AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದಲ್ಲ ಎರಡಲ್ಲ… ತಲಾ ನಾಲ್ಕೈದು ಸರ್ಕಾರಿ ನೌಕರಿಗಳನ್ನು ಗಿಟ್ಟಿಸಿದ ಇಬ್ಬರು ಗಟ್ಟಿಗಿತ್ತಿ ಯುವತಿಯರು!

ನಾಲ್ಕೈದು ಕೆಲಸ ಮಾಡುವ ಯುವತಿಯರ ಕುಟುಂಬದಲ್ಲಿ ಗಂಡು ಮಕ್ಕಳೇ ಇಲ್ಲ. ಎರಡೂ ಕುಟುಂಬಗಳಲ್ಲಿ ಕೇವಲ ಹೆಣ್ಣು ಮಕ್ಕಳಿರುವುದು ವಿಶೇಷ. ಒಂದೇ ಬಾರಿಗೆ ನಾಲ್ಕೈದು ಕೆಲಸ ಗಿಟ್ಟಿಸಿಕೊಂಡಿರುವ ಖಮ್ಮಂ ನಗರದ ಇಬ್ಬರು ಯುವತಿಯರನ್ನು ಎಲ್ಲರೂ ಶ್ಲಾಘಿಸುತ್ತಿದ್ದಾರೆ. ಕಷ್ಟಪಟ್ಟು ಓದಿದರೆ ಏನು ಬೇಕಾದರೂ ಸಾಧಿಸಬಹುದು ಎಂಬುದನ್ನು ಬಡ ಕುಟುಂಬದ ಈ ಯುವತಿಯರು ಸಾಬೀತುಪಡಿಸಿದ್ದಾರೆ.

ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Mar 06, 2024 | 1:40 PM

Share

ಜೀವಮಾನದಲ್ಲಿ ಒಂದೇ ಒಂದು ಸರ್ಕಾರಿ ನೌಕರಿ ಸಿಗುವುದೇ ದುಸ್ತರವಾಗಿರುವ ಇಂದಿನ ದಿನಗಳಲ್ಲಿ… ಖಮ್ಮಂ ಜಿಲ್ಲೆಯ ಯುವತಿಯರಾದ ಶ್ರುತಿ ಮತ್ತು ವಿನೀಲಾ ಅವರಿಗೆ ಒಂದೇ ಬಾರಿಗೆ ತಲಾ ನಾಲ್ಕೈದು ಕೆಲಸಗಳು ಸಿಕ್ಕಿವೆ. ಖಮ್ಮಂ ನಗರದ ಬಡ ಕುಟುಂಬದ ಕೊಲಪುಡಿ ಶೃತಿ ಒಂದೇ ಬಾರಿಗೆ ಐದು ಕೆಲಸಗಳನ್ನು ಗಳಿಸಿದ್ದಾರೆ. ಶೃತಿಯ ತಂದೆ ಪೇಂಟಿಂಗ್ ಕೆಲಸ ಮಾಡುತ್ತಿದ್ದರೆ, ತಾಯಿ ಪೊಲೀಸ್ ತರಬೇತಿ ಕೇಂದ್ರದಲ್ಲಿ ಹೊರಗುತ್ತಿಗೆ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದಾರೆ.

ಶ್ರುತಿ ಇಂಟರ್ ವರೆಗೆ ಗುರುಕುಲಂನಲ್ಲಿ ಓದಿ ಉನ್ನತ ಶಿಕ್ಷಣವನ್ನು ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಪೂರೈಸಿದರು. ಶ್ರುತಿಗೆ ಅಬಕಾರಿ ಕಾನ್ಸ್‌ಟೇಬಲ್, ಗುರುಕುಲ ಶಾಲೆಯ ಲೈಬ್ರೇರಿಯನ್, ಮಹಿಳಾ ಮಕ್ಕಳ ಕಲ್ಯಾಣ ಇಒ ಮತ್ತು ಗುರುಕುಲ ಪದವಿ ಕಾಲೇಜು ಉಪನ್ಯಾಸಕಿ, ಟಿಎಸ್‌ಪಿಎಸ್‌ಸಿ ಜೆಎಲ್ ಲೈಬ್ರೇರಿಯನ್ ಆಗಿ ಒಂದೇ ಸಮಯದಲ್ಲಿ ಐದು ಕೆಲಸಗಳು ಸಿಕ್ಕಿವೆ. ಒಂದೇ ಬಾರಿಗೆ ಐದು ಕೆಲಸಗಳನ್ನು ಸಾಧಿಸಿದ್ದಕ್ಕಾಗಿ ಖಮ್ಮಂ ಪೊಲೀಸ್ ಕಮಿಷನರ್ ಸುನೀಲ್ ದತ್ ಮತ್ತಿತರ ಅಧಿಕಾರಿಗಳು ಶ್ರುತಿ ಅವರನ್ನು ಅಭಿನಂದಿಸಿದ್ದಾರೆ.

