆ ಕೇಂದ್ರೀಕರಿಸುವುದಷ್ಟೇ ಅವರ ಬಯಕೆಯಾಗಿದ್ದು, ಈ ವರ್ಷ ಅಥವಾ ಮುಂದಿನ ರಾಜ್ಯ ಚುನಾವಣೆಗಳಲ್ಲ.ನಾಲ್ಕು ಕಾರಣಗಳಿಂದ ಒಪ್ಪಂದವು ವಿಫಲವಾಗಿದೆ ಎಂದು ವಿಷಯದ ಬಗ್ಗೆ ತಿಳಿದಿರುವ ಜನರು ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಟ್ವಿಟರ್‌ನಲ್ಲಿ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಆಹ್ವಾನವನ್ನು ‘ಉದಾರ’ ಎಂದು ವಿವರಿಸಿದ್ದಾರೆ, ಆದರೆ ಕಾಂಗ್ರೆಸ್ಸಿಗರಾಗಲು ಆಹ್ವಾನವನ್ನು ಏಕೆ ತಿರಸ್ಕರಿಸಿದರು ಎಂಬುದನ್ನು ವಿವರಿಸಿರುವ ಅವರು “ನನ್ನ ವಿನಮ್ರ ಅಭಿಪ್ರಾಯದಲ್ಲಿ, ಪರಿವರ್ತನಾ ಸುಧಾರಣೆಗಳ ಮೂಲಕ ಆಳವಾಗಿ ಬೇರೂರಿರುವ ರಚನಾತ್ಮಕ ಸಮಸ್ಯೆಗಳನ್ನು ಪರಿಹರಿಸಲು ಪಕ್ಷಕ್ಕೆ ನಾಯಕತ್ವ ಮತ್ತು ಸಾಮೂಹಿಕ ಇಚ್ಛಾಶಕ್ತಿಯ ಅಗತ್ಯವಿದೆ” ಎಂದಿದ್ದಾರೆ. ನಿತೀಶ್ ಕುಮಾರ್ ಅವರ ಜನತಾ ದಳ (ಯುನೈಟೆಡ್) ಗೆ ಒಮ್ಮೆ ಉಪಾಧ್ಯಕ್ಷರಾಗಿ ಸೇರ್ಪಡೆಗೊಂಡ ಕಿಶೋರ್ ಅವರನ್ನು ಮತ್ತು ಮಾಜಿ ರಾಜತಾಂತ್ರಿಕ ಪವನ್ ವರ್ಮಾ ಅವರನ್ನು ಜನವರಿ 2020 ರಲ್ಲಿ ಜೆಡಿಯು (ಯು) ಹೊರಹಾಕಿತ್ತು.

ಇದನ್ನೂ ಓದಿ:ನನಗಿಂತ ಹೆಚ್ಚಾಗಿ ಪಕ್ಷಕ್ಕೆ ನಾಯಕತ್ವ, ಸಾಮೂಹಿಕ ಇಚ್ಛಾಶಕ್ತಿಯ ಅಗತ್ಯವಿದೆ: ಪ್ರಶಾಂತ್ ಕಿಶೋರ್

Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!