Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೋದಿ ಬೆಂಕಿ ಜತೆ ಆಡುತ್ತಿದ್ದಾರೆ, ಅದಾನಿ ಪ್ರಧಾನಿಯ ಪ್ರಾಕ್ಸಿ: ತೆಲಂಗಾಣ ಸಚಿವ ಕೆಟಿಆರ್ ವಾಗ್ದಾಳಿ

ಬಿಜೆಪಿಯವರೆಲ್ಲ ಶುದ್ಧರೇ? ಕಿರುಕುಳ, ರಾಜಕೀಯ ಸೇಡು ಮತ್ತು ಬೆದರಿಕೆ ಇವೆಲ್ಲ ನರೇಂದ್ರ ಮೋದಿಗೆ ಬೇರೆಡೆ ಉಪಯೋಗಕ್ಕೆ ಬರಬಹುದು. ಅವರು ಬೆಂಕಿಯೊಂದಿಗೆ ಆಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ಇದು ಅರಿವಿಗೆ ಬರುತ್ತದೆ ನನಗೆ ಖಾತ್ರಿಯಿದೆ.

ಮೋದಿ ಬೆಂಕಿ ಜತೆ ಆಡುತ್ತಿದ್ದಾರೆ, ಅದಾನಿ ಪ್ರಧಾನಿಯ ಪ್ರಾಕ್ಸಿ: ತೆಲಂಗಾಣ ಸಚಿವ ಕೆಟಿಆರ್ ವಾಗ್ದಾಳಿ
ಕೆಟಿಆರ್
Follow us
ರಶ್ಮಿ ಕಲ್ಲಕಟ್ಟ
|

Updated on: Mar 09, 2023 | 5:00 PM

ಅದಾನಿ ವಿಚಾರದಲ್ಲಿ ತೆಲಂಗಾಣ (Telangana) ಸಚಿವ ಕೆ.ಟಿ.ರಾಮ ರಾವ್ (KT Rama Rao) ಗುರುವಾರ ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಬಿಜೆಪಿ ಮೇಲೆ ಟೀಕಾ ಪ್ರಹಾರ ಮಾಡಿದ್ದು, ಗೌತಮ್ ಅದಾನಿ ಪ್ರಧಾನಿಯವರ ಪ್ರಾಕ್ಸಿ ಎಂದಿದ್ದಾರೆ. ಅದೇ ವೇಳೆ ‘ಬೆದರಿಕೆ ತಂತ್ರಗಳು ದಕ್ಷಿಣ ರಾಜ್ಯದಲ್ಲಿ ಕೆಲಸ ಮಾಡುವುದಿಲ್ಲ ಎಂದಿದ್ದಾರೆ. ಈ ವರ್ಷ ಅಸೆಂಬ್ಲಿ ಚುನಾವಣೆಯಲ್ಲಿ ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿ ಮತ್ತು ಬಿಜೆಪಿ ನಡುವೆ ತೀವ್ರವಾದ ಪೈಪೋಟಿ ನಡೆಯಲಿದೆ.

ಕೆಟಿಆರ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಸಚಿವರು, ಪ್ರಧಾನಿಯವರ ತವರು ರಾಜ್ಯವಾದ ಗುಜರಾತ್‌ನಿಂದ ಬಂದಿರುವ ಅದಾನಿ ಬಗ್ಗೆ ಇರುವ ವಿವಾದಗಳ ಬಗ್ಗೆ ಮೋದಿ ಮೌನವಾಗಿರುವುದಕ್ಕಾಗಿ ಪ್ರಧಾನಿಯನ್ನು ಟೀಕಿಸಿದ್ದಾರೆ. “ಅದಾನಿ ವಿರುದ್ಧದ ಆರೋಪಗಳ ಬಗ್ಗೆ ಪ್ರಧಾನಿ ಏಕೆ ಮಾತನಾಡುವುದಿಲ್ಲ? ಗೌತಮ್ ಅದಾನಿ ನರೇಂದ್ರ ಮೋದಿಯ ಪ್ರಾಕ್ಸಿ ಎಂದು ನಾವು ಹೇಳುತ್ತಿದ್ದೇವೆ. ಅವರು (ಮೋದಿ) ಸುಳ್ಳು ಪತ್ತೆ ಪರೀಕ್ಷೆಗೆ ಒಳಗಾಗುತ್ತಾರೆಯೇ? ದೇಶದ ಜನರ ಮುಂದೆ ಬರಲು ಅವರಿಗೆ ಧೈರ್ಯವಿದೆಯೇ? ಬಿಜೆಪಿಯಲ್ಲಿರುವ ಎಲ್ಲರೂ ರಾಜಾ ಹರಿಶ್ಚಂದ್ರನ (1913 ರ ಐಕಾನಿಕ್ ಮೂಕ ಚಲನಚಿತ್ರದ ಉಲ್ಲೇಖ) ಸಹೋದರರೇ?” ಎಂದು ಕೆಟಿಆರ್ ಕೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ. ರಾಜಕೀಯ ಸೇಡಿಗಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮೋದಿ ಬೆಂಕಿಯೊಂದಿಗೆ ಆಟವಾಡುತ್ತಿದ್ದಾರೆ ಎಂದಿದ್ದಾರೆ.

