AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಾರ್ವಿನ್ ವಿಕಾಸದ ಸಿದ್ಧಾಂತ, ಐನ್‌ಸ್ಟೀನ್‌ನ ಸಮೀಕರಣವನ್ನು ಪ್ರಶ್ನಿಸಿದ ಪಿಐಎಲ್ ವಜಾಗೊಳಿಸಿದ ಸುಪ್ರೀಂಕೋರ್ಟ್

ವಿಚಾರಣೆಯಲ್ಲಿ ಅರ್ಜಿದಾರರು ಖುದ್ದಾಗಿ ಹಾಜರಾಗಿ ವಾದಿಸಿದ್ದು, ನಾನು ನನ್ನ ಶಾಲಾ ಸಮಯ ಮತ್ತು ಕಾಲೇಜು ಸಮಯದಲ್ಲಿ ಇದನ್ನು ಓದಿದ್ದೇನೆ. ಆದರೆ ಇಂದು ನಾನು ಏನು ಓದಿದರೂ ಅದು ತಪ್ಪು ಎಂದು ಹೇಳುತ್ತೇನೆ ಎಂದಿದ್ದಾರೆ. ಇದಕ್ಕೆ ಮರುಪ್ರಶ್ನೆ ಹಾಕಿದ ಜಸ್ಟೀಸ್ ಕೌಲ್, “ಹಾಗಾದರೆ ನೀವು ನಿಮ್ಮ ಸಿದ್ಧಾಂತವನ್ನು ಸುಧಾರಿಸಿಕೊಳ್ಳಿ.  ಸುಪ್ರೀಂಕೋರ್ಟ್ ಏನು ಮಾಡಬೇಕು? ಎಂದು ಕೇಳಿದ್ದಾರೆ.

ಡಾರ್ವಿನ್ ವಿಕಾಸದ ಸಿದ್ಧಾಂತ, ಐನ್‌ಸ್ಟೀನ್‌ನ ಸಮೀಕರಣವನ್ನು ಪ್ರಶ್ನಿಸಿದ ಪಿಐಎಲ್ ವಜಾಗೊಳಿಸಿದ ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್
Follow us
ರಶ್ಮಿ ಕಲ್ಲಕಟ್ಟ
|

Updated on:Oct 13, 2023 | 2:17 PM

ದೆಹಲಿ ಅಕ್ಟೋಬರ್ 13: ಡಾರ್ವಿನ್ ವಿಕಾಸದ ಸಿದ್ಧಾಂತ (Darwinian Theory Of Evolution) ಮತ್ತು ಐನ್‌ಸ್ಟೀನ್‌ನ ಸಮೀಕರಣವನ್ನು(Einstien’s equation E=MC²) ಪ್ರಶ್ನಿಸುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PILಸುಪ್ರೀಂಕೋರ್ಟ್ (Supreme Court) ಶುಕ್ರವಾರ ವಜಾಗೊಳಿಸಿದೆ.ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ಪೀಠವು ಅರ್ಜಿ ವಿಚಾರಣೆ ನಡೆಸಿದ್ದು, ಈ ರೀತಿ ಅಭಿಪ್ರಾಯಪಟ್ಟಿದೆ ಎಂದು ಲೈವ್ ಲಾ ವರದಿ ಮಾಡಿದೆ.

“ಅರ್ಜಿದಾರರು ಡಾರ್ವಿನಿಯನ್ ವಿಕಾಸದ ಸಿದ್ಧಾಂತ ಮತ್ತು ಐನ್‌ಸ್ಟೈನ್‌ನ ಸಮೀಕರಣವು ತಪ್ಪು ಎಂದು ಸಾಬೀತುಪಡಿಸಲು ಬಯಸುತ್ತಿದ್ದು ಅವರು ಹೇಳಿದ ಉದ್ದೇಶಕ್ಕಾಗಿ ವೇದಿಕೆಯನ್ನು ಬಯಸುತ್ತಾರೆ. ಅದು ಅವನ ನಂಬಿಕೆಯಾಗಿದ್ದರೆ, ಅವನು ತನ್ನ ಸ್ವಂತ ನಂಬಿಕೆಯನ್ನು ಪ್ರಚಾರ ಮಾಡಬಹುದು. ಇದು ಭಾರತೀಯ ಸಂವಿಧಾನದ 32 ನೇ ವಿಧಿಯ ಅಡಿಯಲ್ಲಿ ಒಂದು ರಿಟ್ ಅರ್ಜಿಯಾಗಿರಬಾರದು, ಇದು ಮೂಲಭೂತ ಹಕ್ಕುಗಳ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದಿದ್ದಾರೆ.

