AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೃದಯ ಬಡಿತವಿರುವ ಭ್ರೂಣವನ್ನು ತೆಗೆಯಲು ಯಾರು ಬಯಸುತ್ತಾರೆ?: ಸುಪ್ರೀಂಕೋರ್ಟ್

ಎರಡು ಮಕ್ಕಳ ತಾಯಿಯಾಗಿರುವ ಮಹಿಳೆ ವಿವಿಧ ಆರೋಗ್ಯ ಸಮಸ್ಯೆಗಳಿಂದ ಮತ್ತು ಪ್ರಸವಪೂರ್ವ ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂದು ಅರ್ಜಿದಾರರು ವಾದಿಸಿದ ನಂತರ ಸುಪ್ರೀಂ ಕೋರ್ಟ್‌ನ ವಿಭಿನ್ನ ಪೀಠವು ದಂಪತಿಗೆ ತಮ್ಮ 26 ವಾರಗಳ ಭ್ರೂಣದ ಗರ್ಭಪಾತಕ್ಕೆ ಅನುಮತಿ ನೀಡಿತ್ತು. ಮಹಿಳೆ ಆರ್ಥಿಕವಾಗಿ, ಭಾವನಾತ್ಮಕವಾಗಿ ಮತ್ತು ಸಾಮಾಜಿಕವಾಗಿ ತಾನು ಈಗಾಗಲೇ ತನ್ನ ಎರಡನೇ ಮಗುವಿಗೆ ಹಾಲುಣಿಸುವಾಗ ಮೂರನೇ ಮಗುವನ್ನು ಬೆಳೆಸುವ ಸ್ಥಿತಿಯಲ್ಲಿಲ್ಲ ಎಂದು ಹೇಳಿದ್ದಾರೆ.

ಹೃದಯ ಬಡಿತವಿರುವ ಭ್ರೂಣವನ್ನು  ತೆಗೆಯಲು ಯಾರು ಬಯಸುತ್ತಾರೆ?: ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್
Follow us
ರಶ್ಮಿ ಕಲ್ಲಕಟ್ಟ
|

Updated on:Oct 11, 2023 | 2:05 PM

ದೆಹಲಿ ಅಕ್ಟೋಬರ್ 11: ಭ್ರೂಣವು “ಜೀವಂತವಿದೆ” ಅಂದರೆ ಅದು ಬದುಕುಳಿಯುವ ಕುರುಹು ತೋರಿಸುತ್ತದೆ ಎಂದು ಸೂಚಿಸುವ ವೈದ್ಯಕೀಯ ವರದಿಯನ್ನು ಸರ್ಕಾರ ಸಲ್ಲಿಸಿದ ನಂತರ 26 ವಾರಗಳ ಗರ್ಭಪಾತಕ್ಕೆ (Abortion) ಅನುಮತಿ ನೀಡುವ ಆದೇಶವನ್ನು ಸುಪ್ರೀಂಕೋರ್ಟ್ (Supreme Court) ತಡೆಹಿಡಿದಿದೆ. ತನ್ನ ಆದೇಶವನ್ನು ಹಿಂಪಡೆಯಲು ಸರ್ಕಾರದ ಮನವಿಯನ್ನು ಆಲಿಸಿದ ನ್ಯಾಯಾಲಯ, ಹೊಸ ಆದೇಶವನ್ನು ಅಂಗೀಕರಿಸುವ ಮೊದಲು ಮಹಿಳೆಯಿಂದ ಕೇಳಲು ಬಯಸುವುದಾಗಿ ಹೇಳಿದೆ. ಬುಧವಾರ  ಮಧ್ಯಾಹ್ನ 2 ಗಂಟೆಗೆ ವಿಚಾರಣೆ ಪುನರಾರಂಭವಾಗಲಿದೆ.

