AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಸುಪ್ರೀಂಕೋರ್ಟ್​ನಲ್ಲಿ ದಿವ್ಯಾಂಗ ವಕೀಲರಿಗಾಗಿ ಸೈನ್ ಲ್ಯಾಂಗ್ವೇಜ್ ಇಂಟರ್​ಪ್ರಿಟರ್ ನೇಮಕ

ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಸುಪ್ರೀಂಕೋರ್ಟ್(Supreme Court) ​ನಲ್ಲಿ ದಿವ್ಯಾಂಗ ವಕೀಲರಿಗಾಗಿ ಸೈನ್ ಲ್ಯಾಂಗ್ವೇಜ್ ಇಂಟರ್​ಪ್ರಿಟರ್ ಅಂದರೆ ಸಂಕೇತ ಭಾಷಾ ವ್ಯಾಖ್ಯಾನಕಾರರನ್ನು ನೇಮಿಸಲಾಗಿದೆ. ನ್ಯಾಯಾಲಯದಲ್ಲಿ ಪ್ರಕರಣದ ಪರವಾಗಿ ಅಥವಾ ವಿರುದ್ಧವಾಗಿ ಹೋರಾಡುವುದು ಸುಲಭದ ಕೆಲಸವಲ್ಲ. ಏಕೆಂದರೆ ನೀವು ನಿಮ್ಮ ಧ್ವನಿಯನ್ನು ಬಲವಾಗಿ ಹೇಳಬೇಕಾಗುತ್ತದೆ. ಆದರೆ ಈ ಹೋರಾಟದಲ್ಲಿ ವಕೀಲರಿಗೆ ಮಾತೇ ಬರದಿದ್ದರೆ ಏನು ಮಾಡಬೇಕು. ಕೇವಲ ಸನ್ನೆಯ ಮೂಲಕ ವಾದ ಮಾಡಿದರೆ ಮುಖ್ಯ ನ್ಯಾಯಮೂರ್ತಿಗಳಿಗೆ ಅರ್ಥವಾಗುವುದು ಕಷ್ಟ ಹಾಗಾಗಿ ಇಂಟರ್​ಪ್ರಿಟರ್​ಅನ್ನು ನೇಮಿಸಬೇಕು ಎಂದು ದಿವ್ಯಾಂಗ ವಕೀಲೆ ಸಾರಾ ಸನ್ನಿ ಸುಪ್ರೀಂಕೋರ್ಟ್​ಗೆ ಮನವಿ ಮಾಡಿದ್ದರು.

ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಸುಪ್ರೀಂಕೋರ್ಟ್​ನಲ್ಲಿ ದಿವ್ಯಾಂಗ ವಕೀಲರಿಗಾಗಿ ಸೈನ್ ಲ್ಯಾಂಗ್ವೇಜ್ ಇಂಟರ್​ಪ್ರಿಟರ್ ನೇಮಕ
ಸಾರಾ ಸನ್ನಿ
Follow us
ನಯನಾ ರಾಜೀವ್
|

Updated on: Oct 06, 2023 | 11:43 AM

ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಸುಪ್ರೀಂಕೋರ್ಟ್(Supreme Court) ​ನಲ್ಲಿ ದಿವ್ಯಾಂಗ ವಕೀಲರಿಗಾಗಿ ಸೈನ್ ಲ್ಯಾಂಗ್ವೇಜ್ ಇಂಟರ್​ಪ್ರಿಟರ್ ಅಂದರೆ ಸಂಕೇತ ಭಾಷಾ ವ್ಯಾಖ್ಯಾನಕಾರರನ್ನು ನೇಮಿಸಲಾಗಿದೆ. ನ್ಯಾಯಾಲಯದಲ್ಲಿ ಪ್ರಕರಣದ ಪರವಾಗಿ ಅಥವಾ ವಿರುದ್ಧವಾಗಿ ಹೋರಾಡುವುದು ಸುಲಭದ ಕೆಲಸವಲ್ಲ. ಏಕೆಂದರೆ ನೀವು ನಿಮ್ಮ ಧ್ವನಿಯನ್ನು ಬಲವಾಗಿ ಹೇಳಬೇಕಾಗುತ್ತದೆ. ಆದರೆ ಈ ಹೋರಾಟದಲ್ಲಿ ವಕೀಲರಿಗೆ ಮಾತೇ ಬರದಿದ್ದರೆ ಏನು ಮಾಡಬೇಕು. ಕೇವಲ ಸನ್ನೆಯ ಮೂಲಕ ವಾದ ಮಾಡಿದರೆ ಮುಖ್ಯ ನ್ಯಾಯಮೂರ್ತಿಗಳಿಗೆ ಅರ್ಥವಾಗುವುದು ಕಷ್ಟ ಹಾಗಾಗಿ ಇಂಟರ್​ಪ್ರಿಟರ್​ಅನ್ನು ನೇಮಿಸಬೇಕು ಎಂದು ದಿವ್ಯಾಂಗ ವಕೀಲೆ ಸಾರಾ ಸನ್ನಿ ಸುಪ್ರೀಂಕೋರ್ಟ್​ಗೆ ಮನವಿ ಮಾಡಿದ್ದರು.

