AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

AirAsia India: ಏರ್​ಏಷ್ಯಾ ಇಂಡಿಯಾದ ಸ್ವಾಧೀನಕ್ಕೆ ಟಾಟಾ ಒಡೆತನದ ಏರ್ ಇಂಡಿಯಾ ಯೋಜನೆ

ಏರ್​ಏಷ್ಯಾ ಇಂಡಿಯಾವನ್ನು ಸ್ವಾಧೀನ ಮಾಡಿಕೊಳ್ಳಲು ಏರ್​ ಇಂಡಿಯಾ ಯೋಜನೆ ರೂಪಿಸುತ್ತಿದೆ. ಆ ಬಗ್ಗೆ ಮಾಹಿತಿ ಈ ಲೇಖನದಲ್ಲಿದೆ.

AirAsia India: ಏರ್​ಏಷ್ಯಾ ಇಂಡಿಯಾದ ಸ್ವಾಧೀನಕ್ಕೆ ಟಾಟಾ ಒಡೆತನದ ಏರ್ ಇಂಡಿಯಾ ಯೋಜನೆ
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on: Apr 27, 2022 | 3:03 PM

Share

ಟಾಟಾ ಒಡೆತನದ ಏರ್ ಇಂಡಿಯಾದಿಂದ (Air India) ಏರ್​ಏಷ್ಯಾ ಇಂಡಿಯಾವನ್ನು ಸ್ವಾಧೀನ ಮಾಡಿಕೊಳ್ಳಲು ಯೋಜಿಸಲಾಗಿದೆ ಮತ್ತು ಪ್ರಸ್ತಾವಿತ ಒಪ್ಪಂದಕ್ಕೆ ಸ್ಪರ್ಧಾತ್ಮಕ ಆಯೋಗದಿಂದ ಅನುಮೋದನೆಯನ್ನು ಕೋರಿದೆ. ಏರ್‌ಏಷ್ಯಾ ಇಂಡಿಯಾದ ಬಹುಪಾಲು ಮಾಲೀಕತ್ವವನ್ನು ಟಾಟಾ ಸನ್ಸ್ ಪ್ರೈವೇಟ್ ಲಿಮಿಟೆಡ್‌ ಹೊಂದಿದೆ. ಅಂದರೆ ಶೇ 83.67ರಷ್ಟು ಷೇರುಗಳನ್ನು ಹೊಂದಿದೆ ಮತ್ತು ಉಳಿದ ಪಾಲನ್ನು ಮಲೇಷ್ಯಾದ ಏರ್‌ಏಷ್ಯಾ ಸಮೂಹದ ಭಾಗ ಆಗಿರುವ ಏರ್​ಏಷ್ಯಾ ಇನ್ವೆಸ್ಟ್​ಮೆಂಟ್ ಲಿಮಿಟೆಡ್ (ಎಎಐಎಲ್) (AirAsia Investment Ltd (AAIL))ನಲ್ಲಿದೆ. ಸಂಪೂರ್ಣ ಸೇವಾ ಪ್ರಯಾಣ ಸಂಸ್ಥೆಯಾದ ಏರ್ ಇಂಡಿಯಾ ಮತ್ತು ಅದರ ಕಡಿಮೆ-ವೆಚ್ಚದ ಅಂಗಸಂಸ್ಥೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಅನ್ನು ಕಳೆದ ವರ್ಷ ಟಾಟಾ ಸನ್ಸ್ ಪ್ರೈವೇಟ್ ಲಿಮಿಟೆಡ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ತಾಲೇಸ್ ಪ್ರೈವೇಟ್ ಲಿಮಿಟೆಡ್ ಸ್ವಾಧೀನ ಮಾಡಿಕೊಂಡಿತು. ಇದಲ್ಲದೆ, ಟಾಟಾದಿಂದ ಸಿಂಗಾಪೂರ್ ಏರ್‌ಲೈನ್ಸ್‌ನೊಂದಿಗೆ ಜಂಟಿ ಉದ್ಯಮದಲ್ಲಿ ಸಂಪೂರ್ಣ ಸೇವಾ ವಿಮಾನ ಯಾನ ವಿಸ್ತಾರಾವನ್ನು ನಿರ್ವಹಿಸುತ್ತವೆ.