ಮಂಗಳವಾರ ಗರ್ಭಪಾತ ಅನುಮತಿಸಿದ ಉಚ್ಛ ನ್ಯಾಯಾಲಯವು ಕೊನೆಯ ಕ್ಷಣದ AIIMS ವರದಿಯಿಂದ ಕೆರಳಿದ್ದು, ಅದನ್ನುಯಾಕ ಬೇಗ ಪ್ರಸ್ತುತಪಡಿಸಲಿಲ್ಲ ಎಂದು ಕೇಳಿತು. “ನಮ್ಮ ಆದೇಶದ ನಂತರವೇ ಏಕೆ? ಅವರು ಮೊದಲು ಏಕೆ ಹೇಳಿಲ್ಲ? ಹೃದಯ ಬಡಿತವಿರುವ ಭ್ರೂಣವನ್ನು ತೆಗೆಯಲು ಯಾವ ನ್ಯಾಯಾಲಯ ಬಯಸುತ್ತದೆ? ಖಂಡಿತವಾಗಿಯೂ ನಾವು ಆ ರೀತಿ ಮಾಡಲ್ಲ ಎಂದು ನ್ಯಾಯಮೂರ್ತಿ ಹಿಮಾ ಕೊಹ್ಲಿ ಹೇಳಿದರು.

ಎರಡು ಮಕ್ಕಳ ತಾಯಿಯಾಗಿರುವ ಮಹಿಳೆ ವಿವಿಧ ಆರೋಗ್ಯ ಸಮಸ್ಯೆಗಳಿಂದ ಮತ್ತು ಪ್ರಸವಪೂರ್ವ ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂದು ಅರ್ಜಿದಾರರು ವಾದಿಸಿದ ನಂತರ ಸುಪ್ರೀಂ ಕೋರ್ಟ್‌ನ ವಿಭಿನ್ನ ಪೀಠವು ದಂಪತಿಗೆ ತಮ್ಮ 26 ವಾರಗಳ ಭ್ರೂಣದ ಗರ್ಭಪಾತಕ್ಕೆ ಅನುಮತಿ ನೀಡಿತ್ತು.

ಇದನ್ನೂ ಓದಿ:  ಮಾಜಿ ಸಿಎಂ ಚಂದ್ರಬಾಬು ನಾಯ್ಡುಗೆ ಮತ್ತೆ ನಿರಾಸೆ, ಕೇಸು ರದ್ದು ಕುರಿತಾದ ಅರ್ಜಿ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್

ಮಹಿಳೆ ಆರ್ಥಿಕವಾಗಿ, ಭಾವನಾತ್ಮಕವಾಗಿ ಮತ್ತು ಸಾಮಾಜಿಕವಾಗಿ ತಾನು ಈಗಾಗಲೇ ತನ್ನ ಎರಡನೇ ಮಗುವಿಗೆ ಹಾಲುಣಿಸುವಾಗ ಮೂರನೇ ಮಗುವನ್ನು ಬೆಳೆಸುವ ಸ್ಥಿತಿಯಲ್ಲಿಲ್ಲ ಎಂದು ಹೇಳಿದ್ದಾರೆ.

ಏಮ್ಸ್ ವರದಿಯಿಂದ ಕೆರಳಿದ ಕೋರ್ಟ್

ಏಮ್ಸ್ ಈ ಹೊತ್ತಲ್ಲಿ ವರದಿ ಸಲ್ಲಿಸಿದ್ದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ದ್ವಿಸದಸ್ಯ ಪೀಠವನ್ನು ಕೆರಳಿಸಿತು. “ನಮ್ಮ ಆದೇಶದ ನಂತರವೇ ಏಕೆ? ಅವರು ಮೊದಲು ಏಕೆ ಸಲ್ಲಿಸಲಿಲ್ಲ ಎಂದು ಕೇಳಿದೆ. ಕೋರ್ಟ್ ಆದೇಶವನ್ನು ರದ್ದುಗೊಳಿಸಲು ಒಂದು ಮಾರ್ಗವಿದೆ (ಆದರೆ) ಈ ರೀತಿ ಅಲ್ಲ. ಆದೇಶವನ್ನು ಜಾರಿಗೊಳಿಸಿದ ನಂತರ ಏಕೆ? ನಾವು ನಿಮ್ಮ ಮಾತನ್ನು ಕೇಳಲಿಲ್ಲ” ಎಂದು ನ್ಯಾಯಮೂರ್ತಿ ಕೊಹ್ಲಿ ಮತ್ತು ನ್ಯಾಯಮೂರ್ತಿ ಬಿವಿ ನಾಗರತ್ನ ಹೇಳಿದ್ದು, ಆಕೆ (ಅರ್ಜಿ ಸಲ್ಲಿಸಿದ ಮಹಿಳೆ) ಈಗ ಹೆಚ್ಚು ಒತ್ತಡದಲ್ಲಿದ್ದಾರೆ ಎಂದು ಹೇಳಿದ್ದಾರೆ.

