AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಲಗಣ್ಣು ನೋವೆಂದು ದೆಹಲಿ ಆಸ್ಪತ್ರೆಗೆ ಯುಎಸ್​ನಿಂದ ಬಂದ ಮಹಿಳೆ; ಆಕೆಯ ದೇಹದಿಂದ 3 ಜೀವಂತ ಬಾಟ್​ಫ್ಲೈಗಳನ್ನು ಹೊರತೆಗೆದ ವೈದ್ಯರು

ಯುಎಸ್​ನಲ್ಲಿ ಅದೆಷ್ಟೋ ದೊಡ್ಡದೊಡ್ಡ, ತಜ್ಞ ವೈದ್ಯರ ಬಳಿಯೆಲ್ಲ ತೋರಿಸಿದ್ದರೂ, ಕಡಿಮೆ ಆಗುವುದಿರಲಿ, ಆಕೆಗೆ ಆಗಿದ್ದೇನು ಎಂಬುದೇ ಯುಎಸ್​​ನ ತಜ್ಞ ವೈದ್ಯರಿಗೆ ಗೊತ್ತಾಗಿರಲಿಲ್ಲ.

ಬಲಗಣ್ಣು ನೋವೆಂದು ದೆಹಲಿ ಆಸ್ಪತ್ರೆಗೆ ಯುಎಸ್​ನಿಂದ ಬಂದ ಮಹಿಳೆ; ಆಕೆಯ ದೇಹದಿಂದ 3 ಜೀವಂತ ಬಾಟ್​ಫ್ಲೈಗಳನ್ನು ಹೊರತೆಗೆದ ವೈದ್ಯರು
ಸರ್ಜರಿಗೆ ಒಳಗಾದ ಯುಎಸ್​ ಮಹಿಳೆಯೊಂದಿಗೆ ದೆಹಲಿ ಆಸ್ಪತ್ರೆ ಸಿಬ್ಬಂದಿ
Follow us
TV9 Web
| Updated By: Lakshmi Hegde

Updated on:Feb 22, 2022 | 4:09 PM

ಇವರು 32 ವರ್ಷದ ಯುಎಸ್​ ರಾಷ್ಟ್ರದ ಮಹಿಳೆ. ಕಳೆದ 4-6ವಾರದಿಂದ ಇವರ ಬಲ ಕಣ್ಣಿನ ರೆಪ್ಪೆ ಮೇಲ್ಭಾಗ ಊದಿಕೊಂಡಿತ್ತು. ಅಷ್ಟೇ ಅಲ್ಲ ಆ ಭಾಗ ಕೆಂಪಾಗಿ, ಮೃದುವಾಗಿತ್ತು. ಊದಿಕೊಂಡಿದ್ದರೂ ಗಟ್ಟಿಯಾಗಿರಲಿಲ್ಲ. ಯುಎಸ್​ನಲ್ಲಿ ಅದೆಷ್ಟೋ ದೊಡ್ಡದೊಡ್ಡ, ತಜ್ಞ ವೈದ್ಯರ ಬಳಿಯೆಲ್ಲ ತೋರಿಸಿದ್ದರೂ, ಕಡಿಮೆ ಆಗುವುದಿರಲಿ, ಆಕೆಗೆ ಆಗಿದ್ದೇನು ಎಂಬುದೇ ಗೊತ್ತಾಗಿರಲಿಲ್ಲ. ಇದೀಗ ಮಹಿಳೆಗೆ ದೆಹಲಿಯ ವಸಂತ್​ ಕುಂಜ್​​ನಲ್ಲಿರುವ ಫೋರ್ಟಿಸ್​ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿದೆ ಮತ್ತು ಆಕೆ ಚೇತರಿಸಿಕೊಂಡಿದ್ದಾರೆ.