ಬಿಜೆಪಿಯವರೆಲ್ಲ ಶುದ್ಧರೇ? ಕಿರುಕುಳ, ರಾಜಕೀಯ ಸೇಡು ಮತ್ತು ಬೆದರಿಕೆ ಇವೆಲ್ಲ ನರೇಂದ್ರ ಮೋದಿಗೆ ಬೇರೆಡೆ ಉಪಯೋಗಕ್ಕೆ ಬರಬಹುದು. ಅವರು ಬೆಂಕಿಯೊಂದಿಗೆ ಆಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ಇದು ಅರಿವಿಗೆ ಬರುತ್ತದೆ ನನಗೆ ಖಾತ್ರಿಯಿದೆ. ಅವರು ಮಾತನಾಡುವ ಡಬಲ್ ಎಂಜಿನ್ ಅಂದರೆ ಆರ್ಥಿಕ ಎಂಜಿನ್ ಅದಾನಿ, ರಾಜಕೀಯ ಎಂಜಿನ್ ಮೋದಿ ಎಂದು ತೆಲಂಗಾಣ ನಾಯಕ ಹೇಳಿದ್ದಾರೆ. ಅದಾನಿ ಗ್ರೂಪ್‌ ವಿವಾದ ನಂತರ ಅದಾನಿಯವರ ಸಂಪತ್ತಿನಲ್ಲಿ ಭಾರಿ ಕುಸಿತವುಂಟಾಗಿದ್ದು ಇದರ ಪರಿಣಾಮವಾಗಿ ಅವರ ಕಂಪನಿಗಳು $120 ಶತಕೋಟಿ ನಷ್ಟು ನಷ್ಟವನ್ನು ಅನುಭವಿಸಿದವು. ಈ ವಿಚಾರ ಸಂಸತ್ತಿನಲ್ಲಿ ಗದ್ದಲಕ್ಕೂ ಕಾರಣವಾಯಿತು.

ಇದನ್ನೂ ಓದಿ:ಉತ್ತರ ಭಾರತದ ರಾಜ್ಯಗಳ ಬಿಜೆಪಿ ಸದಸ್ಯರು ನಕಲಿ ಸುದ್ದಿ ಹರಡುತ್ತಿದ್ದಾರೆ: ತಮಿಳುನಾಡು ಸಿಎಂ ಸ್ಟಾಲಿನ್

ಹಿಂಡೆನ್‌ಬರ್ಗ್‌ನ ಆರೋಪಗಳ ಬಗ್ಗೆ ವಿವರವಾದ ತನಿಖೆಗೆ ಮತ್ತು ಪ್ರಧಾನಿಯವರ ಹೇಳಿಕೆಗೆ ವಿರೋಧ ಪಕ್ಷಗಳು ಕರೆ ನೀಡಿತು. ಮೋದಿ ಸರ್ಕಾರವು ಉದ್ಯಮಿಗಳಿಗೆ ಅನುಕೂಲವಾಗಿದೆ ಎಂದು ವಿಪಕ್ಷಗಳು ಆರೋಪಿಸಿದ್ದು ಈ ವಿಚಾರವಾಗಿ ಸುಪ್ರೀಂ ಕೋರ್ಟ್‌ ತಜ್ಞರ ಸಮಿತಿಗೆ ಆದೇಶ ನೀಡಿದೆ.