ಸೋಮವಾರದ ವಿಚಾರಣೆಯಲ್ಲಿ ಈ ಅಂಶವನ್ನು ಪ್ರಸ್ತಾಪಿಸಲು ಸರ್ಕಾರ ವಿಫಲವಾಗಿದೆ ಎಂದು ನ್ಯಾಯಾಲಯ ಟೀಕಿಸಿದೆ.

ಈ ನ್ಯಾಯಾಲಯದ ಒಂದು ಪೀಠವು ವಿಷಯವನ್ನು ನಿರ್ಧರಿಸಿದಾಗ … ಯಾವುದೇ ಮನವಿ ಇಲ್ಲದೆ ನೀವು ಮೂರು ನ್ಯಾಯಾಧೀಶರ ಪೀಠದ ಮುಂದೆ ಇಂಟ್ರಾ-ಕೋರ್ಟ್ ಮೇಲ್ಮನವಿಯನ್ನು ಹೇಗೆ ಸಲ್ಲಿಸಬಹುದು ಎಂದು ನ್ಯಾಯಮೂರ್ತಿ ನಾಗರತ್ನ ಹೇಳಿದರು. ಭಾರತದ ಒಕ್ಕೂಟವು ಇದನ್ನು ಮಾಡಲು ಪ್ರಾರಂಭಿಸಿದರೆ, ನಾಳೆ ಖಾಸಗಿ ವ್ಯಕ್ತಿಯೂ ಇದನ್ನು ಮಾಡುತ್ತಾನೆ .. ಪ್ರತಿ ಪೀಠವೂ ಸುಪ್ರೀಂ ಕೋರ್ಟ್. ನಾವು ಒಂದೇ ನ್ಯಾಯಾಲಯ … ನನ್ನ ಪರವಾಗಿ ಮಾತನಾಡುವಾಗ ನಾನು ಇದನ್ನು ಪ್ರಶಂಸಿಸುವುದಿಲ್ಲ ಎಂದು ಹೇಳಿದ್ದಾರೆ.

ತಪ್ಪು ಗ್ರಹಿಕೆ ಇರಬಾರದು

ನ್ಯಾಯಮೂರ್ತಿ ಕೊಹ್ಲಿ ಮತ್ತು ನ್ಯಾಯಮೂರ್ತಿ ನಾಗರತ್ನ ಅವರು ಹೊಸ ವರದಿಯ ಬಗ್ಗೆ ತಿಳಿಸದ ಮಹಿಳೆಯಿಂದ ಕೇಳಬೇಕಾಗಿದೆ ಎಂದು ಹೇಳಿದರು ಮತ್ತು ವಿಚಾರಣೆಯನ್ನು ಮಧ್ಯಾಹ್ನ 2 ಗಂಟೆಗೆ ನಿಗದಿಪಡಿಸಿದ್ದಾರೆ.

“ನಾವು ಯಾವುದೇ ತಪ್ಪು ತಿಳುವಳಿಕೆಯನ್ನು ಬಯಸುವುದಿಲ್ಲ. ನಾವು ಇಲ್ಲಿ ಅಮೂಲ್ಯವಾದ ಜೀವನದ ಬಗ್ಗೆ ಮಾತನಾಡುತ್ತಿದ್ದೇವೆ. ನಾವು ಯಾವುದೇ ರಿಸ್ಕ್ ತೆಗೆದುಕೊಳ್ಳಲು ಬಯಸುವುದಿಲ್ಲ,” ಎಂದು ಪೀಠವು ಹೇಳಿದೆ.