ವಿಚಾರಣೆಯಲ್ಲಿ ಅರ್ಜಿದಾರರು ಖುದ್ದಾಗಿ ಹಾಜರಾಗಿ ವಾದಿಸಿದ್ದು, ನಾನು ನನ್ನ ಶಾಲಾ ಸಮಯ ಮತ್ತು ಕಾಲೇಜು ಸಮಯದಲ್ಲಿ ಇದನ್ನು ಓದಿದ್ದೇನೆ. ಆದರೆ ಇಂದು ನಾನು ಏನು ಓದಿದರೂ ಅದು ತಪ್ಪು ಎಂದು ಹೇಳುತ್ತೇನೆ ಎಂದಿದ್ದಾರೆ. ಇದಕ್ಕೆ ಮರುಪ್ರಶ್ನೆ ಹಾಕಿದ ಜಸ್ಟೀಸ್ ಕೌಲ್, “ಹಾಗಾದರೆ ನೀವು ನಿಮ್ಮ ಸಿದ್ಧಾಂತವನ್ನು ಸುಧಾರಿಸಿಕೊಳ್ಳಿ.  ಸುಪ್ರೀಂಕೋರ್ಟ್ ಏನು ಮಾಡಬೇಕು? ನೀವು ಶಾಲೆಯಲ್ಲಿ ಓದಿದ್ದೀರಿ ಎಂದು ನೀವು ಹೇಳುತ್ತೀರಿ, ನೀವು ವಿಜ್ಞಾನದ ವಿದ್ಯಾರ್ಥಿಯಾಗಿದ್ದಿರಿ. ಈಗ ನೀವು ಆ ಸಿದ್ಧಾಂತಗಳು ತಪ್ಪು ಎಂದು ಹೇಳುತ್ತೀರಿ. ಆ ಸಿದ್ಧಾಂತಗಳು ತಪ್ಪು ಎಂದು ನೀವು ನಂಬಿದರೆ, ಸುಪ್ರೀಂಕೋರ್ಟ್‌ ಏನು ಮಾಡಲಿ. ಆರ್ಟಿಕಲ್ 32 ರ ಅಡಿಯಲ್ಲಿ ನಿಮ್ಮ ಮೂಲಭೂತ ಹಕ್ಕಿನ ಉಲ್ಲಂಘನೆ ಏನು? ಎಂದು ಕೇಳಿದ್ದಾರೆ. ಆಗ ಅರ್ಜಿದಾರರು ನಾನು ಎಲ್ಲಿಗೆ ಹೋಗಬೇಕು? ಎಂದುಕೇಳಿದ್ದಾರೆ.

ಇದಕ್ಕೆ ನ್ಯಾಯಮೂರ್ತಿ ಕೌಲ್ ನೀವು ಎಲ್ಲಿಗೆ ಹೋಗಬೇಕು ಎಂದು ಹೇಳಲು ನಮಗೆ ಯಾವುದೇ ಸಲಹಾ ಅಧಿಕಾರ ವ್ಯಾಪ್ತಿ ಇಲ್ಲ ಎಂದಿದ್ದಾರೆ ನಾನು ಕೆಲವು ವಕೀಲರ ಸಹಾಯವನ್ನು ಪಡೆದುಕೊಂಡೆ ಎಂದು ಅರ್ಜಿದಾರರು ಹೇಳಿದಾಗ, ನ್ಯಾಯಮೂರ್ತಿ ಕೌಲ್ ಅವರು, ನೀವು ನ್ಯೂಟನ್ ತಪ್ಪು ಅಥವಾ ಐನ್‌ಸ್ಟೈನ್ ತಪ್ಪು ಎಂದು ಸಾಬೀತುಪಡಿಸಿ ಎಂದು ಸುಪ್ರೀಂಕೋರ್ಟ್ ಹೇಳುವುದಿಲ್ಲ. ಇದು 32 ಅರ್ಜಿಗಳು. ಅದನ್ನು ಸಲ್ಲಿಸಿದ ವಕೀಲರು ಯಾರು?.