ಸಾರಾ ಸನ್ನಿ ಸುಪ್ರೀಂಕೋರ್ಟ್​ ಅನ್ನು ಪ್ರತಿನಿಧಿಸುವ ಮೊದಲ ದಿವ್ಯಾಂಗ ವಕೀಲರಾಗಿದ್ದಾರೆ. ಸೈನ್ ಲ್ಯಾಂಗ್ವೇಜ್ ಇಂಟರ್​ಪ್ರಿಟರ್ ಸಹಾಯದಿಂದ ಅವರು ತಮ್ಮ ವಾದವನ್ನು ಮಂಡಿಸಬಹುದಾಗಿದೆ. ಇಂಟರ್​ಪ್ರಿಟರ್​ಗಳು ಸಾಮಾನ್ಯವಾಗಿ ಗಂಟೆಗಳ ಆಧಾರದ ಮೇಲೆ ಶುಲ್ಕವನ್ನು ಪಡೆಯುತ್ತಾರೆ, ಪ್ರತಿ 30 ನಿಮಿಷಗಳಿಗೊಮ್ಮೆ ವಿರಾಮವನ್ನು ಪಡೆಯುತ್ತಾರೆ. ಹಾಗಾಗಿ ಇಬ್ಬರು ವ್ಯಾಖ್ಯಾನಕಾರರನ್ನು ನೇಮಿಸಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಸಾರಾ ಬೆಂಗಳೂರಿನ ಸೇಂಟ್​ ಜೋಸೆಫ್ ಕಾನೂನು ವಿದ್ಯಾಲಯದಲ್ಲಿ ಎಲ್​ಎಲ್​ಬಿ ಪದವಿ ಪಡೆದಿದ್ದಾರೆ. ಹಾಗೆಯೇ ಜಿಲ್ಲಾ ನ್ಯಾಯಾಲಯದಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ಆದರೆ ಅಲ್ಲಿ ಇಂಟರ್​ಪ್ರಿಟರ್​ ನೇಮಕಕ್ಕೆ ಅವಕಾಶವಿರಲಿಲ್ಲ.

ಕೇರಳದ ಕೊಟ್ಟಾಯಂನವರು ಸಾರಾ ಸನ್ನಿ ಕೇರಳದ ಕೊಟ್ಟಾಯಂನವರು, ಅವರ ತಂದೆ ಚಾರ್ಟರ್ಡ್​ ಅಕೌಂಟೆಂಟ್, ತಾಯಿ ಗೃಹಿಣಿ, ಸಾರಾ ಸನ್ನಿ ಅವಳಿ ಮಕ್ಕಳು ಇಬ್ಬರಿಗೂ ಕಿವಿ ಕೇಳಿಸದು, ಮಾತು ಬಾರದು, ಅದಕ್ಕೂ ಮುಂಚೆ ಹುಟ್ಟಿದ್ದ ಅವರ ಸಹೋದರನಿಗೂ ಕೂಡ ಕಿವಿ ಕೇಳಿಸುವುದಿಲ್ಲ. ಆದರೂ ಛಲ ಬಿಡದೆ ಸಾಮಾನ್ಯ ಮಕ್ಕಳಂತೆ ಶಿಕ್ಷಣ ಪಡೆದಿದ್ದಾರೆ. ಸಾರಾ ಬಿಕಾಂ ಮಾಡಿ ನಂತರ ಕಾನೂನು ಶಿಕ್ಷಣವನ್ನು ಪೂರ್ಣಗೊಳಿಸಿದರು.

ಮತ್ತಷ್ಟು ಓದಿ: ದಿವ್ಯಾಂಗರು ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಸಾರಾ ಸಾಕ್ಷಿ, ಇಲ್ಲಿದೆ ಕೇರಳದ ದಿವ್ಯಾಂಗ ವಕೀಲೆಯ ಯಶೋಗಾಥೆ

ನ್ಯಾಯಾಲಯದಲ್ಲಿ ವಾದ ಮಾಡಲು ಉತ್ಸುಕರಾಗಿದ್ದರು ಕಾನೂನು ಶಿಕ್ಷಣವನ್ನು ಯಶಸ್ವಿಯಾಗಿ ಪೂರೈಸಿದ್ದ ಸಾರಾ, ಎಲ್ಲಾ ವಕೀಲರಂತೆ ನ್ಯಾಯಾಲಯದಲ್ಲಿ ಪ್ರಕರಣಗಳಲ್ಲಿ ಹೋರಾಡಲು ಉತ್ಸುಕರಾಗಿದ್ದರು. ಆದರೆ ಮುಖ್ಯ ಸಮಸ್ಯೆಯೆಂದರೆ ಮಾತು ಬರುವುದಿಲ್ಲ. ಜಿಲ್ಲಾ ನ್ಯಾಯಾಲಯವು ಭಾಷಾಂತರಕಾರರನ್ನು ನೇಮಿಸಿಕೊಳ್ಳಲು ನಿರಾಕರಿಸಿತು.