ಮಗುವನ್ನು ದತ್ತು ಪಡೆಯಲು ಸಾಧ್ಯವೇ?

ಸರ್ಕಾರವು ದತ್ತು ಪಡೆಯಲು ವ್ಯವಸ್ಥೆ ಮಾಡುವವರೆಗೆ ಗರ್ಭದಲ್ಲಿರುವ ಮಗುವನ್ನು ಪೋಷಿಸಲು ನೀವು ಸಿದ್ಧರಿದ್ದೀರಾ ಎಂದು ನ್ಯಾಯಾಲಯವು ಮಹಿಳೆಯನ್ನು ಕೇಳಿದೆ. ಮಹಿಳೆ ಹಾಗೆ ಮಾಡಲು ತನ್ನ ಒಪ್ಪಿಗೆಯನ್ನು ವ್ಯಕ್ತಪಡಿಸಿದ್ದಾರೆ. ಅದಕ್ಕೆ ಶ್ರೀಮತಿ ಭಾಟಿ ಅವರು “ನಾವು (ತಾಯಿ ಮತ್ತು ಮಗುವನ್ನು) ನೋಡಿಕೊಳ್ಳಲು ಸಿದ್ಧರಿದ್ದೇವೆ. ನಾವು ಔಷಧಿಗಳನ್ನು ನೀಡುತ್ತೇವೆ ಎಂದು ಹೇಳಿದ್ದಾರೆ

ತಂದೆ ಸಹ ಒಪ್ಪಿಕೊಂಡರು ಆದರೆ ನ್ಯಾಯಾಲಯವು ಮಹಿಳೆಯ ಮಾತುಗಳನ್ನು ಕೇಳಬೇಕಾಗಿದೆ ಎಂದು ಒತ್ತಿಹೇಳಿತು.

ಏಮ್ಸ್ ವರದಿಯಲ್ಲೇನಿದೆ?

ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನ ವರದಿಯು ಭ್ರೂಣದ ಹೃದಯ ಬಡಿತ ನಿಲ್ಲಿಸುವ ಮೂಲಕ ಗರ್ಭಪಾತ ನಡೆಸಬಹುದೇ ಎಂದು ನ್ಯಾಯಾಲಯವನ್ನು ಕೇಳಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:32 pm, Wed, 11 October 23

