AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದಲ್ಲ ಎರಡಲ್ಲ… ತಲಾ ನಾಲ್ಕೈದು ಸರ್ಕಾರಿ ನೌಕರಿಗಳನ್ನು ಗಿಟ್ಟಿಸಿದ ಇಬ್ಬರು ಗಟ್ಟಿಗಿತ್ತಿ ಯುವತಿಯರು!

ನಾಲ್ಕೈದು ಕೆಲಸ ಮಾಡುವ ಯುವತಿಯರ ಕುಟುಂಬದಲ್ಲಿ ಗಂಡು ಮಕ್ಕಳೇ ಇಲ್ಲ. ಎರಡೂ ಕುಟುಂಬಗಳಲ್ಲಿ ಕೇವಲ ಹೆಣ್ಣು ಮಕ್ಕಳಿರುವುದು ವಿಶೇಷ. ಒಂದೇ ಬಾರಿಗೆ ನಾಲ್ಕೈದು ಕೆಲಸ ಗಿಟ್ಟಿಸಿಕೊಂಡಿರುವ ಖಮ್ಮಂ ನಗರದ ಇಬ್ಬರು ಯುವತಿಯರನ್ನು ಎಲ್ಲರೂ ಶ್ಲಾಘಿಸುತ್ತಿದ್ದಾರೆ. ಕಷ್ಟಪಟ್ಟು ಓದಿದರೆ ಏನು ಬೇಕಾದರೂ ಸಾಧಿಸಬಹುದು ಎಂಬುದನ್ನು ಬಡ ಕುಟುಂಬದ ಈ ಯುವತಿಯರು ಸಾಬೀತುಪಡಿಸಿದ್ದಾರೆ.

ಸಾಧು ಶ್ರೀನಾಥ್​
|

Updated on:Mar 06, 2024 | 1:40 PM

Share

ಜೀವಮಾನದಲ್ಲಿ ಒಂದೇ ಒಂದು ಸರ್ಕಾರಿ ನೌಕರಿ ಸಿಗುವುದೇ ದುಸ್ತರವಾಗಿರುವ ಇಂದಿನ ದಿನಗಳಲ್ಲಿ… ಖಮ್ಮಂ ಜಿಲ್ಲೆಯ ಯುವತಿಯರಾದ ಶ್ರುತಿ ಮತ್ತು ವಿನೀಲಾ ಅವರಿಗೆ ಒಂದೇ ಬಾರಿಗೆ ತಲಾ ನಾಲ್ಕೈದು ಕೆಲಸಗಳು ಸಿಕ್ಕಿವೆ. ಖಮ್ಮಂ ನಗರದ ಬಡ ಕುಟುಂಬದ ಕೊಲಪುಡಿ ಶೃತಿ ಒಂದೇ ಬಾರಿಗೆ ಐದು ಕೆಲಸಗಳನ್ನು ಗಳಿಸಿದ್ದಾರೆ. ಶೃತಿಯ ತಂದೆ ಪೇಂಟಿಂಗ್ ಕೆಲಸ ಮಾಡುತ್ತಿದ್ದರೆ, ತಾಯಿ ಪೊಲೀಸ್ ತರಬೇತಿ ಕೇಂದ್ರದಲ್ಲಿ ಹೊರಗುತ್ತಿಗೆ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದಾರೆ.

ಶ್ರುತಿ ಇಂಟರ್ ವರೆಗೆ ಗುರುಕುಲಂನಲ್ಲಿ ಓದಿ ಉನ್ನತ ಶಿಕ್ಷಣವನ್ನು ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಪೂರೈಸಿದರು. ಶ್ರುತಿಗೆ ಅಬಕಾರಿ ಕಾನ್ಸ್‌ಟೇಬಲ್, ಗುರುಕುಲ ಶಾಲೆಯ ಲೈಬ್ರೇರಿಯನ್, ಮಹಿಳಾ ಮಕ್ಕಳ ಕಲ್ಯಾಣ ಇಒ ಮತ್ತು ಗುರುಕುಲ ಪದವಿ ಕಾಲೇಜು ಉಪನ್ಯಾಸಕಿ, ಟಿಎಸ್‌ಪಿಎಸ್‌ಸಿ ಜೆಎಲ್ ಲೈಬ್ರೇರಿಯನ್ ಆಗಿ ಒಂದೇ ಸಮಯದಲ್ಲಿ ಐದು ಕೆಲಸಗಳು ಸಿಕ್ಕಿವೆ. ಒಂದೇ ಬಾರಿಗೆ ಐದು ಕೆಲಸಗಳನ್ನು ಸಾಧಿಸಿದ್ದಕ್ಕಾಗಿ ಖಮ್ಮಂ ಪೊಲೀಸ್ ಕಮಿಷನರ್ ಸುನೀಲ್ ದತ್ ಮತ್ತಿತರ ಅಧಿಕಾರಿಗಳು ಶ್ರುತಿ ಅವರನ್ನು ಅಭಿನಂದಿಸಿದ್ದಾರೆ.

