ಪಶ್ಚಿಮ ಬಂಗಾಳ: ಅಮಾನತುಗೊಂಡ ಬಿಜೆಪಿ ನಾಯಕ ಜಾಯ್‌ಪ್ರಕಾಶ್ ಮಜುಂದಾರ್ ಟಿಎಂಸಿಗೆ ಸೇರ್ಪಡೆ

ಶೀಘ್ರದಲ್ಲೇ ಜಾಯ್‌ಪ್ರಕಾಶ್ ಮಜುಂದಾರ್ ಟಿಎಂಸಿ ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ನಜ್ರುಲ್ ಮಂಚದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ

ಪಶ್ಚಿಮ ಬಂಗಾಳ: ಅಮಾನತುಗೊಂಡ ಬಿಜೆಪಿ ನಾಯಕ ಜಾಯ್‌ಪ್ರಕಾಶ್ ಮಜುಂದಾರ್ ಟಿಎಂಸಿಗೆ ಸೇರ್ಪಡೆ
ಜಾಯ್‌ಪ್ರಕಾಶ್ ಮಜುಂದಾರ್
Updated By: ರಶ್ಮಿ ಕಲ್ಲಕಟ್ಟ

Updated on: Mar 08, 2022 | 4:50 PM

ಕೊಲ್ಕತ್ತಾ: ಅಮಾನತುಗೊಂಡಿರುವ ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಜಾಯ್‌ಪ್ರಕಾಶ್ ಮಜುಂದಾರ್ (Joyprakash Majumder) ಅವರು ಮಂಗಳವಾರ ಕೊಲ್ಕತ್ತಾದಲ್ಲಿ ತೃಣಮೂಲ ಕಾಂಗ್ರೆಸ್ (TMC) ಸೇರಿದ್ದಾರೆ. ಶೀಘ್ರದಲ್ಲೇ ಅವರು ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ನಜ್ರುಲ್ ಮಂಚದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee) ಹೇಳಿದ್ದಾರೆ. ಹಿಂದಿನ ದಿನ ಮಜುಂದಾರ್ ನಜ್ರುಲ್ ಮಂಚದಲ್ಲಿ ಬ್ಯಾನರ್ಜಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದರು. ಬಿಜೆಪಿಯ ಪಶ್ಚಿಮ ಬಂಗಾಳ ಘಟಕವು ಅದರ ಇಬ್ಬರು ಮಾಜಿ ಉಪಾಧ್ಯಕ್ಷರಾದ ಮಜುಂದಾರ್ ಮತ್ತು ರಿತೇಶ್ ತಿವಾರಿ ಅವರನ್ನು ಜನವರಿ 23 ರಂದು ನಾಯಕರಿಗೆ ಶೋಕಾಸ್ ನೋಟಿಸ್ ನೀಡಿದ್ದು, ಒಂದು ದಿನದ ನಂತರ ಅವರನ್ನು ಅಮಾನತುಗೊಳಿಸಿದೆ. ಶಿಸ್ತಿನ ಪ್ರಕ್ರಿಯೆಗಳು ಪೂರ್ಣಗೊಳ್ಳದ ತನಕ ಅಮಾನತುಗಳು ತಾತ್ಕಾಲಿಕವಾಗಿರುತ್ತವೆ. ಸುಕಾಂತ ಮಜುಂದಾರ್ ಅವರು ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಇತ್ತೀಚಿನ ಸಾಂಸ್ಥಿಕ ಪುನರ್ರಚನೆಯಲ್ಲಿ ಇವರಿಬ್ಬರನ್ನು ತಮ್ಮ ಪಕ್ಷದ ಹುದ್ದೆಗಳಿಂದ ಕೈಬಿಡಲಾಯಿತು.

ಇಬ್ಬರು ನಾಯಕರು ಮಾಟುವಾ ನಾಯಕ ಮತ್ತು ಬೊಂಗಾವ್ ಸಂಸದ ಸಂತನು ಠಾಕೂರ್ ಅವರೊಂದಿಗೆ ವಿವಿಧ ಸಂದರ್ಭಗಳಲ್ಲಿ ಸಭೆಗಳನ್ನು ನಡೆಸಿದ್ದರು. ಅಮಾನತುಗೊಂಡ ನಂತರ, ಮಜುಂದಾರ್ ಹಲವಾರು ಸಂದರ್ಭಗಳಲ್ಲಿ ಬಿಜೆಪಿಯ ಹೊಸ ರಾಜ್ಯ ಸಮಿತಿಯನ್ನು ಮತ್ತು ಇತ್ತೀಚೆಗೆ ಮುಕ್ತಾಯಗೊಂಡ ನಾಗರಿಕ ಚುನಾವಣೆಯಲ್ಲಿ ಸೋಲಿಗೆ ರಾಜ್ಯ ನಾಯಕತ್ವವನ್ನು ಟೀಕಿಸಿದ್ದರು.

ಸೋಮವಾರ ಬಿಜೆಪಿಯ ಬಂಡಾಯ ನಾಯಕರು ಲಾಕೆಟ್ ಚಟರ್ಜಿ ನೇತೃತ್ವದಲ್ಲಿ ಮಜುಂದಾರ್ ಕೂಡ ಇದ್ದ ಸಭೆಯಲ್ಲಿ ಭಾಗವಹಿಸಿದ್ದರು. ಮುಂದಿನ ದಿನಗಳಲ್ಲಿ ಬಿಜೆಪಿಯಿಂದ ಇನ್ನಷ್ಟು ನಾಯಕರು ಟಿಎಂಸಿ ಸೇರಲಿದ್ದಾರೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ.

ಇದನ್ನೂ ಓದಿ: ಗೋವಾದಲ್ಲಿ ಪಕ್ಷಾಂತರ ಭೀತಿ: ತಮ್ಮ ಅಭ್ಯರ್ಥಿಗಳನ್ನು ರೆಸಾರ್ಟ್​​ಗೆ ಕರೆದೊಯ್ದ ಕಾಂಗ್ರೆಸ್