ಸಾರಾ ಏನು ಹೇಳ್ತಾರೆ? ಆ ದಿನ ನಾನು ತುಂಬಾ ಉತ್ಸುಕಳಾಗಿದ್ದೆ, ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ಮುಂದೆ ನಿಂತು ವಾದ ಮಂಡನೆ ಮಾಡಿದ್ದು ತುಂಬಾ ಸಂತಸ ತಂದಿದೆ. ಈ ಸಮಯದಲ್ಲಿ ನನ್ನ ತಂದೆ-ತಾಯಿ ಶ್ರಮಕ್ಕೆ ಪ್ರತಿಫಲ ಸಿಕ್ಕಂತಾಗಿದೆ. ಈ ಹಿಂದೆ ನಾನು ಲಿಖಿತ ರೂಪದಲ್ಲಿ ನನ್ನ ಪ್ರಕರಣದ ಎಲ್ಲಾ ಸಮಸ್ಯೆಗಳನ್ನು ವಿವಿಧ ನ್ಯಾಯಾಲಯಗಳ ಮುಂದೆ ಮಂಡಿಸುತ್ತಿದ್ದೆ ಎಂದಿದ್ದಾರೆ.

ಸಾರಾ ಸಾಮಾನ್ಯ ಮಕ್ಕಳಂತೆಯೇ ಕಲಿತಿದ್ದರು ಸಾರಾ ಓದಿದ ಶಾಲೆ ಕಿವುಡ ಮಕ್ಕಳದ್ದಾಗಿರಲಿಲ್ಲ ಹಾಗಾಗಿ ಬರವಣಿಗೆಯ ಮೂಲಕವೇ ಸಾರಾ ಇತರರೊಂದಿಗೆ ಸಂವನ ನಡೆಸುತ್ತಿದ್ದರು. ಸಮಸ್ಯೆ ಎದುರಾದಾಗಲೆಲ್ಲಾ ತಂದೆಯ ಸಹಾಯ ಪಡೆಯುತ್ತಿದ್ದರು. ಆಗ ನಿರಂತರವಾಗಿ ಅಭ್ಯಾಸ ಮಾಡುತ್ತಾ ವಿಷಯ ಅರ್ಥ ಮಾಡಿಕೊಳ್ಳುತ್ತಿದ್ದರು. ಈ ಮೂಲಕ ಸಾರಾ ತನ್ನ ಕೊರತೆಗಳ ಬಗ್ಗೆ ಹೆಚ್ಚು ಚಿಂತಿಸದೆ ತನ್ನ ಶಿಕ್ಷಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದರು.

ಸಾರಾ ಕುಟುಂಬದ ಬಗ್ಗೆ ಮಾಹಿತಿ ಸಾರಾಳ ಅವಳಿ ಸಹೋದರಿ ಮಾರಿಯಾ ಮತ್ತು ಹಿರಿಯ ಸಹೋದರ ಪ್ರತೀಕ್ ಕೂಡ ದಿವ್ಯಾಂಗರು, ಮಾರಿಯಾ ಸಿಎ ಕಂಪನಿಯಲ್ಲಿ ತರಬೇತಿ ಪಡೆಯುತ್ತಿದ್ದರೆ ಅಣ್ಣ ಪ್ರತೀಕ್ ಅಮೆರಿಕದಲ್ಲಿ ಸಾಫ್ಟ್​ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ.

