AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೆಡ್ ಸಿಗ್ನಲ್ ದಾಟಿ 500 ಮೀಟರ್ ಮುಂದೆ ಹೋದ ಟಾಟಾ ಎಕ್ಸ್​ಪ್ರೆಸ್ ರೈಲು; ಗಂಭೀರ ಕರ್ತವ್ಯಲೋಪ

ಕೆಂಪು ಸಿಗ್ನಲ್ ದಾಟಿ ರೈಲು ಮುಂದೆ ಹೋಗಿ ನಿಂತರೆ ಅದಕ್ಕೆ ಸಿಗ್ನಲ್ ಪಾಸಿಂಗ್ ಅಟ್ ಡೇಂಜರ್ (SPAD) ಎಂಬ ತಾಂತ್ರಿಕ ಪದ ಬಳಸುತ್ತಾರೆ. ರೈಲ್ವೆ ಸುರಕ್ಷಾ ನಿಯಮ ಉಲ್ಲಂಘಿಸಿದ್ದಕ್ಕೆ ಲೋಕೊ ಪೈಲಟ್ ಮತ್ತು ಸಹಾಯಕ ಲೋಕೊ ಪೈಲಟ್​ನನ್ನು ಅಮಾನತು ಮಾಡಲಾಗಿದೆ.

ರೆಡ್ ಸಿಗ್ನಲ್ ದಾಟಿ 500 ಮೀಟರ್ ಮುಂದೆ ಹೋದ ಟಾಟಾ ಎಕ್ಸ್​ಪ್ರೆಸ್ ರೈಲು; ಗಂಭೀರ ಕರ್ತವ್ಯಲೋಪ
ಟಾಟಾ ಎಕ್ಸ್​ಪ್ರೆಸ್
ರಶ್ಮಿ ಕಲ್ಲಕಟ್ಟ
| Edited By: |

Updated on: Dec 27, 2020 | 2:12 PM

Share

ಪಟನಾ: ಟಾಟಾ ನಗರ್​ನಿಂದ ದಾನಾಪುರ್​ಗೆ ಶನಿವಾರ ಬೆಳಗ್ಗೆ ಹೋಗುತ್ತಿದ್ದ ಟಾಟಾ ಎಕ್ಸ್​ಪ್ರೆಸ್ ಹಾಥಿದಾ ಜಂಕ್ಷನ್​ನಲ್ಲಿ ಕೆಂಪು ಸಿಗ್ನಲ್ ದಾಟಿ 500 ಮೀಟರ್ ಮುಂದೆ ಹೋಗಿ ನಿಂತ ಘಟನೆ ವರದಿಯಾಗಿದೆ

ಕೆಂಪು ಸಿಗ್ನಲ್ ದಾಟಿ ರೈಲು ಮುಂದೆ ಹೋಗಿ ನಿಂತರೆ ಅದಕ್ಕೆ ಸಿಗ್ನಲ್ ಪಾಸಿಂಗ್ ಅಟ್ ಡೇಂಜರ್ (SPAD) ಎಂಬ ತಾಂತ್ರಿಕ ಪದ ಬಳಸುತ್ತಾರೆ. ರೈಲನ್ನು ಸರಿಯಾದ ಜಾಗದಲ್ಲಿ ನಿಲ್ಲಿಸದೆ ಅಪಾಯ ಸೂಚನೆಯನ್ನು ದಾಟಿ ಮುಂದುವರಿದು ರೈಲ್ವೆ ಸುರಕ್ಷಾ ನಿಯಮ ಉಲ್ಲಂಘಿಸಿದ್ದಕ್ಕೆ ಲೋಕೊ ಪೈಲಟ್ ಮತ್ತು ಸಹಾಯಕ ಲೋಕೊ ಪೈಲಟ್​ನನ್ನು ಅಮಾನತು ಮಾಡಲಾಗಿದೆ.

ಈ ರೀತಿಯ ಘಟನೆ ಸಂಭವಿಸಿದರೆ ತಕ್ಷಣವೇ ರೈಲು ಚಾಲಕನನ್ನು ಬಂಧಿಸಬೇಕು. ಆತ ಮದ್ಯಪಾನ ಅಥವಾ ಮಾದಕ ವಸ್ತು ಸೇವನೆ ಮಾಡಿದ್ದಾನೆಯೇ ಎಂದು ತಿಳಿಯಲು ರಕ್ತಪರೀಕ್ಷೆಗೊಳಪಡಿಸಬೇಕು ಎಂಬುದು ನಿಯಮದಲ್ಲಿ ಹೇಳಲಾಗಿದೆ. ಈ ಪ್ರಕರಣದಲ್ಲಿ ತಪ್ಪಿತಸ್ಥರು ಎಂದು ಸಾಬೀತಾದರೆ ಲೋಕೊ ಪೈಲಟ್ ಮತ್ತು ಸಹಾಯಕ ಲೋಕೊ ಪೈಲಟ್​ನ​ನ್ನು ಸೇವೆಯಿಂದಲೇ ವಜಾ ಮಾಡಲಾಗುವುದು.