ಅಷ್ಟಕ್ಕೂ ಮಹಿಳೆಗೆ ಆಗಿದ್ದು ಮೈಯಾಸಿಸ್​. ಇದು ನೊಣಗಳ ಲಾರ್ವಾದಿಂದ ಉಂಟಾಗುವ ಒಂದು ಸೋಂಕು. ಈ ಯುಎಸ್​ನ ಮಹಿಳೆಯ ಬಲರೆಪ್ಪೆಯ ಮೇಲಿನಿಂದ ಪೋರ್ಟಿಸ್​ ಆಸ್ಪತ್ರೆ ತಜ್ಞರ ತಂಡ, ಮೂರು ಜೀವಂತ ಮಾನವ ಬಾಟ್​ಫ್ಲೈಗಳನ್ನು ಹೊರತೆಗೆದಿದೆ. ಇಲ್ಲಿ ಹ್ಯೂಮನ್​ ಬಾಟ್​ಫ್ಲೈಗಳೆಂದರೆ ಒಂದು ರೀತಿಯ ನೊಣಗಳು. ಅಂದರೆ ಬಾಟ್​ಫ್ಲೈಗಳ ಒಂದು ಪ್ರಬೇಧ. ಈ ಬಾಟ್​ಫ್ಲೈಗಳ ಲಾರ್ವಾ  ಸಸ್ತನಿಗಳ ದೇಹದ ಆಂತರಿಕ ಭಾಗಗಳಿಗೆ ಪರಾವಲಂಬಿಯಾಗಿರುತ್ತದೆ. ಇವುಗಳನ್ನು ವಾರ್ಬಲ್​ ನೊಣಗಳೆಂದೂ ಕರೆಯಲಾಗುತ್ತದೆ. ಬಾಟ್​ಫ್ಲೈಗಳಲ್ಲೇ ಈ ಹ್ಯೂಮನ್​ ಬಾಟ್​ಫ್ಲೈ ಎಂಬ ಜಾತಿಯ ನೊಣಗಳಿದ್ದು, ಇವುಗಳ ಲಾರ್ವಾ ಮನುಷ್ಯರ ದೇಹಕ್ಕೆ ಪರಾವಲಂಬಿಯಾಗಿರುತ್ತದೆ.  ಹೀಗೆ ಮಾನವ ಬಾಟ್​ಫ್ಲೈಗಳ ಲಾರ್ವಾಗಳು ಈ ಮಹಿಳೆಯರ ಕಣ್ಣಿನ ಭಾಗದಲ್ಲಿ ಸೇರಿಕೊಂಡು, ಅಲ್ಲಿಯೇ ನೊಣಗಳಾಗಿದ್ದವು. ಇದರಿಂದಾಗಿ ಆಕೆ ತೀವ್ರ ಸಮಸ್ಯೆಗೆ ಸಿಲುಕಿದ್ದಳು.

ಯುಎಸ್​ನಲ್ಲಿ ತಜ್ಞರಿಗೆ ಅರ್ಥವಾಗದಾಗ ಆಕೆ ದೆಹಲಿಯ ಪೋರ್ಟಿಸ್ ಆಸ್ಪತ್ರೆಗೆ ಬಂದಿದ್ದರು. ನನಗೆ ಕಳೆದ ನಾಲ್ಕರಿಂದ ಆರು ವಾರಗಳಿಂದ ಕಣ್ಣು ರೆಪ್ಪೆಯ ಒಳಗಡೆ ಏನೋ ಓಡಾಡಿದಂತೆ ಆಗುತ್ತದೆ. ಅದಕ್ಕೂ ಮೊದಲು ನಾನು ಅಮೇಜಾನ್​ ಕಾಡಿಗೆ ಹೋಗಿದ್ದೆ. ಅಲ್ಲಿಂದ ಬಂದ ನಂತರ ಈ ಸಮಸ್ಯೆ ಕಾಣಿಸಿಕೊಂಡಿದೆ ಎಂದು ವೈದ್ಯರಿಗೆ ವಿವರಿಸಿದ್ದರು. ನಂತರ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ. ಮೊಹಮ್ಮದ್​ ನದೀಮ್​, ಡಾ. ಧೀರಜ್​ ಮತ್ತು ಡಾ. ನರೋಲಾ ಯಾಂಗರ್ (ಸರ್ಜನ್​) ಸೇರಿ ಚಿಕಿತ್ಸೆ ನೀಡಿದ್ದಾರೆ. ಆಕೆಯ ಕಣ್ಣು ರೆಪ್ಪೆಯ ಭಾಗವನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಬಳಿಕ ಚಿಕಿತ್ಸೆ ಶುರುವಿಟ್ಟುಕೊಂಡ ವೈದ್ಯರ ತಂಡ, ಸುಮಾರು 2 ಸಿಎಂ ಉದ್ದದ  ಮೂರು ಜೀವಂತ ಬಾಟ್​ ನೊಣಗಳನ್ನು ಹೊರತೆಗೆದಿದ್ದಾರೆ.  ಒಂದು ಬಾಟ್​ಫ್ಲೈ ಮಹಿಳೆಯ ಹಿಂಬದಿಯ ಕುತ್ತಿಗೆ ಮೇಲಿತ್ತು. ಮತ್ತೊಂದು ಬಲ ಕೈಯಿಯ ಮುಂದಿನ ತೋಳಿನಲ್ಲಿತ್ತು. ಇವೆಲ್ಲವನ್ನೂ ಅನಸ್ತೇಶಿಯಾ ಕೊಡದೆಯೇ ತೆಗೆಯಲಾಗಿದೆ.

