AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಾಟಾ ಗ್ರೂಪ್​ ಸೇರಿದ ಏರ್​ ಇಂಡಿಯಾ; ಇಂದು ವಿಮಾನ ಪ್ರಯಾಣಿಕರಿಗೆ ಅಧಿಕೃತ ಪ್ರಕಟಣೆ

ಎಲ್ಲಾ ವಿಮಾನಗಳಲ್ಲಿ ಅಧಿಕೃತವಾಗಿ ಟಾಟಾ ಗ್ರೂಪ್​​ ಸೇರಿರುವ ಬಗ್ಗೆ ಅನೌನ್ಸ್​ಮೆಂಟ್​ ಮಾಡುವಂತೆ ಏರ್​ ಇಂಡಿಯಾ ಸಂಸ್ಥೆ ಪೈಲೆಟ್​ಗಳಿಗೆ ತಿಳಿಸಿದೆ. ಅಲ್ಲದೆ ಘೋಷಣೆಯಲ್ಲಿ ಯಾವ ರೀತಿ ಇರಬೇಕು ಎನ್ನುವುದನ್ನೂ ಏರ್​ ಇಂಡಿಯಾ ತಿಳಿಸಿದೆ

ಟಾಟಾ ಗ್ರೂಪ್​ ಸೇರಿದ ಏರ್​ ಇಂಡಿಯಾ; ಇಂದು ವಿಮಾನ ಪ್ರಯಾಣಿಕರಿಗೆ ಅಧಿಕೃತ ಪ್ರಕಟಣೆ
ಏರ್ ಇಂಡಿಯಾ
TV9 Web
| Edited By: |

Updated on:Jan 28, 2022 | 12:07 PM

Share

ಬರೋಬ್ಬರಿ 69 ವರ್ಷಗಳ ಬಳಿಕ ಏರ್​ ಇಂಡಿಯಾ (Air India) ಮತ್ತೆ ಟಾಟಾ ಸಮೂಹ ಸಂಸ್ಥೆಯ ತೆಕ್ಕೆಗೆ ಸೇರಿದೆ. ನಿನ್ನೆ (ಜ.27) ಅಧಿಕೃತವಾಗಿ  ಏರ್​ ಇಂಡಿಯಾ ಸಂಸ್ಥೆ ಟಾಟಾ ಗ್ರೂಪ್​ಗೆ ಸೇರಿದೆ. ಮುಂಬೈನಿಂದ ಕಾರ್ಯನಿರ್ವಹಿಸುವ ನಾಲ್ಕು ವಿಮಾನಗಳಲ್ಲಿ ವಿಶೇಷವಾದ ಊಟದ ಸೇವೆ ಪರಿಚಯಿಸುವ ಮೂಲಕ ಟಾಟಾ ಗ್ರೂಪ್ (Tata Group) ಏರ್ ಇಂಡಿಯಾದಲ್ಲಿ ತನ್ನ ಮೊದಲ ಹೆಜ್ಜೆ ಇಟ್ಟಿದೆ. ಈ ಮೂಲಕ ಏರ್​ ಇಂಡಿಯಾ ಸಾರ್ವಜನಿಕ ವಲಯದಿಂದ ಖಾಸಗಿ ವಲಯಕ್ಕೆ ಸೇರಿಕೊಂಡಿದೆ. ಈ ಕುರಿತು ನಿನ್ನೆ ಸಿಬ್ಬಂದಿಗೂ ಇ ಮೇಲ್ (E mail)​ ಮೂಲಕ ಮಾಹಿತಿಯನ್ನು ತಿಳಿಸಲಾಗಿದೆ. ಇನ್ನು ಏರ್​ ಇಂಡಿಯಾ ತಮ್ಮ ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಅಧಿಕೃತವಾಗಿ ತಾವು ಟಾಟಾ ಗ್ರೂಪ್​ಗೆ ಸೇರಿರುವ ಬಗ್ಗೆ ಘೋಷಣೆ ಮಾಡಲು ಬಯಸಿದೆ. 