Also Read: ಇವರು ದೇವಸ್ಥಾನದ ಹಿಂಭಾಗಕ್ಕೆ ಹೋಗಿ ಏನು ಮಾಡಿದ್ದಾರೆ ನೋಡಿ, ವಿಡಿಯೋ ಇದೆ

ಇನ್ನು ಮತ್ತೊಬ್ಬ ಯುವತಿ ಖಮ್ಮಂ ನಗರದ ಟೇಕುಲಪಲ್ಲಿಯ ವಿನೀಲಾಗೂ ಒಂದೇ ಬಾರಿಗೆ ನಾಲ್ಕು ಕೆಲಸ ಸಿಕ್ಕಿದೆ. ವಿನಿಲಾ ಕೂಡ ಐದನೇ ಕೆಲಸಕ್ಕೆ ಅರ್ಹತೆ ಹೊಂದಿದ್ದಳು. ಆದರೆ ಆ ಸಂದರ್ಶನಕ್ಕೆ ವಿನೀಲಾ ಹಾಜರಾಗಿದರೆ, ಇತರೆ ಅಭ್ಯರ್ಥಿಗಳು ಕೆಲಸ ಪಡೆಯುವ ಆ ಅವಕಾಶವನ್ನು ಕಳೆದುಕೊಳ್ಳುವ ಕಾರಣ ವಿನೀಲಾ ಆ ಕೆಲಸವನ್ನು ತ್ಯಜಿಸಿದಳು.

ವಿನೀಲಾ ಚಿಕ್ಕವಯಸ್ಸಿನಲ್ಲೇ ತಂದೆ ತೀರಿಕೊಂಡಿದ್ದರಿಂದ ಇಬ್ಬರು ಹೆಣ್ಣುಮಕ್ಕಳ ಶಿಕ್ಷಣದ ಸಂಪೂರ್ಣ ಹೊರೆ ತಾಯಿ ವೆಂಕಟಲಕ್ಷ್ಮಿ ಅವರ ಮೇಲಿತ್ತು. ಅಮ್ಮನ ಕಷ್ಟ ನೋಡಲಾರದೆ ಅಕ್ಕ ವಿನೀಲಾ ಮತ್ತು ವಿವೇಕಾ ಕಷ್ಟಪಟ್ಟು ಓದುತ್ತಿದ್ದರು. ನಾಲ್ಕೈದು ಕೆಲಸ ಮಾಡುವ ಯುವತಿಯರ ಕುಟುಂಬದಲ್ಲಿ ಗಂಡು ಮಕ್ಕಳೇ ಇಲ್ಲ. ಎರಡೂ ಕುಟುಂಬಗಳಲ್ಲಿ ಕೇವಲ ಹೆಣ್ಣು ಮಕ್ಕಳಿರುವುದು ವಿಶೇಷ. ಒಂದೇ ಬಾರಿಗೆ ನಾಲ್ಕೈದು ಕೆಲಸ ಗಿಟ್ಟಿಸಿಕೊಂಡಿರುವ ಖಮ್ಮಂ ನಗರದ ಇಬ್ಬರು ಯುವತಿಯರನ್ನು ಎಲ್ಲರೂ ಶ್ಲಾಘಿಸುತ್ತಿದ್ದಾರೆ. ಕಷ್ಟಪಟ್ಟು ಓದಿದರೆ ಏನು ಬೇಕಾದರೂ ಸಾಧಿಸಬಹುದು ಎಂಬುದನ್ನು ಬಡ ಕುಟುಂಬದ ಈ ಯುವತಿಯರು ಸಾಬೀತುಪಡಿಸಿದ್ದಾರೆ.

 ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:38 pm, Wed, 6 March 24

Follow Us
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್