ಮೈಯಾಸಿಸ್​ ಎಂದರೆ ಈ ಹ್ಯೂಮನ್​ ಬಾಟ್​ಫ್ಲೈಗಳನ್ನು ಹೊರತೆಗೆಯದೆ ಹಾಗೇ ಬಿಟ್ಟರೆ ಜೀವಕ್ಕೂ ಅಪಾಯ ತರುವ ಸಾಧ್ಯತೆ ಇರುತ್ತದೆ. ಅಂಗಾಂಶಗಳನ್ನು ನಾಶ ಮಾಡುತ್ತವೆ. ಮೂಗು, ಮುಖಗಳಲ್ಲಿನ ಅಂಗಾಂಶಗಳ ಸೆವೆತಕ್ಕೆ ಕಾರಣವಾಗುತ್ತದೆ. ತುಂಬ ಅಪರೂಪಕ್ಕೆ ಮಿದುಳಿಗೂ ಹಾನಿಯನ್ನುಂಟು ಮಾಡುವುದಲ್ಲದೆ, ಜೀವ ತೆಗೆಯಬಹುದು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.  ಯುಎಸ್​ನಲ್ಲಿ ಎಂತೆಂಥಾ ಪ್ರಸಿದ್ಧ, ಖ್ಯಾತ ತಜ್ಞರು ಇದ್ದಾರೆ. ಭಾರತೀಯರೇ ಅನೇಕರು ಚಿಕಿತ್ಸೆಗಾಗಿ ಯುಎಸ್​ಗೆ ಹೋಗುತ್ತಾರೆ. ಹಾಗಿದ್ದಲ್ಲಿ, ಅಲ್ಲಿನ ಒಬ್ಬರು ಪ್ರಜೆ ಭಾರತಕ್ಕೆ ಬಂದು ಯಶಸ್ವಿ ಚಿಕಿತ್ಸೆ ಪಡೆದದ್ದು ಹೆಗ್ಗಳಿಕೆಯೇ ಸರಿ ಎಂದು ಈ ಸುದ್ದಿ ಕೇಳಿದವರು ಹೊಗಳುತ್ತಿದ್ದಾರೆ.

ಬಾಟ್ ಫ್ಲೈಗಳೂ ಮಾನವನ ಮಾಂಸ ಸೇರುವುದು ಹೇಗೆ?: ಇದು ಹೊಸದಾದ ಸಮಸ್ಯೆಯಲ್ಲ. ಉಷ್ಣ ಮತ್ತು ಉಪ ಉಷ್ಣವಲಯ ಪ್ರದೇಶಗಳಾದ ಮಧ್ಯ ಮತ್ತು ದಕ್ಷಿಣ ಆಫ್ರಿಕಾ, ಆಫ್ರಿಕಾಗಳಲ್ಲಿ ಈ ಮೊದಲೇ ಇಂಥ ಪ್ರಕರಣಗಳು ವರದಿಯಾಗಿವೆ. ಭಾರತದಲ್ಲೂ ತುಂಬ ದುರ್ಗಮವಾಗಿರುವ ಹಳ್ಳಿಗಳಲ್ಲಿ ಪತ್ತೆಯಾಗಿತ್ತು. ಈ ಮಾನವ ಬಾಟ್​ಫ್ಲೈಗಳು ಮೂಗು ಅಥವಾ ಗಾಯಗಳ ಮೂಲಕ ದೇಹವನ್ನು ಸೇರುವ ಸಾಧ್ಯತೆ ಇರುತ್ತವೆ.

