AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಂಜಾಬ್​​ನಲ್ಲಿ ಪ್ರಧಾನಿ ಭದ್ರತೆ ಲೋಪ; ಆಕ್ಷೇಪ, ಆತಂಕ ವ್ಯಕ್ತಪಡಿಸಿ ಟ್ವೀಟ್ ಮಾಡಿದ ಚಂದ್ರಬಾಬು ನಾಯ್ಡು

ಪ್ರಧಾನಿ ಮೋದಿಯವರು ಪ್ರಯಾಣಿಸುತ್ತಿದ್ದ ರಸ್ತೆ ಮಾರ್ಗದಲ್ಲಿ ಪ್ರತಿಭಟನೆ ನಡೆಸಿ, ರಸ್ತೆ ಬ್ಲಾಕ್​ ಮಾಡಿದ್ದರ ಜವಾಬ್ದಾರಿಯನ್ನು ಭಾರತೀಯ ಕಿಸಾನ್​ ಯೂನಿಯನ್ (ಕ್ರಾಂತಿಕಾರಿ) ರೈತ ಸಂಘಟನೆ ಹೊತ್ತಿದೆ. 

ಪಂಜಾಬ್​​ನಲ್ಲಿ ಪ್ರಧಾನಿ ಭದ್ರತೆ ಲೋಪ; ಆಕ್ಷೇಪ, ಆತಂಕ ವ್ಯಕ್ತಪಡಿಸಿ ಟ್ವೀಟ್ ಮಾಡಿದ ಚಂದ್ರಬಾಬು ನಾಯ್ಡು
ಚಂದ್ರಬಾಬು ನಾಯ್ಡು
TV9 Web
| Updated By: Lakshmi Hegde|

Updated on:Jan 08, 2022 | 3:19 PM

Share

ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಪಂಜಾಬ್​ಗೆ ಭೇಟಿ ನೀಡಿದ್ದಾಗ ಅಲ್ಲಿ ಉಂಟಾಗಿರುವ ಭದ್ರತಾ ಲೋಪ (PM Security Breach in Punjab) ನಿಜಕ್ಕೂ ಕಳವಳಕಾರಿ ಎಂದು ಆಂಧ್ರಪ್ರದೇಶದ ತೆಲುಗು ದೇಸಂ ಪಾರ್ಟಿ (ಟಿಡಿಪಿ) ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಎನ್​.ಚಂದ್ರಬಾಬು ನಾಯ್ಡು(Chandrababu Naidu) ಹೇಳಿದ್ದಾರೆ.  ಪ್ರಧಾನಿಯವರ ಭದ್ರತೆ ಎಂಬುದು ರಾಷ್ಟ್ರದ ಕಾಳಜಿ. ಹೀಗಾಗಿ ಪಂಜಾಬ್​ನಲ್ಲಿ ನಡೆದ ಘಟನೆ ಒಪ್ಪತಕ್ಕಂಥದ್ದಲ್ಲ ಎಂದು ಟ್ವೀಟ್​ ಮಾಡಿದ್ದಾರೆ. ಬುಧವಾರ (ಜ.5) ಪ್ರಧಾನಿ ನರೇಂದ್ರ ಮೋದಿ ಪಂಜಾಬ್​ನ ಫಿರೋಜ್​ಪುರಕ್ಕೆ ಭೇಟಿ ಕೊಡುವವರು ಇದ್ದರು. ಆದರೆ ಭಟಿಂಡಾ ಏರ್​ಪೋರ್ಟ್​ನಿಂದ ಫಿರೋಜ್​​ಪುರಕ್ಕೆ ಹೋಗುವ ಮಾರ್ಗದಲ್ಲಿ ರೈತರು ಪ್ರತಿಭಟನೆ ನಡೆಸಿದ ಪರಿಣಾಮ ಅವರು ಹುಸ್ಸೇನಿವಾಲಾ ಸಮೀಪ ಫ್ಲೈಓವರ್ ಮೇಲೆ 15-20 ನಿಮಿಷ ಕಾದು ನಂತರ ವಾಪಸ್​ ಬರುವಂತಾಯ್ತು. ಇದು ಭಾರತದ ಇತಿಹಾಸದಲ್ಲೇ ದೊಡ್ಡ ಮಟ್ಟದ ಭದ್ರತಾ ಲೋಪ ಎನ್ನಲಾಗಿದ್ದು, ಪ್ರತಿಪಕ್ಷಗಳ ನಾಯಕರೂ ಕೂಡ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿ ನಾಯಕರಂತೂ, ಕಾಂಗ್ರೆಸ್​ ಪ್ರಧಾನಿ ಮೋದಿ ಹತ್ಯೆಗೆ ಸಂಚು ರೂಪಿಸಿದೆ ಎಂದೇ ಆರೋಪಿಸಿದೆ.  