Also Read: ಇವರು ದೇವಸ್ಥಾನದ ಹಿಂಭಾಗಕ್ಕೆ ಹೋಗಿ ಏನು ಮಾಡಿದ್ದಾರೆ ನೋಡಿ, ವಿಡಿಯೋ ಇದೆ

ಇನ್ನು ಮತ್ತೊಬ್ಬ ಯುವತಿ ಖಮ್ಮಂ ನಗರದ ಟೇಕುಲಪಲ್ಲಿಯ ವಿನೀಲಾಗೂ ಒಂದೇ ಬಾರಿಗೆ ನಾಲ್ಕು ಕೆಲಸ ಸಿಕ್ಕಿದೆ. ವಿನಿಲಾ ಕೂಡ ಐದನೇ ಕೆಲಸಕ್ಕೆ ಅರ್ಹತೆ ಹೊಂದಿದ್ದಳು. ಆದರೆ ಆ ಸಂದರ್ಶನಕ್ಕೆ ವಿನೀಲಾ ಹಾಜರಾಗಿದರೆ, ಇತರೆ ಅಭ್ಯರ್ಥಿಗಳು ಕೆಲಸ ಪಡೆಯುವ ಆ ಅವಕಾಶವನ್ನು ಕಳೆದುಕೊಳ್ಳುವ ಕಾರಣ ವಿನೀಲಾ ಆ ಕೆಲಸವನ್ನು ತ್ಯಜಿಸಿದಳು.

ವಿನೀಲಾ ಚಿಕ್ಕವಯಸ್ಸಿನಲ್ಲೇ ತಂದೆ ತೀರಿಕೊಂಡಿದ್ದರಿಂದ ಇಬ್ಬರು ಹೆಣ್ಣುಮಕ್ಕಳ ಶಿಕ್ಷಣದ ಸಂಪೂರ್ಣ ಹೊರೆ ತಾಯಿ ವೆಂಕಟಲಕ್ಷ್ಮಿ ಅವರ ಮೇಲಿತ್ತು. ಅಮ್ಮನ ಕಷ್ಟ ನೋಡಲಾರದೆ ಅಕ್ಕ ವಿನೀಲಾ ಮತ್ತು ವಿವೇಕಾ ಕಷ್ಟಪಟ್ಟು ಓದುತ್ತಿದ್ದರು. ನಾಲ್ಕೈದು ಕೆಲಸ ಮಾಡುವ ಯುವತಿಯರ ಕುಟುಂಬದಲ್ಲಿ ಗಂಡು ಮಕ್ಕಳೇ ಇಲ್ಲ. ಎರಡೂ ಕುಟುಂಬಗಳಲ್ಲಿ ಕೇವಲ ಹೆಣ್ಣು ಮಕ್ಕಳಿರುವುದು ವಿಶೇಷ. ಒಂದೇ ಬಾರಿಗೆ ನಾಲ್ಕೈದು ಕೆಲಸ ಗಿಟ್ಟಿಸಿಕೊಂಡಿರುವ ಖಮ್ಮಂ ನಗರದ ಇಬ್ಬರು ಯುವತಿಯರನ್ನು ಎಲ್ಲರೂ ಶ್ಲಾಘಿಸುತ್ತಿದ್ದಾರೆ. ಕಷ್ಟಪಟ್ಟು ಓದಿದರೆ ಏನು ಬೇಕಾದರೂ ಸಾಧಿಸಬಹುದು ಎಂಬುದನ್ನು ಬಡ ಕುಟುಂಬದ ಈ ಯುವತಿಯರು ಸಾಬೀತುಪಡಿಸಿದ್ದಾರೆ.

 ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:38 pm, Wed, 6 March 24

Follow Us
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
ವಿಧಾನ ಪರಿಷತ್ ಕದನದಲ್ಲಿ ಜೆಡಿಎಸ್​ಗೆ ಡಬಲ್ ಟೆನ್ಷನ್!
ವಿಧಾನ ಪರಿಷತ್ ಕದನದಲ್ಲಿ ಜೆಡಿಎಸ್​ಗೆ ಡಬಲ್ ಟೆನ್ಷನ್!