AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೋದಿ ಬೆಂಕಿ ಜತೆ ಆಡುತ್ತಿದ್ದಾರೆ, ಅದಾನಿ ಪ್ರಧಾನಿಯ ಪ್ರಾಕ್ಸಿ: ತೆಲಂಗಾಣ ಸಚಿವ ಕೆಟಿಆರ್ ವಾಗ್ದಾಳಿ

ಬಿಜೆಪಿಯವರೆಲ್ಲ ಶುದ್ಧರೇ? ಕಿರುಕುಳ, ರಾಜಕೀಯ ಸೇಡು ಮತ್ತು ಬೆದರಿಕೆ ಇವೆಲ್ಲ ನರೇಂದ್ರ ಮೋದಿಗೆ ಬೇರೆಡೆ ಉಪಯೋಗಕ್ಕೆ ಬರಬಹುದು. ಅವರು ಬೆಂಕಿಯೊಂದಿಗೆ ಆಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ಇದು ಅರಿವಿಗೆ ಬರುತ್ತದೆ ನನಗೆ ಖಾತ್ರಿಯಿದೆ.

ಮೋದಿ ಬೆಂಕಿ ಜತೆ ಆಡುತ್ತಿದ್ದಾರೆ, ಅದಾನಿ ಪ್ರಧಾನಿಯ ಪ್ರಾಕ್ಸಿ: ತೆಲಂಗಾಣ ಸಚಿವ ಕೆಟಿಆರ್ ವಾಗ್ದಾಳಿ
ಕೆಟಿಆರ್
ರಶ್ಮಿ ಕಲ್ಲಕಟ್ಟ
|

Updated on: Mar 09, 2023 | 5:00 PM

Share

ಅದಾನಿ ವಿಚಾರದಲ್ಲಿ ತೆಲಂಗಾಣ (Telangana) ಸಚಿವ ಕೆ.ಟಿ.ರಾಮ ರಾವ್ (KT Rama Rao) ಗುರುವಾರ ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಬಿಜೆಪಿ ಮೇಲೆ ಟೀಕಾ ಪ್ರಹಾರ ಮಾಡಿದ್ದು, ಗೌತಮ್ ಅದಾನಿ ಪ್ರಧಾನಿಯವರ ಪ್ರಾಕ್ಸಿ ಎಂದಿದ್ದಾರೆ. ಅದೇ ವೇಳೆ ‘ಬೆದರಿಕೆ ತಂತ್ರಗಳು ದಕ್ಷಿಣ ರಾಜ್ಯದಲ್ಲಿ ಕೆಲಸ ಮಾಡುವುದಿಲ್ಲ ಎಂದಿದ್ದಾರೆ. ಈ ವರ್ಷ ಅಸೆಂಬ್ಲಿ ಚುನಾವಣೆಯಲ್ಲಿ ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿ ಮತ್ತು ಬಿಜೆಪಿ ನಡುವೆ ತೀವ್ರವಾದ ಪೈಪೋಟಿ ನಡೆಯಲಿದೆ.

ಕೆಟಿಆರ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಸಚಿವರು, ಪ್ರಧಾನಿಯವರ ತವರು ರಾಜ್ಯವಾದ ಗುಜರಾತ್‌ನಿಂದ ಬಂದಿರುವ ಅದಾನಿ ಬಗ್ಗೆ ಇರುವ ವಿವಾದಗಳ ಬಗ್ಗೆ ಮೋದಿ ಮೌನವಾಗಿರುವುದಕ್ಕಾಗಿ ಪ್ರಧಾನಿಯನ್ನು ಟೀಕಿಸಿದ್ದಾರೆ. “ಅದಾನಿ ವಿರುದ್ಧದ ಆರೋಪಗಳ ಬಗ್ಗೆ ಪ್ರಧಾನಿ ಏಕೆ ಮಾತನಾಡುವುದಿಲ್ಲ? ಗೌತಮ್ ಅದಾನಿ ನರೇಂದ್ರ ಮೋದಿಯ ಪ್ರಾಕ್ಸಿ ಎಂದು ನಾವು ಹೇಳುತ್ತಿದ್ದೇವೆ. ಅವರು (ಮೋದಿ) ಸುಳ್ಳು ಪತ್ತೆ ಪರೀಕ್ಷೆಗೆ ಒಳಗಾಗುತ್ತಾರೆಯೇ? ದೇಶದ ಜನರ ಮುಂದೆ ಬರಲು ಅವರಿಗೆ ಧೈರ್ಯವಿದೆಯೇ? ಬಿಜೆಪಿಯಲ್ಲಿರುವ ಎಲ್ಲರೂ ರಾಜಾ ಹರಿಶ್ಚಂದ್ರನ (1913 ರ ಐಕಾನಿಕ್ ಮೂಕ ಚಲನಚಿತ್ರದ ಉಲ್ಲೇಖ) ಸಹೋದರರೇ?” ಎಂದು ಕೆಟಿಆರ್ ಕೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ. ರಾಜಕೀಯ ಸೇಡಿಗಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮೋದಿ ಬೆಂಕಿಯೊಂದಿಗೆ ಆಟವಾಡುತ್ತಿದ್ದಾರೆ ಎಂದಿದ್ದಾರೆ.