ಶುಕ್ರವಾರ (ಜ.28) ಸಂಚರಿಸುವ ಎಲ್ಲಾ ವಿಮಾನಗಳಲ್ಲಿ ಅಧಿಕೃತವಾಗಿ ಟಾಟಾ ಗ್ರೂಪ್​​ ಸೇರಿರುವ ಬಗ್ಗೆ ಅನೌನ್ಸ್​ಮೆಂಟ್​ ಮಾಡುವಂತೆ  ಸಂಸ್ಥೆ ಪೈಲೆಟ್​ಗಳಿಗೆ ತಿಳಿಸಿದೆ. ಅಲ್ಲದೆ ಘೋಷಣೆಯಲ್ಲಿ ಯಾವ ರೀತಿ ಇರಬೇಕು ಎನ್ನುವುದನ್ನೂ ಏರ್​ ಇಂಡಿಯಾ ತಿಳಿಸಿದೆ ಎಂದು ಸುದ್ದಿ ಸಂಸ್ಥೆ ಎನ್​ಡಿಟಿವಿ ವರದಿ ಮಾಡಿದೆ. ಇಂದು ವಿಮಾನದಲ್ಲಿ ಆಗುವ ಪ್ರಕಟಣೆಯಲ್ಲಿ, ಪೈಲೆಟ್​ ಪ್ರಯಾಣಿಕರನ್ನು ಉದ್ದೇಶಿಸಿ, ‘ವಿಶೇಷ ವಿಮಾನಕ್ಕೆ ನಿಮಗೆಲ್ಲ ಸ್ವಾಗತ, ಇಂದು ನಾವು  7 ದಶಕಗಳ ಬಳಿಕ ಮತ್ತೆ ಟಾಟಾ ಗ್ರೂಪ್​ಗೆ ಸೇರಿಕೊಂಡಿದ್ದೇವೆ. ನವೀಕೃತ ಬದ್ಧತೆ ಮತ್ತು ಅದೇ ಉತ್ಸಾಹದಿಂದ ನಿಮ್ಮ ಸೇವೆಯಲ್ಲಿ ಇರಲು ಬಯಸುತ್ತೇವೆ. ಭವಿಷ್ಯದ ಏರ್​ ಇಂಡಿಯಾ ವಿಮಾನಕ್ಕೆ ನಿಮಗೆ ಸ್ವಾಗತ. ನಿಮ್ಮ ಪ್ರಯಾಣವನ್ನು ಆನಂದಿಸುತ್ತೀರಿ ಎಂದು ನಂಬಿದ್ದೇವೆ’ ಎಂದು ಪ್ರಕಟಣೆ ಇರಲಿದೆ.

ಏರ್​ ಇಂಡಿಯಾವನ್ನು ಹರಾಜಿನಲ್ಲಿಟ್ಟಾಗ ಕಳೆದ ಅಕ್ಟೋಬರ್​ನಲ್ಲಿ ಸರ್ಕಾರವು 18 ಸಾವಿರ ಕೋಟಿ ರೂ.ಗೆ ಟಾಟಾ ಗ್ರೂಪ್​ನ ಅಂಗಸಂಸ್ಥೆಯಾದ ತಾಲೇಸ್​ ಪ್ರೈವೇಟ್ ಲಿಮಿಟೆಡ್​ಗೆ ಮಾರಾಟ ಮಾಡಿತ್ತು. ತಾಲೇಸ್​ ಪ್ರೈವೆಟ್​ ಲಿಮಿಟೆಡ್​ ಟಾಟಾ ಸನ್ಸ್​ನ ಅಂಗಸಂಸ್ಥೆಯಾಗಿದ್ದು, 2022ರಲ್ಲಿ ಸ್ಥಾಪನೆಯಾಗಿದೆ.

ಇನ್ನು ಟಾಟಾ ಗ್ರೂಪ್​ಗೆ ಸೇರಿದ ಏರ್​ ಇಂಡಿಯಾದಲ್ಲಿ ಹಲವು ಶಿಸ್ತಿನ ನಿಯಮಗಳನ್ನು ಜಾರಿಗೊಳಿಸಲಾಗುತ್ತಿದೆ. ಅದರಲ್ಲಿ ಪ್ರಮುಖವಾದುದೆಂದರೆ, ಸಿಬ್ಬಂದಿ ಅಚ್ಚುಕಟ್ಟಾಗಿ ಉಡುಪನ್ನು ಧರಿಸಬೇಕು, ಊಟದ ವಿಚಾರದಲ್ಲಿ ಅಡುಗೆಯವರಿಗೂ ಮಾಹಿತಿ ನೀಡಲಾಗಿದೆ. ಜತೆಗೆ D (ನಿರ್ಗಮನ ಸಮಯ) ಮೈನಸ್ 10 ನಿಮಿಷಗಳಲ್ಲಿ ಬಾಗಿಲು ಮುಚ್ಚಲು ಪ್ರಯತ್ನಿಸಬೇಕು ಎಂದು ತಿಳಿಸಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ:

69 ವರ್ಷದ ಬಳಿಕ ಏರ್ ಇಂಡಿಯಾ ಇಂದು ಟಾಟಾ ಮಡಿಲಿಗೆ: ಸೇವಾ ಸುಧಾರಣೆ ಜೊತೆಗೆ ಯಶಸ್ಸಿನ ಹಾದಿಯಲ್ಲಿ ಹಾರಾಡುವ ನಿರೀಕ್ಷೆ

