AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಮಿಕ್ರಾನ್​ ವೈರಾಣು ಡೆಲ್ಟಾಗಿಂತಲೂ ಅಪಾಯಕಾರಿಯಾ?-ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದೇನು? ಇಲ್ಲಿದೆ ಸಮಗ್ರ ಮಾಹಿತಿ

ಕೊವಿಡ್​ 19ನ ಡೆಲ್ಟಾ ಸೇರಿ ಎಲ್ಲ ರೂಪಾಂತರ ತಳಿಗಳು ಸಾವನ್ನು ಉಂಟು ಮಾಡುವಷ್ಟು ಪ್ರಬಲವಾಗಿವೆ. ಹಾಗಾಗಿ ಒಮಿಕ್ರಾನ್​​ನ್ನು ನಿರ್ಲಕ್ಷಿಸಬಾರದು ಎಂದೂ ಡಬ್ಲ್ಯೂಎಚ್​ಒ ತಿಳಿಸಿದೆ.

ಒಮಿಕ್ರಾನ್​ ವೈರಾಣು ಡೆಲ್ಟಾಗಿಂತಲೂ ಅಪಾಯಕಾರಿಯಾ?-ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದೇನು? ಇಲ್ಲಿದೆ ಸಮಗ್ರ ಮಾಹಿತಿ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Nov 29, 2021 | 10:42 AM

Share

ದೆಹಲಿ: ಸದ್ಯಕ್ಕಂತೂ ಕೊರೊನಾದ ಒಮಿಕ್ರಾನ್​ ರೂಪಾಂತರ ಭೀತಿ ಜಗತ್ತಿಗೆ ಆವರಿಸಿದೆ. ಪ್ರತಿದಿನ ಇದರ ವ್ಯಾಪ್ತಿ ಹೆಚ್ಚುತ್ತಿದ್ದು, ಹಲವು ದೇಶಗಳು ಈ ಒಮಿಕ್ರಾನ್​ ನಿಯಂತ್ರಣ ಮಾಡಲು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಇಲ್ಲಿಯವರೆಗೆ ಅತ್ಯಂತ ಅಪಾಯಕಾರಿಯೆನಿಸಿದ್ದ ಡೆಲ್ಟಾ ವೈರಾಣುಗಿಂತಲೂ ಇದು ಅಪಾಯ ಎಂದು ಹೇಳಲಾಗುತ್ತಿದೆ. ಆದರೆ ಈ ಹೊಸ ರೂಪಾಂತರದ ಹರಡುವಿಕೆ ತೀವ್ರಗತಿಯಲ್ಲಿದೆ, ಇದು ಆರೋಗ್ಯದ ಮೇಲೆ ಗಂಭೀರ ಸ್ವರೂಪದ ಹಾನಿ ಉಂಟು ಮಾಡುತ್ತದೆ ಎಂಬುದಿನ್ನೂ ಸ್ಪಷ್ಟವಾಗಿಲ್ಲ. ಇನ್ನೂ ಕೆಲವು ಅಧ್ಯಯನಗಳ ಬಳಿಕವಷ್ಟೇ ಇದು ಗೊತ್ತಾಗಲಿದೆ. ಒಂದೇ ಸಲ ಯಾವುದೇ ತೀರ್ಮಾನಕ್ಕೂ ಬರಲಾಗದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಒಮಿಕ್ರಾನ್​ ಜಾಗತಿಕವಾಗಿ ಹರಡುತ್ತಿರುವ ಬಗ್ಗೆ ಕಳವಳ ಶುರುವಾಗಿದೆ.  