ಪ್ರಧಾನಿ ಮೋದಿಯವರು ಪ್ರಯಾಣಿಸುತ್ತಿದ್ದ ರಸ್ತೆ ಮಾರ್ಗದಲ್ಲಿ ಪ್ರತಿಭಟನೆ ನಡೆಸಿ, ರಸ್ತೆ ಬ್ಲಾಕ್​ ಮಾಡಿದ್ದರ ಜವಾಬ್ದಾರಿಯನ್ನು ಭಾರತೀಯ ಕಿಸಾನ್​ ಯೂನಿಯನ್ (ಕ್ರಾಂತಿಕಾರಿ) ರೈತ ಸಂಘಟನೆ ಹೊತ್ತಿದೆ.  ಪ್ರಧಾನಿ ಮೋದಿ ರಸ್ತೆ ಮೂಲಕ ಬರುತ್ತಾರೆ ಎಂದು ನಮಗೆ ಗೊತ್ತಿರಲಿಲ್ಲ. ನಂತರ ಪೊಲೀಸರು ಹೇಳಿದರೂ ನಾವು ಅವರು ಸುಳ್ಳು ಹೇಳುತ್ತಾರೆ ಎಂದೇ ಭಾವಿಸಿದೆವು. ನಮಗೆ ಮೋದಿಯವರ ಕಾರನ್ನು ತಡೆಯುವ ಉದ್ದೇಶವಾಗಲಿ, ಯೋಜನೆಯಾಗಲೀ ಇರಲಿಲ್ಲ. ಫಿರೋಜ್​​ಪುರದಲ್ಲಿ ಅವರು ರ್ಯಾಲಿ ನಡೆಸುವ ಜಾಗದಿಂದ ಸ್ವಲ್ಪ ದೂರದಲ್ಲಿ ಪ್ರತಿಭಟನೆ ನಡೆಸುವುದಷ್ಟೇ ನಮ್ಮ ಉದ್ದೇಶವಾಗಿತ್ತು. ಅದರಲ್ಲೂ ಫಿರೋಜ್​ಪುರದಲ್ಲಿ ಹೆಲಿಪ್ಯಾಡ್​ ನೋಡಿ, ಪ್ರಧಾನಿ ಮೋದಿ ಹೆಲಿಕಾಪ್ಟರ್​ ಮೂಲಕವೇ ಬರಲಿದ್ದಾರೆ ಎಂದುಕೊಂಡಿದ್ದೆವು ಎಂದು ಬಿಕೆಯು ಮುಖ್ಯಸ್ಥ ಸುರ್ಜಿತ್​ ಸಿಂಗ್ ಪೂಲ್​ ತಿಳಿಸಿದ್ದಾರೆ.

ಇನ್ನು ಪ್ರಧಾನಿ ಭದ್ರತೆ ಲೋಪ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​, ಪ್ರಧಾನಿ ನರೇಂದ್ರ ಮೋದಿಯವರು ಪಂಜಾಬ್​ಗೆ ಭೇಟಿ ನೀಡಿದಾಗಿನ ಪ್ರಯಾಣ ದಾಖಲೆಯನ್ನು ಸಂರಕ್ಷಿಸಿಡುವಂತೆ ಸುಪ್ರೀಂಕೋರ್ಟ್​, ಪಂಜಾಬ್​-ಹರ್ಯಾಣ ಹೈಕೋರ್ಟ್​ನ ರಿಜಿಸ್ಟ್ರಾರ್​ ಜನರಲ್​​ಗೆ ಸೂಚಿಸಿದೆ. ಜನವರಿ 10ಕ್ಕೆ ಮುಂದಿನ ವಿಚಾರಣೆ ನಡೆಸಲಿರುವ ಸುಪ್ರೀಂಕೋರ್ಟ್​, ಅಲ್ಲಿಯವರೆಗೂ ಕೇಂದ್ರ ಗೃಹ ಇಲಾಖೆ ಹಾಗೂ ಪಂಜಾಬ್​ ಸರ್ಕಾರ ಪ್ರಕರಣದ ತನಿಖೆ ನಡೆಸುವದಕ್ಕೆ ಸ್ಟೇ ನೀಡಿದೆ. ಸದ್ಯ ಭದ್ರತಾ ಲೋಪ ತನಿಖೆಗಾಗಿ ಕೇಂದ್ರ ಸರ್ಕಾರ ರಾಷ್ಟ್ರೀಯ ತನಿಖಾ ದಳ (NIA)ದ ಏಳು ಸದಸ್ಯರನ್ನೊಳಗೊಂಡ ತಂಡವನ್ನು ರಚಿಸಿದ್ದು, ಪಂಜಾಬ್​ ಸರ್ಕಾರ ಮೂವರು ಸದಸ್ಯರನ್ನೊಳಗೊಂಡ ಸಮಿತಿ ರಚಿಸಿದೆ.