ಬಿಜೆಪಿಯವರೆಲ್ಲ ಶುದ್ಧರೇ? ಕಿರುಕುಳ, ರಾಜಕೀಯ ಸೇಡು ಮತ್ತು ಬೆದರಿಕೆ ಇವೆಲ್ಲ ನರೇಂದ್ರ ಮೋದಿಗೆ ಬೇರೆಡೆ ಉಪಯೋಗಕ್ಕೆ ಬರಬಹುದು. ಅವರು ಬೆಂಕಿಯೊಂದಿಗೆ ಆಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ಇದು ಅರಿವಿಗೆ ಬರುತ್ತದೆ ನನಗೆ ಖಾತ್ರಿಯಿದೆ. ಅವರು ಮಾತನಾಡುವ ಡಬಲ್ ಎಂಜಿನ್ ಅಂದರೆ ಆರ್ಥಿಕ ಎಂಜಿನ್ ಅದಾನಿ, ರಾಜಕೀಯ ಎಂಜಿನ್ ಮೋದಿ ಎಂದು ತೆಲಂಗಾಣ ನಾಯಕ ಹೇಳಿದ್ದಾರೆ. ಅದಾನಿ ಗ್ರೂಪ್‌ ವಿವಾದ ನಂತರ ಅದಾನಿಯವರ ಸಂಪತ್ತಿನಲ್ಲಿ ಭಾರಿ ಕುಸಿತವುಂಟಾಗಿದ್ದು ಇದರ ಪರಿಣಾಮವಾಗಿ ಅವರ ಕಂಪನಿಗಳು $120 ಶತಕೋಟಿ ನಷ್ಟು ನಷ್ಟವನ್ನು ಅನುಭವಿಸಿದವು. ಈ ವಿಚಾರ ಸಂಸತ್ತಿನಲ್ಲಿ ಗದ್ದಲಕ್ಕೂ ಕಾರಣವಾಯಿತು.

ಇದನ್ನೂ ಓದಿ:ಉತ್ತರ ಭಾರತದ ರಾಜ್ಯಗಳ ಬಿಜೆಪಿ ಸದಸ್ಯರು ನಕಲಿ ಸುದ್ದಿ ಹರಡುತ್ತಿದ್ದಾರೆ: ತಮಿಳುನಾಡು ಸಿಎಂ ಸ್ಟಾಲಿನ್

ಹಿಂಡೆನ್‌ಬರ್ಗ್‌ನ ಆರೋಪಗಳ ಬಗ್ಗೆ ವಿವರವಾದ ತನಿಖೆಗೆ ಮತ್ತು ಪ್ರಧಾನಿಯವರ ಹೇಳಿಕೆಗೆ ವಿರೋಧ ಪಕ್ಷಗಳು ಕರೆ ನೀಡಿತು. ಮೋದಿ ಸರ್ಕಾರವು ಉದ್ಯಮಿಗಳಿಗೆ ಅನುಕೂಲವಾಗಿದೆ ಎಂದು ವಿಪಕ್ಷಗಳು ಆರೋಪಿಸಿದ್ದು ಈ ವಿಚಾರವಾಗಿ ಸುಪ್ರೀಂ ಕೋರ್ಟ್‌ ತಜ್ಞರ ಸಮಿತಿಗೆ ಆದೇಶ ನೀಡಿದೆ.

ದೆಹಲಿ ಅಬಕಾರಿ ನೀತಿಯ ಆರೋಪದ ಹಗರಣದಲ್ಲಿ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯವು ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅಥವಾ ಕೆಸಿಆರ್ ಅವರ ಪುತ್ರಿ ಕವಿತಾ ಅವರನ್ನು ದೆಹಲಿಗೆ ಕರೆಸಿದ ಒಂದು ದಿನದ ನಂತರ ರಾವ್ ಅವರ ಹೇಳಿಕೆಗಳು ಬಂದಿವೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