AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದಲ್ಲ ಎರಡಲ್ಲ… ತಲಾ ನಾಲ್ಕೈದು ಸರ್ಕಾರಿ ನೌಕರಿಗಳನ್ನು ಗಿಟ್ಟಿಸಿದ ಇಬ್ಬರು ಗಟ್ಟಿಗಿತ್ತಿ ಯುವತಿಯರು!

ನಾಲ್ಕೈದು ಕೆಲಸ ಮಾಡುವ ಯುವತಿಯರ ಕುಟುಂಬದಲ್ಲಿ ಗಂಡು ಮಕ್ಕಳೇ ಇಲ್ಲ. ಎರಡೂ ಕುಟುಂಬಗಳಲ್ಲಿ ಕೇವಲ ಹೆಣ್ಣು ಮಕ್ಕಳಿರುವುದು ವಿಶೇಷ. ಒಂದೇ ಬಾರಿಗೆ ನಾಲ್ಕೈದು ಕೆಲಸ ಗಿಟ್ಟಿಸಿಕೊಂಡಿರುವ ಖಮ್ಮಂ ನಗರದ ಇಬ್ಬರು ಯುವತಿಯರನ್ನು ಎಲ್ಲರೂ ಶ್ಲಾಘಿಸುತ್ತಿದ್ದಾರೆ. ಕಷ್ಟಪಟ್ಟು ಓದಿದರೆ ಏನು ಬೇಕಾದರೂ ಸಾಧಿಸಬಹುದು ಎಂಬುದನ್ನು ಬಡ ಕುಟುಂಬದ ಈ ಯುವತಿಯರು ಸಾಬೀತುಪಡಿಸಿದ್ದಾರೆ.

ಸಾಧು ಶ್ರೀನಾಥ್​
|

Updated on:Mar 06, 2024 | 1:40 PM

Share

ಜೀವಮಾನದಲ್ಲಿ ಒಂದೇ ಒಂದು ಸರ್ಕಾರಿ ನೌಕರಿ ಸಿಗುವುದೇ ದುಸ್ತರವಾಗಿರುವ ಇಂದಿನ ದಿನಗಳಲ್ಲಿ… ಖಮ್ಮಂ ಜಿಲ್ಲೆಯ ಯುವತಿಯರಾದ ಶ್ರುತಿ ಮತ್ತು ವಿನೀಲಾ ಅವರಿಗೆ ಒಂದೇ ಬಾರಿಗೆ ತಲಾ ನಾಲ್ಕೈದು ಕೆಲಸಗಳು ಸಿಕ್ಕಿವೆ. ಖಮ್ಮಂ ನಗರದ ಬಡ ಕುಟುಂಬದ ಕೊಲಪುಡಿ ಶೃತಿ ಒಂದೇ ಬಾರಿಗೆ ಐದು ಕೆಲಸಗಳನ್ನು ಗಳಿಸಿದ್ದಾರೆ. ಶೃತಿಯ ತಂದೆ ಪೇಂಟಿಂಗ್ ಕೆಲಸ ಮಾಡುತ್ತಿದ್ದರೆ, ತಾಯಿ ಪೊಲೀಸ್ ತರಬೇತಿ ಕೇಂದ್ರದಲ್ಲಿ ಹೊರಗುತ್ತಿಗೆ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದಾರೆ.

ಶ್ರುತಿ ಇಂಟರ್ ವರೆಗೆ ಗುರುಕುಲಂನಲ್ಲಿ ಓದಿ ಉನ್ನತ ಶಿಕ್ಷಣವನ್ನು ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಪೂರೈಸಿದರು. ಶ್ರುತಿಗೆ ಅಬಕಾರಿ ಕಾನ್ಸ್‌ಟೇಬಲ್, ಗುರುಕುಲ ಶಾಲೆಯ ಲೈಬ್ರೇರಿಯನ್, ಮಹಿಳಾ ಮಕ್ಕಳ ಕಲ್ಯಾಣ ಇಒ ಮತ್ತು ಗುರುಕುಲ ಪದವಿ ಕಾಲೇಜು ಉಪನ್ಯಾಸಕಿ, ಟಿಎಸ್‌ಪಿಎಸ್‌ಸಿ ಜೆಎಲ್ ಲೈಬ್ರೇರಿಯನ್ ಆಗಿ ಒಂದೇ ಸಮಯದಲ್ಲಿ ಐದು ಕೆಲಸಗಳು ಸಿಕ್ಕಿವೆ. ಒಂದೇ ಬಾರಿಗೆ ಐದು ಕೆಲಸಗಳನ್ನು ಸಾಧಿಸಿದ್ದಕ್ಕಾಗಿ ಖಮ್ಮಂ ಪೊಲೀಸ್ ಕಮಿಷನರ್ ಸುನೀಲ್ ದತ್ ಮತ್ತಿತರ ಅಧಿಕಾರಿಗಳು ಶ್ರುತಿ ಅವರನ್ನು ಅಭಿನಂದಿಸಿದ್ದಾರೆ.