ಮೊದಲಿನಿಂದಲೂ ಕಾನೂನಿನ ಬಗ್ಗೆ ಹೆಚ್ಚಿನ ಆಸಕ್ತಿ ಸಾರಾ ಮೊದಲಿನಿಂದಲೂ ಕಾನೂನಿನ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದರು. ಎಲ್ಲಾ ಬಾಗಿಲುಗಳು ಮುಚ್ಚಿರುವಾಗ ದೇವರು ಯಾವುದೋ ಒಂದು ಕಿಟಕಿಯನ್ನು ತೆರೆದಿರುತ್ತಾನೆ ಎಂದು ಬಲವಾಗಿ ನಂಬಿದ್ದರು, ಸದಾ ಸಕಾರಾತ್ಮಕ ಆಲೋಚನೆಗಳನ್ನು ಹೊಂದಿದ್ದರೆ ಯಶಸ್ಸು ಖಚಿತ ಎನ್ನುವ ಆತ್ಮವಿಶ್ವಾಸವೇ ಅವರನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಹರಿಪ್ರಸಾದ್ ಮನೆಯಿಂದಲೇ ಶಾಹುಲ್​ಗೆ ಜಮೀರ್ ಮತ್ತು ನಜೀರ್​ರಿಂದ ಫೋನ್
ಹರಿಪ್ರಸಾದ್ ಮನೆಯಿಂದಲೇ ಶಾಹುಲ್​ಗೆ ಜಮೀರ್ ಮತ್ತು ನಜೀರ್​ರಿಂದ ಫೋನ್
ಕಾಂಗ್ರೆಸ್​ಗೆ ಬಿಗ್ ಶಾಕ್: ಮುಸ್ಲಿಂ ಮುಖಂಡರಿಂದ ಸಾಮೂಹಿಕ ರಾಜೀನಾಮೆ
ಕಾಂಗ್ರೆಸ್​ಗೆ ಬಿಗ್ ಶಾಕ್: ಮುಸ್ಲಿಂ ಮುಖಂಡರಿಂದ ಸಾಮೂಹಿಕ ರಾಜೀನಾಮೆ
ಕ್ಯಾಬಿನೆಟ್​ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಚಿಕಿತ್ಸೆ ಬೇಕು: ರವಿ
ಕ್ಯಾಬಿನೆಟ್​ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಚಿಕಿತ್ಸೆ ಬೇಕು: ರವಿ
ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​
ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​
ಕಮಲ್ ಹಾಸನ್ ಕ್ಷಮೆ ಕೇಳಿದ್ರೆ ಮಾತ್ರ ಸಿನಿಮಾ ಬಿಡುಗಡೆ: ಸಾ.ರಾ. ಗೋವಿಂದು
ಕಮಲ್ ಹಾಸನ್ ಕ್ಷಮೆ ಕೇಳಿದ್ರೆ ಮಾತ್ರ ಸಿನಿಮಾ ಬಿಡುಗಡೆ: ಸಾ.ರಾ. ಗೋವಿಂದು
ಬಂಟ್ವಾಳ್ ರಹಿಮಾನ್ ಹತ್ಯೆ: ರಣಾಂಗಣವಾದ ಮುಸ್ಲಿಂ ಮುಖಂಡರ ಸಭೆ
ಬಂಟ್ವಾಳ್ ರಹಿಮಾನ್ ಹತ್ಯೆ: ರಣಾಂಗಣವಾದ ಮುಸ್ಲಿಂ ಮುಖಂಡರ ಸಭೆ
ದಲಿತರ ಮಾರಣವಾಗುತ್ತಿದ್ದರೂ ದಲಿತ ನಾಯಕರು ಸುಮ್ಮನಿದ್ದಾರೆ: ಚಲವಾದಿ
ದಲಿತರ ಮಾರಣವಾಗುತ್ತಿದ್ದರೂ ದಲಿತ ನಾಯಕರು ಸುಮ್ಮನಿದ್ದಾರೆ: ಚಲವಾದಿ
ತಳಿರು ತೋರಣ ಮತ್ತು ರಂಗೋಲಿಯಿಂದ ಅಲಂಕೃತಗೊಂಡ ಶಾಲೆ ನೋಡಿ ಮಕ್ಕಳು ಖುಷ್
ತಳಿರು ತೋರಣ ಮತ್ತು ರಂಗೋಲಿಯಿಂದ ಅಲಂಕೃತಗೊಂಡ ಶಾಲೆ ನೋಡಿ ಮಕ್ಕಳು ಖುಷ್
ಹೆಸರು ಬದಲಾವಣೆಯಿಂದ ಜನಕ್ಕೆ ಅನುಕೂಲವಾಗೋದಾದರೆ ಸಂತೋಷ: ಯೋಗೇಶ್ವರ್
ಹೆಸರು ಬದಲಾವಣೆಯಿಂದ ಜನಕ್ಕೆ ಅನುಕೂಲವಾಗೋದಾದರೆ ಸಂತೋಷ: ಯೋಗೇಶ್ವರ್
ಕರಾಚಿ ಏರ್​​ಪೋರ್ಟ್​ನಲ್ಲಿ ತೊಳ್ಕೊಳೋಕೂ ನೀರಿಲ್ವಂತೆ, ನಟಿ ಹೇಳಿದ್ದೇನು?
ಕರಾಚಿ ಏರ್​​ಪೋರ್ಟ್​ನಲ್ಲಿ ತೊಳ್ಕೊಳೋಕೂ ನೀರಿಲ್ವಂತೆ, ನಟಿ ಹೇಳಿದ್ದೇನು?