ಒಮಿಕ್ರಾನ್​ ಬಗ್ಗೆ ಡಬ್ಲ್ಯೂಎಚ್​ಒ ಹೇಳೋದೇನು? ಕೊವಿಡ್​ 19 ನ ಹಲವು ರೂಪಾಂತರಗಳು ಸದ್ಯಕ್ಕೆ ಜಾಗತಿಕವಾಗಿ ಕಾಡುತ್ತಿವೆ. ಆ ಎಲ್ಲ ರೂಪಾಂತರಿ ತಳಿಗಳಿಗಿಂತ ಒಮಿಕ್ರಾನ್​ ಸೋಂಕು ಮತ್ತು ಅದರ ಲಕ್ಷಣಗಳು ವಿಭಿನ್ನ ಎಂದು ಹೇಳಲು ಸದ್ಯಕ್ಕಂತೂ ಯಾವುದೇ ಪುರಾವೆ ಸಿಕ್ಕಿಲ್ಲ. ಹೀಗಾಗಿ ಈ ಒಮಿಕ್ರಾನ್​​ ಬಗ್ಗೆ ಇನ್ನಷ್ಟು ಅಧ್ಯಯನ, ವಿಮರ್ಶೆಗಳು ಅಗತ್ಯವಿದ್ದು, ಅದಕ್ಕೆ ಕೆಲವು ದಿನಗಳು ಅಥವಾ ವಾರಗಳೇ ಬೇಕಾಗಬಹದು ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಸದ್ಯ ಕೊವಿಡ್​ 19 ನಿಂದ ಉಂಟಾಗಿರುವ ಡೆಲ್ಟಾ ಸೇರಿ ಎಲ್ಲ ರೂಪಾಂತರ ತಳಿಗಳು ಸಾವನ್ನು ಉಂಟು ಮಾಡುವಷ್ಟು ಪ್ರಬಲವಾಗಿವೆ. ಹಾಗಾಗಿ ಒಮಿಕ್ರಾನ್​​ನ್ನು ನಿರ್ಲಕ್ಷಿಸಬಾರದು. ಪ್ರಾಥಮಿಕವಾಗಿ ಈ ಸೋಂಕಿನ ಬಗ್ಗೆ ನಡೆದ ಅಧ್ಯಯನದಲ್ಲಿ, ಒಮಿಕ್ರಾನ್​ ಮರು ಸೋಂಕಿಗೆ ಕಾರಣವಾಗಲಿದೆ ಎಂಬ ಅಂಶ ಬೆಳಕಿಗೆ ಬಂದಿದೆ. ಅಂದರೆ ಈ ಹಿಂದೆ ಕೊವಿಡ್​ 19 ಸೋಂಕಿಗೆ ಒಳಗಾದವರು ಕೂಡ ಮತ್ತೆ ಈ ಒಮಿಕ್ರಾನ್​ಗೆ ಒಳಗಾಗಬಹುದು.

ಈಗಿರುವ ಪಿಸಿಆರ್​ ಟೆಸ್ಟ್​​ನಿಂದಲೇ ಒಮಿಕ್ರಾನ್​ ಸೋಂಕನ್ನು ಪತ್ತೆ ಮಾಡಬಹುದು. ಹಾಗಿದ್ದಾಗ್ಯೂ ಈಗಿರುವ ಕೊವಿಡ್​ 19 ಲಸಿಕೆಗಳೇ ಒಮಿಕ್ರಾನ್​ ನಿಯಂತ್ರಿಸಬಹುದಾ ಎಂಬುದಕ್ಕೆ ಇನ್ನಷ್ಟು ಅಧ್ಯಯನಗಳ ಅಗತ್ಯವಿದೆ ಎಂದು ಡಬ್ಲ್ಯೂಎಚ್​​ಒ ಹೇಳಿದೆ.  ಹಾಗೇ, ಒಮಿಕ್ರಾನ್​ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ವಿಶ್ವದ ಎಲ್ಲ ರಾಷ್ಟ್ರಗಳಿಗೆ ಸೂಚನೆ ನೀಡಿದೆ.

ಇದನ್ನೂ ಓದಿ: ಸಲ್ಮಾನ್​ ಖಾನ್​ ಯಾಕಿನ್ನೂ ಮದುವೆ ಆಗಿಲ್ಲ? ಅಸಲಿ ಕಾರಣ ತಿಳಿಸಿದ ಬಾಮೈದ ಆಯುಶ್​ ಶರ್ಮಾ