ಇದನ್ನೂ ಓದಿ: ಎಸ್ಎಫ್​​ಜೆ ನಂಟು ಇರುವ ಪಂಜಾಬ್ ಪಾಲಿಟಿಕ್ಸ್ ಟಿವಿಯ ಆ್ಯಪ್, ವೆಬ್‌ಸೈಟ್, ಸಾಮಾಜಿಕ ಮಾಧ್ಯಮ ಖಾತೆಗಳಿಗೆ ಕೇಂದ್ರ ನಿಷೇಧ

Published On - 4:08 pm, Tue, 22 February 22

ದಾಖಲಾತಿ ಅರ್ಜಿಗಾಗಿ ರಾತ್ರಿ ಶಾಲಾ ಆವರಣದಲ್ಲಿ ಮಲಗುತ್ತಿದ್ದರಂತೆ ಪೋಷಕರು
ದಾಖಲಾತಿ ಅರ್ಜಿಗಾಗಿ ರಾತ್ರಿ ಶಾಲಾ ಆವರಣದಲ್ಲಿ ಮಲಗುತ್ತಿದ್ದರಂತೆ ಪೋಷಕರು
ವಿರಾಟ್ ಕೊಹ್ಲಿ ಕಟೌಟ್ ಎದುರು ಮೇಕೆ ಬಲಿ: ಆರ್​ಸಿಬಿ ಫ್ಯಾನ್ಸ್ ಹುಚ್ಚಾಟ
ವಿರಾಟ್ ಕೊಹ್ಲಿ ಕಟೌಟ್ ಎದುರು ಮೇಕೆ ಬಲಿ: ಆರ್​ಸಿಬಿ ಫ್ಯಾನ್ಸ್ ಹುಚ್ಚಾಟ
ದಂಪತಿಗೆ ಮದುವೆಯಾಗಿ ಕೇವಲ ಎರಡು ವರ್ಷವಾಗಿತ್ತು
ದಂಪತಿಗೆ ಮದುವೆಯಾಗಿ ಕೇವಲ ಎರಡು ವರ್ಷವಾಗಿತ್ತು
ಮೊಹಮ್ಮದ್ ಸಿರಾಜ್​ಗೆ ವಜ್ರದ ಉಂಗುರ ನೀಡಿದ ರೋಹಿತ್ ಶರ್ಮಾ
ಮೊಹಮ್ಮದ್ ಸಿರಾಜ್​ಗೆ ವಜ್ರದ ಉಂಗುರ ನೀಡಿದ ರೋಹಿತ್ ಶರ್ಮಾ
VIDEO: ಔಟ್ ಮಾಡು... ಔಟ್ ಮಾಡು... ಪಂದ್ಯದ ನಡುವೆ ಕಾವ್ಯ ಮಾರನ್ ರಿಯಾಕ್ಷನ್
VIDEO: ಔಟ್ ಮಾಡು... ಔಟ್ ಮಾಡು... ಪಂದ್ಯದ ನಡುವೆ ಕಾವ್ಯ ಮಾರನ್ ರಿಯಾಕ್ಷನ್
ದಿಂಬಂ ಘಾಟ್​ನಲ್ಲಿ ರಾಶಿ ರಾಶಿ ಟೊಮೆಟೋ ತಿಂದು ತೇಗಿದ ಕಾಡಾನೆ: ವಿಡಿಯೋ ನೋಡಿ
ದಿಂಬಂ ಘಾಟ್​ನಲ್ಲಿ ರಾಶಿ ರಾಶಿ ಟೊಮೆಟೋ ತಿಂದು ತೇಗಿದ ಕಾಡಾನೆ: ವಿಡಿಯೋ ನೋಡಿ
Daily Devotional: ಮನೆ ಹತ್ತಿರ ಅಶ್ವಥ್ಥ ವೃಕ್ಷ ಬೆಳೆದರೆ ಏನು ಮಾಡಬೇಕು?
Daily Devotional: ಮನೆ ಹತ್ತಿರ ಅಶ್ವಥ್ಥ ವೃಕ್ಷ ಬೆಳೆದರೆ ಏನು ಮಾಡಬೇಕು?
horoscope: ಈ ರಾಶಿಯವರು ಅಪರಿಚಿತರಿಂದ ಸ್ವಲ್ಪ ಅಂತರ ಕಾಯ್ದುಕೊಳ್ಳುವರು
horoscope: ಈ ರಾಶಿಯವರು ಅಪರಿಚಿತರಿಂದ ಸ್ವಲ್ಪ ಅಂತರ ಕಾಯ್ದುಕೊಳ್ಳುವರು
3 ವಿಕೆಟ್, 1 ಕ್ಯಾಚ್; ಇತಿಹಾಸ ಬರೆದ ಪ್ಯಾಟ್ ಕಮ್ಮಿನ್ಸ್
3 ವಿಕೆಟ್, 1 ಕ್ಯಾಚ್; ಇತಿಹಾಸ ಬರೆದ ಪ್ಯಾಟ್ ಕಮ್ಮಿನ್ಸ್
ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದು ತಪ್ಪು: ಶಮಿತಾ
ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದು ತಪ್ಪು: ಶಮಿತಾ