Also Read: ಇವರು ದೇವಸ್ಥಾನದ ಹಿಂಭಾಗಕ್ಕೆ ಹೋಗಿ ಏನು ಮಾಡಿದ್ದಾರೆ ನೋಡಿ, ವಿಡಿಯೋ ಇದೆ

ಇನ್ನು ಮತ್ತೊಬ್ಬ ಯುವತಿ ಖಮ್ಮಂ ನಗರದ ಟೇಕುಲಪಲ್ಲಿಯ ವಿನೀಲಾಗೂ ಒಂದೇ ಬಾರಿಗೆ ನಾಲ್ಕು ಕೆಲಸ ಸಿಕ್ಕಿದೆ. ವಿನಿಲಾ ಕೂಡ ಐದನೇ ಕೆಲಸಕ್ಕೆ ಅರ್ಹತೆ ಹೊಂದಿದ್ದಳು. ಆದರೆ ಆ ಸಂದರ್ಶನಕ್ಕೆ ವಿನೀಲಾ ಹಾಜರಾಗಿದರೆ, ಇತರೆ ಅಭ್ಯರ್ಥಿಗಳು ಕೆಲಸ ಪಡೆಯುವ ಆ ಅವಕಾಶವನ್ನು ಕಳೆದುಕೊಳ್ಳುವ ಕಾರಣ ವಿನೀಲಾ ಆ ಕೆಲಸವನ್ನು ತ್ಯಜಿಸಿದಳು.

ವಿನೀಲಾ ಚಿಕ್ಕವಯಸ್ಸಿನಲ್ಲೇ ತಂದೆ ತೀರಿಕೊಂಡಿದ್ದರಿಂದ ಇಬ್ಬರು ಹೆಣ್ಣುಮಕ್ಕಳ ಶಿಕ್ಷಣದ ಸಂಪೂರ್ಣ ಹೊರೆ ತಾಯಿ ವೆಂಕಟಲಕ್ಷ್ಮಿ ಅವರ ಮೇಲಿತ್ತು. ಅಮ್ಮನ ಕಷ್ಟ ನೋಡಲಾರದೆ ಅಕ್ಕ ವಿನೀಲಾ ಮತ್ತು ವಿವೇಕಾ ಕಷ್ಟಪಟ್ಟು ಓದುತ್ತಿದ್ದರು. ನಾಲ್ಕೈದು ಕೆಲಸ ಮಾಡುವ ಯುವತಿಯರ ಕುಟುಂಬದಲ್ಲಿ ಗಂಡು ಮಕ್ಕಳೇ ಇಲ್ಲ. ಎರಡೂ ಕುಟುಂಬಗಳಲ್ಲಿ ಕೇವಲ ಹೆಣ್ಣು ಮಕ್ಕಳಿರುವುದು ವಿಶೇಷ. ಒಂದೇ ಬಾರಿಗೆ ನಾಲ್ಕೈದು ಕೆಲಸ ಗಿಟ್ಟಿಸಿಕೊಂಡಿರುವ ಖಮ್ಮಂ ನಗರದ ಇಬ್ಬರು ಯುವತಿಯರನ್ನು ಎಲ್ಲರೂ ಶ್ಲಾಘಿಸುತ್ತಿದ್ದಾರೆ. ಕಷ್ಟಪಟ್ಟು ಓದಿದರೆ ಏನು ಬೇಕಾದರೂ ಸಾಧಿಸಬಹುದು ಎಂಬುದನ್ನು ಬಡ ಕುಟುಂಬದ ಈ ಯುವತಿಯರು ಸಾಬೀತುಪಡಿಸಿದ್ದಾರೆ.

 ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:38 pm, Wed, 6 March 24

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ
ಕ್ಷಮೆ ಕೇಳಿದ ಮೇಲೂ ಕೆನ್ನೆಗೆ ಬಾರಿಸಿದ ಯುವತಿಗೆ ಮನಬಂದಂತೆ ಥಳಿಸಿದ ಯುವಕ!
ಕ್ಷಮೆ ಕೇಳಿದ ಮೇಲೂ ಕೆನ್ನೆಗೆ ಬಾರಿಸಿದ ಯುವತಿಗೆ ಮನಬಂದಂತೆ ಥಳಿಸಿದ ಯುವಕ!
ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ ಭೋಜಶಾಲೆಯಲ್ಲಿ ಹಿಂದೂ ಭಕ್ತರಿಂದ ಭಜನೆ
ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ ಭೋಜಶಾಲೆಯಲ್ಲಿ ಹಿಂದೂ ಭಕ್ತರಿಂದ ಭಜನೆ
ಸ್ಲೀಪರ್ ಬಸ್ ಭಸ್ಮವಾದ್ರೂ 36 ಪ್ರಯಾಣಿಕರು ಪಾರಾಗಿದ್ಹೇಗೆ?
ಸ್ಲೀಪರ್ ಬಸ್ ಭಸ್ಮವಾದ್ರೂ 36 ಪ್ರಯಾಣಿಕರು ಪಾರಾಗಿದ್ಹೇಗೆ?
ಭೂಪಟದಿಂದಲೇ ಮರೆಯಾಗಬೇಕಾದೀತು: ಪಾಕ್​ಗೆ ಸೇನಾ ಮುಖ್ಯಸ್ಥರ ಖಡಕ್ ಎಚ್ಚರಿಕೆ!
ಭೂಪಟದಿಂದಲೇ ಮರೆಯಾಗಬೇಕಾದೀತು: ಪಾಕ್​ಗೆ ಸೇನಾ ಮುಖ್ಯಸ್ಥರ ಖಡಕ್ ಎಚ್ಚರಿಕೆ!
ನೆದರ್‌ಲ್ಯಾಂಡ್ಸ್‌ ತಲುಪಿದ ಮೋದಿ; ವಿಮಾನ ನಿಲ್ದಾಣದಲ್ಲಿ ಆತ್ಮೀಯ ಸ್ವಾಗತ
ನೆದರ್‌ಲ್ಯಾಂಡ್ಸ್‌ ತಲುಪಿದ ಮೋದಿ; ವಿಮಾನ ನಿಲ್ದಾಣದಲ್ಲಿ ಆತ್ಮೀಯ ಸ್ವಾಗತ