ಇದನ್ನೂ ಓದಿ: ಪ್ರಧಾನಿ ಭದ್ರತೆ ಲೋಪ; ಫಿರೋಜ್​ಪುರ ಎಸ್​ಎಸ್​ಪಿಯನ್ನು ದೂಷಿಸಿ, ಕೇಂದ್ರಕ್ಕೆ ವರದಿ ಸಲ್ಲಿಸಿದ ಭಟಿಂಡಾ ಎಸ್​ಎಸ್​ಪಿ

Published On - 3:18 pm, Sat, 8 January 22

ಚಿನ್ನಯ್ಯನಪಾಳ್ಯ ನಿಗೂಢ ಸ್ಫೋಟ: ಭಯಾನಕ ದೃಶ್ಯದ ಸಿಸಿಟಿವಿ ವಿಡಿಯೋ ಇಲ್ಲಿದೆ
ಚಿನ್ನಯ್ಯನಪಾಳ್ಯ ನಿಗೂಢ ಸ್ಫೋಟ: ಭಯಾನಕ ದೃಶ್ಯದ ಸಿಸಿಟಿವಿ ವಿಡಿಯೋ ಇಲ್ಲಿದೆ
ಇದ್ದಕ್ಕಿದ್ದಂತೆ ದೊಡ್ಡ ಸ್ಫೋಟವಾಯ್ತು ಎಂದ ಸ್ಥಳೀಯರು: ವಿಡಿಯೋ ನೋಡಿ
ಇದ್ದಕ್ಕಿದ್ದಂತೆ ದೊಡ್ಡ ಸ್ಫೋಟವಾಯ್ತು ಎಂದ ಸ್ಥಳೀಯರು: ವಿಡಿಯೋ ನೋಡಿ
ಅನುಮಾನಾಸ್ಪದ ಸ್ಫೋಟದ ಬಗ್ಗೆ ಪ್ರತ್ಯಕ್ಷದರ್ಶಿಗಳು ಹೇಳೋದೇನು ನೋಡಿ
ಅನುಮಾನಾಸ್ಪದ ಸ್ಫೋಟದ ಬಗ್ಗೆ ಪ್ರತ್ಯಕ್ಷದರ್ಶಿಗಳು ಹೇಳೋದೇನು ನೋಡಿ
ಒಬ್ಬರದ್ದು ಕಣ್ಣೀರು, ಇನ್ನೊಬ್ಬರದ್ದು ಹರಟೆ; ಒಂದೇ ಬ್ಯಾರಕ್​ನಲ್ಲಿ ಗ್ಯಾಂಗ
ಒಬ್ಬರದ್ದು ಕಣ್ಣೀರು, ಇನ್ನೊಬ್ಬರದ್ದು ಹರಟೆ; ಒಂದೇ ಬ್ಯಾರಕ್​ನಲ್ಲಿ ಗ್ಯಾಂಗ
ಸ್ವಾತಂತ್ರ್ಯೋತ್ಸವ: ಕಾವೇರಿ ನಿವಾಸದಲ್ಲಿ ಧ್ವಜಾರೋಹಣ ನಡೆಸಿದ ಸಿಎಂ
ಸ್ವಾತಂತ್ರ್ಯೋತ್ಸವ: ಕಾವೇರಿ ನಿವಾಸದಲ್ಲಿ ಧ್ವಜಾರೋಹಣ ನಡೆಸಿದ ಸಿಎಂ
Live: ಸ್ವಾತಂತ್ರ್ಯ ದಿನಾಚರಣೆ; ಸಿಎಂ ಧ್ವಜಾರೋಹಣ ನೇರ ಪ್ರಸಾರ
Live: ಸ್ವಾತಂತ್ರ್ಯ ದಿನಾಚರಣೆ; ಸಿಎಂ ಧ್ವಜಾರೋಹಣ ನೇರ ಪ್ರಸಾರ
ಮಹಾತ್ಮ ಗಾಂಧಿಗೆ ಗೌರವ ಸಲ್ಲಿಸಿದ ಪ್ರಧಾನಿ ಮೋದಿ
ಮಹಾತ್ಮ ಗಾಂಧಿಗೆ ಗೌರವ ಸಲ್ಲಿಸಿದ ಪ್ರಧಾನಿ ಮೋದಿ
Live: ದೆಹಲಿಯಲ್ಲಿ ಸ್ವಾತಂತ್ರ್ಯೋತ್ಸವ ಸಮಾರಂಭ, ನೇರ ಪ್ರಸಾರ
Live: ದೆಹಲಿಯಲ್ಲಿ ಸ್ವಾತಂತ್ರ್ಯೋತ್ಸವ ಸಮಾರಂಭ, ನೇರ ಪ್ರಸಾರ
ಮನೆ ಕಟ್ಟಿ ಮದುವೆ ಮಾಡಬೇಕಾ ಅಥವಾ ಮದುವೆ ಮಾಡಿ ಮನೆ ಕಟ್ಟಬೇಕಾ?
ಮನೆ ಕಟ್ಟಿ ಮದುವೆ ಮಾಡಬೇಕಾ ಅಥವಾ ಮದುವೆ ಮಾಡಿ ಮನೆ ಕಟ್ಟಬೇಕಾ?
horoscope: ಸ್ವಾತಂತ್ರ್ಯ ದಿನದಂದು ಯಾವೆಲ್ಲಾ ರಾಶಿಗಳಿಗೆ ಶುಭ ತಿಳಿಯಿರಿ
horoscope: ಸ್ವಾತಂತ್ರ್ಯ ದಿನದಂದು ಯಾವೆಲ್ಲಾ ರಾಶಿಗಳಿಗೆ ಶುಭ ತಿಳಿಯಿರಿ