ಇದನ್ನೂ ಓದಿ:  ಮಗುವನ್ನು ಕೊಲ್ಲಲು ಸಾಧ್ಯವಿಲ್ಲ: ಗರ್ಭಪಾತ ಪ್ರಕರಣ ವಿಚಾರಣೆ ವೇಳೆ ಸುಪ್ರೀಂಕೋರ್ಟ್

ನೀವು ನಿಮ್ಮ ಸ್ವಂತ ಸಿದ್ಧಾಂತವನ್ನು ಮಾಡಿ ಮತ್ತು ಅದನ್ನು ಪ್ರತಿಪಾದಿಸಿ. ತೊಂದರೆ ಇಲ್ಲ. ದೀರ್ಘಕಾಲದಿಂದ ಅಸ್ತಿತ್ವದಲ್ಲಿರುವ ಎರಡು ಸಿದ್ಧಾಂತಗಳು ತಪ್ಪು ಎಂದು ನೀವು ಭಾವಿಸುತ್ತೀರಿ ಹಾಗಾದರೆ .ನೀವು ನಿಮ್ಮ ಸ್ವಂತ ಸಿದ್ಧಾಂತವನ್ನು ಮಾಡಿ ಎಂದು ಹೇಳಿದ್ದಾರೆ. ಆದಾಗ್ಯೂ, ಅರ್ಜಿದಾರರು ಡಾರ್ವಿನ್ ಸಿದ್ಧಾಂತವನ್ನು ಒಪ್ಪಿಕೊಂಡು 20 ಮಿಲಿಯನ್ ಜನರು ಸತ್ತಿದ್ದಾರೆ ಎಂದು ಹೇಳುವ ಮೂಲಕ ಪೀಠಕ್ಕೆ ಮನವರಿಕೆ ಮಾಡಲು ಪ್ರಯತ್ನಿಸಿದರು. ಆದರೆ, ಇವು ನ್ಯಾಯಸಮ್ಮತ ಹಕ್ಕುಗಳಲ್ಲ ಎಂದು ನ್ಯಾಯಮೂರ್ತಿ ಕೌಲ್ ಖಡಾಖಂಡಿತವಾಗಿ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:16 pm, Fri, 13 October 23