Published On - 9:47 am, Mon, 29 November 21

ಬಳ್ಳಾರಿ ಗಲಭೆ ಖಂಡಿಸಿ ಬಿಜೆಪಿಯಿಂದ ಸಮರ: ಜ 17ರಂದು ಪ್ರತಿಭಟನೆ ಎಂದ ರೆಡ್ಡಿ
ಬಳ್ಳಾರಿ ಗಲಭೆ ಖಂಡಿಸಿ ಬಿಜೆಪಿಯಿಂದ ಸಮರ: ಜ 17ರಂದು ಪ್ರತಿಭಟನೆ ಎಂದ ರೆಡ್ಡಿ
ಪ್ರೀತಿ ಮಾಡಲು ಒಪ್ಪದಿದ್ದಕ್ಕೆ ಬೆಂಗಳೂರಿನ ಹುಡುಗಿಗೆ ಕೊಲೆ ಬೆದರಿಕೆ
ಪ್ರೀತಿ ಮಾಡಲು ಒಪ್ಪದಿದ್ದಕ್ಕೆ ಬೆಂಗಳೂರಿನ ಹುಡುಗಿಗೆ ಕೊಲೆ ಬೆದರಿಕೆ
ಮನೆ ಕಟ್ಟಲು ಅಡಿಪಾಯ ತೆಗೆಯುವಾಗ ವೇಳೆ ನಿಧಿ ಪತ್ತೆ
ಮನೆ ಕಟ್ಟಲು ಅಡಿಪಾಯ ತೆಗೆಯುವಾಗ ವೇಳೆ ನಿಧಿ ಪತ್ತೆ
ಎಣ್ಣೆ ಮತ್ತಲ್ಲಿ ಡಿವೈಡರ್​​ ಹಾರಿಸಿದ ಕಾರು ಚಾಲಕ: 8 ಜನ ಜಸ್ಟ್​ ಮಿಸ್!​​
ಎಣ್ಣೆ ಮತ್ತಲ್ಲಿ ಡಿವೈಡರ್​​ ಹಾರಿಸಿದ ಕಾರು ಚಾಲಕ: 8 ಜನ ಜಸ್ಟ್​ ಮಿಸ್!​​
ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಕ್ಕೆ ಕಾರಣವೇನು? ವಿವರಿಸಿದ ಯಶ್ ತಾಯಿ ಪುಷ್ಪ
ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಕ್ಕೆ ಕಾರಣವೇನು? ವಿವರಿಸಿದ ಯಶ್ ತಾಯಿ ಪುಷ್ಪ
ಗಂಡನ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಎರಡು ತಿಂಗಳ ಗರ್ಭಿಣಿ
ಗಂಡನ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಎರಡು ತಿಂಗಳ ಗರ್ಭಿಣಿ
ಸಿದ್ದರಾಮಯ್ಯ ಲೀಸ್ ಬೇಸ್ಡ್ ಸಿಎಂ: ಗುಡುಗಿದ ಹೆಚ್​​ಡಿ ಕುಮಾರಸ್ವಾಮಿ
ಸಿದ್ದರಾಮಯ್ಯ ಲೀಸ್ ಬೇಸ್ಡ್ ಸಿಎಂ: ಗುಡುಗಿದ ಹೆಚ್​​ಡಿ ಕುಮಾರಸ್ವಾಮಿ
ತೆನೆ ಹೊತ್ತ ಮಹಿಳೆ ಜತೆ ಚಕ್ರದ ಗುರುತು ಸೇರಿಸಲು ಪ್ಲ್ಯಾನ್
ತೆನೆ ಹೊತ್ತ ಮಹಿಳೆ ಜತೆ ಚಕ್ರದ ಗುರುತು ಸೇರಿಸಲು ಪ್ಲ್ಯಾನ್
ಕಾಂಪೌಂಡ್ ತೆರವು ವಿಚಾರ: ಹಾಸನ ಪೊಲೀಸ್ ಠಾಣೆಗೆ ಯಶ್ ತಾಯಿ ಭೇಟಿ
ಕಾಂಪೌಂಡ್ ತೆರವು ವಿಚಾರ: ಹಾಸನ ಪೊಲೀಸ್ ಠಾಣೆಗೆ ಯಶ್ ತಾಯಿ ಭೇಟಿ
ಕರ್ನಾಟಕ ಕರಾವಳಿ ಆಗಲಿದೆ ಟೂರಿಸಂ ಹಬ್: ಡಿಕೆಶಿ ಮಹತ್ವದ ಘೋಷಣೆ
ಕರ್ನಾಟಕ ಕರಾವಳಿ ಆಗಲಿದೆ ಟೂರಿಸಂ ಹಬ್: ಡಿಕೆಶಿ ಮಹತ್ವದ ಘೋಷಣೆ