Published On - 11:55 am, Fri, 28 January 22

Follow Us
KSRTC ಬಸ್ ಬ್ರೇಕ್ ಫೇಲ್; ಆಟೋ, ಹಣ್ಣಿನ ಅಂಗಡಿಗೆ ಡಿಕ್ಕಿ!
KSRTC ಬಸ್ ಬ್ರೇಕ್ ಫೇಲ್; ಆಟೋ, ಹಣ್ಣಿನ ಅಂಗಡಿಗೆ ಡಿಕ್ಕಿ!
ಶಾಸಕರ ಫೋಟೋಶೂಟ್ ಬಗ್ಗೆ ಭಾರೀ ಚರ್ಚೆ: ಕಾಶಪ್ಪನವರ್ ಏನಂದ್ರು ನೋಡಿ
ಶಾಸಕರ ಫೋಟೋಶೂಟ್ ಬಗ್ಗೆ ಭಾರೀ ಚರ್ಚೆ: ಕಾಶಪ್ಪನವರ್ ಏನಂದ್ರು ನೋಡಿ
ಈಗ ಬೆಂಗಳೂರಿನ ರಸ್ತೆಗಳ ಡಾಂಬರೀಕರಣ ಮಾಡಲು ಸಾಧ್ಯವಿಲ್ಲ
ಈಗ ಬೆಂಗಳೂರಿನ ರಸ್ತೆಗಳ ಡಾಂಬರೀಕರಣ ಮಾಡಲು ಸಾಧ್ಯವಿಲ್ಲ
ಸಿದ್ದರಾಮಯ್ಯ ಶಾಲು ಬಗ್ಗೆ ಸದನದಲ್ಲಿ ಸ್ವಾರಸ್ಯಕರ ಮಾತು
ಸಿದ್ದರಾಮಯ್ಯ ಶಾಲು ಬಗ್ಗೆ ಸದನದಲ್ಲಿ ಸ್ವಾರಸ್ಯಕರ ಮಾತು
ಯುಗಾದಿ ದಿನವೂ, ಶಿವರಾತ್ರಿ ದಿನವೂ ಮಾಂಸ ತಿಂತೀನಿ, ನನ್ನಿಷ್ಟ: ಸಿದ್ದರಾಮಯ್ಯ
ಯುಗಾದಿ ದಿನವೂ, ಶಿವರಾತ್ರಿ ದಿನವೂ ಮಾಂಸ ತಿಂತೀನಿ, ನನ್ನಿಷ್ಟ: ಸಿದ್ದರಾಮಯ್ಯ
ಬಳಕೆಯ LPG ಸಿಲಿಂಡರ್ ಕೂಡ ಸಿಗ್ತಿಲ್ಲ: ಏಜೆನ್ಸಿಗಳ ಮುಂದೆ ಉದ್ದದ ಕ್ಯೂ!
ಬಳಕೆಯ LPG ಸಿಲಿಂಡರ್ ಕೂಡ ಸಿಗ್ತಿಲ್ಲ: ಏಜೆನ್ಸಿಗಳ ಮುಂದೆ ಉದ್ದದ ಕ್ಯೂ!
ಸಿಎಂ, ಡಿಸಿಎಂ ಜೊತೆ ಸಚಿವರ ಜೊತೆ ಶಾಸಕರ ಫೋಟೋಶೂಟ್ ಹೇಗಿತ್ತು ನೋಡಿ!
ಸಿಎಂ, ಡಿಸಿಎಂ ಜೊತೆ ಸಚಿವರ ಜೊತೆ ಶಾಸಕರ ಫೋಟೋಶೂಟ್ ಹೇಗಿತ್ತು ನೋಡಿ!
ಬೆಂಗಳೂರಿಗರೇ ಪೆಟ್ರೋಲ್-ಡೀಸೆಲ್ ಸಮಸ್ಯೆ ಎದುರಿಸಲು ಸಿದ್ಧರಾಗಿ!
ಬೆಂಗಳೂರಿಗರೇ ಪೆಟ್ರೋಲ್-ಡೀಸೆಲ್ ಸಮಸ್ಯೆ ಎದುರಿಸಲು ಸಿದ್ಧರಾಗಿ!
ಕಾಂಗ್ರೆಸ್​ನಲ್ಲಿ ಮುಸ್ಲಿಮರಿಗೆ ಅನ್ಯಾಯ ಮಾಡವ್ರೆ: ಸಾದಿಕ್ ಪೈಲ್ವಾನ್ ಕಿಡಿ
ಕಾಂಗ್ರೆಸ್​ನಲ್ಲಿ ಮುಸ್ಲಿಮರಿಗೆ ಅನ್ಯಾಯ ಮಾಡವ್ರೆ: ಸಾದಿಕ್ ಪೈಲ್ವಾನ್ ಕಿಡಿ
ಗದಗ: ಬಿರುಗಾಳಿ ಮಳೆಯ ಅಬ್ಬರಕ್ಕೆ ಹಾರಿಹೋದ ಮನೆ ಮೇಲಿನ ಶೀಟ್, ಮೂವರಿಗೆ ಗಾಯ
ಗದಗ: ಬಿರುಗಾಳಿ ಮಳೆಯ ಅಬ್ಬರಕ್ಕೆ ಹಾರಿಹೋದ ಮನೆ ಮೇಲಿನ ಶೀಟ್, ಮೂವರಿಗೆ ಗಾಯ