AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Swachh Bharat: ಪ್ರಗತಿ ಮೈದಾನ್ ಸುರಂಗ ಮಾರ್ಗ ಉದ್ಘಾಟನೆ ವೇಳೆ ಬರಿಗೈಲಿ ಕಸ ಹೆಕ್ಕಿ ಸ್ವಚ್ಛ ಭಾರತ್ ಸಂದೇಶ ರವಾನಿಸಿದ ಮೋದಿ

PM Narendra Modi: ಸ್ವಚ್ಛ ಭಾರತ್ ಮಿಷನ್​ ಆಶಯಕ್ಕೆ ಪೂರಕವಾಗಿ ಹಲವು ಬಾರಿ ನಡೆದುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ತಾವೇ ಉತ್ತಮ ಮಾದರಿಯೂ ಆಗಿದ್ದಾರೆ.

Swachh Bharat: ಪ್ರಗತಿ ಮೈದಾನ್ ಸುರಂಗ ಮಾರ್ಗ ಉದ್ಘಾಟನೆ ವೇಳೆ ಬರಿಗೈಲಿ ಕಸ ಹೆಕ್ಕಿ ಸ್ವಚ್ಛ ಭಾರತ್ ಸಂದೇಶ ರವಾನಿಸಿದ ಮೋದಿ
ಪ್ರಗತಿ ಮೈದಾನ್ ಸುರಂಗದಲ್ಲಿ ಕಸ ಹೆಕ್ಕಿದ ಪ್ರಧಾನಿ ನರೇಂದ್ರ ಮೋದಿ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jun 19, 2022 | 1:44 PM

ದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಈ ಹಿಂದೆಯೂ ಹಲವು ಬಾರಿ ತಮ್ಮ ಸ್ವಚ್ಛ ಭಾರತ್ ಮಿಷನ್ (Swachh Bharat Mission) ಕನಸು ಹಂಚಿಕೊಂಡಿದ್ದಾರೆ. ಅದಕ್ಕೆ ಪೂರಕವಾಗಿ ಹಲವು ಬಾರಿ ನಡೆದುಕೊಂಡು ತಾವೇ ಉತ್ತಮ ಮಾದರಿಯೂ ಆಗಿದ್ದಾರೆ. ಇತ್ತೀಚೆಗಷ್ಟೇ ಉದ್ಘಾಟನೆಗೊಂಡ ದೆಹಲಿಯ ಪ್ರಗತಿ ಮೈದಾನ್ ಸುರಂಗ ಮಾರ್ಗವನ್ನು (Pragati Maidan Integrated Transit Corridor) ಭಾನುವಾರ ಪ್ರಧಾನಿ ನರೇಂದ್ರ ಮೋದಿ ಪರಿಶೀಲಿಸಿದರು. ಈ ವೇಳೆ ರಸ್ತೆಯ ಬದಿಯಲ್ಲಿ ಸಿಕ್ಕ ಕೆಲ ಚಿಂದಿ, ಖಾಲಿ ನೀರಿನ ಬಾಟಲಿಯನ್ನು ಕೈಲಿ ಎತ್ತಿಕೊಂಡು ಕಸದ ಡಬ್ಬಿಗೆ ಹಾಕಿದರು. ಪ್ರಗತಿ ಮೈದಾನ್ ಸುರಂಗ ಮಾರ್ಗವು ಇಂದಿನಿಂದ ಸಾರ್ವಜನಿಕರಿಗೆ ಮುಕ್ತವಾಗಿದೆ.

ನರೇಂದ್ರ ಮೋದಿ ಸುರಂಗ ಮಾರ್ಗ ಪರಿಶೀಲಿಸುವ ವಿಡಿಯೊ ತುಣುಕನ್ನು ಎಎನ್​ಐ ಹಂಚಿಕೊಂಡಿದೆ. ಕಳೆದ ತಿಂಗಳ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಚಾರ್ ಧಾಮ್ ಯಾತ್ರಾ ಸೇರಿದಂತೆ ವಿವಿಧ ಪವಿತ್ರ ಕ್ಷೇತ್ರಗಳಲ್ಲಿ ಕಸ ಹೆಚ್ಚಾಗುತ್ತಿರುವುದು ಹಾಗೂ ಪ್ರವಾಸಿಗರು ಎಲ್ಲೆಂದರಲ್ಲಿ ಕಸ ಹಾಕುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಪ್ರಗತಿ ಮೈದಾನ್ ಮರು ನಿರ್ಮಾಣ ಯೋಜನೆಯ ಭಾಗವಾಗಿ ಪ್ರಗತಿ ಮೈದಾನ್ ಇಂಟಿಗ್ರೇಟೆಡ್ ಟ್ರಾನ್ಸಿಟ್ ಕಾರಿಡಾರ್ ಯೋಜನೆಯ ಮುಖ್ಯ ಸುರಂಗವನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಉದ್ಘಾಟಿಸಿದರು. ಪ್ರಗತಿ ಮೈದಾನ್ ಸುರಂಗ ಮಾರ್ಗವು 1.6 ಕಿಮೀ ಉದ್ದವಿದೆ. ವಾಹನ ಸವಾರರು ಇಂಡಿಯಾ ಗೇಟ್​ನಿಂದ ಕೇಂದ್ರ ದೆಹಲಿಗೆ ಸಂಪರ್ಕ ಕಲ್ಪಿಸುತ್ತದೆ. ಇದರಿಂದಾಗಿ ಪೂರ್ವ ದೆಹಲಿ, ನೊಯ್ಡಾ ಮತ್ತು ಗಾಜಿಯಾಬಾದ್​ ಕಡೆಗೆ ತೆರಳುವವರು ಐಟಿಒ, ಮಥುರಾ ರಸ್ತೆ ಮತ್ತು ಭೈರಾನ್ ಮಾರ್ಗ್​​ಗಳ ಟ್ರಾಫಿಕ್ ಜಂಜಡದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತದೆ.

ಪ್ರಗತಿ ಮೈದಾನ್ ಸಮಗ್ರ ಅಭಿವೃದ್ಧಿ ಕಾಮಗಾರಿಯ ಭಾಗವಾಗಿರುವ ಸುರಂಗ ಮಾರ್ಗವನ್ನು ₹ 920 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಕೇಂದ್ರ ಸರ್ಕಾರವು ಈ ಯೋಜನೆಯ ಸಂಪೂರ್ಣ ವೆಚ್ಚವನ್ನು ಭರಿಸಿದೆ. ವ್ಯಾಪಾರ ಮೇಳಗಳನ್ನು ಆಯೋಜಿಸುವವರಿಗೆ ನೆರವಾಗಲೆಂದು ವಿಶ್ವಮಟ್ಟದ ಪ್ರದರ್ಶನ ಕೇಂದ್ರವನ್ನು ಇಲ್ಲಿ ಕೇಂದ್ರ ಸರ್ಕಾರ ಪ್ರಗತಿ ಮೈದಾನದಲ್ಲಿ ರೂಪಿಸಿದೆ. ಈ ಹೊಸ ಯೋಜನೆಯಿಂದ ಗ್ರಾಹಕರು ಮತ್ತು ವ್ಯಾಪಾರಿಗಳಿಗೆ ಹಲವು ಅನುಕೂಲಗಳು ಒದಗಲಿವೆ.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:44 pm, Sun, 19 June 22