AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಾಟಾ ಗ್ರೂಪ್​ ಸೇರಿದ ಏರ್​ ಇಂಡಿಯಾ; ಇಂದು ವಿಮಾನ ಪ್ರಯಾಣಿಕರಿಗೆ ಅಧಿಕೃತ ಪ್ರಕಟಣೆ

ಎಲ್ಲಾ ವಿಮಾನಗಳಲ್ಲಿ ಅಧಿಕೃತವಾಗಿ ಟಾಟಾ ಗ್ರೂಪ್​​ ಸೇರಿರುವ ಬಗ್ಗೆ ಅನೌನ್ಸ್​ಮೆಂಟ್​ ಮಾಡುವಂತೆ ಏರ್​ ಇಂಡಿಯಾ ಸಂಸ್ಥೆ ಪೈಲೆಟ್​ಗಳಿಗೆ ತಿಳಿಸಿದೆ. ಅಲ್ಲದೆ ಘೋಷಣೆಯಲ್ಲಿ ಯಾವ ರೀತಿ ಇರಬೇಕು ಎನ್ನುವುದನ್ನೂ ಏರ್​ ಇಂಡಿಯಾ ತಿಳಿಸಿದೆ

ಟಾಟಾ ಗ್ರೂಪ್​ ಸೇರಿದ ಏರ್​ ಇಂಡಿಯಾ; ಇಂದು ವಿಮಾನ ಪ್ರಯಾಣಿಕರಿಗೆ ಅಧಿಕೃತ ಪ್ರಕಟಣೆ
ಏರ್ ಇಂಡಿಯಾ
TV9 Web
| Edited By: |

Updated on:Jan 28, 2022 | 12:07 PM

Share

ಬರೋಬ್ಬರಿ 69 ವರ್ಷಗಳ ಬಳಿಕ ಏರ್​ ಇಂಡಿಯಾ (Air India) ಮತ್ತೆ ಟಾಟಾ ಸಮೂಹ ಸಂಸ್ಥೆಯ ತೆಕ್ಕೆಗೆ ಸೇರಿದೆ. ನಿನ್ನೆ (ಜ.27) ಅಧಿಕೃತವಾಗಿ  ಏರ್​ ಇಂಡಿಯಾ ಸಂಸ್ಥೆ ಟಾಟಾ ಗ್ರೂಪ್​ಗೆ ಸೇರಿದೆ. ಮುಂಬೈನಿಂದ ಕಾರ್ಯನಿರ್ವಹಿಸುವ ನಾಲ್ಕು ವಿಮಾನಗಳಲ್ಲಿ ವಿಶೇಷವಾದ ಊಟದ ಸೇವೆ ಪರಿಚಯಿಸುವ ಮೂಲಕ ಟಾಟಾ ಗ್ರೂಪ್ (Tata Group) ಏರ್ ಇಂಡಿಯಾದಲ್ಲಿ ತನ್ನ ಮೊದಲ ಹೆಜ್ಜೆ ಇಟ್ಟಿದೆ. ಈ ಮೂಲಕ ಏರ್​ ಇಂಡಿಯಾ ಸಾರ್ವಜನಿಕ ವಲಯದಿಂದ ಖಾಸಗಿ ವಲಯಕ್ಕೆ ಸೇರಿಕೊಂಡಿದೆ. ಈ ಕುರಿತು ನಿನ್ನೆ ಸಿಬ್ಬಂದಿಗೂ ಇ ಮೇಲ್ (E mail)​ ಮೂಲಕ ಮಾಹಿತಿಯನ್ನು ತಿಳಿಸಲಾಗಿದೆ. ಇನ್ನು ಏರ್​ ಇಂಡಿಯಾ ತಮ್ಮ ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಅಧಿಕೃತವಾಗಿ ತಾವು ಟಾಟಾ ಗ್ರೂಪ್​ಗೆ ಸೇರಿರುವ ಬಗ್ಗೆ ಘೋಷಣೆ ಮಾಡಲು ಬಯಸಿದೆ. 