ರೈಲನ್ನು ನಿಲ್ಲಿಸಲು ಲೋಕೊ ಪೈಲಟ್ ಮತ್ತು ಸಹಾಯಕ ಲೋಕೊ ಪೈಲಟ್ ಮರೆತುಹೋದರೆ ಅಥವಾ ಬ್ರೇಕ್ ಸರಿಯಾಗಿ ಕೆಲಸ ಮಾಡಲಿಲ್ಲವೇ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.

ಪೂರ್ವ ಮಧ್ಯ ರೈಲ್ವೆ (ಈಸಿಆರ್) ಅಧಿಕಾರಿಗಳ ಪ್ರಕಾರ ಲೋಕೊ ಪೈಲಟ್ ಸೂಕ್ತ ಸಮಯದಲ್ಲಿ ಬ್ರೇಕ್ ಹಾಕದೇ ಇದ್ದರೆ ಈ ರೀತಿ ರೈಲು ನಿರ್ದಿಷ್ಟ ನಿಲುಗಡೆಗಿಂತ ಮುಂದೆ ಹೋಗಿ ನಿಲ್ಲುತ್ತದೆ. ಒಂದು ವೇಳೆ ರೈಲ್ವೆ ಸಿಬ್ಬಂದಿ ಇನ್ನೊಬ್ಬರ ಜತೆ ಮಾತಿನಲ್ಲಿ ಮಗ್ನವಾಗಿದ್ದರೆ ಈ ರೀತಿ ಆಗುವ ಸಾಧ್ಯತೆಯೂ ಇರುತ್ತದೆ. ಮೊಕಮಾ ಜಂಕ್ಷನ್​ನಿಂದ ಹೊರಟ ನಂತರ ರೈಲು ವೇಗ ಪಡೆದುಕೊಳ್ಳುತ್ತದೆ. ಹಾಗಾಗಿ ಕೆಲವೊಮ್ಮೆ ರೈಲಿನ ಕೆಲವು ಬೋಗಿ ಅಥವಾ ಇಡೀ ರೈಲು , ರೈಲು ನಿಲ್ದಾಣಕ್ಕಿಂತ ಮುಂದೆ ಹೋಗಿ ನಿಲ್ಲುವ ಸಾಧ್ಯತೆಯೂ ಇರುತ್ತದೆ. ಎರಡು ರೈಲು ನಿಲ್ದಾಣಗಳ ನಡುವಿನ ಕೇವಲ 8 ಕಿಮೀ ಇದೆ ಎಂದಿದ್ದಾರೆ.

ಈ ರೀತಿಯ ಘಟನೆಗಳನ್ನು ತುಂಬಾ ಗಂಭೀರವಾಗಿಯೇ ಪರಿಗಣಿಸಬೇಕಾಗುತ್ತದೆ. ರೈಲ್ವೆ ನಿಯಮಗಳ ಕಡ್ಡಾಯ ಪಾಲನೆ ಆಗಲೇಬೇಕು. ಈ ರೀತಿಯ ಪ್ರಕರಣಗಳಲ್ಲಿ ರೈಲ್ವೆ ಸ್ಟೇಷನ್ ಮಾಸ್ಟರ್ ರೈಲು ಎಷ್ಟು ದೂರ ಮುಂದೆ ಹೋಗಿ ನಿಂತಿದೆ ಎಂಬುದನ್ನು ಲೆಕ್ಕಹಾಕುವಂತೆ ಮೇಲ್ವಿಚಾರಕರಿಗೆ ನಿರ್ದೇಶಿಸುತ್ತಾರೆ. ರೈಲು ಅಲ್ಲಿಂದ ಹೊರಡುವ ಮುನ್ನ ಲೊಕೊ ಪೈಲಟ್​ನ್ನು ವಿಚಾರಣೆ ನಡೆಸಿ ಇತರ ಮಾಹಿತಿಗಳನ್ನು ಕಲೆ ಹಾಕಲಾಗುವುದು. ಹಿರಿಯ ಅಧಿಕಾರಿಗಳಿರುವ ನಾಲ್ವರು ಸದಸ್ಯರ ತಂಡಕ್ಕೆ ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಆದೇಶಿಸಿರುವುದಾಗಿ ಈಸಿಆರ್ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ್ ಕುಮಾರ್ ಹೇಳಿದ್ದಾರೆ.

ಭಾರತೀಯ ರೈಲ್ವೆ ಖಾಸಗೀಕರಣಕ್ಕೆ ಕೇಂದ್ರ ಸರ್ಕಾರ ಪ್ಲ್ಯಾನ್