ಹೆಸರು ಬದಲಾವಣೆಯಿಂದ ಜನಕ್ಕೆ ಅನುಕೂಲವಾಗೋದಾದರೆ ಸಂತೋಷ: ಯೋಗೇಶ್ವರ್
ಹೆಸರು ಬದಲಾವಣೆಯಿಂದ ಜನಕ್ಕೆ ಅನುಕೂಲವಾಗೋದಾದರೆ ಸಂತೋಷ: ಯೋಗೇಶ್ವರ್
ಕರಾಚಿ ಏರ್​​ಪೋರ್ಟ್​ನಲ್ಲಿ ತೊಳ್ಕೊಳೋಕೂ ನೀರಿಲ್ವಂತೆ, ನಟಿ ಹೇಳಿದ್ದೇನು?
ಕರಾಚಿ ಏರ್​​ಪೋರ್ಟ್​ನಲ್ಲಿ ತೊಳ್ಕೊಳೋಕೂ ನೀರಿಲ್ವಂತೆ, ನಟಿ ಹೇಳಿದ್ದೇನು?
ವಿದ್ಯಾರ್ಥಿನಿಯ ಬದ್ಧತೆ ಕಂಡು ಸಂತೋಷ ವ್ಯಕ್ತಪಡಿಸಿದ ಕಾಲೇಜು ಪ್ರಿನ್ಸಿಪಾಲ್
ವಿದ್ಯಾರ್ಥಿನಿಯ ಬದ್ಧತೆ ಕಂಡು ಸಂತೋಷ ವ್ಯಕ್ತಪಡಿಸಿದ ಕಾಲೇಜು ಪ್ರಿನ್ಸಿಪಾಲ್
‘ಅವರು ಇದ್ದಿದ್ರೆ...’ ಅಂಬರೀಶ್ ಹುಟ್ಟುಹಬ್ಬದಂದು ಸುಮಲತಾ ಭಾವುಕ
‘ಅವರು ಇದ್ದಿದ್ರೆ...’ ಅಂಬರೀಶ್ ಹುಟ್ಟುಹಬ್ಬದಂದು ಸುಮಲತಾ ಭಾವುಕ
ಹಿಂದೂ-ಮುಸ್ಲಿಂ ಸಮುದಾಯಗಳು ಸಾಮರಸ್ಯದಿಂದ ಬದುಕಬೇಕು: ಸಿದ್ದರಾಮಯ್ಯ
ಹಿಂದೂ-ಮುಸ್ಲಿಂ ಸಮುದಾಯಗಳು ಸಾಮರಸ್ಯದಿಂದ ಬದುಕಬೇಕು: ಸಿದ್ದರಾಮಯ್ಯ
‘ಸರಿಗಮಪ’ ವೇದಿಕೆ ಮೇಲೆ ಫಿನಾಲೆಗೂ ಮೊದಲು ವಿಶೇಷ ಕಾರ್ಯಕ್ರಮ
‘ಸರಿಗಮಪ’ ವೇದಿಕೆ ಮೇಲೆ ಫಿನಾಲೆಗೂ ಮೊದಲು ವಿಶೇಷ ಕಾರ್ಯಕ್ರಮ
ಸೋನಿಯ ಗಾಂಧಿಗೆ ಹರಿಪ್ರಸಾದ್ ಆಪ್ತರು ಎಂಬ ಕಾರಣಕ್ಕೆ ಭೇಟಿಯೇ?
ಸೋನಿಯ ಗಾಂಧಿಗೆ ಹರಿಪ್ರಸಾದ್ ಆಪ್ತರು ಎಂಬ ಕಾರಣಕ್ಕೆ ಭೇಟಿಯೇ?
ಒಂದೇ ವಾರದಲ್ಲಿ ಹೃದಯಾಘಾತದಿಂದ ಮೂವರ ಸಾವು; ತಜ್ಞರು ಹೇಳಿದ್ದೇನು ನೋಡಿ
ಒಂದೇ ವಾರದಲ್ಲಿ ಹೃದಯಾಘಾತದಿಂದ ಮೂವರ ಸಾವು; ತಜ್ಞರು ಹೇಳಿದ್ದೇನು ನೋಡಿ
VIDEO: ಮೈದಾನದಲ್ಲೇ ಹೊಡೆದಾಟ... ಬಾಂಗ್ಲಾ ಆಟಗಾರನಿಗೆ ಪಂಚ್
VIDEO: ಮೈದಾನದಲ್ಲೇ ಹೊಡೆದಾಟ... ಬಾಂಗ್ಲಾ ಆಟಗಾರನಿಗೆ ಪಂಚ್
ಗದಗ: ಶಾಲೆ ಆರಂಭದ ದಿನವೇ ಶಾಲಾ ವಾಹನ ಪಲ್ಟಿ, ತಪ್ಪಿದ ದುರಂತ
ಗದಗ: ಶಾಲೆ ಆರಂಭದ ದಿನವೇ ಶಾಲಾ ವಾಹನ ಪಲ್ಟಿ, ತಪ್ಪಿದ ದುರಂತ