ಪ್ರಧಾನಿ ಮೋದಿ ಉಗ್ರರಿಗೆ ತಕ್ಕ ಪಾಠ ಕಲಿಸದೆ ಬಿಡೋದಿಲ್ಲ: ರಾಜೇಶ್ವರಿ
ಪ್ರಧಾನಿ ಮೋದಿ ಉಗ್ರರಿಗೆ ತಕ್ಕ ಪಾಠ ಕಲಿಸದೆ ಬಿಡೋದಿಲ್ಲ: ರಾಜೇಶ್ವರಿ
ತಾನು ಯುದ್ಧ ಬೇಡ ಅನ್ನಲ್ಲ ಅಂತ ಮತ್ತೊಮ್ಮೆ ಹೇಳಿದ ಸಿದ್ದರಾಮಯ್ಯ
ತಾನು ಯುದ್ಧ ಬೇಡ ಅನ್ನಲ್ಲ ಅಂತ ಮತ್ತೊಮ್ಮೆ ಹೇಳಿದ ಸಿದ್ದರಾಮಯ್ಯ
ಉಗ್ರರು ಮತ್ತು ಅವರ ಸಂಘಟನೆಗಳಿಂದ ಅಂತರ ಕಾಯ್ದುಕೊಳ್ಳಲು ಸೂಚನೆ
ಉಗ್ರರು ಮತ್ತು ಅವರ ಸಂಘಟನೆಗಳಿಂದ ಅಂತರ ಕಾಯ್ದುಕೊಳ್ಳಲು ಸೂಚನೆ
ಬಸ್​ ನಿಲ್ಲಿಸಿ ನಮಾಜ್​ ಮಾಡಿದ ಕೆಎಸ್​ಆರ್​ಟಿಸಿ ಚಾಲಕ, ವಿಡಿಯೋ ವೈರಲ್
ಬಸ್​ ನಿಲ್ಲಿಸಿ ನಮಾಜ್​ ಮಾಡಿದ ಕೆಎಸ್​ಆರ್​ಟಿಸಿ ಚಾಲಕ, ವಿಡಿಯೋ ವೈರಲ್
ಶಿಲ್ಲಾಂಗ್-ಶಿಲಚರ್ ನಡುವೆ 22,864 ಕೋಟಿ ವೆಚ್ಚದಲ್ಲಿ ಹೈ ಸ್ಪೀಡ್ ಕಾರಿಡಾರ್
ಶಿಲ್ಲಾಂಗ್-ಶಿಲಚರ್ ನಡುವೆ 22,864 ಕೋಟಿ ವೆಚ್ಚದಲ್ಲಿ ಹೈ ಸ್ಪೀಡ್ ಕಾರಿಡಾರ್
‘ಕರುಣೆಯೇ ಬೇಡ ಹಿಡಿ, ಹೊಡಿ, ಕಡಿ ಅಷ್ಟೇ ಬೇಕಿರೋದು’
‘ಕರುಣೆಯೇ ಬೇಡ ಹಿಡಿ, ಹೊಡಿ, ಕಡಿ ಅಷ್ಟೇ ಬೇಕಿರೋದು’
ಸೆಕೆಯಿಂದ ಕಂಗೆಟ್ಟಿದ್ದ ಬೆಂಗಳೂರಿಗರಿಗೆ ತಂಪೆರೆದ ಮಳೆರಾಯ
ಸೆಕೆಯಿಂದ ಕಂಗೆಟ್ಟಿದ್ದ ಬೆಂಗಳೂರಿಗರಿಗೆ ತಂಪೆರೆದ ಮಳೆರಾಯ
ಲಾಡ್ ಮತ್ತು ತಿಮ್ಮಾಪುರ ಮೈಲೇಜ್ ಗಿಟ್ಟಿಸುವ ಪ್ರಯತ್ನದಲ್ಲಿದ್ದಾರೆ: ಶಾಸಕ
ಲಾಡ್ ಮತ್ತು ತಿಮ್ಮಾಪುರ ಮೈಲೇಜ್ ಗಿಟ್ಟಿಸುವ ಪ್ರಯತ್ನದಲ್ಲಿದ್ದಾರೆ: ಶಾಸಕ
ರಾತ್ರಿ ಭರ್ಜರಿ ರಿಸೆಪ್ಷನ್, ಬೆಳಗ್ಗೆ ಮುಹೂರ್ತ ವೇಳೆ ತಾಳಿ ಕಟ್ಟಲ್ಲ ಎಂದ ವರ
ರಾತ್ರಿ ಭರ್ಜರಿ ರಿಸೆಪ್ಷನ್, ಬೆಳಗ್ಗೆ ಮುಹೂರ್ತ ವೇಳೆ ತಾಳಿ ಕಟ್ಟಲ್ಲ ಎಂದ ವರ
ಕಾಶಪ್ಪನವರ್ ಮತ್ತು ಯತ್ನಾಳ್ ಮಾತಿನಲ್ಲಿ ಭಾಷಾ ಮರ್ಯಾದೆ ಮೀರುತ್ತಿದ್ದಾರೆ
ಕಾಶಪ್ಪನವರ್ ಮತ್ತು ಯತ್ನಾಳ್ ಮಾತಿನಲ್ಲಿ ಭಾಷಾ ಮರ್ಯಾದೆ ಮೀರುತ್ತಿದ್ದಾರೆ