ದೆಹಲಿ ಅಬಕಾರಿ ನೀತಿಯ ಆರೋಪದ ಹಗರಣದಲ್ಲಿ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯವು ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅಥವಾ ಕೆಸಿಆರ್ ಅವರ ಪುತ್ರಿ ಕವಿತಾ ಅವರನ್ನು ದೆಹಲಿಗೆ ಕರೆಸಿದ ಒಂದು ದಿನದ ನಂತರ ರಾವ್ ಅವರ ಹೇಳಿಕೆಗಳು ಬಂದಿವೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

VIDEO: ಇಡೀ ಪಂದ್ಯದ ಚಿತ್ರಣ ಬದಲಿಸಿದ ಆ ಒಂದು ಕ್ಯಾಚ್
VIDEO: ಇಡೀ ಪಂದ್ಯದ ಚಿತ್ರಣ ಬದಲಿಸಿದ ಆ ಒಂದು ಕ್ಯಾಚ್
ಲಾರಿ ಮುಷ್ಕರ ನಿಲ್ಲದಿದ್ದರೆ ಎಪಿಎಂಸಿಗಳು ಬಂದ್ ಆಗುವ ಸಾಧ್ಯತೆ?
ಲಾರಿ ಮುಷ್ಕರ ನಿಲ್ಲದಿದ್ದರೆ ಎಪಿಎಂಸಿಗಳು ಬಂದ್ ಆಗುವ ಸಾಧ್ಯತೆ?
ಜಾತಿ ಗಣತಿ ಅವಶ್ಯಕತೆ ಇಲ್ಲ ಎಂದ ಸಾರ್ವಜನಿಕರು: ಮೈಸೂರಿನಲ್ಲಿ ಜನಾಕ್ರೋಶ
ಜಾತಿ ಗಣತಿ ಅವಶ್ಯಕತೆ ಇಲ್ಲ ಎಂದ ಸಾರ್ವಜನಿಕರು: ಮೈಸೂರಿನಲ್ಲಿ ಜನಾಕ್ರೋಶ
ಮೂಡಿಗೆರೆ: ಮಾಕೋನಹಳ್ಳಿ ಗ್ರಾಮದಲ್ಲಿ ಮನೆಗೆ ನುಗ್ಗಿ ಕಾಡಾನೆ ದಾಂಧಲೆ
ಮೂಡಿಗೆರೆ: ಮಾಕೋನಹಳ್ಳಿ ಗ್ರಾಮದಲ್ಲಿ ಮನೆಗೆ ನುಗ್ಗಿ ಕಾಡಾನೆ ದಾಂಧಲೆ
ತಮ್ಮ ನಿರ್ದೇಶನದ ಮೊದಲ ಚಿತ್ರದ ಪ್ರಚಾರಕ್ಕೆ ಹೊಸ ತಂತ್ರ ಬಳಸಿದ ರಂಜನಿ
ತಮ್ಮ ನಿರ್ದೇಶನದ ಮೊದಲ ಚಿತ್ರದ ಪ್ರಚಾರಕ್ಕೆ ಹೊಸ ತಂತ್ರ ಬಳಸಿದ ರಂಜನಿ
ಮುಷ್ಕರ ಕಾರಣ ಮಹಾರಾಷ್ಟ್ರದ ಟ್ರಕ್ಕನ್ನು ಟೋಲ್ ಗೇಟ್ ಬಳಿ ತಡೆಯಲಾಗಿತ್ತು
ಮುಷ್ಕರ ಕಾರಣ ಮಹಾರಾಷ್ಟ್ರದ ಟ್ರಕ್ಕನ್ನು ಟೋಲ್ ಗೇಟ್ ಬಳಿ ತಡೆಯಲಾಗಿತ್ತು
ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಏಣಿಕೆ: ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಏಣಿಕೆ: ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
ನೋ ಬಾಲ್, ಫ್ರೀ ಹಿಟ್, ರನೌಟ್​: ಸೂಪರ್​ ಓವರ್​ನಲ್ಲಿ ಡೆಲ್ಲಿಗೆ ರೋಚಕ ಜಯ
ನೋ ಬಾಲ್, ಫ್ರೀ ಹಿಟ್, ರನೌಟ್​: ಸೂಪರ್​ ಓವರ್​ನಲ್ಲಿ ಡೆಲ್ಲಿಗೆ ರೋಚಕ ಜಯ
Daily Devotional: ಧಾರ್ಮಿಕ ಕ್ಷೇತ್ರಗಳಲ್ಲಿ ಪಂಕ್ತಿ ಭೋಜನದ ಮಹತ್ವ
Daily Devotional: ಧಾರ್ಮಿಕ ಕ್ಷೇತ್ರಗಳಲ್ಲಿ ಪಂಕ್ತಿ ಭೋಜನದ ಮಹತ್ವ
Daily Horoscope: ಈ ರಾಶಿಯವರಿಗೆ ಇಂದು ಆರು ಗ್ರಹಗಳ ಅನುಗ್ರಹ
Daily Horoscope: ಈ ರಾಶಿಯವರಿಗೆ ಇಂದು ಆರು ಗ್ರಹಗಳ ಅನುಗ್ರಹ