ಶುಕ್ರವಾರ (ಜ.28) ಸಂಚರಿಸುವ ಎಲ್ಲಾ ವಿಮಾನಗಳಲ್ಲಿ ಅಧಿಕೃತವಾಗಿ ಟಾಟಾ ಗ್ರೂಪ್​​ ಸೇರಿರುವ ಬಗ್ಗೆ ಅನೌನ್ಸ್​ಮೆಂಟ್​ ಮಾಡುವಂತೆ  ಸಂಸ್ಥೆ ಪೈಲೆಟ್​ಗಳಿಗೆ ತಿಳಿಸಿದೆ. ಅಲ್ಲದೆ ಘೋಷಣೆಯಲ್ಲಿ ಯಾವ ರೀತಿ ಇರಬೇಕು ಎನ್ನುವುದನ್ನೂ ಏರ್​ ಇಂಡಿಯಾ ತಿಳಿಸಿದೆ ಎಂದು ಸುದ್ದಿ ಸಂಸ್ಥೆ ಎನ್​ಡಿಟಿವಿ ವರದಿ ಮಾಡಿದೆ. ಇಂದು ವಿಮಾನದಲ್ಲಿ ಆಗುವ ಪ್ರಕಟಣೆಯಲ್ಲಿ, ಪೈಲೆಟ್​ ಪ್ರಯಾಣಿಕರನ್ನು ಉದ್ದೇಶಿಸಿ, ‘ವಿಶೇಷ ವಿಮಾನಕ್ಕೆ ನಿಮಗೆಲ್ಲ ಸ್ವಾಗತ, ಇಂದು ನಾವು  7 ದಶಕಗಳ ಬಳಿಕ ಮತ್ತೆ ಟಾಟಾ ಗ್ರೂಪ್​ಗೆ ಸೇರಿಕೊಂಡಿದ್ದೇವೆ. ನವೀಕೃತ ಬದ್ಧತೆ ಮತ್ತು ಅದೇ ಉತ್ಸಾಹದಿಂದ ನಿಮ್ಮ ಸೇವೆಯಲ್ಲಿ ಇರಲು ಬಯಸುತ್ತೇವೆ. ಭವಿಷ್ಯದ ಏರ್​ ಇಂಡಿಯಾ ವಿಮಾನಕ್ಕೆ ನಿಮಗೆ ಸ್ವಾಗತ. ನಿಮ್ಮ ಪ್ರಯಾಣವನ್ನು ಆನಂದಿಸುತ್ತೀರಿ ಎಂದು ನಂಬಿದ್ದೇವೆ’ ಎಂದು ಪ್ರಕಟಣೆ ಇರಲಿದೆ.

ಏರ್​ ಇಂಡಿಯಾವನ್ನು ಹರಾಜಿನಲ್ಲಿಟ್ಟಾಗ ಕಳೆದ ಅಕ್ಟೋಬರ್​ನಲ್ಲಿ ಸರ್ಕಾರವು 18 ಸಾವಿರ ಕೋಟಿ ರೂ.ಗೆ ಟಾಟಾ ಗ್ರೂಪ್​ನ ಅಂಗಸಂಸ್ಥೆಯಾದ ತಾಲೇಸ್​ ಪ್ರೈವೇಟ್ ಲಿಮಿಟೆಡ್​ಗೆ ಮಾರಾಟ ಮಾಡಿತ್ತು. ತಾಲೇಸ್​ ಪ್ರೈವೆಟ್​ ಲಿಮಿಟೆಡ್​ ಟಾಟಾ ಸನ್ಸ್​ನ ಅಂಗಸಂಸ್ಥೆಯಾಗಿದ್ದು, 2022ರಲ್ಲಿ ಸ್ಥಾಪನೆಯಾಗಿದೆ.

ಇನ್ನು ಟಾಟಾ ಗ್ರೂಪ್​ಗೆ ಸೇರಿದ ಏರ್​ ಇಂಡಿಯಾದಲ್ಲಿ ಹಲವು ಶಿಸ್ತಿನ ನಿಯಮಗಳನ್ನು ಜಾರಿಗೊಳಿಸಲಾಗುತ್ತಿದೆ. ಅದರಲ್ಲಿ ಪ್ರಮುಖವಾದುದೆಂದರೆ, ಸಿಬ್ಬಂದಿ ಅಚ್ಚುಕಟ್ಟಾಗಿ ಉಡುಪನ್ನು ಧರಿಸಬೇಕು, ಊಟದ ವಿಚಾರದಲ್ಲಿ ಅಡುಗೆಯವರಿಗೂ ಮಾಹಿತಿ ನೀಡಲಾಗಿದೆ. ಜತೆಗೆ D (ನಿರ್ಗಮನ ಸಮಯ) ಮೈನಸ್ 10 ನಿಮಿಷಗಳಲ್ಲಿ ಬಾಗಿಲು ಮುಚ್ಚಲು ಪ್ರಯತ್ನಿಸಬೇಕು ಎಂದು ತಿಳಿಸಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ:

69 ವರ್ಷದ ಬಳಿಕ ಏರ್ ಇಂಡಿಯಾ ಇಂದು ಟಾಟಾ ಮಡಿಲಿಗೆ: ಸೇವಾ ಸುಧಾರಣೆ ಜೊತೆಗೆ ಯಶಸ್ಸಿನ ಹಾದಿಯಲ್ಲಿ ಹಾರಾಡುವ ನಿರೀಕ್ಷೆ

Published On - 11:55 am, Fri, 28 January 22

Follow Us
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