ಇತ್ತೀಚಿನ ಕ್ರಮವು ತನ್ನ ಏರ್‌ಲೈನ್ ಕಾರ್ಯಾಚರಣೆಗಳನ್ನು ಕ್ರೋಡೀಕರಿಸುವ ವಿಸ್ತಾರವಾದ ಗುಂಪಿನ ಪ್ರಯತ್ನಗಳ ಒಂದು ಭಾಗವಾಗಿದೆ. “ಉದ್ದೇಶಿತ ಸಂಯೋಜನೆಯು ಟಾಟಾ ಸನ್ಸ್ ಪ್ರೈವೇಟ್ ಲಿಮಿಟೆಡ್‌ನ ಪರೋಕ್ಷ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಏರ್ ಇಂಡಿಯಾ ಲಿಮಿಟೆಡ್ (AIL) ನಿಂದ ಏರ್​ಏಷ್ಯಾ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ (ಏರ್ ಏಷ್ಯಾ ಇಂಡಿಯಾ/ಟಾರ್ಗೆಟ್)ನ ಸಂಪೂರ್ಣ ಈಕ್ವಿಟಿ ಷೇರು ಬಂಡವಾಳವನ್ನು ಸ್ವಾಧೀನಪಡಿಸಿಕೊಳ್ಳಲು ಸಂಬಂಧಿಸಿದೆ,” ಎಂದು ಭಾರತೀಯ ಸ್ಪರ್ಧಾ ಆಯೋಗದ (ಸಿಸಿಐ) ಜತೆಗೆ ನೋಟಿಸ್ ಫೈಲ್ ಮಾಡಲಾಗಿದೆ. ನಿರ್ದಿಷ್ಟ ಮಿತಿಯನ್ನು ಮೀರಿದ ವ್ಯವಹಾರಗಳಿಗೆ ಸ್ಪರ್ಧಾ ಆಯೋಗದ ಅನುಮೋದನೆಯ ಅಗತ್ಯವಿರುತ್ತದೆ. ಇದು ಸ್ಪರ್ಧೆಯನ್ನು ಉತ್ತೇಜಿಸಲು ಮತ್ತು ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ-ವಿರೋಧಿ ಅಭ್ಯಾಸಗಳನ್ನು ನಿಗ್ರಹಿಸಲು ಕೆಲಸ ಮಾಡುತ್ತದೆ.

ಜೂನ್ 2014ರಲ್ಲಿ ಹಾರಾಟ ಆರಂಭಿಸಿದ ಏರ್​ಏಷ್ಯಾ ಇಂಡಿಯಾ, ದೇಶದಲ್ಲಿ ನಿಗದಿತ ವಿಮಾನ ಪ್ರಯಾಣಿಕ ಸಾರಿಗೆ, ಏರ್ ಕಾರ್ಗೋ ಸಾರಿಗೆ ಮತ್ತು ಚಾರ್ಟರ್ ಫ್ಲೈಟ್ ಸೇವೆಗಳನ್ನು ಒದಗಿಸುತ್ತದೆ. ಇದು ಅಂತರರಾಷ್ಟ್ರೀಯ ಕಾರ್ಯಾಚರಣೆಗಳನ್ನು ಹೊಂದಿಲ್ಲ. ಸೂಚನೆಯ ಪ್ರಕಾರ, ಪ್ರಸ್ತಾವಿತ ಸಂಯೋಜನೆಯು ಸ್ಪರ್ಧಾತ್ಮಕ ಲ್ಯಾಂಡ್​ಸ್ಕೇಪ್​ನಲ್ಲಿ ಯಾವುದೇ ಬದಲಾವಣೆಗೆ ಕಾರಣವಾಗುವುದಿಲ್ಲ ಅಥವಾ ಸಂಬಂಧಿತ ಮಾರುಕಟ್ಟೆಗಳನ್ನು ಯಾವ ರೀತಿಯಲ್ಲಿ ವ್ಯಾಖ್ಯಾನಿಸಲಾಗಿದೆ ಎಂಬುದನ್ನು ಲೆಕ್ಕಿಸದೆ ಭಾರತದಲ್ಲಿನ ಸ್ಪರ್ಧೆಯ ಮೇಲೆ ಯಾವುದೇ ಗಮನಾರ್ಹ ಪ್ರತಿಕೂಲ ಪರಿಣಾಮವನ್ನು ಉಂಟುಮಾಡುವುದಿಲ್ಲ.

ಈ ವರ್ಷದ ಜನವರಿಯಲ್ಲಿ ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಅನ್ನು ಟಾಟಾ ವಹಿಸಿಕೊಂಡರು. ನಷ್ಟದಲ್ಲಿದ್ದ ಏರ್ ಇಂಡಿಯಾಗಾಗಿ ಟಾಟಾ ಬಿಡ್ ಮಾಡಿತ್ತು. ಅಕ್ಟೋಬರ್ 2021ರಲ್ಲಿ ಅದರಲ್ಲಿ ವಿಜೇತವಾಗಿತ್ತು. ಅಂದಹಾಗೆ ಇದಕ್ಕಾಗಿ ರೂ. 2,700 ಕೋಟಿ ನಗದು ಪಾವತಿ ಮತ್ತು ರೂ. 15,300 ಕೋಟಿ ಮೌಲ್ಯದ ವಿಮಾನ ಯಾನ ಸಂಸ್ಥೆಯ ಸಾಲವನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ಒಳಗೊಂಡಂತೆ ರೂ. 18,000 ಕೋಟಿ ಬಿಡ್ ಮಾಡಿತು.

ಇದನ್ನೂ ಓದಿ: ವಿಮೆ ಸಮಸ್ಯೆ: ದೆಹಲಿ-ಮಾಸ್ಕೋ ನಡುವಣ ವಿಮಾನ ರದ್ದು ಮಾಡಿದ ಏರ್ ಇಂಡಿಯಾ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!